ಹಾವೇರಿ:”ಅಮೇಜಾನ್‌ನಲ್ಲಿ ಬುಕ್ ಮಾಡಿದ್ದು ಮೊಬೈಲ್ , ಗ್ರಾಹಕನಿಗೆ ಬಂದಿದ್ದು ಬಿಸ್ಕೆಟ್ ಪ್ಯಾಕೇಟ್”

Date:

ಹಾವೇರಿ:”ಅಮೇಜಾನ್‌ನಲ್ಲಿ ಬುಕ್ ಮಾಡಿದ್ದು ಮೊಬೈಲ್ , ಗ್ರಾಹಕನಿಗೆ ಬಂದಿದ್ದು ಬಿಸ್ಕೆಟ್ ಪ್ಯಾಕೇಟ್”
ಮೊಬೈಲ್‌ಗೆ ಪಾವತಿಸಿದ್ದ ಹಣ, ೨೦ಸಾವಿರ ದಂಡ ವಿಧಿಸಿ ಗ್ರಾಹಕ ವೇದಿಕೆ ಆದೇಶ
ಹಾವೇರಿ: ಆನ್‌ಲೈನ್‌ನಲ್ಲಿ ಇತ್ತೀಚೆಗೆ ವಂಚನೆಗಳು ಹೆಚ್ಚುತ್ತಿದ್ದು, ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದ್ದ ವ್ಯಕ್ತಿಗೆ ಬಿಸ್ಕೆಟ್ ಪ್ಯಾಲೇಟ್ ಬಂದಿರುವ ಘಟನೆ ನಡೆದಿದ್ದು, ತನಗೆ ಆಗಿರುವ ವಂಚನೆಗೆ ಸಂಬಂಧಿಸಿದಂತೆ ಗ್ರಾಹಕನು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದಲ್ಲಿ ನ್ಯಾಯವಾದಿ ಜೆ.ವೆಂಕಟೇಶ ಅವರ ಮೂಲಕ ದೂರು ದಾಖಲಿಸಿದ್ದು, ಇದಿಗ ಗ್ರಾಹಕ ವೇದಿಕೆಯ ವಿಚಾರಣೆ ನಡೆಸಿ ಗ್ರಾಹಕ ಮೊಬೈಲ್‌ಗೆ ಪಾವತಿಸಿದ ಹಣ ಹಾಗೂ ೨೦ಸಾವಿರೂ ದಂಡ ಶೇ.೬ಬಡ್ಡಿಯಂತೆ ಹಾಗೂ ಸದರಿ ಪ್ರಕರಣದ ಖರ್ಚು ೩ಸಾವಿರೂಗಳನ್ನು ೩೦ದಿನಗಳೊಳಗಾಗಿ ಪಾವತಿಸುವಂತೆ ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯ ಆದೇಶಿಸಿದೆ.
ಹಾವೇರಿಯ ಸಿವಿಲ್ ಇಂಜನೀಯರ್ ಬಸವರಾಜ ಚಕ್ರಸಾಲಿ ಅವರು ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈ.ಲಿ, ಇವರಲ್ಲಿ ದಿ.೨೫-೧೨-೨೦೨೦ ರಂದು ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್‌ನ್ನು ೫೯೯೯ರೂಗಳನ್ನು ಪಾವತಿಸಿ ಖರೀದಿಸಿದ್ದರು. ಆದರೆ ಇವರು ಖರೀದಿಸಿದ ಮೊಬೈಲ್ ಪಾರ್ಸಲ್‌ನ್ನು ದಿ.೨೮-೧೨-೨೦೨೦ರಂದು ಇವರು ಪಡೆದಾಗ ಪಾರ್ಸಲ್‌ನಲ್ಲಿ ಮೊಬೈಲ್ ಬದಲು ಕ್ಯಾಡ್‌ಬರಿ ಚಾಕೊ ಬೇಕ್ಸ್ ನ ಬಿಸ್ಕಟ್‌ಗಳು ಕಂಡು ಬಂದಿದ್ದವು.
