ಹಾವೇರಿಗೆ ಜಿ.ಟಿ.ಡಿ.ಸಿ ಸತೀಶ ಜಾರಿಕಿಹೊಳಿ ಅವರ ಕೊಡುಗೆ: ನೀರಲಗಿ
ಹಾವೇರಿ: ಶೋಷಿತ ವರ್ಗಗಳ ಧ್ವನಿಯಾಗಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸರಳತೆ ಅನುಕರಣಿಯವಾಗಿದ್ದು, ಮೂಢ ನಂಬಿಕೆ, ಅಂಧಶೃದ್ಧೆಗಳನ್ನು ಹೋಗಲಾಡಿಸಲು ಅನೇಕ ಪ್ರಗತಿಪರ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಅವರೊಬ್ಬ ಮಾದರಿಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಮುಂದಿನದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಶನಿವಾರ ಇಲ್ಲಿನ ರಾಮಕೃಷ್ಣ ನಗರದಲ್ಲಿ ಶ್ರೀಶಕ್ತಿ ಮಕ್ಕಳ ತೆರೆದ ತಂಗುದಾಣದಲ್ಲಿ ಸತೀಶ ಜಾರಿಕೊಳಿ ಅಭಿಮಾನಿ ಬಳಗ ಆಯೋಜಿಸಿದ್ದ ಸತೀಶ ಅವರ ೬೨ ಹುಟ್ಟು ಹಬ್ಬದ ಅಂಗವಾಗಿ ಮಕ್ಕಳಿಗೆ ನೋಟಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಈ ಹಿಂದೆ ಸತೀಶ ಜಾರಿಕಿಹೊಳಿ ಅವರು ಕೈಗಾರಿಕಾ ಸಚಿವರಿದ್ದ ಸಂದರ್ಭದಲ್ಲಿ ಹಾವೇರಿಗೆ ಜಿಟಿಡಿಸಿ ತರಬೇತಿ ಕೇಂದ್ರವನ್ನು ಮಂಜೂರಿಮಾಡುವಂತೆ ಮನವಿ ಮಾಡಿದ ವೇಳೆ, ಸಚಿವ ಜಾರಕಿಹೊಳಿ ಅವರು ಹಾವೇರಿಗೆ ಟೂಲ್ಸ್ ರೂಂ ಆಯಂಡ್ ಟ್ರೈನಿಂಗ್ ಸೆಂಟರ್ ಮಂಜೂರಿ ಮಾಡುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಸಂಹ ಮಂಜೂರಿ ಮಾಡಿದ್ದರು, ಹಾವೇರಿಯಲ್ಲಿ ಆಂರಭವಾಗಲಿರುವ ಜಿಟಿಡಿಸಿ ತರಬೇತಿ ಕೇಂದ್ರ ಸತೀಶ ಜಾರಿಕಿಹೊಳಿ ಅವರ ಕೊಡುಗೆಯಾಗಿದೆ ಎಂದರು.
