“ಹಳ್ಳಿಕಾರನಜೊತೆಗೆ ರಂಗಿ”ನಾ(ಓ)ಟ

ಜವಾರಿ ಕುದುರೆ ಕೃಷಿ ಕಾಯಕಕ್ಕೂ ಸೈ! ಎತ್ತಿನಜೊತೆಗೆ ಬಂಡಿ ಓಟಕ್ಕೂ ಜೈ * ಹಾವೇರಿಯ ರೈತ ಬೆಟ್ಟಪ್ಪ ಕುಳೇನೂರರ ಕುದುರೆ-ಎತ್ತಿನ ಜುಗಲ್ಬಂದಿ
ಹಾವೇರಿ: ಸಾಮಾನ್ಯವಾಗಿ ಕೃಷಿಕರು ಕೃಷಿ ಕೆಲಸಗಳಿಗೆ ಎತ್ತುಗಳನ್ನು ಬಳಸುತ್ತಾರೆ. ಆದರೆ ಹಾವೇರಿ ರೈತ ಬೆಟ್ಟಪ್ಪ ಕುಳೇನೂರು ಎತ್ತಿನ ಜೊತೆಗೆ ಕುದುರೆಯನ್ನು ಜೋಡಿಯಾಗಿಸಿಕೊಂಡು ಕುದುರೆ ಮತ್ತು ಎತ್ತಿನ ಜುಗಲ್ಬಂದಿಯಲ್ಲಿ ಕೃಷಿ ಕಾಕಯಕದ ಜೊತೆಗೆ ಬಂಡಿ ಓಟದಲ್ಲೂ ಸೈ ಎನಿಸಿಕೊಂಡಿದ್ದಾರೆ.ಹೌದು.. ಒಂಟಿ ಎತ್ತಿನೊಂದಿಗೆ ಕುದುರೆ ಕಟ್ಟಿ ಉಳುಮೆ ಮಾಡುವ ರೈತ ಬೆಟ್ಟಪ್ಪ ಕುಳೇನೂರ ಕುದುರೆ ಬಳಿಸಿ ಕೃಷಿ ಹಾಗೂ ಎತ್ತಿನಬಂಡಿ ಓಡಿಸುವ ಮೂಲಕ ಕುದುರೆಯ ಉಪಯೋಗವನ್ನು ಹೀಗೂ ಪಡೆಯಬುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಬಾಲ್ಯದಿಂದಲೇ ಪ್ರಾಣಿ-ಪಕ್ಷಿಗಳ ಒಡನಾಡಿಯಾಗಿರುವ ಬೆಟ್ಟಪ್ಪ ಕುಳೇನೂರರ ಇಂದಿನ ಕೃಷಿ






