“ಹಳ್ಳಿಕಾರನಜೊತೆಗೆ ರಂಗಿ”ನಾ(ಓ)ಟ

Date:

“ಹಳ್ಳಿಕಾರನಜೊತೆಗೆ ರಂಗಿ”ನಾ(ಓ)ಟ

“ಹಳ್ಳಿಕಾರನಜೊತೆಗೆ ರಂಗಿ”ನಾ(ಓ)ಟ

ಜವಾರಿ ಕುದುರೆ ಕೃಷಿ ಕಾಯಕಕ್ಕೂ ಸೈ! ಎತ್ತಿನಜೊತೆಗೆ ಬಂಡಿ ಓಟಕ್ಕೂ ಜೈ * ಹಾವೇರಿಯ ರೈತ ಬೆಟ್ಟಪ್ಪ ಕುಳೇನೂರರ ಕುದುರೆ-ಎತ್ತಿನ ಜುಗಲ್‌ಬಂದಿ
ಹಾವೇರಿ: ಸಾಮಾನ್ಯವಾಗಿ ಕೃಷಿಕರು ಕೃಷಿ ಕೆಲಸಗಳಿಗೆ ಎತ್ತುಗಳನ್ನು ಬಳಸುತ್ತಾರೆ. ಆದರೆ ಹಾವೇರಿ ರೈತ ಬೆಟ್ಟಪ್ಪ ಕುಳೇನೂರು ಎತ್ತಿನ ಜೊತೆಗೆ ಕುದುರೆಯನ್ನು ಜೋಡಿಯಾಗಿಸಿಕೊಂಡು ಕುದುರೆ ಮತ್ತು ಎತ್ತಿನ ಜುಗಲ್‌ಬಂದಿಯಲ್ಲಿ ಕೃಷಿ ಕಾಕಯಕದ ಜೊತೆಗೆ ಬಂಡಿ ಓಟದಲ್ಲೂ ಸೈ ಎನಿಸಿಕೊಂಡಿದ್ದಾರೆ.ಹೌದು.. ಒಂಟಿ ಎತ್ತಿನೊಂದಿಗೆ ಕುದುರೆ ಕಟ್ಟಿ ಉಳುಮೆ ಮಾಡುವ ರೈತ ಬೆಟ್ಟಪ್ಪ ಕುಳೇನೂರ ಕುದುರೆ ಬಳಿಸಿ ಕೃಷಿ ಹಾಗೂ ಎತ್ತಿನಬಂಡಿ ಓಡಿಸುವ ಮೂಲಕ ಕುದುರೆಯ ಉಪಯೋಗವನ್ನು ಹೀಗೂ ಪಡೆಯಬುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಬಾಲ್ಯದಿಂದಲೇ ಪ್ರಾಣಿ-ಪಕ್ಷಿಗಳ ಒಡನಾಡಿಯಾಗಿರುವ ಬೆಟ್ಟಪ್ಪ ಕುಳೇನೂರರ ಇಂದಿನ ಕೃಷಿ

ಚಂಗನೆ ಓಡುವ ಕುದುರೆಯ ಜೋಡಿಯಾಗಿ ಬಂಡಿಬದುಕಿಗೆ ಕುದುರೆಯೇ ದೊಡ್ಡ ಆಸರೆ. ಎತ್ತುಗಳ ಕೊಳ್ಳುವುದು, ಅವುಗಳ ನಿರ್ವಹಣೆ ಖರ್ಚುವೆಚ್ಚಗಳು ಹೆಚ್ಚು. ೧.೫ಲಕ್ಷರೂಗಳನ್ನು ತೆತ್ತು ಹಳ್ಳಿಕಾರಹೋರಿಯನ್ನು ಖರೀದಿಸಿರುವ ಇವರು ಈ ಹೋರಿಯ ಜೊತೆಗೆ ಸವಣೂರು ತಾಲೂಕಿನ ಕೃಷ್ಣಾಪುರದ ಕುರಿಗಾರರು ಉಡುಗೊರೆಯಾಗಿ ನೀಡಿದ್ದ ಕುದುರೆಯನ್ನು ಪಳಗಿಸಿ ಕುದುರೆಯಿಂದ ಕೃಷಿ ಕಾರ್ಯ ಅಸಾಧ್ಯ ಎನ್ನುವ ಮಾತಿಗೆ ಕುದರೆಯಿಂದ ಕೃಷಿ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