ಇದನ್ನು ವಿಡಿಯೋ ರೆಕಾರ್ಡ ಮಾಡಿದ್ದ ಬಸವರಾಜ ಅವರು ಅಮೆಜಾನ್ ಆಪ್ನ ಗ್ರಾಹಕರ ಕುಂದು ಕೊರತೆ ವಿಭಾಗವನ್ನು ಸಂಪರ್ಕಿಸಿ ತಿಳಿಸಿದ್ದಾರೆ. ಅನೇಕ ಬಾರಿ ನಿರಂತರವಾಗಿ ದೂರು ನೀಡಿದರು ಸಹ ಇವರಿಗೆ ಕಂಪನಿಯ ಕಡೆಯಿಂದ ಸ್ಪಂದನೆ ದೊರೆಯದ ಸಂದರ್ಭದಲ್ಲಿ ಅವರು ಅಮೆಜಾನ್ ಕಂಪನಿಯ ನೂನ್ಯತೆ ಹಾಗೂ ಅನುಚಿತ ವ್ಯಾಪಾರವನ್ನು ಪ್ರಶ್ನಿಸಿ ನ್ಯಾಯವಾದಿ ಜೆ.ವೆಂಕಟೇಶ ಅವರ ಮೂಲಕ ನೋಟಿಸನ್ನು ಕಳುಹಿಸಿದ್ದರು, ಈ ನೋಟಿಸಿಗೂ ಸಹ ಕಂಪನಿಯವರ ಕಡೆಯಿಂದ ಅಸಮರ್ಪಕ ಉತ್ತರ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರು ಹಾಗೂ ಅಧ್ಯಕ್ಷರಾದ ಈಶ್ವರಪ್ಪ ಬಿ. ಎಸ್. ಅವರು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಡಿ.೭-೨೦೨೨ರಂದು ಆದೇಶ ನೀಡಿ ದೂರುದಾರರು ಗ್ರಾಹಕರ ಹಿತ ರಕ್ಷಣಾ ಕಾಯ್ದೆ-೨೦೧೯ ಕಲಂ:೩೫ರ ಅಡಿಯಲ್ಲಿ ಎದುರುದಾರರ ವಿರುದ್ಧ ಸಲ್ಲಿಸಿದ ದೂರನ್ನು ಭಾಗಶಃ ಪುರಸ್ಕರಿಸಲಾಗಿದೆ.
ದೂರುದಾರರು ಮೊಬೈಲ್ ಖರೀದಿಗಾಗಿ ಎದುರುದಾರರಿಗೆ ಪಾವತಿಸಿದ್ದ ರೂ.೫,೯೯೯/-ಗಳನ್ನು ೧ ಮತ್ತು ೨ನೇ ಎದುರುದಾರರು ಬಡ್ಡಿಯೊಂದಿಗೆ ಹಣ ಪಾವತಿಸಿದ ಪೂರ್ಣ ದಿನಾಂಕದಿಂದ ತೀರುವಳಿಯಾಗುವವರೆಗೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ನೀಡಬೇಕೆಂದು ಆದೇಶಿಸಿದ್ದಾರೆ.
