ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಗೆ ಬಂದಿದ್ದ ಶಿಕ್ಷಕ ಸಾವು
ಹಾವೇರಿ: ಹಾವೇರಿಯಲ್ಲಿ ನಡೆಯುತ್ತಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಶಿಕ್ಷಕನೂರ್ವ ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಮೃತ ದುರ್ದೈವಿಯನ್ನು ಮಂಡ್ಯ ಜಿಲ್ಲೆಯ ಮತ್ತಿಕೇರಿ ಗ್ರಾಮದ ನಿವಾಸಿ.ಜಿ.ಎಮ್.ಸೋಮನಗೌಡ್ರ(೫೬) ಎಂದು ಗುರುತಿಸಲಾಗಿದೆ.
ಜಿ.ಎಮ್.ಸೋಮನಗೌಡ್ರ ಶುಕ್ರವಾರ ಊಟ ಮುಗಿಸಿ ಮಲಗಲು ತೆರಳಿದ ವೇಳೆಯಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು , ಅರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು. ಈ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿ.ಎಮ್.ಸೋಮನಗೌಡ್ರರೊಂದಿಗೆ ಆಗಮಿಸಿದ್ದ ಅವರ ಸಂಗಡಿಗರು ಶವವನ್ನು ಅಂಬುಲನ್ಸ್ ಮೂಲಕ ಮೃತರ ಸ್ವಗ್ರಾಮಕ್ಕೆ ಸಾಗಿಸದರೆಂದು ತಿಳಿದು ಬಂದಿದೆ. ಜಿ.ಎಮ್.ಸೋಮನಗೌಡ್ರ ಅವರಿಗೆ ಹಾವೇರಿಯ ಅಶ್ವಿನಿ ನಗರದ ಗೆಳಯರ ಬಳಗ ಶಾಲೆಯಲ್ಲಿ ವಾಸ್ತವ್ಯ ಒದಗಿಸಲಾಗಿತ್ತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಜಿ.ಎಮ್.ಸೋಮನಗೌಡ್ರ ಸಾವು ಅವರ ಗೆಳೆಯರನ್ನು ಕಂಗೆಡಿಸಿದೆ.