 

 

ಹೋರಿ ಗಂಭೀರ ಮತ್ತು ಕುದುರೆ ರಂಗಿ ಜೋಡಿಯ ಓಟಬೆಟ್ಟಪ್ಪ ಕುಳೇನೂರ ಹಳ್ಳಿಕಾರ ತಳಿಯ ಎತ್ತಿನೊಂದಿಗೆ ಸರೊಸಾಟಿಯಾಗಿ ಚಂಗನೆ ಓಡುವ ಕುದುರೆಯ ಜೋಡಿಯಾಗಿ ಬಂಡಿಯನ್ನು ಕಟ್ಟಿಕೊಂಡು ಓಡವ ನೋಟವನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಹಳ್ಳಿಕಾರ ತಳಿಯ ಎತ್ತಿಗೆ ಗಂಭೀರ ಎಂದು ಕುದುರೆಗೆ ರಂಗಿ ಎಂದು ನಾಮಕರಣ ಮಾಡಿದ್ದಾರೆ ಬೆಟ್ಟಪ್ಪ. ಹಾವೇರಿಯಲ್ಲಿ ಅಪರೂಪದ ಜೋಡಿಯಾಗಿರುವ ಕುದರೆ ಮತ್ತು ಎತ್ತಿನ ಓಟದ ಜುಗಲ್ ಬಂದಿಗೆ ಮನಸೋಲದವರೇ ಇಲ್ಲ. ಹಳ್ಳಿಕಾರ ಹೋರಿ ಗಂಭೀರ ಮತ್ತು ಕುದುರೆ ರಂಗಿ ಜೋಡಿಯ ಓಟವನ್ನು ನೋಡಲು ಬೇರೆಕಡೆಗಳಿಂದ ಜನತೆ ಬೆಟ್ಟಪ್ಪ ಕುಳೇನೂರ ಅವರ ತೋಟಕ್ಕೆ ಆಗಮಿಸುತ್ತಾರೆ.

 