ಹಾವೇರಿಗೆ ಸಮೀಪದ ನೆಲೋಗಲ್ಲ ಗುಡ್ಡದಲ್ಲಿ ಕೋಟ್ಯಾಂತರೂಗಳ ವೆಚ್ಚದಲ್ಲಿ ಡಿಟಿಡಿಸಿ ತರಬೇತಿ ಕೇಂದ್ರವು ನಿರ್ಮಾಣಗೊಂಡಿದ್ದು, ಕೈಗಾರಿಕೀಕರಣಕ್ಕೆ ತಕ್ಕಂತ ಉದ್ಯೋಗ ಸೃಷ್ಟಿಗೆ ತರಬೇತಿ ನೀಡುವ ಕಾರ್ಯವನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಇಲ್ಲಿ ಆರಂಭಿಸಲಾಗಿರುವ ಡಿಪ್ಲೋಮಾ ಇನ್ ಟೂಲ್ ಆಯಂಡ್ ಡೈ ಮೇಕಿಂಗ್ ಕೋರ್ಸ್ಗೆ ಕಾರ್ಖಾನೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಪ್ರಸಕ್ತ ವರ್ಷದಿಂದ ತರಬೇತಿ ಕೇಂದ್ರವನ್ನು ಆರಂಭಿಸಲು ಚುನಾವಣೆ ನೀತಿ ಸಂಹಿತೇ ಮುಗಿದ ನಂತರ ಸಂಬಂಧಿಸಿದ ಸಚಿವ ಜೊತೆಗೆ ಮಾತನಾಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾದಿ ಶಹರ ಕಾಂಗ್ರೆಸ್ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ಪ್ರಮುಖರಾದ ಅಶೋಕ ಹರನಗಿರಿ,ಗುಡ್ಡನಗೌಡ ಅಂದಾನಿಗೌಡ್ರ, ಶಿವಬಸಪ್ಪ ತಳವಾರ, ಅಮೀರ ಶಿಡಗನಾಳ, ಇರ್ಷದ ಹೋಸಮನಿ, ಉಮರ ನದಾಫ್, ವಿನಯ್ ಪಾಲಂಕರ, ಇಮಾಮ ಮುಗದೂರ, ಕೋಟೆಪ್ಪ ಮಡಿವಾಳg, ಮಹಮ್ಮದ್ ಜಂಗ್ಲಿಸಾಬನವರ, ಆಕಾಶ ಮಂಟಗಣಿ, ಭಾಷಾಸಾಬ ಕೋಳೂರ, ಜಮೀರ ಜಿಗರಿ, ಶಿದ್ದು ಪುರದ ಭಾಗವಹಿಸಿದ್ದರು. ಸತೀಶ ಜಾರಿಕೊಳಿ ಅವರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಬಡಮ್ಮನವರ ಸ್ವಾಗತಿಸಿದರು, ಮಲ್ಲಿಕಾರ್ಜುನ ಬೂದಗಟ್ಟಿ ನಿರೂಪಿಸಿದರು.
ಹಾವೇರಿಗೆ ಜಿ.ಟಿ.ಡಿ.ಸಿ ಸತೀಶ ಜಾರಿಕಿಹೊಳಿ ಅವರ ಕೊಡುಗೆ: ನೀರಲಗಿ
Date:
ಹಾವೇರಿಗೆ ಜಿ.ಟಿ.ಡಿ.ಸಿ ಸತೀಶ ಜಾರಿಕಿಹೊಳಿ ಅವರ ಕೊಡುಗೆ: ನೀರಲಗಿ
ಹಾವೇರಿ: ಶೋಷಿತ ವರ್ಗಗಳ ಧ್ವನಿಯಾಗಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸರಳತೆ ಅನುಕರಣಿಯವಾಗಿದ್ದು, ಮೂಢ ನಂಬಿಕೆ, ಅಂಧಶೃದ್ಧೆಗಳನ್ನು ಹೋಗಲಾಡಿಸಲು ಅನೇಕ ಪ್ರಗತಿಪರ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಅವರೊಬ್ಬ ಮಾದರಿಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಮುಂದಿನದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಶನಿವಾರ ಇಲ್ಲಿನ ರಾಮಕೃಷ್ಣ ನಗರದಲ್ಲಿ ಶ್ರೀಶಕ್ತಿ ಮಕ್ಕಳ ತೆರೆದ ತಂಗುದಾಣದಲ್ಲಿ ಸತೀಶ ಜಾರಿಕೊಳಿ ಅಭಿಮಾನಿ ಬಳಗ ಆಯೋಜಿಸಿದ್ದ ಸತೀಶ ಅವರ ೬೨ ಹುಟ್ಟು ಹಬ್ಬದ ಅಂಗವಾಗಿ ಮಕ್ಕಳಿಗೆ ನೋಟಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಈ ಹಿಂದೆ ಸತೀಶ ಜಾರಿಕಿಹೊಳಿ ಅವರು ಕೈಗಾರಿಕಾ ಸಚಿವರಿದ್ದ ಸಂದರ್ಭದಲ್ಲಿ ಹಾವೇರಿಗೆ ಜಿಟಿಡಿಸಿ ತರಬೇತಿ ಕೇಂದ್ರವನ್ನು ಮಂಜೂರಿಮಾಡುವಂತೆ ಮನವಿ ಮಾಡಿದ ವೇಳೆ, ಸಚಿವ ಜಾರಕಿಹೊಳಿ ಅವರು ಹಾವೇರಿಗೆ ಟೂಲ್ಸ್ ರೂಂ ಆಯಂಡ್ ಟ್ರೈನಿಂಗ್ ಸೆಂಟರ್ ಮಂಜೂರಿ ಮಾಡುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಸಂಹ ಮಂಜೂರಿ ಮಾಡಿದ್ದರು, ಹಾವೇರಿಯಲ್ಲಿ ಆಂರಭವಾಗಲಿರುವ ಜಿಟಿಡಿಸಿ ತರಬೇತಿ ಕೇಂದ್ರ ಸತೀಶ ಜಾರಿಕಿಹೊಳಿ ಅವರ ಕೊಡುಗೆಯಾಗಿದೆ ಎಂದರು.
