
ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!
ಹಾವೇರಿ : ಆಸ್ಪತ್ರೆ ಗೆ ಚಿಕಿತ್ಸೆ ಪಡೆಯಲು ರೋಗಿಗಳು ಬರುವುದು ಸಹಜ, ಆದರೆ ಕಾರೋಂದು ಆಸ್ಪತ್ರೆಯ ಆವರಣಕ್ಕೆ ನುಗ್ಗುವ ಮೂಲಕ ಗ್ಯಾರೇಜ್ಸೇರಿ ಚಿಕಿತ್ಸೆ ಪಡೆಯಬೇಕಾದ ಘಟನೆ ಶನಿವಾರ ಬೆಳಗಿನ ಜಾವ ಹಾವೇರಿ ಯಲ್ಲಿ ನಡೆದಿದೆ.
ಇಲ್ಲಿನ ಹೆಗ್ಗೇರಿ ರಸ್ತೆಗೆ ಹೊಂದಿಕೊಂಡಿರುವ ಪ್ರಸಿದ್ಧ ಮಕ್ಕಳ ತಜ್ಞರಾದ ಡಾ.ರಾಜಕುಮಾರ ಮರೋಳ ಅವರ ಶಿವಜ್ಯೋತಿ ಮಕ್ಕಳ ಆಸ್ಪತ್ರೆಗೆ ಶನಿವಾರ
ಬೆಳಗಿನ ಜಾವ 3 ಗಂಟೆಗೆ ಕಾರೋಂದು ಚಾಲಕನ ನಿಯಂತ್ರಣ ಕಳೆದುಕೊಂಡು ನುಗ್ಗಿದ್ದು ,
ಯಾವುದೇ ಅಪಾಯ ಸಂಭವಿಸಿಲ್ಲ .ಆದರೆ ಆಸ್ಪತ್ರೆಯ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ.
ಯಾವ ಕಾರಣಕ್ಕೆ ಈ ಅಪಘಾತ ನಡೆಯಿತೆಂದು ತಿಳಿದು ಬಂದಿಲ್ಲ .
ಆದರೆ ರಸ್ತೆ ಬಿಟ್ಟು ಸುಮಾರು 20 ಅಡಿ ದೂರ ಇರುವ ಆಸ್ಪತ್ರೆಯ ಆವರಣಕ್ಕೆ ಕಾರು ನುಗ್ಗಿದ್ದು ಹೇಗೆ? ಚಾಲಕ ಪಾನಮತ್ತನಾಗಿ ಕಾರು ಚಲಾಯಿಸಿದನೇ? ವೇಗವಾಗಿ ಚಲಾಯಿಸಿದನೇ??
ಇಲ್ಲವೇ ಆತನ ನಿಯಂತ್ರಣ ಕಳೆದುಕೊಂಡು ಕಾರು ಆಸ್ಪತ್ರೆಯ ಕಾಂಪೌಂಡ್ ಗೆ ನುಗ್ಗಿತೇ? ಎನ್ನುವುದು
ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಬೆಳಗಿನ ಜಾವ ಸಂಭವಿಸಿದ ಈ ಅವಘಡದಿಂದ ಯಾವುದೇ ಯಾವುದೇ ಅನಾಹುತ ಸಂಭವಿಸಿಲ್ಲ. ಕ್ರೇನ್ ಮೂಲಕ ಕಾರನ್ನು ಆಸ್ಪತ್ರೆಯ ಆವರಣದಿಂದ ಹೊರ ತೆಗೆಯಲಾಯಿತು.

