ಹಾವೇರಿಯ ಗೆಳೆಯರ ಬಳಗಕ್ಕೆ
ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ
ಹಾವೇರಿ _ ೨೧ ಕಳೆದ ೬೫ ವರ್ಷಗಳಿಂದ ಮೌನವಾಗಿ ಹಾವೇರಿ ಪರಿಸರದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ ಗೆಳೆಯರ ಬಳಗಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಮಡೆ ಸಿರಗನ್ನಡಂ ಗೆಲ್ಗೆ ಪ್ರಶಸ್ತಿ ಸಂಭ್ರಮ ಮೊನ್ನೆ ರವಿವಾರ ಧಾರವಾಡದಲ್ಲಿ ಜರುಗಿತು.
ಐವತ್ತು ಸಾವಿರ ನಗದು ಮೊತ್ತ, ಸುಂದರ ಪ್ರಶಸ್ತಿ ಫಲಕ ಗೌರವ ಸಂಭ್ರಮದೊAದಿಗೆ ಬೈಲುಹೊಂಗಲದ ಶಾಸಕರಾದ ಮಹಾಂತೇಶ ಕೌಜಲಗಿ ಕಿಕ್ಕಿರಿದು ತುಂಬಿದ್ದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಬಳಗದ ಅಧ್ಯಕ್ಷರಾದ ಡಾ. ಸುದೀಪ ಪಂಡಿತರಿಗೆ ಪ್ರದಾನ ಮಾಡಿದರು.
ಸಂಘದ ಅಧ್ಯಕರಾದ ಚಂದ್ರಕಾAತ ಬೆಲ್ಲದ, ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ, ಪ್ರದಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಉಪಾಧ್ಯಕ್ಷರಾದ ಸಂಜೀವ ಕುಲಕರ್ಣಿ, ಕೋಶಾಧ್ಯಕ್ಷರಾದ ಸತೀಶ ತುರಮರಿ, ಶಂಕರ ಕುಂಬಿ, ಮಹೇಶ ಹೊರಕೇರಿ ಮುಂತಾದವರು ಸಾಕ್ಷಿಯಾಗಿದ್ದರು.
ಅಭಿನಂದನಾ ನುಡಿಗಳನ್ನಾಡಿದ ಪ್ರಾಚಾರ್ಯ ಶಶಿಧರ ತೋಡಕರ ‘ಅಖಂಡ ಧಾರವಾಡ ಜಿಲ್ಲೆಯ ಮನೆ ಮಗಳಾಗಿದ್ದ ಹಾವೇರಿಗೆ ತೌರು ಪ್ರಶಸ್ತಿ ಇದಾಗಿದೆಂದು ನುಡಿದರು.
ಆರೂವರೆ ದಶಕಗಳ ಕಾಲ ಕನ್ನಡದ ಸಾಂಸ್ಕೃತಿಕ ಪರಿಸರ ಮತ್ತು ಕನ್ನಡದಲ್ಲಿಯೇ ಶಿಕ್ಷಣ ನೀಡಿ ಬೆಳೆಸಿದ ಕೀರ್ತಿ ಹಾವೇರಿಯ ಗೆಳೆಯರ ಬಳಗದ್ದು. ಇಷ್ಟು ವರ್ಷಗಳ ಕಾಲ ಒಂದು ಸಂಘಟನೆ ಉಳಿಯುವುದು ಬೆಳೆಯುವುದು ಸವಾಲಿನ ಕೆಲಸ ಎಂದು ಪ್ರಶಸ್ತಿ ಪ್ರದಾನ ಮಾಡಿದ ಶಾಸಕರಾದ ಕೌಜಲಗಿ ಅವರು ನುಡಿದರು.
ಪ್ರಶಸ್ತಿ ಸ್ವೀಕರಿಸಿದ ಗೆಳೆಯರ ಬಳಗದ ಅಧ್ಯಕ್ಷರಾದ ಡಾ. ಸುದೀಪ ಪಂಡಿತ ಇಂಥಹದೊAದು ರಾಜ್ಯ ಮಟ್ಟದ ಪ್ರಶಸ್ತಿ ಬಳಗಕ್ಕೆ ಎಂದೂ ಬಂದಿರಲಿಲ್ಲ. ಯಾರೂ ಸಹ ನಮ್ಮ ಹಿರಿಯ ಸೇವೆಯನ್ನು ಗುರುತಿಸಿರಲಿಲ್ಲ. ಇದು ಹಾವೇರಿ ಜಿಲ್ಲೆಗೆ ಸಿಕ್ಕ ಗೌರವ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಭ್ರಮದಲ್ಲಿ ಶಿಕ್ಷಣ ಸಮಿತಿಯ ಛೇರಮನ್ನ ಡಾ,. ಶ್ರವಣ ಪಂಡಿತ, ಕಾರ್ಯದರ್ಶಿ ಡಾ. ಗುಹೇಶ್ವರ ಪಾಟೀಲ, ಬಳಗದ ಕಾರ್ಯದರ್ಶಿ ಡಾ. ಗೌತಮ ಲೋಡಾಯಾ, ಕೋಶಾಧ್ಯಕ್ಷರಾದ ಸಂಜೀವಕುಮಾರ ಬಂಕಾಪೂರ, ಹಿರಿಕಿರಿ ಸದಸ್ಯರುಗಳಾದ ವ್ಹಿ.ಎಂ. ಪತ್ರಿ, ಸದಾಶಿವ ಹಿಂಚಿಗೇರಿ, ಎಸ್.ಎಸ್. ವೀರಶೆಟ್ಟರ, ಡಾ. ವ್ಯಶಾಲಿ ಪಂಡಿತ, ಲೀಲಾವತಿ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.