ಹಾನಗಲ್ ಸಿಪಿಐ ಆಂಜನೇಯ ಅಮಾನತು
ಹಾವೇರಿ: ಜಿಲ್ಲೆಯ ಹಾನಗಲ್
ವೃತ್ತದ ಸಿಪಿಐ ಆಂಜನೇಯ ಎನ್.ಎಚ್ ಅಮಾನತ್ತು ಅವರನ್ನು ದಾವಣಗೆರೆ ಪೂರ್ವ ವಲಯದ ಐಜಿಪಿರವರು ಜೂನ್ ೧೫ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.
ಕರ್ತವ್ಯದಲ್ಲಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಆಂಜನೇಯ ಅಮಾನತುಗೊಂಡಿದ್ದಾರೆ.
ಮುಂದಿನ ಆದೇಶ ಆಗುವವರೆಗೆ ಹಾನಗಲ್ ಸಿಪಿಐ ಹೆಚ್ಚುವರಿ ಪ್ರಭಾರವನ್ನು ಶಿಗ್ಗಾಂವಿ ವೃತ್ತದ ಸಿಪಿಐ ಅನೀಲಕುಮಾರ ರಾಠೋಡ ಅವರಿಗೆ ವಹಿಸಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠ ಅಂಶುಕುಮಾರ ಆದೇಶ ಹೊರಡಿಸಿದ್ದಾರೆ.