ಹಾವೇರಿಗೆ ಸಮೀಪದ ನೆಲೋಗಲ್ಲ ಗುಡ್ಡದಲ್ಲಿ ಕೋಟ್ಯಾಂತರೂಗಳ ವೆಚ್ಚದಲ್ಲಿ ಡಿಟಿಡಿಸಿ ತರಬೇತಿ ಕೇಂದ್ರವು ನಿರ್ಮಾಣಗೊಂಡಿದ್ದು, ಕೈಗಾರಿಕೀಕರಣಕ್ಕೆ ತಕ್ಕಂತ ಉದ್ಯೋಗ ಸೃಷ್ಟಿಗೆ ತರಬೇತಿ ನೀಡುವ ಕಾರ್ಯವನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಇಲ್ಲಿ ಆರಂಭಿಸಲಾಗಿರುವ ಡಿಪ್ಲೋಮಾ ಇನ್ ಟೂಲ್ ಆಯಂಡ್ ಡೈ ಮೇಕಿಂಗ್ ಕೋರ್ಸ್ಗೆ ಕಾರ್ಖಾನೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಪ್ರಸಕ್ತ ವರ್ಷದಿಂದ ತರಬೇತಿ ಕೇಂದ್ರವನ್ನು ಆರಂಭಿಸಲು ಚುನಾವಣೆ ನೀತಿ ಸಂಹಿತೇ ಮುಗಿದ ನಂತರ ಸಂಬಂಧಿಸಿದ ಸಚಿವ ಜೊತೆಗೆ ಮಾತನಾಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾದಿ ಶಹರ ಕಾಂಗ್ರೆಸ್ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ಪ್ರಮುಖರಾದ ಅಶೋಕ ಹರನಗಿರಿ,ಗುಡ್ಡನಗೌಡ ಅಂದಾನಿಗೌಡ್ರ, ಶಿವಬಸಪ್ಪ ತಳವಾರ, ಅಮೀರ ಶಿಡಗನಾಳ, ಇರ್ಷದ ಹೋಸಮನಿ, ಉಮರ ನದಾಫ್, ವಿನಯ್ ಪಾಲಂಕರ, ಇಮಾಮ ಮುಗದೂರ, ಕೋಟೆಪ್ಪ ಮಡಿವಾಳg, ಮಹಮ್ಮದ್ ಜಂಗ್ಲಿಸಾಬನವರ, ಆಕಾಶ ಮಂಟಗಣಿ, ಭಾಷಾಸಾಬ ಕೋಳೂರ, ಜಮೀರ ಜಿಗರಿ, ಶಿದ್ದು ಪುರದ ಭಾಗವಹಿಸಿದ್ದರು. ಸತೀಶ ಜಾರಿಕೊಳಿ ಅವರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಬಡಮ್ಮನವರ ಸ್ವಾಗತಿಸಿದರು, ಮಲ್ಲಿಕಾರ್ಜುನ ಬೂದಗಟ್ಟಿ ನಿರೂಪಿಸಿದರು.