
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲಿಸಿದ ಡಿಸಿ ಡಾ. ವಿಜಯಮಹಾಂತೇಶ್
ಗುರಿಸಾಧಿಸಿದ ಇಬ್ಬರು ಗಣತಿದಾರರಿಗೆ ಸನ್ಮಾನ
ಹಾವೇರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಾರಂಭಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಕ್ಕೆ ಸಂಬಂದಿಸಿದಂತೆ, ಹಿರೇಕೆರೂರ, ರಟ್ಟೀಹಳ್ಳಿ, ರಾಣೇಬೆನ್ನೂರು, ಬ್ಯಾಡಗಿ ತಾಲೂಕ ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲಿಸಿದರು.
ಈಗಾಗಲೇ ಜಿಲ್ಲಾಧ್ಯಂತ ಮನೆ ಮನೆ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಪ್ರಾರಂಭಿಸಲಾಗಿದ್ದು, ಸಮೀಕ್ಷೆಗೆ ವೇಗ ಹೆಚ್ಚಿಸಬೇಕಿದೆ.ಪ್ರಾರಂಭದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸ್ವಲ್ಪ ಮಟ್ಟಿಗೆ ಸಮೀಕ್ಷೆ ನಿಧಾನಕ್ಕೆ ಆಗಿದೆ ಈಗ ಪರಿಸ್ಥಿತಿ ಸರಿಹೋಗಿದೆ.ಈ ನಿಟ್ಟಿನಲ್ಲಿ ಸಮೀಕ್ಷೆದಾರರು ತಮ್ಮ ಕೆಲಸದ ಕಡೆಗೆ ಗಮನಕ್ಕೆ ಹರಿಸಿ, ತಮಗೆ ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು.ಇನ್ನೂ ಕೇಲವು ಭಾಗದಲ್ಲಿ ಅಷ್ಟಾಗಿ ಸಮೀಕ್ಷೆ ಚುರುಕು ಪಡೆದಿಲ್ಲ ವಿಳಂಭಮಾಡದೇ ನಿಗದಿ ಪಡಿಸಿದ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಎಂದು ಗಣತಿದಾರರಿಗೆ ಸೂಚಿಸಿದರು.
ಸಮೀಕ್ಷೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು:
ಬ್ಯಾಡಗಿ ತಾಲೂಕಿನ ಕಾಗಿನಲೆ ಹೋಬಳಿಯ ಚಿಕ್ಕಬಾಸೂರ ಗ್ರಾಮದಲ್ಲಿ ಬರುವ ಬ್ಲಾಕ್ ನಂ:544037 ನಲ್ಲಿ 114 ಕುಟುಂಬಗಳು ಇದ್ದು ಗಣತಿದಾರಾರದ ಶ್ರೀಮತಿ.ಅಂಜುಮ್ ಖಾನ್ (ಶಿಕ್ಷಕರು) ಇವರು 114 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಸಂಪೂರ್ಣಗೊಳಿಸಿರುತ್ತಾರೆ. ಹಾಗೆಯೇ ಕಾಸಂಬಿ ಗ್ರಾಮದ ಬ್ಲಾಕ್ ನಂ: 542433 ಗಣತಿದಾರಾರದ ಜಿಯಾವುಲ್ಲಾ ಎಮ್ ಎಸ್ (ಶಿಕ್ಷಕರು) 85 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಸಂಪೂರ್ಣಗೊಳಿಸಿರುತ್ತಾರೆ. ಇವರ ಈ ಸಾಧನೆಗೆ ಜಿಲ್ಲಾ ಆಡಳಿತವು ಹರ್ಷವನ್ನು ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಅಭಿನಂದನೆಯನ್ನು ಸಲ್ಲಿಸಿ ಇಬ್ಬರು ಗಣತಿದಾರರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರು, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು

