ಹಾವೇರಿಯ ಐತಿಹಾಸಿಕ ಹೆಗ್ಗೆರೆಕೆರೆ ಪಕ್ಷಿಧಾಮ ಘೋಷಣೆಯಾದಿತೆ?

Date:

 

ಹಾವೇರಿಯ ಐತಿಹಾಸಿಕ ಹೆಗ್ಗೆರೆಕೆರೆ ಪಕ್ಷಿಧಾಮ ಘೋಷಣೆಯಾದಿತೆ?

ಹಾವೇರಿ: ನಗರದ ಐತಿಹಾಸಿ ಹೆಗ್ಗೆರೆಕೆರೆಯು ಪುರಾತನವಾದ ಇತಿಹಾಸ ಹೊಂದಿದೆ. ಶಾಸನವೊದರಲ್ಲಿ “ಹರಿವಹನೀರ್ಗೇ ಯಡಂಬರಲು ರಗಂಕಂಡು ನಳನದಂ ಕಟ್ಟಸೆ ಹಾವೇರಿಯಂದು ಪರಮಾರ್ತ್ಥನಾಮ ಮಾದುದಾ ಕೃತಯುಗದೊಳ್” ಎಂದು ಉಲ್ಲೇಖಿಸಲಾಗಿದೆ. ಹರಿಯುವ ನೀರಿಗೆ ಹಾವೊಂದು ಅಡ್ಡಲಾಗಿ ಬಂದಿದ್ದರಿಂದ ಈ ಪವಿತ್ರವಾದ ಕ್ಷೇತ್ರದಲ್ಲಿ ನಳಚಕ್ರವರ್ತಿಯು ಒಂದು ಕೆರೆಯನ್ನು ಕಟ್ಟಿಸಿ ಕೃತಾಯುಗದಲ್ಲಿ ಹಾವೇರಿಯೆಂದು ನಾಮಾಂಕಿತವನ್ನು ಕೊಟ್ಟನು. ಕ್ರಿ.ಶ ೧೧೩೪ ರ ಶಾಸನದಲ್ಲಿ ಹೆಗ್ಗೆರಿಯನ್ನು ನಲ್ಲಹಳಕೆರೆ ಎಂದು ಕರೆಯಲಾಗಿದೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಸೂಳೆ ಕೆರೆ ನಂತರ “ಹಾವೇರಿ ಹೆಗ್ಗೇರಿ ಕೆರೆ ರಾಜ್ಯದ ಎರಡನೇ ಅತಿ ದೊಡ್ಡ ಕೆರೆ” ಎನ್ನುವ ಹಿರಿಮೆ-ಗರಿಮೆ ಹೊಂದಿದೆ. ಸುಮಾರು ೬೮೦ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಹೊಂದಿರುವ  ಹೆಗ್ಗೆರೆಕೆರೆಯನ್ನು ಹಾವೇರಿನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಬಗ್ಗೆ ಹಾಗೂ ಹಾವೇರಿ ಸುತ್ತ-ಮುತ್ತಲಿನ ಕೊಳವೆಬಾವಿಗಳಲ್ಲಿ  ಅಂತರ್ ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವುದು ತುಂಬಾ ಅವಶ್ಯವಿದೆ.
ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಹೆಗ್ಗೆರಿ ಕೆರೆ ೭೦೦-೮೦೦ ಎಕರೆ ವಿಶಾಲ ವಿಸ್ತೀರ್ಣವುಳ್ಳ ಕೆರೆಯಾಗಿದೆ. ೨೦೦೯-೧೦ ರಲ್ಲಿ ಹಾವೇರಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ನಗರಸಭೆಗೆ ಹಸ್ತಾಂತರಗೊಂಡಿದೆ. ನಿರ್ವಹಣೆ ಜವಾಬ್ದಾರಿಯಿಂದ ಮುಕ್ತವಾಗಿದ್ದರೂ ಕುಡಿಯುವ ನೀರು ಹೊರತುಪಡಿಸಿ ಇನ್ನಿತರ ಚಟುವಟಿಕೆ ಕೈಗೊಳ್ಳಬೇಕಿದ್ದಲ್ಲಿ ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಹಾವೇರಿ ತಾಲೂಕು ಆಲದಕಟ್ಟಿ, ಕನಕಾಪುರ, ಕೆರಿಮತ್ತಿಹಳ್ಳಿ, ಯತ್ತಿನಹಳ್ಳಿ, ಕೋಡಿಹಳ್ಳಿ ಸೇರಿದಂತೆ ಸುತ್ತ ಹತ್ತಳ್ಳಿಗಳ ೨೫೦೦ಕ್ಕೂ ಹೆಚ್ಚು ಎಕರೆಗೆ ತರಹೇವಾರಿ (ತೋಟ, ಗದ್ದೆ, ಹೊಲ) ನೀರಾವರಿಗೆ ಪೂರ್ವಜರ ಕಾಲದಿಂದ ಹೆಗ್ಗೇರಿ ಕೆರೆ ಬಳಕೆಯಾಗುತ್ತಿತ್ತು. ಅತಿಕ್ರಮಿಸಿಕೊಂಡ ಪರಿಣಾಮವೋ? ಏನೋ  ಈಗ ೬೮೦ ಎಕರೆ ಹಂತ ತಲುಪಿದೆ. ಕೆರೆ ಅಭಿವೃದ್ಧಿಪಡಿಸಿ ಗ್ಲಾಸ್‌ಹೌಸ್ ನಿರ್ಮಾಣ ಮಾಡುವ ಕಾರ್ಯ ಸ್ಥಗಿತಗೊಂಡಿದೆ. ಯಾವುದೇ ನಿರ್ವಹಣೆ ಇಲ್ಲದೇ ಮುಳ್ಳು-ಕಂಟಿಗಳಿಂದ ಕೆರೆಯ ಸುತ್ತ-ಮುತ್ತಲಿನ ಪ್ರದೇಶ ಕುರುಚಲು ಕಾಡಾಗಿದೆ.
ಈ ಐತಿಹಾಸಿಕ ಹೆಗ್ಗೆರೆಕೆರೆಗೆ ಪ್ರತಿ ವರ್ಷ ದೂರದ ಆಸ್ಟ್ರೇಲಿಯಾ, ಮಂಗೋಲಿಯಾ, ಶ್ರೀಲಂಕಾ, ಜಿಂಬಾಬೆ, ನ್ಯೂಜಿಲಾಂಡ್ ಸೇರಿದಂತೆ ಮತ್ತಿತರ ದೇಶಗಳಿಂದ ಹಾಗೂ ಬೇರೆ ರಾಜ್ಯಗಳಿಂದ “ಬಾರ್ ಹೆಡೆಡ್‌ಗೂಸ್”, “ಸ್ಯಾಂಡ್ ಗ್ರೊಜ್”, “ಗುಲಾಬಿ ಬಣ್ಣದ ಕಬ್ಬಕ್ಕಿಗಳು”, “ಕ್ರೌಂಚಪಕ್ಷಿಗಳು”, “ಪೆಂಟಂಡ್ ಸ್ಪಾರ್ಕ”, “ಸ್ಪೂನ್‌ಬೆಲ್”, “ಹಾವುಹಕ್ಕಿ”, “ನೀರುಕಾಗೆ”, “ಜಕನಾ”, “ಜಾತಕಪಕ್ಷಿ” ಹಾಗೂ “ಅಪರೂಪದ ನೀರುನಾಯಿಗಳು”,  ಹೀಗೆ ತರೇವಾರಿ ಪಕ್ಷಿಗಳು, ಪ್ರಾಣಿಗಳು ಇಲ್ಲಿಗೆ ವಲಸೆ ಬರುತ್ತವೆ.
