ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು
ಹಾವೇರಿ: ಇತ್ತೀಚೆಗೆ ಹಾವೇರಿನಗರದಲ್ಲಿ ರೌಡಿಗಳ ಅಟ್ಟಹಾಸ, ಗುಂಡಾಗಿರಿ ಪ್ರಕರಗಳು ಹೆಚ್ಚುತ್ತಿದ್ದು, ಇಲ್ಲಿನ ಸುಶಿಕ್ಷಿತರು ವಾಸಿಸುವ ಬಡಾವಣೆ ಬಸವೇಶ್ವರನಗರದ ಲಾಯನ್ಸ್ ಸ್ಕೂಲ್ ಮುಂಭಾಗದಲ್ಲಿ ೭ಜನರು ಪರಸ್ಪರ ಹೊಡೆದಾಡಿಕೊಂಡು ಪೊಲೀಸ್ರ ಆಗಮನವಾಗುತ್ತಿದ್ದಂತೆಯೇ ಓಡಿಹೋಗಿದ್ದು, ಈ ಬಗ್ಗೆ ಶಹರ ಪೊಲೀಸ್ಠಾಣೆಯಲ್ಲಿ ಜೂ.೨೦ರಂದು ಪ್ರಕರಣ ದಾಖಲಾಗಿದೆ.
ಲಯನ್ಸ್ ಶಾಲೆಯ ಮುಂಭಾಗದಲ್ಲಿ ಮುರಗೇಶ ದ್ಯಾಮಣ್ಣ ಮಡಿವಾಳರ, ಪ್ರಜ್ವಲ ಸುರೇಶ ಕಟಗೇರ, ಸಚಿವ ಸುರೇಶ ತಳವಾರ, ನಾಗರಾಜ, ಮುರಗೇಶ ವಿಜಯಕುಮಾರ ಮುತ್ತಿನಮುಡಿ, ಪಚ್ಚು, ಜೀವನ ಬುದ್ಧಿವಂತನವಲಗುಂದ ಎನ್ನುವ
ಆರೋಪಿತರು ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಬಡಿದಾಟ ಮಾಡಿಕೊಳ್ಳುತ್ತಿರುವಾಗ ಪೊಲೀಸ್ ಸಿಬ್ಬಂದಿಯವರು ಸ್ಥಳಕ್ಕೆ ಹೋದ ತಕ್ಷಣ ಗಲಾಟೆ ಮಾಡುವದನ್ನು ಬಿಟ್ಟು ಓಡಿ. ಹೋಗಿರುತ್ತಾರೆ.
ಸದರಿಯವರು ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ಬಡಿದಾಟ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ದಾಖಲಾಗಿದೆ.
ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು
Date:
ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು
ಹಾವೇರಿ: ಇತ್ತೀಚೆಗೆ ಹಾವೇರಿನಗರದಲ್ಲಿ ರೌಡಿಗಳ ಅಟ್ಟಹಾಸ, ಗುಂಡಾಗಿರಿ ಪ್ರಕರಗಳು ಹೆಚ್ಚುತ್ತಿದ್ದು, ಇಲ್ಲಿನ ಸುಶಿಕ್ಷಿತರು ವಾಸಿಸುವ ಬಡಾವಣೆ ಬಸವೇಶ್ವರನಗರದ ಲಾಯನ್ಸ್ ಸ್ಕೂಲ್ ಮುಂಭಾಗದಲ್ಲಿ ೭ಜನರು ಪರಸ್ಪರ ಹೊಡೆದಾಡಿಕೊಂಡು ಪೊಲೀಸ್ರ ಆಗಮನವಾಗುತ್ತಿದ್ದಂತೆಯೇ ಓಡಿಹೋಗಿದ್ದು, ಈ ಬಗ್ಗೆ ಶಹರ ಪೊಲೀಸ್ಠಾಣೆಯಲ್ಲಿ ಜೂ.೨೦ರಂದು ಪ್ರಕರಣ ದಾಖಲಾಗಿದೆ.
ಲಯನ್ಸ್ ಶಾಲೆಯ ಮುಂಭಾಗದಲ್ಲಿ ಮುರಗೇಶ ದ್ಯಾಮಣ್ಣ ಮಡಿವಾಳರ, ಪ್ರಜ್ವಲ ಸುರೇಶ ಕಟಗೇರ, ಸಚಿವ ಸುರೇಶ ತಳವಾರ, ನಾಗರಾಜ, ಮುರಗೇಶ ವಿಜಯಕುಮಾರ ಮುತ್ತಿನಮುಡಿ, ಪಚ್ಚು, ಜೀವನ ಬುದ್ಧಿವಂತನವಲಗುಂದ ಎನ್ನುವ
ಆರೋಪಿತರು ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಬಡಿದಾಟ ಮಾಡಿಕೊಳ್ಳುತ್ತಿರುವಾಗ ಪೊಲೀಸ್ ಸಿಬ್ಬಂದಿಯವರು ಸ್ಥಳಕ್ಕೆ ಹೋದ ತಕ್ಷಣ ಗಲಾಟೆ ಮಾಡುವದನ್ನು ಬಿಟ್ಟು ಓಡಿ. ಹೋಗಿರುತ್ತಾರೆ.
ಸದರಿಯವರು ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ಬಡಿದಾಟ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ದಾಖಲಾಗಿದೆ.