೬೬ ವಯಸ್ಸಿನ ರೈತ ಬೆಟ್ಟಪ್ಪ ಕುಳೇನೂರ ಪ್ರೀತಿಯಿಂದ ಹೋರಿ ಮತ್ತು ಕುದುರೆಯನ್ನು ಸಾಕಿದ್ದಾರೆ. ಕುದುರೆ-ಎತ್ತನ್ನು ಗಾಡಿಗೆ ಕಟ್ಟಿ ನಿತ್ಯ ತಿರುಗಾಡಲು ಅಭ್ಯಾಸಮಾಡಿಸುತ್ತಾರೆ. ವಾಹನಗಳಿಗೆ, ಜನರಿಗೆ ಬೆದರದಂತೆ ತರಬೇತುಗೊಳಿಸುತ್ತಾರೆ. ಹಾಗೆಯೇ ತೋಟದಲ್ಲಿ ಹಾಗೂ ಮನೆಯ ಆಸುಪಾಸು ಕೂಡಾ ಸುತ್ತಾಡಿಸುತ್ತಾರೆ. ಇದರಿಂದ ಕುದುರೆ ತನ್ನ ವಾಸ ಸ್ಥಳವನ್ನು ತಿಳಿದುಕೊಳ್ಳಲು ಹಾಗೂ ತನ್ನ ಪರಿಧಿಯನ್ನು ತಿಳಿಯಲು ಅನುಕೂಲವಾಗುತ್ತದೆ.
ಹಾವೇರಿಯಲ್ಲಿ ಅಪರೂಪದ ಜೋಡಿಯಾಗಿರುವ ಕುದರೆ ಮತ್ತು ಎತ್ತಿನ ಓಟದ ಜುಗಲ್ ಬಂದಿಗೆ ಮನಸೋಲದವರೇ ಇಲ್ಲ
 ತೋಟದ ಸಾಗಾಟದ ಕೆಲಸವನ್ನು ಕುದುತೆ-ಎತ್ತು ಜೋಡಿ ನಿರ್ವಹಿಸುತ್ತವೆ. ಆದು ಗೊಬ್ಬರ ವಿರಬಹುದು, ಕಟ್ಟಗೆಯಿರಬಹುದು, ಅಡಿಕೆಯಿರಬಹುದು ಅಥವಾ ಇನ್ನೇನೇ ಇದ್ದರೂ ಸಾಗಾಟಮಾತ್ರ ನೂರಕ್ಕೆ ನೂರರಷ್ಟು ಈ ಬಲುಅಪರೂಪದ ಜೋಡಿ ಪೂರೈಸಿಕೊಡುತ್ತದೆ. ಕುದುರೆ ಗಾಡಿಗೆ ಇಂಧನ ಬೇಡ, ರಿಪೇರಿ ಪ್ರಶ್ನೆ ಉದ್ಭವಿಸುವುದಿಲ್ಲ. ತೋಟದ ಹುಲ್ಲು ತಿನ್ನುವುದರಿಂದ ನೈಸರ್ಗಿಕವಾಗಿ ಕಳೆ ನಿಯಂತ್ರಣವಾಗುತ್ತದೆ. ಎತ್ತು- ಕುದುರೆಯ ಸೆಗಣಿ ಉತ್ತಮ ಗೊಬ್ಬರ, ಹಾಗಾಗಿ ಅದೂ ಲಾಭವೇ ಎನ್ನುತ್ತಾರೆ ಬೆಟ್ಟಪ್ಪ.
ಕುದುರೆ ರಂಗಿಗೆಮರಿ ಜನಿಸಿದ್ದು, ಅದು ತಾಯಿ ಕುದುರೆಯನ್ನು ಕ್ಷಣವು ಬಿಟ್ಟು ಅಗಲುವುದಿಲ್ಲ.’ನಾಲ್ಕಾರು ಬಾರಿ ತೋಟದ ದಾರಿಯ ಪರಿಚಯವನ್ನು ಕುದುರೆಗೆ ಮಾಡಿಸಿದರೆ ಅದು ಕರಾರುವಕ್ಕಾಗಿ ಅದೇ ದಾರಿಯಲ್ಲಿ ಹೋಗಿ ಬರುತ್ತದೆ. ಕುದುರೆ ರಂಗಿಗೆಮರಿ ಜನಿಸಿದ್ದು, ಅದು ತಾಯಿ ಕುದುರೆಯನ್ನು ಕ್ಷಣವು ಬಿಟ್ಟು ಅಗಲುವುದಿಲ್ಲ. ಬಂಡಿ ಓಟದಲ್ಲಿ ಎತ್ತಿನೊಂದಿಗೆ ಸಮಾನಾಗಿ ಓಡುವ ಕುದುರೆ ಎತ್ತಿನ ನಾಗಾಲೋಟಕ್ಕೆ ನೋಡುಗರು ಬೆಚ್ಚಿಬಿಳುತ್ತಾರೆ. ಅಷ್ಟೋಂದಿ ವೇಗವಾಗಿ ಓಡಿ ಗುರಿಮುಟ್ಟುತ್ತವೆ ಈ ಅಪರೂಪದ ಜೋಡಿ. ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಎನ್ನುವ ಮಾತಿಬನಂತೆ ಕುದುರೆಯೊಂದು ಎತ್ತಿನೊಂದಿಗೆ ಹೊಂದಿಕೊಂಡು ತನ್ನ ಮಾಲಿಕ ಬೆಟ್ಟಪ್ಪನ ಪ್ರೀತಿಪಾತ್ರವಾಗಿದ್ದು, ಬೆಟ್ಟಪ್ಪ ಕುಳೇನೂರ ಅವರ ಈ ವಿನೂತನ ಪ್ರಯೋಗ ಸುತ್ತಮುತ್ತಲಿನ ಯುವ ರೈತರಿಗೆ ಮಾದರಿಯಾಗಿದೆ.
ಈ ಅಪರೂಪದ ಜೋಡಿ. ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ

