

ಹಾವೇರಿಗರನ್ನು ಕಾಡಿದ್ದ ಚಿರತೆ ಮಾಳಾಪುರದ ಬಳಿ ಸೆರೆ
ಹಾವೇರಿ: ಹಾವೇರಿನಗರವು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮೀಣ ಪ್ರದೇಶದ ಜನತೆಯನ್ನು ಕಳೆದ ಒಂದು ತಿಂಗಳಿಂದ ಕಾಡಿದ್ದ ಚಿರತೆಯನ್ನು ಶನಿವಾರ ಸಂಜೆ ಅರಣ್ಯ ಇಲಾಖೆ, ಅಗ್ನಿಶಾಮಾಕ ಠಾಣೆ ಸಿಬ್ಬಂದಿ, ಪೊಲೀಸರು ಸ್ಥಳೀಯರ ನೆರವಿನಿಂದ ಸತತ ೭ ಗಂಟೆ ಕಾರ್ಯಾಚರಣೆ ನಡೆಸಿ ನಗರಕ್ಕೆ ಸಮೀಪದ ಮಾಳಾಪುರದ ಬಳಿ ಬೋನಿಗೆ ಕೆಡವುವಲ್ಲಿ ಯಶಸ್ಸಿಯಾಗಿದ್ದಾರೆ.
ಮಾಳಾಪುರದಬಳಿಯ ತುಂಗಾಮೇಲ್ಡಂಡೆಯ ಚಿಕ್ಕ ಕಾಲುವೆಯಲ್ಲಿ ಶನಿವಾರ ಬೆಳಿಗ್ಗೆ ಚಿರತೆ ಓಡಾಟ ಕಂಡಿದ್ದ ಗ್ರಾಮದ ವ್ಯಕ್ತಿ ತಕ್ಷಣ ಜನರನ್ನು ಸೇರಿಸಿ ಕಾಲುವೆಯ ಎರಡು ಕಡೆಗಳ ಬಾಯಿಗೆ ತಗಡಿನ ಸೀಟಗಳನ್ನು ಇರಿಸಿ ಚಿರತೆ ಬೇರೆ ಕಡೆ ಹೋಗದಂತೆ ಕೂಡಿಹಾಕಿ ಅರಣ್ಯ ಇಲಾಖೆಯ ಹಾಗೂ ಗ್ರಾಮೀಣ ಪೊಲೀಸ್ಠಾಣೆಗೆ ವಿಷಯ ತಿಳಿಸಿದ್ದರು.
ಶನಿವಾರ ಬೆಳಿಗ್ಗೆ ೧೦ಗಂಟೆಯಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಆದರೆ ಚಾಣಾಕ್ಷ ಚಿರತೆ ಸುಲಭವಾಗಿ ಬಲೆಗೆ ಬೀಳಲಿಲ್ಲ. ನಾಗೇಂದ್ರನಮಟ್ಟಿಯ ಕೆಲವು ಕೊರಚರ ಯುವಕರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮೊದಲು ಬ್ಯಾಟರಿ ಟಾರ್ಚ್ ಮೂಲಕ ಚಿರತೆ ಇರುವ ಬಗ್ಗೆ ಖಚಿತ ಪಡಿಸಿಕೊಂಡು, ಒಳ ಕಾಲುವೆಯ ಎರಡು ಕಡೆಗಳಲ್ಲಿ ಬೋನುಗಳನ್ನು ಅಳವಡಿಸಿ ಪಠಾಕಿ, ಸಿಡಿಸಿ, ಹೊಗೆಹಾಕಿ ಚಿರತೆಯನ್ನು ಬೋನಿಗೆ ಬೀಳಿಸಲು ಮಾಡಿದ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಪ್ಲಾಸ್ಟಿಕ್ ಡ್ರಮ್ನ್ನು ಒಂದು ಭಾಗದಿಂದ ಮತ್ತೊಂದು ಭಾಗದವರೆಗೆ ಹಗ್ಗದ ಸಹಾಯದಿಂದ ಎಳೆದು ಚಿರತೆಯನ್ನು ಬೋನಿಗೆ ಕೆಡವಲು ನಡೆಸಿದ ಪ್ರಯತ್ನವು ಸಹ ವಿಫಲವಾಯಿತು.