“ಪ್ರಾಣಿ-ಪಕ್ಷಿಗಳ ಸುರಕ್ಷತೆ ಇಲ್ಲಿ ಯಾವುದೇ ಕ್ರಮಗಳನ್ನು ತಗೆದುಕೊಂಡಿರುವುದಿಲ”. “ಹೀಗಾಗಿ ಅನೇಕ ಅಪರೂಪದ ಪ್ರಾಣಿ-ಪಕ್ಷಿಗಳು ಬೇಟೆಗಾರರಿಗೆ ಬಲಿಯಾಗುತ್ತುವೆ. ಆದ ಕಾರಣ “ಐತಿಹಾಸಿಕ ಹೆಗ್ಗೆರೆಕೆರೆಯನ್ನು ರಂಗನತಿಟ್ಟು ಮಾದರಿಯಲ್ಲಿ ಪಕ್ಷಿಧಾಮವನ್ನಾಗಿ , ಗದಗಜಿಲ್ಲೆಯ ಮಾಗಡಿ ಕರೆಯ ಮಾದರಿಯಲ್ಲಿ ಅಭಿವೃದ್ಧಿ ಮಾಡಲು  ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು”.
ಹೆಗ್ಗೆರಿ ಕೆರೆಯ ಹೂಳನ್ನು ತಗೆಸುವ ಮೂಲಕ  ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪಕ್ಷಿಧಾಮವನ್ನಾಗಿ ಘೋಷಣೆ ಮಾಡಬೇಕು. ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ-೪ಕ್ಕೆ ಹೊಂದಿಕೊಂಡಿರುವ ಈ ಕೆರೆ ಸಮಗ್ರ ಅಭಿವೃದ್ಧಿಯಾದರೇ  ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದ ಜನತೆಗೆ ದಿನದ ಇಪತ್ನಾಲ್ಕು ಗಂಟೆ ಕುಡಿಯುವ ನೀರು ಪೂರೈಸ ಬಹುದಾಗಿದೆ.
ಈ ಕೆರೆಯನ್ನು ತುಂಬಿಸುವ ನಿಟ್ಟಿನಲ್ಲಿ  ಹಾವೇರಿಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲರು ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ವಿಧಾನಸಭೆಯ ಉಪಸಭಾಪತಿಗಳಾದರುದ್ರಪ್ಪ ಮಾನಪ್ಪ ಲಮಾಣಿ ಅವರು ಶ್ರಮವಹಿಸಿ ಕೆರೆಯನ್ನು   ತುಂಬಿಸುವ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ ತುಂಗಾ ಮೇಲ್ದಂಡೆ ಯೋಜನೆ ಮೂಲಕ ಹೆಗ್ಗೇರಿ ಕೆರೆ ತುಂಬಿಸಲು ಸಾಧ್ಯವಾಗಿದೆ.
ಹೆಗ್ಗೆರೆಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಹೆಗ್ಗೆರಿಕೆರೆ ಹದ್ದುಬಸ್ತ ಮಾಡುವುದು ಅಗತ್ಯವಿದೆ.  ಇದರಿಂದ ದಾಖಲೆ ಪ್ರಕಾರ ನಿಖರವಾಗಿ ಹೆಗ್ಗೆರಿಕೆರೆ ಎಷ್ಟು ಎಕರೆ ವಿಸ್ತಾರದಲ್ಲಿತ್ತು ಎನ್ನುವುದು ಬೆಳಕಿಗೆ ಬರಲಿದೆ.  ಹಾವೇರಿ ನಗರದ ಜನತೆಗೆ ಕುಡಿಯುವ ನೀರು ಯೋಜನೆಗೆ ಅವಕಾಶ ಕಲ್ಪಿಸಿಕೊಡುವ ಜತೆಗೆ ಬೇಸಿಗೆಯ ಕಾಲದಲ್ಲಿ ಉಂಟಾಗುವ ನೀರಿನ ತೊಂದರೆಂiiನ್ನು ತಪ್ಪಿಸಲು ಬ್ರಹದಾಕಾರದ ಕೆರೆಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಬೇಕಾದ ನೀರು ಸಂಗ್ರಹಕ್ಕೆ ಒಂದೇ ಸ್ಥಳದಲ್ಲಿ ಅಗತ್ಯ ನೀರು ಸಂಗ್ರಹಕ್ಕಾಗಿ ಬೃಹದಾಕಾರದ ನೀರುಸಂಗ್ರಹ ಜಲಾಗಾರವನ್ನು ನಿರ್ಮಿಸಬೇಕಿದೆ.
“ಐತಿಹಾಸಿಕ ಹೆಗ್ಗೆರೆಕೆರೆಯಲ್ಲಿನ ಜೀವ ವೈವಿಧ್ಯತೆಗಳನ್ನು ಕಂಡು ಹೆಗ್ಗೇರೆಕೆರೆಯನ್ನು “ಜೀವ ವೈವಿಧ್ಯಗಳ ತಾಣ” ಎಂದು ಘೋಷಣೆಮಾಡಲಾಗಿದೆ”. ಇದು ಕೇವಲ ಕಾಗದಲ್ಲಿ ಮಾತ್ರ ಉಳಿದಿದೆ.  ಇದೀಗ ಆ.೩೦ರಂದು ಹಾವೇರಿಯ ಐತಿಹಾಸಿಕ ಹೆಗ್ಗೆರೆಕರೆಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಪರಿಸರ ಪ್ರೇಮಿಗಳಾಗಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರವಾಸೋಧ್ಯಮ ಸಚಿವ ಎಚ್.ಕೆ.ಪಾಟೀಲರು  ಈ ಐತಿಹಾಸಿಕ ಹೆಗ್ಗೆರೆಕೆರೆಯ ಬಗ್ಗೆ ಪ್ರೀತಿ-ಕಾಳಜಿ ತೋರಿಸುವ ಮೂಲಕ ಇದರ ಅಭಿವೃದ್ಧಿಗೆ ಹಾಗೂ ಪಕ್ಷಿಧಾಮವನ್ನಾಗಿ ಘೋಷಿಸುವ ನಿಟ್ಟಿನಲ್ಲಿ  ಅಗತ್ಯ ಕ್ರಮ ಜರುಗಿಸುವುದರ ಮೂಲಕ  ಈ ಹೆಗ್ಗೆರೆಕೆರೆಗೆ ಭೇಟಿ ನೀಡಿದ ಸುಸಂದರ್ಭವನ್ನು ಸ್ಮರಣೀಯವಾಗಿಸಬೇಕೆಂದು  ಒತ್ತಾಯ ಪೂರ್ವಕ ಆಗ್ರಹವಾಗಿದೆ.

ಮಾಲತೇಶ ಅಂಗೂರ

ಪರಿಸರ ಪ್ರೇಮಿ ಹಾಗೂ ವನ್ಯಜೀವಿಛಾಯಾಗ್ರಾಹಕ ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿಯ ಐತಿಹಾಸಿಕ ಹೆಗ್ಗೆರೆಕೆರೆ ಪಕ್ಷಿಧಾಮ ಘೋಷಣೆಯಾದಿತೆ?

ಹಾವೇರಿ: ನಗರದ ಐತಿಹಾಸಿ ಹೆಗ್ಗೆರೆಕೆರೆಯು ಪುರಾತನವಾದ ಇತಿಹಾಸ ಹೊಂದಿದೆ. ಶಾಸನವೊದರಲ್ಲಿ “ಹರಿವಹನೀರ್ಗೇ ಯಡಂಬರಲು ರಗಂಕಂಡು ನಳನದಂ ಕಟ್ಟಸೆ ಹಾವೇರಿಯಂದು ಪರಮಾರ್ತ್ಥನಾಮ ಮಾದುದಾ ಕೃತಯುಗದೊಳ್” ಎಂದು ಉಲ್ಲೇಖಿಸಲಾಗಿದೆ. ಹರಿಯುವ ನೀರಿಗೆ ಹಾವೊಂದು ಅಡ್ಡಲಾಗಿ ಬಂದಿದ್ದರಿಂದ ಈ ಪವಿತ್ರವಾದ ಕ್ಷೇತ್ರದಲ್ಲಿ ನಳಚಕ್ರವರ್ತಿಯು ಒಂದು ಕೆರೆಯನ್ನು ಕಟ್ಟಿಸಿ ಕೃತಾಯುಗದಲ್ಲಿ ಹಾವೇರಿಯೆಂದು ನಾಮಾಂಕಿತವನ್ನು ಕೊಟ್ಟನು. ಕ್ರಿ.ಶ ೧೧೩೪ ರ ಶಾಸನದಲ್ಲಿ ಹೆಗ್ಗೆರಿಯನ್ನು ನಲ್ಲಹಳಕೆರೆ ಎಂದು ಕರೆಯಲಾಗಿದೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಸೂಳೆ ಕೆರೆ ನಂತರ “ಹಾವೇರಿ ಹೆಗ್ಗೇರಿ ಕೆರೆ ರಾಜ್ಯದ ಎರಡನೇ ಅತಿ ದೊಡ್ಡ ಕೆರೆ” ಎನ್ನುವ ಹಿರಿಮೆ-ಗರಿಮೆ ಹೊಂದಿದೆ. ಸುಮಾರು ೬೮೦ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಹೊಂದಿರುವ  ಹೆಗ್ಗೆರೆಕೆರೆಯನ್ನು ಹಾವೇರಿನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಬಗ್ಗೆ ಹಾಗೂ ಹಾವೇರಿ ಸುತ್ತ-ಮುತ್ತಲಿನ ಕೊಳವೆಬಾವಿಗಳಲ್ಲಿ  ಅಂತರ್ ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವುದು ತುಂಬಾ ಅವಶ್ಯವಿದೆ.
ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಹೆಗ್ಗೆರಿ ಕೆರೆ ೭೦೦-೮೦೦ ಎಕರೆ ವಿಶಾಲ ವಿಸ್ತೀರ್ಣವುಳ್ಳ ಕೆರೆಯಾಗಿದೆ. ೨೦೦೯-೧೦ ರಲ್ಲಿ ಹಾವೇರಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ನಗರಸಭೆಗೆ ಹಸ್ತಾಂತರಗೊಂಡಿದೆ. ನಿರ್ವಹಣೆ ಜವಾಬ್ದಾರಿಯಿಂದ ಮುಕ್ತವಾಗಿದ್ದರೂ ಕುಡಿಯುವ ನೀರು ಹೊರತುಪಡಿಸಿ ಇನ್ನಿತರ ಚಟುವಟಿಕೆ ಕೈಗೊಳ್ಳಬೇಕಿದ್ದಲ್ಲಿ ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಹಾವೇರಿ ತಾಲೂಕು ಆಲದಕಟ್ಟಿ, ಕನಕಾಪುರ, ಕೆರಿಮತ್ತಿಹಳ್ಳಿ, ಯತ್ತಿನಹಳ್ಳಿ, ಕೋಡಿಹಳ್ಳಿ ಸೇರಿದಂತೆ ಸುತ್ತ ಹತ್ತಳ್ಳಿಗಳ ೨೫೦೦ಕ್ಕೂ ಹೆಚ್ಚು ಎಕರೆಗೆ ತರಹೇವಾರಿ (ತೋಟ, ಗದ್ದೆ, ಹೊಲ) ನೀರಾವರಿಗೆ ಪೂರ್ವಜರ ಕಾಲದಿಂದ ಹೆಗ್ಗೇರಿ ಕೆರೆ ಬಳಕೆಯಾಗುತ್ತಿತ್ತು. ಅತಿಕ್ರಮಿಸಿಕೊಂಡ ಪರಿಣಾಮವೋ? ಏನೋ  ಈಗ ೬೮೦ ಎಕರೆ ಹಂತ ತಲುಪಿದೆ. ಕೆರೆ ಅಭಿವೃದ್ಧಿಪಡಿಸಿ ಗ್ಲಾಸ್‌ಹೌಸ್ ನಿರ್ಮಾಣ ಮಾಡುವ ಕಾರ್ಯ ಸ್ಥಗಿತಗೊಂಡಿದೆ. ಯಾವುದೇ ನಿರ್ವಹಣೆ ಇಲ್ಲದೇ ಮುಳ್ಳು-ಕಂಟಿಗಳಿಂದ ಕೆರೆಯ ಸುತ್ತ-ಮುತ್ತಲಿನ ಪ್ರದೇಶ ಕುರುಚಲು ಕಾಡಾಗಿದೆ.
