ಹಾವೇರಿನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ ಅಮಾನತಿಗೆ ಉಸ್ತುವಾರಿ ಸಚಿವರ ನಿರ್ದೇಶನ
ಹಾವೇರಿ: ಕರ್ತವ್ಯಲೋಪ ಆರೋಪದ ಮೇಲೆ ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಅವರನ್ನು ಅಮಾನತು ಮಾಡಿ ಎಂದು ಹಾವೇರಿಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದರು.
ಬೆಂಗಳೂರಿನ “ವಿಕಾಸಸೌಧದಲ್ಲಿ ಗುರುವಾರ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಕುಡಿಯುವ ನೀರು ಪೂರೈಕೆ ಯೋಜನಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಾವೇರಿ ಪಟ್ಟಣದಲ್ಲಿ ಬೇಸಿಗೆ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಮುಲ್ಲಾನಕೆರೆಗೆ ಕೊಳಚೆ ನೀರು ಹರಿಯುತ್ತಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಕಳೆದ ಬಾರಿ ಹಾವೇರಿಯಲ್ಲಿ ನಡೆದ ಸಭೆಯಲ್ಲಿ ಬೇರೆಯವರಿಗೆ ಚಾರ್ಜ್ ಕೊಡಿ ಎಂದು ಸೂಚನೆ ನೀಡಿದ್ದರೂ ಅವರು ಪಾಲನೆ ಮಾಡಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ನಗರದಲ್ಲಿ ೨೦ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಜನರಿಗೆ ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ ಅವರು, ೩೦ ಕೋಟಿ ರೂ. ವೆಚ್ಚ ಮಾಡಿ “ತರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಈ “ಂದೆ ಹಾವೇರಿನಗರದದಲ್ಲಿ ಆಯೋಜಿಸಿದ್ದ ಏಪ್ರೀಲ್-೧೪ರಂದು ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದ ಅಂಗವಾಗಿ ನಗರದ ರೈಲ್ವೆ ನಿಲ್ದಾಣರಸ್ತೆಗೆ ಹೊಂಡಿಕೊಂಡಿರುವ ಡಾ,ಅಂಬೇಡ್ಕರ್ ವೃತ್ತಕ್ಕೆ ಸುಣ್ಣ-ಬಣ್ಣ ಬಳಿಸದೇ ವೃತ್ತವನ್ನು ಅಲಂಕಾರಮಾಡುವ “ವಿಚಾರಕ್ಕೆ ನಿರ್ಲಕ್ಷ ವ”ಸಿದ್ದಾರೆಂದು ಪೌರಾಯುಕ್ತರ “ರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ “ನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪೌರಾಯುಕ್ತರನ್ನು ಕರ್ತವ್ಯ ನಿರ್ಲಕ್ಷ ವ”ಸಿದ್ದಾರೆಂದು ಇವರ ಅಮಾನತುಗೊಳಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆವೇಳೆ ಪೌರಾಯುಕ್ತ ಪರಶುರಾಮ ಅವರು ನ್ಯಾಯಲಯದ ಮೊರೆಗೆ ಹೋಗಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದ್ದು, ಇದೀಗ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾವೇರಿನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ ಅವರನ್ನು ಅಮಾನತುಗೊಳಿಸಲು ನಿರ್ದೇಶನ ನೀಡಿದ್ದಾರೆ. ಸಚಿವರ ನಿರ್ದೇಶನದ “ರುದ್ಧ ಪೌರಾಯುಕ್ತ ಪರಶರಾಮ ಅವರ ನಿಲುವೇನಾಗಲಿದೆ ಕಾದು ನೋಡಬೇಕಿದೆ.
ಹಾವೇರಿನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ ಅಮಾನತಿಗೆ ಉಸ್ತುವಾರಿ ಸಚಿವರ ನಿರ್ದೇಶನ
Date:
ಹಾವೇರಿನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ ಅಮಾನತಿಗೆ ಉಸ್ತುವಾರಿ ಸಚಿವರ ನಿರ್ದೇಶನ
ಹಾವೇರಿ: ಕರ್ತವ್ಯಲೋಪ ಆರೋಪದ ಮೇಲೆ ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಅವರನ್ನು ಅಮಾನತು ಮಾಡಿ ಎಂದು ಹಾವೇರಿಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದರು.
ಬೆಂಗಳೂರಿನ “ವಿಕಾಸಸೌಧದಲ್ಲಿ ಗುರುವಾರ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಕುಡಿಯುವ ನೀರು ಪೂರೈಕೆ ಯೋಜನಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಾವೇರಿ ಪಟ್ಟಣದಲ್ಲಿ ಬೇಸಿಗೆ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಮುಲ್ಲಾನಕೆರೆಗೆ ಕೊಳಚೆ ನೀರು ಹರಿಯುತ್ತಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಕಳೆದ ಬಾರಿ ಹಾವೇರಿಯಲ್ಲಿ ನಡೆದ ಸಭೆಯಲ್ಲಿ ಬೇರೆಯವರಿಗೆ ಚಾರ್ಜ್ ಕೊಡಿ ಎಂದು ಸೂಚನೆ ನೀಡಿದ್ದರೂ ಅವರು ಪಾಲನೆ ಮಾಡಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ನಗರದಲ್ಲಿ ೨೦ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಜನರಿಗೆ ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ ಅವರು, ೩೦ ಕೋಟಿ ರೂ. ವೆಚ್ಚ ಮಾಡಿ “ತರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಈ “ಂದೆ ಹಾವೇರಿನಗರದದಲ್ಲಿ ಆಯೋಜಿಸಿದ್ದ ಏಪ್ರೀಲ್-೧೪ರಂದು ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದ ಅಂಗವಾಗಿ ನಗರದ ರೈಲ್ವೆ ನಿಲ್ದಾಣರಸ್ತೆಗೆ ಹೊಂಡಿಕೊಂಡಿರುವ ಡಾ,ಅಂಬೇಡ್ಕರ್ ವೃತ್ತಕ್ಕೆ ಸುಣ್ಣ-ಬಣ್ಣ ಬಳಿಸದೇ ವೃತ್ತವನ್ನು ಅಲಂಕಾರಮಾಡುವ “ವಿಚಾರಕ್ಕೆ ನಿರ್ಲಕ್ಷ ವ”ಸಿದ್ದಾರೆಂದು ಪೌರಾಯುಕ್ತರ “ರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ “ನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪೌರಾಯುಕ್ತರನ್ನು ಕರ್ತವ್ಯ ನಿರ್ಲಕ್ಷ ವ”ಸಿದ್ದಾರೆಂದು ಇವರ ಅಮಾನತುಗೊಳಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆವೇಳೆ ಪೌರಾಯುಕ್ತ ಪರಶುರಾಮ ಅವರು ನ್ಯಾಯಲಯದ ಮೊರೆಗೆ ಹೋಗಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದ್ದು, ಇದೀಗ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾವೇರಿನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ ಅವರನ್ನು ಅಮಾನತುಗೊಳಿಸಲು ನಿರ್ದೇಶನ ನೀಡಿದ್ದಾರೆ. ಸಚಿವರ ನಿರ್ದೇಶನದ “ರುದ್ಧ ಪೌರಾಯುಕ್ತ ಪರಶರಾಮ ಅವರ ನಿಲುವೇನಾಗಲಿದೆ ಕಾದು ನೋಡಬೇಕಿದೆ.