ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಹಾವೇರಿ-ರಾಣೇಬೆನ್ನೂರಲ್ಲಿ ಮನೆ ಆತಿಥ್ಯ: ಭಾರತಿ ಜಂಬಗಿ
ಹಾವೇರಿ: ಹಾವೇರಿಯಲ್ಲಿ ಜ.೬ರಿಂದ ೮ರವರೆಗೆ ಆಯೋಜಿಸಲಾಗಿರುವ ಅಖಿಲ ಭಾರತ ೮೬ನೆಯ ಸಾಃಇತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಮಹಿಳೆಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಮಹಿಳಾ ಶಕ್ತಿ ಸಮಿತಿ ರಚಿಸಲಾಗದೆ. ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಹಾವೇರಿ ಮತ್ತು ರಾಣೆಬೆನ್ನೂರನಗರದಲ್ಲಿನ ಸಾಹಿತ್ಯಾಸಕ್ತರಮನೆಗಳಲ್ಲಿ ಮಹಿಳಾ ಪ್ರತಿನಿಧಿಗಳಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಮನೆವಾಸ್ತವ್ಯಕ್ಕೆ ವ್ಯವಸ್ಥೆಮಾಡಿರುವುದಾಗಿ ಮಹಿಳಾ ಶಕ್ತಿ ಸಮಿತಿಯ ಅಧ್ಯಕ್ಷ ಭಾರತಿ ಜಂಬಗಿ ತಿಳಿಸಿದರು.
ಶನಿವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಹೋಟೆಲ್ ಹಾಗೂ ಇತರೆಕಡೆಗಳಲ್ಲಿ ವಾಸ್ತವ್ಯಕ್ಕೆ ಅನಾನುಕೂಲವಾಗಬಹುದು ಎನ್ನುವ ಕಾರಣಕ್ಕೆ ಮಹಿಳಾ ಶಕ್ತಿ ಸಮಿತಿಯ ಪದಾಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿ ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ವಾಸ್ತವ್ಯಕ್ಕೆ ಆತಿಥ್ಯ ನೀಡಲು ಸ್ವಯಂ ಸ್ಪೂರ್ತಿಯಿಂದ ಮುಂದೆ ಬಂದಿದ್ದಾರೆ. ಜ.೧ಕ್ಕೆ ಸಮ್ಮೇಳನಕ್ಕೆ ಎಷ್ಟು ಮಹಿಳಾ ಪ್ರತಿನಿಧಿಗಳು ಆಗಮಿಸುತ್ತಾರೆ ಎನ್ನುವ ಬಗ್ಗೆ ಅಂಕಿ-ಸಂಖ್ಯೆತಿಳಿಯುತ್ತದೆ. ಮಹಿಳೆಯರು ಏಷ್ಟೆಸಂಖ್ಯೆಯಲ್ಲಿ ಬಂದರು ಸಹ ಅವರಿಗೆ ವಾಸ್ತವ್ಯಕ್ಕೆ ಯಾವುದೇ ತೊಂದರೆ ಆಗದಂತೆ ನಮ್ಮ ಮಹಿಳಾ ಶಕ್ತಿ ಸಮಿತಿ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಯಂ ಸೇವೆಗಾಗಿ ಮಹಿಳಾ ಶಕ್ತಿ ಸಮಿತಿ ಮಾಡಲಾಗಿದೆ. ಸರಕಾರ, ಜಿಲ್ಲಾಡಳಿತ, ಕಸಪಾದಿಂದ ಕನ್ನಡ ಸೇವೆ ಮಾಡಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದೆ. ಹೊರ ಜಿಲ್ಲೆ ರಾಜ್ಯ ದೇಶ ವಿದೇಶದಿಂದ ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಅನಾನುಕೂಲಗಳನ್ನು ತಪ್ಪಿಸಲು ಸಮ್ಮೇಳನ ದಲ್ಲಿ ಯಾವುದೇ ಕುಂದುಕೊರತೆಗಳ ಆಗದಂತೆ ಸಮ್ಮೇಳನಕ್ಕೆ ಆಗಮಿಸಿದ ಮಹಿಳಾ ಸಾಹಿತಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ನಮ್ಮ, ನಮ್ಮ ಮನೆಯಲ್ಲಿ ವಾಸ್ತವ್ಯ ಅವಕಾಶ ಮಾಡಿಕೊಡಲಾಗುತ್ತಿದೆ.