ಈ ಐತಿಹಾಸಿಕ ಹೆಗ್ಗೆರೆಕೆರೆಗೆ ಪ್ರತಿ ವರ್ಷ ದೂರದ ಆಸ್ಟ್ರೇಲಿಯಾ, ಮಂಗೋಲಿಯಾ, ಶ್ರೀಲಂಕಾ, ಜಿಂಬಾಬೆ, ನ್ಯೂಜಿಲಾಂಡ್ ಸೇರಿದಂತೆ ಮತ್ತಿತರ ದೇಶಗಳಿಂದ ಹಾಗೂ ಬೇರೆ ರಾಜ್ಯಗಳಿಂದ “ಬಾರ್ ಹೆಡೆಡ್‌ಗೂಸ್”, “ಸ್ಯಾಂಡ್ ಗ್ರೊಜ್”, “ಗುಲಾಬಿ ಬಣ್ಣದ ಕಬ್ಬಕ್ಕಿಗಳು”, “ಕ್ರೌಂಚಪಕ್ಷಿಗಳು”, “ಪೆಂಟಂಡ್ ಸ್ಪಾರ್ಕ”, “ಸ್ಪೂನ್‌ಬೆಲ್”, “ಹಾವುಹಕ್ಕಿ”, “ನೀರುಕಾಗೆ”, “ಜಕನಾ”, “ಜಾತಕಪಕ್ಷಿ” ಹಾಗೂ “ಅಪರೂಪದ ನೀರುನಾಯಿಗಳು”,  ಹೀಗೆ ತರೇವಾರಿ ಪಕ್ಷಿಗಳು, ಪ್ರಾಣಿಗಳು ಇಲ್ಲಿಗೆ ವಲಸೆ ಬರುತ್ತವೆ.
“ಪ್ರಾಣಿ-ಪಕ್ಷಿಗಳ ಸುರಕ್ಷತೆ ಇಲ್ಲಿ ಯಾವುದೇ ಕ್ರಮಗಳನ್ನು ತಗೆದುಕೊಂಡಿರುವುದಿಲ”. “ಹೀಗಾಗಿ ಅನೇಕ ಅಪರೂಪದ ಪ್ರಾಣಿ-ಪಕ್ಷಿಗಳು ಬೇಟೆಗಾರರಿಗೆ ಬಲಿಯಾಗುತ್ತುವೆ. ಆದ ಕಾರಣ “ಐತಿಹಾಸಿಕ ಹೆಗ್ಗೆರೆಕೆರೆಯನ್ನು ರಂಗನತಿಟ್ಟು ಮಾದರಿಯಲ್ಲಿ ಪಕ್ಷಿಧಾಮವನ್ನಾಗಿ , ಗದಗಜಿಲ್ಲೆಯ ಮಾಗಡಿ ಕರೆಯ ಮಾದರಿಯಲ್ಲಿ ಅಭಿವೃದ್ಧಿ ಮಾಡಲು  ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು”.
ಹೆಗ್ಗೆರಿ ಕೆರೆಯ ಹೂಳನ್ನು ತಗೆಸುವ ಮೂಲಕ  ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪಕ್ಷಿಧಾಮವನ್ನಾಗಿ ಘೋಷಣೆ ಮಾಡಬೇಕು. ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ-೪ಕ್ಕೆ ಹೊಂದಿಕೊಂಡಿರುವ ಈ ಕೆರೆ ಸಮಗ್ರ ಅಭಿವೃದ್ಧಿಯಾದರೇ  ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದ ಜನತೆಗೆ ದಿನದ ಇಪತ್ನಾಲ್ಕು ಗಂಟೆ ಕುಡಿಯುವ ನೀರು ಪೂರೈಸ ಬಹುದಾಗಿದೆ.
ಈ ಕೆರೆಯನ್ನು ತುಂಬಿಸುವ ನಿಟ್ಟಿನಲ್ಲಿ  ಹಾವೇರಿಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲರು ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ವಿಧಾನಸಭೆಯ ಉಪಸಭಾಪತಿಗಳಾದರುದ್ರಪ್ಪ ಮಾನಪ್ಪ ಲಮಾಣಿ ಅವರು ಶ್ರಮವಹಿಸಿ ಕೆರೆಯನ್ನು   ತುಂಬಿಸುವ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ ತುಂಗಾ ಮೇಲ್ದಂಡೆ ಯೋಜನೆ ಮೂಲಕ ಹೆಗ್ಗೇರಿ ಕೆರೆ ತುಂಬಿಸಲು ಸಾಧ್ಯವಾಗಿದೆ.