ಅರಣ್ಯ ಇಲಾಖೆಯ ಪ್ರಯತ್ನಗಳಿಗೆ ಬಗ್ಗದ ಚಿರತೆ ಕಾಲುವೆಯ ಮಧ್ಯದಲ್ಲೇ ಅವಿತು ನಿದ್ದೆ ಮಾಡುವ ಮೂಲಕ ಅರಣ್ಯ ಇಲಾಖೆಯಸಿ ಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನಿಸಿತ್ತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಅಗ್ನಿ ಶಾಮಕಠಾಣೆಯ ಸಿಬ್ಬಂದಿ ಆಗಮಿಸಿ ನಾನಾ ತಂತ್ರಗಳನ್ನು ಬಳಸಿ ಚಿರತೆಯ ಸೆರೆಗೆ ಪ್ರಯತ್ನ ನಡೆಸಿದರು. ಅಂತಿಮವಾಗಿ ಶನಿವಾರ ಸಂಜೆ ೫ರಸುಮಾರಿಗೆ ಪ್ಲಾಸ್ಟಿಕ್ ಡ್ರಮ್ನ್ನು ಬಳಸಿ ಹಗ್ಗದ ಸಹಾಯದಿಂದ ಎಳೆಯುವ ಮೂಲಕ ಚಿರvಯನ್ನು ಬೋನಿಗೆ ಬಿಳಿಸಲಾಯಿತು. ಚಿರತೆಯ ಬೋನಿಗೆ ಬಿದ್ದ ತಕ್ಷಣ ಜನತೆ ನಿಟ್ಟುಸಿರು ಇಟ್ಟರು. ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಚಪ್ಪಾಳೆ ತಟ್ಟಿ, ಶಿಳ್ಳೆಹಾಕಿ ಜೈಕಾರ ಕೂಗಿದರು.
ಚಿರತೆ ಸೆರೆಯ ಕಾರ್ಯಾಚರಣೆಗೆ ಜನರಿಂದ ತೊಂದರೆ; ಅರಣ್ಯ ಇಲಾಖೆಯವರು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ ತಕ್ಷಣ ಅಗಡಿ, ಕಳ್ಳಿಹಾಳ, ಮಾಳಾಪುರ, ಭೂ ವೀರಾಪುರ ಹಾಗೂ ಹಾವೇರಿಯಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಚಿರತೆ ಸೆರೆ ಹಿಡಯುವ ಕಾರ್ಯಾಚರಣೆ ವೀಕ್ಷಿಸಲು ಮುಗಿ ಬಿದ್ದಿದ್ದರು. ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಸಾರಿ ಸಾರಿ ಹೇಳಿದರೂ ಸಹ ಜನತೆ ಹಿಂದೆ ಸರಿಯಲ್ಲಿ.ಇದರಿಂದ ಪೊಲೀಸರು ಲಾಠಿ ಬೀಸುವುದು ಅನಿವಾರ್ಯವಾಯಿತು. ಲಾಠಿಗೂ ಹೆದರದ ಜನರು ಕಾರ್ಯಾಚರಣೆಯನ್ನು ವೀಕ್ಷಿಸಿದರು. ಚಿರತೆಯ ಜೊತೆಗೆ ಸೆಲ್ಪಿ ತಗೆದುಕೊಳ್ಳಲು ಮುಗಿಬಿದ್ದಿದ್ದರು.
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಗಳಾದ ರಾಘವೇಂದ್ರ ಬಿರಾದಾರ, ಎಫ್.ಎಸ್.ಮಾಗಡಿ, ಎಸಿಎಫ್ ಶ್ರೀನಾಥ, ಆರ್.ಎಫ್.ಓ ವೈ.ಆರ್.ನದಾಫ ಹಾಗೂ ಬಸವರಾಜ, ರೆಹಮತ ಮತ್ತಿತರರು ಭಾಗವಹಿಸಿದ್ದರು.
ಹಾವೇರಿ: ಹಾವೇರಿನಗರವು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮೀಣ ಪ್ರದೇಶದ ಜನತೆಯನ್ನು ಕಳೆದ ಒಂದು ತಿಂಗಳಿಂದ ಕಾಡಿದ್ದ ಚಿರತೆಯನ್ನು ಶನಿವಾರ ಸಂಜೆ ಅರಣ್ಯ ಇಲಾಖೆ, ಅಗ್ನಿಶಾಮಾಕ ಠಾಣೆ ಸಿಬ್ಬಂದಿ, ಪೊಲೀಸರು ಸ್ಥಳೀಯರ ನೆರವಿನಿಂದ ಸತತ ೭ ಗಂಟೆ ಕಾರ್ಯಾಚರಣೆ ನಡೆಸಿ ನಗರಕ್ಕೆ ಸಮೀಪದ ಮಾಳಾಪುರದ ಬಳಿ ಬೋನಿಗೆ ಕೆಡವುವಲ್ಲಿ ಯಶಸ್ಸಿಯಾಗಿದ್ದಾರೆ.
ಮಾಳಾಪುರದಬಳಿಯ ತುಂಗಾಮೇಲ್ಡಂಡೆಯ ಚಿಕ್ಕ ಕಾಲುವೆಯಲ್ಲಿ ಶನಿವಾರ ಬೆಳಿಗ್ಗೆ ಚಿರತೆ ಓಡಾಟ ಕಂಡಿದ್ದ ಗ್ರಾಮದ ವ್ಯಕ್ತಿ ತಕ್ಷಣ ಜನರನ್ನು ಸೇರಿಸಿ ಕಾಲುವೆಯ ಎರಡು ಕಡೆಗಳ ಬಾಯಿಗೆ ತಗಡಿನ ಸೀಟಗಳನ್ನು ಇರಿಸಿ ಚಿರತೆ ಬೇರೆ ಕಡೆ ಹೋಗದಂತೆ ಕೂಡಿಹಾಕಿ ಅರಣ್ಯ ಇಲಾಖೆಯ ಹಾಗೂ ಗ್ರಾಮೀಣ ಪೊಲೀಸ್ಠಾಣೆಗೆ ವಿಷಯ ತಿಳಿಸಿದ್ದರು.
ಶನಿವಾರ ಬೆಳಿಗ್ಗೆ ೧೦ಗಂಟೆಯಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಆದರೆ ಚಾಣಾಕ್ಷ ಚಿರತೆ ಸುಲಭವಾಗಿ ಬಲೆಗೆ ಬೀಳಲಿಲ್ಲ. ನಾಗೇಂದ್ರನಮಟ್ಟಿಯ ಕೆಲವು ಕೊರಚರ ಯುವಕರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮೊದಲು ಬ್ಯಾಟರಿ ಟಾರ್ಚ್ ಮೂಲಕ ಚಿರತೆ ಇರುವ ಬಗ್ಗೆ ಖಚಿತ ಪಡಿಸಿಕೊಂಡು, ಒಳ ಕಾಲುವೆಯ ಎರಡು ಕಡೆಗಳಲ್ಲಿ ಬೋನುಗಳನ್ನು ಅಳವಡಿಸಿ ಪಠಾಕಿ, ಸಿಡಿಸಿ, ಹೊಗೆಹಾಕಿ ಚಿರತೆಯನ್ನು ಬೋನಿಗೆ ಬೀಳಿಸಲು ಮಾಡಿದ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಪ್ಲಾಸ್ಟಿಕ್ ಡ್ರಮ್ನ್ನು ಒಂದು ಭಾಗದಿಂದ ಮತ್ತೊಂದು ಭಾಗದವರೆಗೆ ಹಗ್ಗದ ಸಹಾಯದಿಂದ ಎಳೆದು ಚಿರತೆಯನ್ನು ಬೋನಿಗೆ ಕೆಡವಲು ನಡೆಸಿದ ಪ್ರಯತ್ನವು ಸಹ ವಿಫಲವಾಯಿತು.