ಎದುರುದಾರರಿಂದ ದೂರುದಾರರಿಗೆ ಉಂಟಾದ ಸೇವಾ ನೂನ್ಯತೆಗಾಗಿ ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ರೂ.೨೦,೦೦೦/-ಗಳನ್ನು ಹಾಗೂ ಖರ್ಚು ರೂ.೩,೦೦೦/-ಗಳನ್ನು ೧ ಮತ್ತು ೨ನೇ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾವತಿಸತಕ್ಕದ್ದು. ಸದರಿ ಪರಿಹಾರದ ಮೊತ್ತವನ್ನು ಆದೇಶವಾದ ೩೦ ದಿನಗಳೊಳಗಾಗಿ ದೂರುದಾರರಿಗೆ ನೀಡತಕ್ಕದ್ದು. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.೯ರಂತೆ ಬಡ್ಡಿಯನ್ನು ದೂರುದಾರರು ಹಣ ಮೊತ್ತ ಪೂರ್ಣ ತೀರುವಳಿಯಾಗುವವರೆಗೆ ೧ ಮತ್ತು ೨ನೇ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾವತಿಸತಕ್ಕದ್ದು ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ:”ಅಮೇಜಾನ್‌ನಲ್ಲಿ ಬುಕ್ ಮಾಡಿದ್ದು ಮೊಬೈಲ್ , ಗ್ರಾಹಕನಿಗೆ ಬಂದಿದ್ದು ಬಿಸ್ಕೆಟ್ ಪ್ಯಾಕೇಟ್”
ಮೊಬೈಲ್‌ಗೆ ಪಾವತಿಸಿದ್ದ ಹಣ, ೨೦ಸಾವಿರ ದಂಡ ವಿಧಿಸಿ ಗ್ರಾಹಕ ವೇದಿಕೆ ಆದೇಶ
ಹಾವೇರಿ: ಆನ್‌ಲೈನ್‌ನಲ್ಲಿ ಇತ್ತೀಚೆಗೆ ವಂಚನೆಗಳು ಹೆಚ್ಚುತ್ತಿದ್ದು, ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದ್ದ ವ್ಯಕ್ತಿಗೆ ಬಿಸ್ಕೆಟ್ ಪ್ಯಾಲೇಟ್ ಬಂದಿರುವ ಘಟನೆ ನಡೆದಿದ್ದು, ತನಗೆ ಆಗಿರುವ ವಂಚನೆಗೆ ಸಂಬಂಧಿಸಿದಂತೆ ಗ್ರಾಹಕನು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದಲ್ಲಿ ನ್ಯಾಯವಾದಿ ಜೆ.ವೆಂಕಟೇಶ ಅವರ ಮೂಲಕ ದೂರು ದಾಖಲಿಸಿದ್ದು, ಇದಿಗ ಗ್ರಾಹಕ ವೇದಿಕೆಯ ವಿಚಾರಣೆ ನಡೆಸಿ ಗ್ರಾಹಕ ಮೊಬೈಲ್‌ಗೆ ಪಾವತಿಸಿದ ಹಣ ಹಾಗೂ ೨೦ಸಾವಿರೂ ದಂಡ ಶೇ.೬ಬಡ್ಡಿಯಂತೆ ಹಾಗೂ ಸದರಿ ಪ್ರಕರಣದ ಖರ್ಚು ೩ಸಾವಿರೂಗಳನ್ನು ೩೦ದಿನಗಳೊಳಗಾಗಿ ಪಾವತಿಸುವಂತೆ ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯ ಆದೇಶಿಸಿದೆ.
ಹಾವೇರಿಯ ಸಿವಿಲ್ ಇಂಜನೀಯರ್ ಬಸವರಾಜ ಚಕ್ರಸಾಲಿ ಅವರು ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈ.ಲಿ, ಇವರಲ್ಲಿ ದಿ.೨೫-೧೨-೨೦೨೦ ರಂದು ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್‌ನ್ನು ೫೯೯೯ರೂಗಳನ್ನು ಪಾವತಿಸಿ ಖರೀದಿಸಿದ್ದರು. ಆದರೆ ಇವರು ಖರೀದಿಸಿದ ಮೊಬೈಲ್ ಪಾರ್ಸಲ್‌ನ್ನು ದಿ.೨೮-೧೨-೨೦೨೦ರಂದು ಇವರು ಪಡೆದಾಗ ಪಾರ್ಸಲ್‌ನಲ್ಲಿ ಮೊಬೈಲ್ ಬದಲು ಕ್ಯಾಡ್‌ಬರಿ ಚಾಕೊ ಬೇಕ್ಸ್ ನ ಬಿಸ್ಕಟ್‌ಗಳು ಕಂಡು ಬಂದಿದ್ದವು.