ಜಿಲ್ಲೆಯ ೮ ತಾಲೂಕಿನಿಂದ ೫೦೦ ಮಹಿಳಾ ಶಕ್ತಿಯ ಮಹಿಳೆಯರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾವೇರಿ ಮತ್ತು ರಾಣೇಬೆನ್ನೂರಿನ ಹಾಗೂ ಇತರೆಕಡೆಗಳಿಂದ ೫೦೦ಮಹಿಳೆಯ ಜ.೬ರಂದು ನಡೆಯುವ ಸಮ್ಮೇಳನದ ಮೆರವಣಿಗೆಯಲ್ಲಿ ಪೂರ್ಣಕುಂಬ ಹೊತ್ತು ಕನ್ನಡತನ ಬಿಂಬಿಸುವ ಸಮವಸ್ತ್ರ ಧರಿಸಿದ ಕುಂಬಮೇಳ ಭಾಗವಹಿಸಲಿದ್ದಾರೆ. ಮೂರು ದಿನದ ಸಾಹಿತ್ಯ ಸಮ್ಮೇಳನಕ್ಕೆ ೨೦ ಸಾವಿರಕ್ಕೂ ಅಧಿಕ ಮಹಿಳೆಯರು ಬರುವ ನಿರೀಕ್ಷೆ ಇದೆ. ಅವರಿಗೆ ಸಕಲ ಸೌಕರ್ಯ ಒದಗಿಸಲಾಗುವುದು ಎಂದರು.
ಮಹಿಳಾ ಶಕ್ತಿ ಸಮಿತಿ ಉಪಾಧ್ಯಕ್ಷರು ಹಾಗೂ ನಗರಸಭೆಯ ಸದಸ್ಯರಾದ ರತ್ನಾ ಭೀಮಕ್ಕನವರ ಮಾತನಾಡಿ, ಹಾವೇರಿಯಲ್ಲಿ ಆಯೋಜನೆಗೊಂಡಿರುವ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಗೊಳಿಸುವಲ್ಲಿ ಮಹಿಳೆಯ ಪಾತ್ರವು ಸಹ ಹರಿದಾಗಿದೆ. ಜಿಲ್ಲಾಡಳಿತ, ಕಸಾಪ ಪದಾಧಿಕಾರಿಗಳು, ನಗರಸಭೆಯ ಅಧ್ಯಕ್ಷ ಸಂಜೀವಕುಮಾರರ ನೀರಲಗಿ ಅವರು ಸಹಕಾರ ನೀಡುವ ಮೂಲಕ ಮಹಿಳೆಯರು ಆಸಕ್ತಿಯಿಂದ ಸಮ್ಮೇಳನದಲ್ಲಿ ಭಾಗವಹಿಸಲು ಶ್ರಮಿಸಿದ್ದಾರೆ. ಪೂಣ ಕುಂಬ ಬಹಳ ಮುಖ್ಯವಾಗಿದ್ದು, ಸ್ವಯಂ ಪ್ರೇರಣೆಯಿಂದ ಕುಂಬವನ್ನು ಹೊರಲಾಗುವುದು. ನಗರದ ೩೧ ವಾರ್ಡ್ ನಿಂದ ಆಸಕ್ತ ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.
ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಜ.೬ರಂದು ಬೆಳಗಿನ ೭ಕ್ಕೆ ಆಗಮಿಸಲು ತಿಳಿಸಲಾಗಿದೆ. ಊಟದ ಕೌಂಟರ್ ಹಾಗೂ ಪ್ರವೇಶ ನೋಂದಣಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಮಧುಮತಿ ಚಿಕ್ಕೇಗೌಡ್ರ, ರೇಣುಕಾ ಗುಡಿಮನಿ, ರಾಜೇಶ್ವರಿ ಬಿಷ್ಡನಗೌಡ್ರ, ಜ್ಯೋತಿ ಸಾತೇನಹಳ್ಳಿ, ರೋಹಿಣಿ ಪಾಟೀಲ, ಮಂಜುಳಾ ಕರಬಸಮ್ಮನವರ ಮತ್ತಿತರರು ಹಾಜರಿದ್ದರು.
ವೇದಿಕೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ
ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವರು. ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಊಟ-ಉಪಹಾರಕ್ಕೆ ಪ್ರತ್ಯೇಕ ಕಂಟರ್, ಮಕ್ಕಳೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸುವ ತಾಯಂದಿರಿಗಾಗಿ ಹಾಲುಣಿಸುವ ಕೇಂದ್ರ, ಮಹಿಳೆಯ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾದರೆ ಅವರಿಗೆ ಚಿಕಿತ್ಸೆ ನೀಡಲು ಪತ್ಯೇಕ ಕಂಟರ್ ತರೆಯಲಾಗುವುದು. ಅಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಸಮ್ಮೇಳನದಲ್ಲೆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಜಿಲ್ಲಾಡಳಿತ ಮತ್ತು ಕಸಾಪ ಪದಾಧಿಕಾರಿಗಳೊಂದಿಗೆ ಚರ್ಚಿ ಬಗೆಹರಿಸಿಕೊಳ್ಳಲಾಗುವುದು ಎಂದು ಮಹಿಳಾ ಶಕ್ತಿ ಸಮಿತಿಯ ಅಧ್ಯಕ್ಷ ಭಾರತಿ ಜಂಬಗಿ ತಿಳಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಹಾವೇರಿ-ರಾಣೇಬೆನ್ನೂರಲ್ಲಿ ಮನೆ ಆತಿಥ್ಯ: ಭಾರತಿ ಜಂಬಗಿ
Date:
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಹಾವೇರಿ-ರಾಣೇಬೆನ್ನೂರಲ್ಲಿ ಮನೆ ಆತಿಥ್ಯ: ಭಾರತಿ ಜಂಬಗಿ
ಹಾವೇರಿ: ಹಾವೇರಿಯಲ್ಲಿ ಜ.೬ರಿಂದ ೮ರವರೆಗೆ ಆಯೋಜಿಸಲಾಗಿರುವ ಅಖಿಲ ಭಾರತ ೮೬ನೆಯ ಸಾಃಇತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಮಹಿಳೆಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಮಹಿಳಾ ಶಕ್ತಿ ಸಮಿತಿ ರಚಿಸಲಾಗದೆ. ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಹಾವೇರಿ ಮತ್ತು ರಾಣೆಬೆನ್ನೂರನಗರದಲ್ಲಿನ ಸಾಹಿತ್ಯಾಸಕ್ತರಮನೆಗಳಲ್ಲಿ ಮಹಿಳಾ ಪ್ರತಿನಿಧಿಗಳಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಮನೆವಾಸ್ತವ್ಯಕ್ಕೆ ವ್ಯವಸ್ಥೆಮಾಡಿರುವುದಾಗಿ ಮಹಿಳಾ ಶಕ್ತಿ ಸಮಿತಿಯ ಅಧ್ಯಕ್ಷ ಭಾರತಿ ಜಂಬಗಿ ತಿಳಿಸಿದರು.
ಶನಿವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಹೋಟೆಲ್ ಹಾಗೂ ಇತರೆಕಡೆಗಳಲ್ಲಿ ವಾಸ್ತವ್ಯಕ್ಕೆ ಅನಾನುಕೂಲವಾಗಬಹುದು ಎನ್ನುವ ಕಾರಣಕ್ಕೆ ಮಹಿಳಾ ಶಕ್ತಿ ಸಮಿತಿಯ ಪದಾಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿ ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ವಾಸ್ತವ್ಯಕ್ಕೆ ಆತಿಥ್ಯ ನೀಡಲು ಸ್ವಯಂ ಸ್ಪೂರ್ತಿಯಿಂದ ಮುಂದೆ ಬಂದಿದ್ದಾರೆ. ಜ.೧ಕ್ಕೆ ಸಮ್ಮೇಳನಕ್ಕೆ ಎಷ್ಟು ಮಹಿಳಾ ಪ್ರತಿನಿಧಿಗಳು ಆಗಮಿಸುತ್ತಾರೆ ಎನ್ನುವ ಬಗ್ಗೆ ಅಂಕಿ-ಸಂಖ್ಯೆತಿಳಿಯುತ್ತದೆ. ಮಹಿಳೆಯರು ಏಷ್ಟೆಸಂಖ್ಯೆಯಲ್ಲಿ ಬಂದರು ಸಹ ಅವರಿಗೆ ವಾಸ್ತವ್ಯಕ್ಕೆ ಯಾವುದೇ ತೊಂದರೆ ಆಗದಂತೆ ನಮ್ಮ ಮಹಿಳಾ ಶಕ್ತಿ ಸಮಿತಿ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಯಂ ಸೇವೆಗಾಗಿ ಮಹಿಳಾ ಶಕ್ತಿ ಸಮಿತಿ ಮಾಡಲಾಗಿದೆ. ಸರಕಾರ, ಜಿಲ್ಲಾಡಳಿತ, ಕಸಪಾದಿಂದ ಕನ್ನಡ ಸೇವೆ ಮಾಡಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದೆ. ಹೊರ ಜಿಲ್ಲೆ ರಾಜ್ಯ ದೇಶ ವಿದೇಶದಿಂದ ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಅನಾನುಕೂಲಗಳನ್ನು ತಪ್ಪಿಸಲು ಸಮ್ಮೇಳನ ದಲ್ಲಿ ಯಾವುದೇ ಕುಂದುಕೊರತೆಗಳ ಆಗದಂತೆ ಸಮ್ಮೇಳನಕ್ಕೆ ಆಗಮಿಸಿದ ಮಹಿಳಾ ಸಾಹಿತಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ನಮ್ಮ, ನಮ್ಮ ಮನೆಯಲ್ಲಿ ವಾಸ್ತವ್ಯ ಅವಕಾಶ ಮಾಡಿಕೊಡಲಾಗುತ್ತಿದೆ.
ಜಿಲ್ಲೆಯ ೮ ತಾಲೂಕಿನಿಂದ ೫೦೦ ಮಹಿಳಾ ಶಕ್ತಿಯ ಮಹಿಳೆಯರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾವೇರಿ ಮತ್ತು ರಾಣೇಬೆನ್ನೂರಿನ ಹಾಗೂ ಇತರೆಕಡೆಗಳಿಂದ ೫೦೦ಮಹಿಳೆಯ ಜ.೬ರಂದು ನಡೆಯುವ ಸಮ್ಮೇಳನದ ಮೆರವಣಿಗೆಯಲ್ಲಿ ಪೂರ್ಣಕುಂಬ ಹೊತ್ತು ಕನ್ನಡತನ ಬಿಂಬಿಸುವ ಸಮವಸ್ತ್ರ ಧರಿಸಿದ ಕುಂಬಮೇಳ ಭಾಗವಹಿಸಲಿದ್ದಾರೆ. ಮೂರು ದಿನದ ಸಾಹಿತ್ಯ ಸಮ್ಮೇಳನಕ್ಕೆ ೨೦ ಸಾವಿರಕ್ಕೂ ಅಧಿಕ ಮಹಿಳೆಯರು ಬರುವ ನಿರೀಕ್ಷೆ ಇದೆ. ಅವರಿಗೆ ಸಕಲ ಸೌಕರ್ಯ ಒದಗಿಸಲಾಗುವುದು ಎಂದರು.