ಅರಣ್ಯ ಇಲಾಖೆಯ ಪ್ರಯತ್ನಗಳಿಗೆ ಬಗ್ಗದ ಚಿರತೆ ಕಾಲುವೆಯ ಮಧ್ಯದಲ್ಲೇ ಅವಿತು ನಿದ್ದೆ ಮಾಡುವ ಮೂಲಕ ಅರಣ್ಯ ಇಲಾಖೆಯಸಿ ಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನಿಸಿತ್ತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಅಗ್ನಿ ಶಾಮಕಠಾಣೆಯ ಸಿಬ್ಬಂದಿ ಆಗಮಿಸಿ ನಾನಾ ತಂತ್ರಗಳನ್ನು ಬಳಸಿ ಚಿರತೆಯ ಸೆರೆಗೆ ಪ್ರಯತ್ನ ನಡೆಸಿದರು. ಅಂತಿಮವಾಗಿ ಶನಿವಾರ ಸಂಜೆ ೫ರಸುಮಾರಿಗೆ ಪ್ಲಾಸ್ಟಿಕ್ ಡ್ರಮ್ನ್ನು ಬಳಸಿ ಹಗ್ಗದ ಸಹಾಯದಿಂದ ಎಳೆಯುವ ಮೂಲಕ ಚಿರvಯನ್ನು ಬೋನಿಗೆ ಬಿಳಿಸಲಾಯಿತು. ಚಿರತೆಯ ಬೋನಿಗೆ ಬಿದ್ದ ತಕ್ಷಣ ಜನತೆ ನಿಟ್ಟುಸಿರು ಇಟ್ಟರು. ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಚಪ್ಪಾಳೆ ತಟ್ಟಿ, ಶಿಳ್ಳೆಹಾಕಿ ಜೈಕಾರ ಕೂಗಿದರು.
ಚಿರತೆ ಸೆರೆಯ ಕಾರ್ಯಾಚರಣೆಗೆ ಜನರಿಂದ ತೊಂದರೆ; ಅರಣ್ಯ ಇಲಾಖೆಯವರು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ ತಕ್ಷಣ ಅಗಡಿ, ಕಳ್ಳಿಹಾಳ, ಮಾಳಾಪುರ, ಭೂ ವೀರಾಪುರ ಹಾಗೂ ಹಾವೇರಿಯಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಚಿರತೆ ಸೆರೆ ಹಿಡಯುವ ಕಾರ್ಯಾಚರಣೆ ವೀಕ್ಷಿಸಲು ಮುಗಿ ಬಿದ್ದಿದ್ದರು. ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಸಾರಿ ಸಾರಿ ಹೇಳಿದರೂ ಸಹ ಜನತೆ ಹಿಂದೆ ಸರಿಯಲ್ಲಿ.ಇದರಿಂದ ಪೊಲೀಸರು ಲಾಠಿ ಬೀಸುವುದು ಅನಿವಾರ್ಯವಾಯಿತು. ಲಾಠಿಗೂ ಹೆದರದ ಜನರು ಕಾರ್ಯಾಚರಣೆಯನ್ನು ವೀಕ್ಷಿಸಿದರು. ಚಿರತೆಯ ಜೊತೆಗೆ ಸೆಲ್ಪಿ ತಗೆದುಕೊಳ್ಳಲು ಮುಗಿಬಿದ್ದಿದ್ದರು.
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಗಳಾದ ರಾಘವೇಂದ್ರ ಬಿರಾದಾರ, ಎಫ್.ಎಸ್.ಮಾಗಡಿ, ಎಸಿಎಫ್ ಶ್ರೀನಾಥ, ಆರ್.ಎಫ್.ಓ ವೈ.ಆರ್.ನದಾಫ ಹಾಗೂ ಬಸವರಾಜ, ರೆಹಮತ ಮತ್ತಿತರರು ಭಾಗವಹಿಸಿದ್ದರು.
—
malatesh angur
sub-editor
kourava daily,
haveri
sub-editor
kourava daily,
haveri