ಹಾಚಿತ್ರೆ ಅಂತರಜಾಲ ಕೃಪೆ
ಹಾವೇರಿಯಲ್ಲಿ ಬೆಳಿಗ್ಗೆ ಬಿಎಡ್ ವಿದ್ಯಾರ್ಥಿನಿಯ ಅಪಹರಣ, ಕಿಯಾಕಾರಿನಲ್ಲಿ ಬಂದ ಕಿರಾತಕರಿಂ ಕೃತ್ಯ, ಬೆಚ್ಚಿಬಿದ್ದಿರುವ ಜನತೆ, ಘಟನಾ ಸ್ಥಳಕ್ಕೆ ಪೊಲೀಸ್ರು ಭೇಟಿ
ಹಾವೇರಿ: ಹಾವೇರಿನಗರದ ಮುಖ್ಯರಸ್ತೆ ಓಲ್ಡಪೋಸ್ಟ್ ಸರ್ಕಲ್ನಲ್ಲಿ ಭಾನುವಾರ ಬೆಳಿಗ್ಗೆ ೮-೩೦ರಿಂದ ೯-೧೫ರ ನಡುವಿನ ಅವಧಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಬಿಎಡ್ ವಿದ್ಯಾರ್ಥಿನಿಯ ಅಪಹರಣವಾಗಿದೆ. ಕಪ್ಪು ಬಣ್ಣದ ಕಿಯಾಕಾರಿನಲ್ಲಿ ಬಂದಿದ್ದ ಕಿರಾತಕರು ವಿದ್ಯಾರ್ಥಿನಿಯನ್ನು ಹಗಲು ಹೊತ್ತಿನಲ್ಲಿ ಜನನಿಬಿಡ ರಸ್ತೆಯಲ್ಲಿ ಅಪಹರಿಸಿದ್ದಾರೆ.
ಪಿಯುಸಿ ಪರೀಕ್ಷೆಗಳು ನಡೆದಿರುವ ಕಾರಣಕ್ಕೆ ವಿಶೇಶ ತರಗತಿಗಳಿಗೆ ಹಾಜರಾಗಲು ಬಸ್ ನಿಲ್ದಾಣದಿಂದ ಸಹ ವಿದ್ಯಾರ್ಥಿನಿಯೊಂದಿಗೆ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಬೆನ್ನುಹತ್ತಿಕೊಂಡು ಬಂದ ಕಿರಾತಕರು ಇಲ್ಲಿನ ಹಳೆ ಅಂಚೆಕಚೇರಿರಸ್ತೆಯಲ್ಲಿನ ವೃತ್ತದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ನಿಲ್ಲಿಸಿ ಅದರಲ್ಲಿ ಓರ್ವ ವಿದ್ಯಾರ್ಥಿಗೆ ಬೆದರಿಕೆ ಹಾಲಿ ಬಲವಂತದಿಂದ ಓರ್ವ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ.
ಸಹಪಾಠಿಯನ್ನು ಅಪಹರಿಸಿದ ದೃಶ್ಯವನ್ನು ಕಂಡ ಸಹ ವಿದ್ಯಾರ್ಥಿನಿ ಹೆದರಿಕೆಯಿಂದ ನಡುಗುತ್ತಲೇ ವಿಷಯವನ್ನು ಇತರೆ ವಿದ್ಯಾರ್ಥಿಮಿಯರಿಗೆ ತಿಳಿಸಿದ್ದಾಳೆ,. ವಿದ್ಯಾರ್ಥಿನಿಯ ಅಪಹರಣದವನ್ನು ಕಂಡ ಕೆಲವರು ಕಾರನ್ನು ಬೆನ್ನಟ್ಟಿದ್ದಾರೆ. ಆದರೆ ಕಾರನ್ನು ವೇಗವಾಗಿ ಚಲಾಯಿಸಿದ ಕಾರಣ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ. ಪರಿಚಿತರಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶಹರಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದರು, ನಗರಸಭೆಯ ಸದಸ್ಯರು ಸಹ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಈಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದಾರೆ.
ವಿದ್ಯಾರ್ಥಿನಿಯನ್ನು ಅಪಹರಿಸಿದ ಹಳೆ ಅಂಚೆ ಕಚೇರಿ ವೃತ್ತ.