LEAVE A REPLY

Please enter your comment!
Please enter your name here

Subscribe

spot_imgspot_img

Popular

“ಹಳ್ಳಿಕಾರನಜೊತೆಗೆ ರಂಗಿ”ನಾ(ಓ)ಟ

“ಹಳ್ಳಿಕಾರನಜೊತೆಗೆ ರಂಗಿ”ನಾ(ಓ)ಟ

ಜವಾರಿ ಕುದುರೆ ಕೃಷಿ ಕಾಯಕಕ್ಕೂ ಸೈ! ಎತ್ತಿನಜೊತೆಗೆ ಬಂಡಿ ಓಟಕ್ಕೂ ಜೈ * ಹಾವೇರಿಯ ರೈತ ಬೆಟ್ಟಪ್ಪ ಕುಳೇನೂರರ ಕುದುರೆ-ಎತ್ತಿನ ಜುಗಲ್‌ಬಂದಿ
ಹಾವೇರಿ: ಸಾಮಾನ್ಯವಾಗಿ ಕೃಷಿಕರು ಕೃಷಿ ಕೆಲಸಗಳಿಗೆ ಎತ್ತುಗಳನ್ನು ಬಳಸುತ್ತಾರೆ. ಆದರೆ ಹಾವೇರಿ ರೈತ ಬೆಟ್ಟಪ್ಪ ಕುಳೇನೂರು ಎತ್ತಿನ ಜೊತೆಗೆ ಕುದುರೆಯನ್ನು ಜೋಡಿಯಾಗಿಸಿಕೊಂಡು ಕುದುರೆ ಮತ್ತು ಎತ್ತಿನ ಜುಗಲ್‌ಬಂದಿಯಲ್ಲಿ ಕೃಷಿ ಕಾಕಯಕದ ಜೊತೆಗೆ ಬಂಡಿ ಓಟದಲ್ಲೂ ಸೈ ಎನಿಸಿಕೊಂಡಿದ್ದಾರೆ.ಹೌದು.. ಒಂಟಿ ಎತ್ತಿನೊಂದಿಗೆ ಕುದುರೆ ಕಟ್ಟಿ ಉಳುಮೆ ಮಾಡುವ ರೈತ ಬೆಟ್ಟಪ್ಪ ಕುಳೇನೂರ ಕುದುರೆ ಬಳಿಸಿ ಕೃಷಿ ಹಾಗೂ ಎತ್ತಿನಬಂಡಿ ಓಡಿಸುವ ಮೂಲಕ ಕುದುರೆಯ ಉಪಯೋಗವನ್ನು ಹೀಗೂ ಪಡೆಯಬುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಬಾಲ್ಯದಿಂದಲೇ ಪ್ರಾಣಿ-ಪಕ್ಷಿಗಳ ಒಡನಾಡಿಯಾಗಿರುವ ಬೆಟ್ಟಪ್ಪ ಕುಳೇನೂರರ ಇಂದಿನ ಕೃಷಿ

ಚಂಗನೆ ಓಡುವ ಕುದುರೆಯ ಜೋಡಿಯಾಗಿ ಬಂಡಿಬದುಕಿಗೆ ಕುದುರೆಯೇ ದೊಡ್ಡ ಆಸರೆ. ಎತ್ತುಗಳ ಕೊಳ್ಳುವುದು, ಅವುಗಳ ನಿರ್ವಹಣೆ ಖರ್ಚುವೆಚ್ಚಗಳು ಹೆಚ್ಚು. ೧.೫ಲಕ್ಷರೂಗಳನ್ನು ತೆತ್ತು ಹಳ್ಳಿಕಾರಹೋರಿಯನ್ನು ಖರೀದಿಸಿರುವ ಇವರು ಈ ಹೋರಿಯ ಜೊತೆಗೆ ಸವಣೂರು ತಾಲೂಕಿನ ಕೃಷ್ಣಾಪುರದ ಕುರಿಗಾರರು ಉಡುಗೊರೆಯಾಗಿ ನೀಡಿದ್ದ ಕುದುರೆಯನ್ನು ಪಳಗಿಸಿ ಕುದುರೆಯಿಂದ ಕೃಷಿ ಕಾರ್ಯ ಅಸಾಧ್ಯ ಎನ್ನುವ ಮಾತಿಗೆ ಕುದರೆಯಿಂದ ಕೃಷಿ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

