ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಹತ್ತಾರು ಮರಗಳು ಹಾಗೂ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಮಂಗಳವಾರ ಸಂಜೆ೫ಕ್ಕೆ ಕಡಿತಗೊಂಡ ವಿದ್ಯುತ್ ಬುಧವಾರ ಬೆಳಿಗ್ಗೆ ೮-೨೦ರವರೆಗೂ ಮರು ಸಂಪರ್ಕಗೊAಡಿಲ್ಲ. ವಿದ್ಯುತ್ ಸಂಪರ್ಕ ಕಡಿದುಕೊಂಡು ಬರೋಬ್ಬರಿಗೆ ೧೬ಗಂಟೆಕಳೆದರೂ ಸಹ ಇನ್ನು ಸಂಪರ್ಕ ಸಾಧ್ಯವಾಗಿಲ್ಲ.
ಶಿವಾಜಿನಗರ ಹಾಗೂ ಅಶ್ವಿನಿ ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಹಾಗೂ ನಗರಸಭೆಯ ಪೌರಕಾರ್ಮಿಕರು ಹಾಘೂ ಅಧಿಕಾರಿಗಳು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.
ಬಿದ್ದಿರುವ ಮರಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಮಂಗಳವಾರ ತಡರಾತ್ರಿಯವರೆಗೂ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಶೆಶಿಕಲಾ ಮಾಳಗಿ, ಉಪವಿಭಾಗಾಧಿಕಾರಿ ಚನ್ನಪ್ಪ ಅವರು ರಾಮು ಮಾಳಗಿ ಸೇರಿದಂತೆ ನಗರಸಭೆಯ ಕೆಲವು ಸದಸ್ಯರು ಹಾನಿಗೊಳಗಾದ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಹಾವೇರಿಯಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿರುವ ವಿದ್ಯುತ್ ಕಂಬಗಳು- ಕಡಿತಗೊಂಡು ೧೬ಗಂಟೆ ಕಳೆದರೂ ಸಂಪರ್ಕವಾಗದ ವಿದ್ಯುತ್!
Date:
ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಹತ್ತಾರು ಮರಗಳು ಹಾಗೂ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಮಂಗಳವಾರ ಸಂಜೆ೫ಕ್ಕೆ ಕಡಿತಗೊಂಡ ವಿದ್ಯುತ್ ಬುಧವಾರ ಬೆಳಿಗ್ಗೆ ೮-೨೦ರವರೆಗೂ ಮರು ಸಂಪರ್ಕಗೊAಡಿಲ್ಲ. ವಿದ್ಯುತ್ ಸಂಪರ್ಕ ಕಡಿದುಕೊಂಡು ಬರೋಬ್ಬರಿಗೆ ೧೬ಗಂಟೆಕಳೆದರೂ ಸಹ ಇನ್ನು ಸಂಪರ್ಕ ಸಾಧ್ಯವಾಗಿಲ್ಲ.
ಶಿವಾಜಿನಗರ ಹಾಗೂ ಅಶ್ವಿನಿ ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಹಾಗೂ ನಗರಸಭೆಯ ಪೌರಕಾರ್ಮಿಕರು ಹಾಘೂ ಅಧಿಕಾರಿಗಳು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.
ಬಿದ್ದಿರುವ ಮರಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಮಂಗಳವಾರ ತಡರಾತ್ರಿಯವರೆಗೂ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಶೆಶಿಕಲಾ ಮಾಳಗಿ, ಉಪವಿಭಾಗಾಧಿಕಾರಿ ಚನ್ನಪ್ಪ ಅವರು ರಾಮು ಮಾಳಗಿ ಸೇರಿದಂತೆ ನಗರಸಭೆಯ ಕೆಲವು ಸದಸ್ಯರು ಹಾನಿಗೊಳಗಾದ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.