“ಹಾವೇರಿ ಕಾನೂನು ಮಹಾವಿದ್ಯಾಯಲಯಕ್ಕೆ ಪ್ರೊ.ಎಲ್.ಜಿ.ಹಾವನೂರ ಹೆಸರು ನಾಮಕರಣವಾಗಲಿ” : ಬಸವರಾಜ ಹಾದಿಮನಿ
ಹಾವೇರಿ: ಇತಿಹಾಸವನ್ನು ಮೆಲುಕು ಹಾಕಿದಾಗ ಬಡತನ ಹಾಗೂ ಶೋಷಣೆಯನ್ನು ಅನುಭವಿಸಿದ ವ್ಯಕ್ತಿಗಳು ಸಮಾಜದಲ್ಲಿ ಸಾಧನೆ ತೋರಿದ್ದಾರೆ. ಬಡವರ್ಗದಿಂದ ಬಂದಿದ್ದ ಪ್ರೊ.ಎಲ್.ಜಿ.ಹಾವನೂರ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ವರದಿ ನೀಡುವ ಮೂಲಕ ಶೋಷಿತ ವರ್ಗದ ಜನರಿಗೆ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ. ಅವರು ಹೋರಾಟದ ಮೂಲಕ ಸಾಮಾಜಕ್ಕೆ ವಿಶಿಷ್ಠ ಕೊಡುಗೆ ನೀಡಿದ್ದು, ಅವರ ಸ್ಮರಣೆ ಅಗತ್ಯವಾಗಿದೆ ಎಂದು ನ್ಯಾಯವಾದಿ, ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಹಾದಿಮನಿ ಹೇಳಿದರು.
ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ಪ್ರೊ.ಎಲ್.ಜಿ. ಹಾವನೂರ ಅವರ ೯೮ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರೊ.ಎಲ್.ಜಿ.ಹಾವನೂರಅವರ ಬದುಕು, ಜೀವನ, ಸಾಧನೆ ಅಧ್ಯಯನವಾಗಬೇಕಿದೆ. ಇಂದಿನ ಯುವಜನಾಂಗಕ್ಕೆ ಹಾವನೂರ ಅವರ ಪರಿಚಯವಾಗಬೇಕಿದೆ. ಹಾವೇರಿಯಲ್ಲಿ ಸ್ಥಾಪಿಸಲಾಗುವು ಕಾನೂನು ಮಹಾವಿದ್ಯಾಲಯಕ್ಕೆ ಕಾನೂನು ಪ್ರಕಾಂಡ ಪಂಡಿತರಾಗಿದ್ದ ಪ್ರೊ.ಎಲ್.ಜಿ.ಹಾವನೂರಅವರ ಹೆಸರನ್ನು ನಾಮಕರಣ ಮಾಡಬೇಕೇಂದು ಅವರು ಆಗ್ರಹಿಸಿದರು.
ಪ್ರೊ.ಎಲ್.ಜಿ.ಹಾವನೂರಅವರು ಬಡತನ, ಕಷ್ಟದ ಪರಿಸ್ಥಿತಿಯಲ್ಲಿ ಅಧ್ಯಯನ ಮಾಡಿದ್ದ ಅವರು ಶ್ರೇಷ್ಠ ವಕೀಲರಾಗಿದ್ದರು. ಅವರು ಅತ್ಯಂತ ವೈಜ್ಞಾನಿಕವಾದ ವರದಿ ಸಿದ್ಧಪಡಿಸುವ ಮೂಲಕ ಹಿಂದುಳಿದವರ ಬಾಳಿಗೆ ಬೆಳಕಾದರು. ಅವರ ವರದಿ ಹಿಂದುವಳಿದ ವರ್ಗದವರ ಬೈಬಲ್ ಎಂದೇ ಮಾನ್ಯತೆ ಪಡೆದಿದೆ. ಹಾವನೂರ ಅವರ ಬಗ್ಗೆ ವಿವಿಗಳಲ್ಲಿ ಅಧ್ಯಯನಪೀಠಗಳ ಸ್ಥಾಪನೆಯಾಗಬೇಕು. ಅವರ ಜೀವನ ಸಾಧನೆಯ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪಠ್ಯವಿರಬೇಕೆಂದು ಬಸವರಾಝ ಹಾದಿಮನಿ ಹೇಳಿದರು.
ಸಮಾರಂಭದಲ್ಲಿ ತೇಜರಾಜ್ ಹಲಸಬಾಳ, ನಿಂಗಪ್ಪ ದೊಡ್ಡತಳವಾರ, ಕೃಷ್ಣ ಜವಳಿ, ನಾಗರಾಜ ಹಾವೇರಿ, ಸಂಜಯಗಾಂಧಿ ಸಂಜೀವಣ್ಣನವರ, ಉಡಚಪ್ಪ ಮಾಳಗಿ, ನಿವೃತ್ತ ಪ್ರಾಚಾರ್ಯ ಎಂ.ಆಂಜನೇಯ, ಉದಯಕುಮಾರ ಅಗಸನಮಟ್ಟಿ ಮತ್ತಿತತರು ಭಾಗವಹಿಸಿದ್ದರು. ಮಾಲತೇಶ ಅಂಗೂರು ಪ್ರಸ್ಥಾವಿಕವಾಗಿ ಮಾತನಾಡಿ ವಂದಿಸಿದರು.