ಹಾವೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ,, ಸುಣ್ಣ,ಬಣ್ಣ ಕಾಣದ ಅಂಬೇಡ್ಕರ್ ಸರ್ಕಲ್, ದಲಿತ ಮುಖಂಡರ ಆಕ್ರೋಶ
ಹಾವೇರಿ: ಬೆಳಕು ಹರಿದರೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಇದ್ದು, ಜಯಂತಿಯ ಮುನ್ಬಾದಿನದವರೆಗೂ ಹಾವೇರಿ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸರ್ಕಲ್ ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಹಾಗೂ ಸರ್ಕಲ್ ಗೆ ಸುಣ್ಣ,ಬಣ್ಣವನ್ನು ಹಚ್ಚದೇ ನಿರ್ಲಕ್ಷ ವಹಿಸಿದ ಅಧಿಕಾರಿಗಳ ನಿರ್ಲಕ್ಷ ಧೋರಣೆ ಖಂಡಿಸಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶನಿವಾರ ರಾತ್ರಿ ೧೧ರಿಂದ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಉಪವಿಭಾಗ ಅಧಿಕಾರಿ ಚನ್ಬಪ್ಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿಕುಮಾರ್, ಪಿ.ಡಿ.ಮಮತಾ, ತಹಶಿಲ್ದಾರ ನಾಗರಾಜ,ಮತ್ತಿತರ ಅಧಿಕಾರಿಗಳು ಆಗಮಿಸಿ ಆಗಿರುವ ಲೋಪವನ್ನು ಸರಿ ಪಡಿಸುದಾಗಿ ತಿಳಿಸಿದರು.ಆದರೆ ಅಧಿಕಾರಿಗಳ ಮನವೊಲಿಕೆಗೆ ಬಗ್ಗದ ದಲಿತ ಮುಖಂಡರು ನಿರ್ಲಕ್ಷ ವಹಿಸಿದ ನಗರಸಭೆಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಎಲ್ಲ ರಾಷ್ಟ್ರೀಯ ನಾಯಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಪುತ್ಥಳಿ ಹಾಗೂ ಸರ್ಕಲ್ ಗಳನ್ನು ಸುಣ್ಣ,ಬಣ್ಣ ಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸುವ ಅಧಿಕಾರಿಗಳು, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಯನ್ನು ಏ.೧೪ರಂದು ಆಚರಿಸಲಾಗುತ್ತದೆ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲದೇ ನಿರ್ಲಕ್ಷ ವಹಿಸಿರುವುದು ಸರಿಯಲ್ಲ. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿ ಭಟನೆಯಲ್ಲಿ ಬಸವರಾಜ್ ಹೆಡಿಗೊಂಡ, ಅಕ್ಷತ ಕೆ.ಸಿ, ಸಂಜಯ್ ಗಾಂಧಿ ಸಂಜೀವಣ್ಣನವರ, ಶಿವಣ್ಣ ಕನವಳ್ಳಿ ಶ್ರೀ ಕಾಂತ ಗಡ್ಡಿ , ಜಗದೀಶ್ ಕೊಂಡೆಮ್ಮನವರ, ಲಿಂಗರಾಜ.ಹಾದಿಮನಿ, ಮಂಜುನಾಥ್ ಗುಡ್ಡೆಶ್ ಕುಮಾರ್ ಹಾವೇರಿ, ರಾಜು ಗಾಳೆಪ್ಪನವರ, ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ ಪ್ರತಿಭಟನಾ ನಿರತರೊಂದಿಗೆಸರಿಪಡಿಸಲು ಆಗಿರುವ ಲೋಪವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದ ಮುಖಂಡರು ವೃತ್ತ ದ ಗೇಟಿಗೆ ಹಾಕಿದ್ದ ಬಿಗವನ್ನು ತೆರವುಗೊಳಿಸಿದರು
ತಡರಾತ್ರಿಯಲ್ಲಿಯೇ ಅಂಬೇಡ್ಕರ್ ವ್ರತ್ತವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ನಡೆಸಿದರು.