ಇದನ್ನು ವಿಡಿಯೋ ರೆಕಾರ್ಡ ಮಾಡಿದ್ದ ಬಸವರಾಜ ಅವರು ಅಮೆಜಾನ್ ಆಪ್ನ ಗ್ರಾಹಕರ ಕುಂದು ಕೊರತೆ ವಿಭಾಗವನ್ನು ಸಂಪರ್ಕಿಸಿ ತಿಳಿಸಿದ್ದಾರೆ. ಅನೇಕ ಬಾರಿ ನಿರಂತರವಾಗಿ ದೂರು ನೀಡಿದರು ಸಹ ಇವರಿಗೆ ಕಂಪನಿಯ ಕಡೆಯಿಂದ ಸ್ಪಂದನೆ ದೊರೆಯದ ಸಂದರ್ಭದಲ್ಲಿ ಅವರು ಅಮೆಜಾನ್ ಕಂಪನಿಯ ನೂನ್ಯತೆ ಹಾಗೂ ಅನುಚಿತ ವ್ಯಾಪಾರವನ್ನು ಪ್ರಶ್ನಿಸಿ ನ್ಯಾಯವಾದಿ ಜೆ.ವೆಂಕಟೇಶ ಅವರ ಮೂಲಕ ನೋಟಿಸನ್ನು ಕಳುಹಿಸಿದ್ದರು, ಈ ನೋಟಿಸಿಗೂ ಸಹ ಕಂಪನಿಯವರ ಕಡೆಯಿಂದ ಅಸಮರ್ಪಕ ಉತ್ತರ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರು ಹಾಗೂ ಅಧ್ಯಕ್ಷರಾದ ಈಶ್ವರಪ್ಪ ಬಿ. ಎಸ್. ಅವರು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಡಿ.೭-೨೦೨೨ರಂದು ಆದೇಶ ನೀಡಿ ದೂರುದಾರರು ಗ್ರಾಹಕರ ಹಿತ ರಕ್ಷಣಾ ಕಾಯ್ದೆ-೨೦೧೯ ಕಲಂ:೩೫ರ ಅಡಿಯಲ್ಲಿ ಎದುರುದಾರರ ವಿರುದ್ಧ ಸಲ್ಲಿಸಿದ ದೂರನ್ನು ಭಾಗಶಃ ಪುರಸ್ಕರಿಸಲಾಗಿದೆ.
ದೂರುದಾರರು ಮೊಬೈಲ್ ಖರೀದಿಗಾಗಿ ಎದುರುದಾರರಿಗೆ ಪಾವತಿಸಿದ್ದ ರೂ.೫,೯೯೯/-ಗಳನ್ನು ೧ ಮತ್ತು ೨ನೇ ಎದುರುದಾರರು ಬಡ್ಡಿಯೊಂದಿಗೆ ಹಣ ಪಾವತಿಸಿದ ಪೂರ್ಣ ದಿನಾಂಕದಿಂದ ತೀರುವಳಿಯಾಗುವವರೆಗೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ನೀಡಬೇಕೆಂದು ಆದೇಶಿಸಿದ್ದಾರೆ.
ಎದುರುದಾರರಿಂದ ದೂರುದಾರರಿಗೆ ಉಂಟಾದ ಸೇವಾ ನೂನ್ಯತೆಗಾಗಿ ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ರೂ.೨೦,೦೦೦/-ಗಳನ್ನು ಹಾಗೂ ಖರ್ಚು ರೂ.೩,೦೦೦/-ಗಳನ್ನು ೧ ಮತ್ತು ೨ನೇ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾವತಿಸತಕ್ಕದ್ದು. ಸದರಿ ಪರಿಹಾರದ ಮೊತ್ತವನ್ನು ಆದೇಶವಾದ ೩೦ ದಿನಗಳೊಳಗಾಗಿ ದೂರುದಾರರಿಗೆ ನೀಡತಕ್ಕದ್ದು. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.೯ರಂತೆ ಬಡ್ಡಿಯನ್ನು ದೂರುದಾರರು ಹಣ ಮೊತ್ತ ಪೂರ್ಣ ತೀರುವಳಿಯಾಗುವವರೆಗೆ ೧ ಮತ್ತು ೨ನೇ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾವತಿಸತಕ್ಕದ್ದು ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...