ಮಹಿಳಾ ಶಕ್ತಿ ಸಮಿತಿ ಉಪಾಧ್ಯಕ್ಷರು ಹಾಗೂ ನಗರಸಭೆಯ ಸದಸ್ಯರಾದ ರತ್ನಾ ಭೀಮಕ್ಕನವರ ಮಾತನಾಡಿ, ಹಾವೇರಿಯಲ್ಲಿ ಆಯೋಜನೆಗೊಂಡಿರುವ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಗೊಳಿಸುವಲ್ಲಿ ಮಹಿಳೆಯ ಪಾತ್ರವು ಸಹ ಹರಿದಾಗಿದೆ. ಜಿಲ್ಲಾಡಳಿತ, ಕಸಾಪ ಪದಾಧಿಕಾರಿಗಳು, ನಗರಸಭೆಯ ಅಧ್ಯಕ್ಷ ಸಂಜೀವಕುಮಾರರ ನೀರಲಗಿ ಅವರು ಸಹಕಾರ ನೀಡುವ ಮೂಲಕ ಮಹಿಳೆಯರು ಆಸಕ್ತಿಯಿಂದ ಸಮ್ಮೇಳನದಲ್ಲಿ ಭಾಗವಹಿಸಲು ಶ್ರಮಿಸಿದ್ದಾರೆ. ಪೂಣ ಕುಂಬ ಬಹಳ ಮುಖ್ಯವಾಗಿದ್ದು, ಸ್ವಯಂ ಪ್ರೇರಣೆಯಿಂದ ಕುಂಬವನ್ನು ಹೊರಲಾಗುವುದು. ನಗರದ ೩೧ ವಾರ್ಡ್ ನಿಂದ ಆಸಕ್ತ ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.
ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಜ.೬ರಂದು ಬೆಳಗಿನ ೭ಕ್ಕೆ ಆಗಮಿಸಲು ತಿಳಿಸಲಾಗಿದೆ. ಊಟದ ಕೌಂಟರ್ ಹಾಗೂ ಪ್ರವೇಶ ನೋಂದಣಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಮಧುಮತಿ ಚಿಕ್ಕೇಗೌಡ್ರ, ರೇಣುಕಾ ಗುಡಿಮನಿ, ರಾಜೇಶ್ವರಿ ಬಿಷ್ಡನಗೌಡ್ರ, ಜ್ಯೋತಿ ಸಾತೇನಹಳ್ಳಿ, ರೋಹಿಣಿ ಪಾಟೀಲ, ಮಂಜುಳಾ ಕರಬಸಮ್ಮನವರ ಮತ್ತಿತರರು ಹಾಜರಿದ್ದರು.
ವೇದಿಕೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ
ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವರು. ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಊಟ-ಉಪಹಾರಕ್ಕೆ ಪ್ರತ್ಯೇಕ ಕಂಟರ್, ಮಕ್ಕಳೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸುವ ತಾಯಂದಿರಿಗಾಗಿ ಹಾಲುಣಿಸುವ ಕೇಂದ್ರ, ಮಹಿಳೆಯ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾದರೆ ಅವರಿಗೆ ಚಿಕಿತ್ಸೆ ನೀಡಲು ಪತ್ಯೇಕ ಕಂಟರ್ ತರೆಯಲಾಗುವುದು. ಅಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಸಮ್ಮೇಳನದಲ್ಲೆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಜಿಲ್ಲಾಡಳಿತ ಮತ್ತು ಕಸಾಪ ಪದಾಧಿಕಾರಿಗಳೊಂದಿಗೆ ಚರ್ಚಿ ಬಗೆಹರಿಸಿಕೊಳ್ಳಲಾಗುವುದು ಎಂದು ಮಹಿಳಾ ಶಕ್ತಿ ಸಮಿತಿಯ ಅಧ್ಯಕ್ಷ ಭಾರತಿ ಜಂಬಗಿ ತಿಳಿಸಿದರು.