ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷಾಕೇಂದ್ರಗಳಿಗೆ ವಾಚ್ ನಿಷೇಧ, ಗೊಡೆಗಡಿಯಾರಕ್ಕೆ ವಿದ್ಯಾರ್ಥಿ/ಪಾಲಕರ ಬೇಡಿಕೆ
ಹಾವೇರಿ: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗಳು ಮಾರ್ಚ್ ೩೧ ರಂದು ಶುಕ್ರವಾರ ಆರಂಭಗೊಂಡಿದ್ದು ಕೆಲವು ಪರೀಕ್ಷಾಕೇಂದ್ರಗಳಲ್ಲಿ ಗಂದಳಗಳು ಕಂಡು ಬಂದಿವೆ. ಶುಕ್ರವಾರ ಬೆಳಿಗ್ಗೆ ಪರೀಕ್ಷಾಕೇಂದ್ರಗಳಿಗೆ ಆಗಮಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಟಡಿಗಳಿಗೆ ಕೈಗಡಿಯಾರ ಕಟ್ಟಿಕೊಂಡು ಹೋಗುವುದಕ್ಕೆ ಅವಕಾಶ ಕೊಡಲಿಲ್ಲ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ವಿರೋಧ ವ್ಯಕ್ತ ಪಡಿಸಿದರು. ಕನಿಷ್ಟಪಕ್ಷ ಪರೀಕ್ಷಾ ಕೊಟಡಿಯಲ್ಲಿ ಗೋಡೆಗಡಿಯಾರವನ್ನು ಅಳವಡಿಸಿವಂತೆ ಆಗ್ರಹಿಸಿದರು. ನಗರದ , ಸರ್.ಎಂ.ವಿಶ್ವೇಶ್ವರಯ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈಗಂದಲ ಕಂಡು ಬಂದಿತು. ಪಾಲಕರು ವಿದ್ಯಾರ್ಥಿಗಳಿಗೆ ಸಮಯ ತಿಳಿಯಲು ಕೈಗಡಿಯಾರ ಕಟ್ಟಿಕಳ್ಳಲು ಅವಕಾಶ ಕಡಬೇಕು, ಇಲ್ಲವೇ ಪರೀಕ್ಷಾ ಕೊಟಡಿಯಲ್ಲಿ ಗಡೆಗಡಿಯಾರವನ್ನು ಅಳವಡಿಸಬೇಕೆಂದು ಬೇಡಿಕೆಯನ್ನಿಟ್ಟರು.
ಈಬಗ್ಗೆ ಹಾವೇರಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಡಿಗೇರ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತಂದರೆಯಬಗ್ಗೆ ತಿಳಿಸಿದಾಗ ಅವರು ಆಗಿರುವ ಸಮಸ್ಯೆ ಪರಿಹಾರ ಸೂಚಿಸಲಾಗಿದೆ. ವೇಳೆಗೆ ಸರಿಯಾಗಿ ಬೆಲ್ ಬಾರಿಸುವುದು, ಪರೀಕ್ಷಾರ್ಥಿಗಳಿಗೆ ಸಮಯದ ಬಗ್ಗೆ ಸಂಬಂಧೀಸಿದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭಗೊಂಡಿದ್ದು ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ.
ಹಾವೇರಿ ನಗರದ ಮುನ್ಸಿಪಲ್ ಪ್ರೌಢಶಾಲೆ, ಎಸ್.ಎಂ.ಎಸ್.ಬಾಲಕಿಯರ ಪ್ರೌಢಶಾಲೆ, ಹುಕ್ಕೇರಿಮಠ ಪ್ರೌಢಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜ್ಞಾನಗಂಗಾ ಪ್ರೌಢಶಾಲೆ, ಜೆ,ಪಿ.ರೋಟರಿ ಪ್ರೌಢಶಾಲೆ, ಸೇಂಟ್ ಆನ್ಸ್ ಪ್ರೌಢಶಾಲೆ, ಗುತ್ತಲ ಎಸ್.ಆರ್.ಪ್ರೌಢಶಾಲೆ ಹಾಗೂ ಆರ್.ಕೆ.ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೊಸರಿತ್ತಿ ಜಿ.ವ್ಹಿ.ಹೆಚ್.ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಗಾಂಧೀ ಗ್ರಾಮೀಣ ಕುರುಕುಲ ವಸತಿ ಪ್ರೌಢಶಾಲೆ. ಗುತ್ತಲ ಎಸ್.ಆರ್.ಎಸ್.ಪ್ರೌಢಶಾಲೆ, ಸೇಂಟವಾಲ ಆಂಗ್ಲ ಮಾಧ್ಯಮ ಶಾಲೆ, ದೇವಗಿರಿಯ ಮಹಾತ್ಮಗಾಂಧಿ ಪ್ರೌಢಶಾಲೆ, ಕಾಟೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ನೆಗಳೂರು ಎಂ.ಡಿ.ಆರ್.ಎಸ್, ಕಬ್ಬೂರ ಸರ್ಕಾರಿ ಪ್ರೌಢಶಾಲೆ, ಕರ್ಜಗಿ ಎಂ.ಎ.ಡಿ.ಆರ್.ಎಸ್.ಪ್ರೌಢಶಾಲೆ, ದೇವಿಹೊಸೂರು ಎಸ್.ಎನ್.ಬಿ.ಕೆ ಪ್ರೌಢಶಾಲೆ, ಕರ್ಜಗಿ ಕೆ.ಪಿ.ಎಸ್.ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿವೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್ ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಸಾಧನ ತರುವುದನ್ನು ನಿಷೇಧಿಸಲಾಗಿದೆ.