ಹಾವೇರಿಯಲ್ಲಿ
ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಸರ್ಜಿ ಅವರ ಕಾರು, ಅಪಾಯದಿಂದ ಪಾರು-ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಹಾವೇರಿ: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇಲ್ಲಿನ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬರುತ್ತಿದ್ದ ವಿಧಾನ ಪರಿಷತ್ ಸದಸ್ಯ: ಡಾ. ಧನಂಜಯ
ಸರ್ಜಿಅವರಿದ್ದ ಕಾರು ಮಳೆ ನೀರಿನಲ್ಲಿ ಸಿಲುಕಿ ಡಾಕ್ಟರ್ ಸರ್ಜಿ ಕಾರಿನಿಂದ ಹೊರಬರಲು ಪರದಾಡಿದರು. ಡಾ.ಸರ್ಜಿ ಅವರು ಸುರಕ್ಷಿತ ವಾಗಿದ್ದಾರೆ.
ಮಳೆಯ ನೀರು ಅಪಾರ ಪ್ರಮಾಣದಲ್ಲಿಹರಿಯುತ್ತಿದ್ದ ವೇಳೆಎಜಿಪಿ ಗ್ಯಾಸ್ ಕಂಪನಿಯವರು
ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಯಲ್ಲಿ 9 ಆಡಿ ಗುಂಡಿ ತೋಡಿದ್ದು, ಈ ಗುಂಡಿಯಲ್ಲಿ ಡಾ.ಸರ್ಜಿಅವರ ಕಾರು ಸಿಲುಕಿತ್ತು. ಈವೇಳೆ ಕಾರಿನಲ್ಲಿ ಇದ್ದ ಡಾ.ಧನಂಜಯ ಸರ್ಜಿ ಹೊರಬರಲು ಪರದಾಡಿದರು.
ವಿಷಯ ತಿಳಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್,ಡಿಎಚ್ಓ ಅವರು
ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳೀಯರು ಅಧಿಕಾರಿಗಳು ಹರಸಾಸಪಟ್ಟು ವಿಧಾನ ಪರಿಷತ್ ಸದಸ್ಯರ ಕಾರನ್ನು ಹೊರ ತಂದರು.
ಈ ಮಧ್ಯೆಹಾವೇರಿಯಲ್ಲಿಮಂಗಳವಾರ
ಹಲವೆಡೆ ಗುಡುಗು-ಸಿಡಿಲು ಸಮೇತ ಧಾರಕಾರ ಮಳೆಯಾಗಿದ್ದು, ಹಾವೇರಿ ನಗರದ ನಾಗೇಂದ್ರನಮಟ್ಟಿ ರ ರೈಲ್ವೆ ಕೆಲಸತೆಯಲ್ಲಿ ನೀರಿನಲ್ಲಿ ಆಟೋ ಒಂದು ಕೊಚ್ಚಿಕೊಂಡು ಹೋಗಿ ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.