.
ಹಾವೇರಿ: ಅಕ್ರಮ ಚಟುವಟಿಕೆ ನಡೆಸಲು ಲಂಚ ಸ್ವೀಕಾರ, ತಡಸ ಪೊಲೀಸ್ ಠಾಣೆ ಪಿ.ಎಸ್.ಐ – ಕಾನ್ಸ್ಟೇಬಲ್ ಬಂಧನ
ಹಾವೇರಿ:ಅಕ್ರಮ ಚಟುವಟಿಕೆ ನಡೆಸಲು ಲಂಚ ಸ್ವೀಕರಿಸುವ ವೇಳೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಹಾವೇರಿ ತಂಡ ದಾಳಿ ನಡೆಸಿಜಿಲ್ಲೆಯ ಶಿಗ್ಗಾಂವಿ ತಾಲೂಕಿನ
ತಡಸ ಪೊಲೀಸ್ ಠಾಣೆ ಪಿ.ಎಸ್.ಐ – ಕಾನ್ಸ್ಟೇಬಲ್ ರನ್ನು ಶುಕ್ರವಾರ ಬಂಧಿಸಿದ್ದಾರೆ.
ತಡಸದ ಪ್ರಭಾಕರ ಈರಪ್ಪ ಬೆಟದೂರ ಇವರು ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಸ್ಟೇಟ್ ಆಡಿಸಲು ತಡಸ ಪೊಲೀಸ್ ಠಾಣೆಯ
ಪಿ.ಎಸ್.ಐ ಶರಣಬಸಪ್ಪ ಕಾಂದೆ, ಹಾಗೂ ಸಿಪಿಸಿ ಸುರೇಶ ಮಾನೋಜಿ ಅ ವರು ರೂ 5,00,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ದಿನಾಂಕ 17-05-2024 ರಂದು ಮಧ್ಯವರ್ತಿ ಕಿರಣ ವನಹಳ್ಳಿ ಮೂಲಕ ಮುಂಗಡವಾಗಿ ರೂ 2,00,000/- ಗಳ ಲಂಚದ ಹಣವನ್ನು ಪಡೆದುಕೊಳ್ಳುವಾಗ ದಾಳಿಮಾಡಿ ದ ಲೋಕಾಯುಕ್ತ ಪೊಲೀಸ್ ರು ಯ
ಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ..
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡಿದ್ದು, ಡಿವೈಎಸ್ಪಿ ಬಿ.ಪಿ ಚಂದ್ರಶೇಖರ, ಕರ್ನಾಟಕ ಲೋಕಾಯುಕ್ತ ಅವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ.ಪಿ.ಎನ್, ಪೊಲೀಸ್ ನಿರೀಕ್ಷಕರು ಹಾಗೂ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಕಾರ್ಯಾಚರಣೆಯಲ್ಲಿ ಭಾಗಿಯಾಗಿಯಾಗಿದ್ದರು.
ಸದರಿ ಆರೋಪಿತರಾದ ಪಿ.ಎಸ್.ಐ ಶರಣಬಸಪ್ಪ ಕಾಂದೆ, ಹಾಗೂ ಸಿಪಿಸಿ ಸುರೇಶ ಮಾನೋಜಿ ಅವರನ್ನು
ತಡಸ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.