ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ
ಹಾವೇರಿ : ಬಿಸಲಿನ ತಾಪಕ್ಕೆ ಕಂಗೆಟಿದ್ದ ಹಾವೇರಿಜನತೆ ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಜನರ ನಿರೀಕ್ಷೆಯನ್ನು ಹುಸಿ ಮಾಡದ ಮಳೆರಾಯ ಸಂತೆ ದಿನವಾದ ಗುರುವಾರ ಅರ್ಧಗಂಟೆ ಸುರಿದು ತಂಪೆರೆದಿದ್ದಾನೆ. ಸಂಜೆ ಆರಕ್ಕೆ ಸಿಡಿಲಿನ ಹೊಡೆತಕ್ಕೆ ತೆಂಗಿನಮರವೊಂದು ಹೊತ್ತಿ ಉರಿದಿರುವ ಘಟನೆ ತಾಲೂಕಿನ ದಿಡಗೂರುಗ್ರಾಮದಲ್ಲಿ ನಡೆದಿದೆ