ಹೆಗ್ಗೆರೆಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಹೆಗ್ಗೆರಿಕೆರೆ ಹದ್ದುಬಸ್ತ ಮಾಡುವುದು ಅಗತ್ಯವಿದೆ.  ಇದರಿಂದ ದಾಖಲೆ ಪ್ರಕಾರ ನಿಖರವಾಗಿ ಹೆಗ್ಗೆರಿಕೆರೆ ಎಷ್ಟು ಎಕರೆ ವಿಸ್ತಾರದಲ್ಲಿತ್ತು ಎನ್ನುವುದು ಬೆಳಕಿಗೆ ಬರಲಿದೆ.  ಹಾವೇರಿ ನಗರದ ಜನತೆಗೆ ಕುಡಿಯುವ ನೀರು ಯೋಜನೆಗೆ ಅವಕಾಶ ಕಲ್ಪಿಸಿಕೊಡುವ ಜತೆಗೆ ಬೇಸಿಗೆಯ ಕಾಲದಲ್ಲಿ ಉಂಟಾಗುವ ನೀರಿನ ತೊಂದರೆಂiiನ್ನು ತಪ್ಪಿಸಲು ಬ್ರಹದಾಕಾರದ ಕೆರೆಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಬೇಕಾದ ನೀರು ಸಂಗ್ರಹಕ್ಕೆ ಒಂದೇ ಸ್ಥಳದಲ್ಲಿ ಅಗತ್ಯ ನೀರು ಸಂಗ್ರಹಕ್ಕಾಗಿ ಬೃಹದಾಕಾರದ ನೀರುಸಂಗ್ರಹ ಜಲಾಗಾರವನ್ನು ನಿರ್ಮಿಸಬೇಕಿದೆ.
“ಐತಿಹಾಸಿಕ ಹೆಗ್ಗೆರೆಕೆರೆಯಲ್ಲಿನ ಜೀವ ವೈವಿಧ್ಯತೆಗಳನ್ನು ಕಂಡು ಹೆಗ್ಗೇರೆಕೆರೆಯನ್ನು “ಜೀವ ವೈವಿಧ್ಯಗಳ ತಾಣ” ಎಂದು ಘೋಷಣೆಮಾಡಲಾಗಿದೆ”. ಇದು ಕೇವಲ ಕಾಗದಲ್ಲಿ ಮಾತ್ರ ಉಳಿದಿದೆ.  ಇದೀಗ ಆ.೩೦ರಂದು ಹಾವೇರಿಯ ಐತಿಹಾಸಿಕ ಹೆಗ್ಗೆರೆಕರೆಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಪರಿಸರ ಪ್ರೇಮಿಗಳಾಗಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರವಾಸೋಧ್ಯಮ ಸಚಿವ ಎಚ್.ಕೆ.ಪಾಟೀಲರು  ಈ ಐತಿಹಾಸಿಕ ಹೆಗ್ಗೆರೆಕೆರೆಯ ಬಗ್ಗೆ ಪ್ರೀತಿ-ಕಾಳಜಿ ತೋರಿಸುವ ಮೂಲಕ ಇದರ ಅಭಿವೃದ್ಧಿಗೆ ಹಾಗೂ ಪಕ್ಷಿಧಾಮವನ್ನಾಗಿ ಘೋಷಿಸುವ ನಿಟ್ಟಿನಲ್ಲಿ  ಅಗತ್ಯ ಕ್ರಮ ಜರುಗಿಸುವುದರ ಮೂಲಕ  ಈ ಹೆಗ್ಗೆರೆಕೆರೆಗೆ ಭೇಟಿ ನೀಡಿದ ಸುಸಂದರ್ಭವನ್ನು ಸ್ಮರಣೀಯವಾಗಿಸಬೇಕೆಂದು  ಒತ್ತಾಯ ಪೂರ್ವಕ ಆಗ್ರಹವಾಗಿದೆ.

ಮಾಲತೇಶ ಅಂಗೂರ

ಪರಿಸರ ಪ್ರೇಮಿ ಹಾಗೂ ವನ್ಯಜೀವಿಛಾಯಾಗ್ರಾಹಕ ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...