ಸರ್ವತೋಮುಖ ಅಭಿವೃದ್ಧಿಯ ಬಜೆಟ್ :ವೀರಣ್ಣ ಪಾಟೀಲ್
ಹಾವೇರಿ: ರಾಜ್ಯ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶುಕ್ರವಾರ ಮಂಡಿಸಿದ16 ನೆಯ ದಾಖಲೆಯ 4 ಲಕ್ಷ 9 ಸಾವಿರ ಕೋಟಿ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಉತ್ತಮ ಬಜೆಟ್ ಹಾಗೂ ಸಮಾಜದ ಸಮತೋಲನ ಬಜೆಟ್ ಆಗಿದೆಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ರಾಜ್ಸ ಸಂಯೋಜಕರಾದ ವೀರಣ್ಣ ಪಾಟೀಲ್ ತಿಳಿಸಿದ್ದಾರೆ.
.ಕೃಷಿ , ಕೈಗಾರಿಗೆ , ಉದ್ಯೋಗ , ಆರೋಗ್ಯ , ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಹತ್ವ ನೀಡಿದೆ. ಸಿಎಂಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹಕಾರದೊಂದಿಗೆ ಸಮಾಜದಲ್ಲಿರುವ ಎಲ್ಲಾ ವರ್ಗದವರಿಗೂ ಉತ್ತಮವಾದ ಕೊಡುಗಯನ್ನು ಕೊಟ್ಟಿದ್ದಾರೆ.
ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಟ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಉನ್ನತೀಕರಣ ಹಾಗೂ ಇಂಗ್ಲೀಷ್ ಭಾಷೆಗಳ ಶಾಲೆಗಳನ್ನು ಸ್ಥಾಪನೆ ಮತ್ತು ಅತಿಥಿ ಉಪನ್ಯಾಸಕರಿಗೆ 2000 ಗೌರವ ಧನವನ್ನು ಹೆಚ್ಚಿಗೆ ಮಾಡಿದ್ದರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಸನ ಪಡೆಯುವ ಕಲಾವಿದರಿಗೆ 2500. ಬಜೆಟ್ ನಲ್ಲಿ ಪರಿಶಿಷ್ಟರಿಗೆ ಸವಿಧಾನದ ಬದ್ಧವಾದಂತಹ ಸೌಲಭ್ಯಗಳನ್ನು ಕಲ್ಪಿಸಲು ಯಶಸ್ವಿಯಾಗಿದ್ದಾರೆ. ಸರ್ವ ಜನಾಂಗದ ಸಮರ್ಥ ನಾಯಕರು ಸಿದ್ದರಾಮಯ್ಯನವರ ಬಜೆಟ್ಟು ಇದೊಂದು ದೇಶಕ್ಕೆ ಮಾದರಿಯವಾದ ಬಜೆಟ್ ಆಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿರಾಜ್ಸ ಸಂಯೋಜಕರಾದ ವೀರಣ್ಣ ಪಾಟೀಲ್ ತಿಳಿಸಿದ್ದಾರೆ.