 

 

ಹೋರಿ ಗಂಭೀರ ಮತ್ತು ಕುದುರೆ ರಂಗಿ ಜೋಡಿಯ ಓಟಬೆಟ್ಟಪ್ಪ ಕುಳೇನೂರ ಹಳ್ಳಿಕಾರ ತಳಿಯ ಎತ್ತಿನೊಂದಿಗೆ ಸರೊಸಾಟಿಯಾಗಿ ಚಂಗನೆ ಓಡುವ ಕುದುರೆಯ ಜೋಡಿಯಾಗಿ ಬಂಡಿಯನ್ನು ಕಟ್ಟಿಕೊಂಡು ಓಡವ ನೋಟವನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಹಳ್ಳಿಕಾರ ತಳಿಯ ಎತ್ತಿಗೆ ಗಂಭೀರ ಎಂದು ಕುದುರೆಗೆ ರಂಗಿ ಎಂದು ನಾಮಕರಣ ಮಾಡಿದ್ದಾರೆ ಬೆಟ್ಟಪ್ಪ. ಹಾವೇರಿಯಲ್ಲಿ ಅಪರೂಪದ ಜೋಡಿಯಾಗಿರುವ ಕುದರೆ ಮತ್ತು ಎತ್ತಿನ ಓಟದ ಜುಗಲ್ ಬಂದಿಗೆ ಮನಸೋಲದವರೇ ಇಲ್ಲ. ಹಳ್ಳಿಕಾರ ಹೋರಿ ಗಂಭೀರ ಮತ್ತು ಕುದುರೆ ರಂಗಿ ಜೋಡಿಯ ಓಟವನ್ನು ನೋಡಲು ಬೇರೆಕಡೆಗಳಿಂದ ಜನತೆ ಬೆಟ್ಟಪ್ಪ ಕುಳೇನೂರ ಅವರ ತೋಟಕ್ಕೆ ಆಗಮಿಸುತ್ತಾರೆ.

 

೬೬ ವಯಸ್ಸಿನ ರೈತ ಬೆಟ್ಟಪ್ಪ ಕುಳೇನೂರ ಪ್ರೀತಿಯಿಂದ ಹೋರಿ ಮತ್ತು ಕುದುರೆಯನ್ನು ಸಾಕಿದ್ದಾರೆ. ಕುದುರೆ-ಎತ್ತನ್ನು ಗಾಡಿಗೆ ಕಟ್ಟಿ ನಿತ್ಯ ತಿರುಗಾಡಲು ಅಭ್ಯಾಸಮಾಡಿಸುತ್ತಾರೆ. ವಾಹನಗಳಿಗೆ, ಜನರಿಗೆ ಬೆದರದಂತೆ ತರಬೇತುಗೊಳಿಸುತ್ತಾರೆ. ಹಾಗೆಯೇ ತೋಟದಲ್ಲಿ ಹಾಗೂ ಮನೆಯ ಆಸುಪಾಸು ಕೂಡಾ ಸುತ್ತಾಡಿಸುತ್ತಾರೆ. ಇದರಿಂದ ಕುದುರೆ ತನ್ನ ವಾಸ ಸ್ಥಳವನ್ನು ತಿಳಿದುಕೊಳ್ಳಲು ಹಾಗೂ ತನ್ನ ಪರಿಧಿಯನ್ನು ತಿಳಿಯಲು ಅನುಕೂಲವಾಗುತ್ತದೆ.
ಹಾವೇರಿಯಲ್ಲಿ ಅಪರೂಪದ ಜೋಡಿಯಾಗಿರುವ ಕುದರೆ ಮತ್ತು ಎತ್ತಿನ ಓಟದ ಜುಗಲ್ ಬಂದಿಗೆ ಮನಸೋಲದವರೇ ಇಲ್ಲ
 ತೋಟದ ಸಾಗಾಟದ ಕೆಲಸವನ್ನು ಕುದುತೆ-ಎತ್ತು ಜೋಡಿ ನಿರ್ವಹಿಸುತ್ತವೆ. ಆದು ಗೊಬ್ಬರ ವಿರಬಹುದು, ಕಟ್ಟಗೆಯಿರಬಹುದು, ಅಡಿಕೆಯಿರಬಹುದು ಅಥವಾ ಇನ್ನೇನೇ ಇದ್ದರೂ ಸಾಗಾಟಮಾತ್ರ ನೂರಕ್ಕೆ ನೂರರಷ್ಟು ಈ ಬಲುಅಪರೂಪದ ಜೋಡಿ ಪೂರೈಸಿಕೊಡುತ್ತದೆ. ಕುದುರೆ ಗಾಡಿಗೆ ಇಂಧನ ಬೇಡ, ರಿಪೇರಿ ಪ್ರಶ್ನೆ ಉದ್ಭವಿಸುವುದಿಲ್ಲ. ತೋಟದ ಹುಲ್ಲು ತಿನ್ನುವುದರಿಂದ ನೈಸರ್ಗಿಕವಾಗಿ ಕಳೆ ನಿಯಂತ್ರಣವಾಗುತ್ತದೆ. ಎತ್ತು- ಕುದುರೆಯ ಸೆಗಣಿ ಉತ್ತಮ ಗೊಬ್ಬರ, ಹಾಗಾಗಿ ಅದೂ ಲಾಭವೇ ಎನ್ನುತ್ತಾರೆ ಬೆಟ್ಟಪ್ಪ.
ಕುದುರೆ ರಂಗಿಗೆಮರಿ ಜನಿಸಿದ್ದು, ಅದು ತಾಯಿ ಕುದುರೆಯನ್ನು ಕ್ಷಣವು ಬಿಟ್ಟು ಅಗಲುವುದಿಲ್ಲ.’ನಾಲ್ಕಾರು ಬಾರಿ ತೋಟದ ದಾರಿಯ ಪರಿಚಯವನ್ನು ಕುದುರೆಗೆ ಮಾಡಿಸಿದರೆ ಅದು ಕರಾರುವಕ್ಕಾಗಿ ಅದೇ ದಾರಿಯಲ್ಲಿ ಹೋಗಿ ಬರುತ್ತದೆ. ಕುದುರೆ ರಂಗಿಗೆಮರಿ ಜನಿಸಿದ್ದು, ಅದು ತಾಯಿ ಕುದುರೆಯನ್ನು ಕ್ಷಣವು ಬಿಟ್ಟು ಅಗಲುವುದಿಲ್ಲ. ಬಂಡಿ ಓಟದಲ್ಲಿ ಎತ್ತಿನೊಂದಿಗೆ ಸಮಾನಾಗಿ ಓಡುವ ಕುದುರೆ ಎತ್ತಿನ ನಾಗಾಲೋಟಕ್ಕೆ ನೋಡುಗರು ಬೆಚ್ಚಿಬಿಳುತ್ತಾರೆ. ಅಷ್ಟೋಂದಿ ವೇಗವಾಗಿ ಓಡಿ ಗುರಿಮುಟ್ಟುತ್ತವೆ ಈ ಅಪರೂಪದ ಜೋಡಿ. ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಎನ್ನುವ ಮಾತಿಬನಂತೆ ಕುದುರೆಯೊಂದು ಎತ್ತಿನೊಂದಿಗೆ ಹೊಂದಿಕೊಂಡು ತನ್ನ ಮಾಲಿಕ ಬೆಟ್ಟಪ್ಪನ ಪ್ರೀತಿಪಾತ್ರವಾಗಿದ್ದು, ಬೆಟ್ಟಪ್ಪ ಕುಳೇನೂರ ಅವರ ಈ ವಿನೂತನ ಪ್ರಯೋಗ ಸುತ್ತಮುತ್ತಲಿನ ಯುವ ರೈತರಿಗೆ ಮಾದರಿಯಾಗಿದೆ.
ಈ ಅಪರೂಪದ ಜೋಡಿ. ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...