ಸಾಂದರ್ಭಿಕ ಚಿತ್ರ.
ಹಾವೇರಿ: ನೀರಿನ ಬಕೇಟ್ಗೆ ಬಿದ್ದು ೧೪ತಿಂಗಳು ಮಗು ಮರಣ
ಹಾವೇರಿ; ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಕೇಟ್ಒಳಗೆ ಬಿದ್ದು ಮರಣಹೊಂದಿರುವ ಘಟನೆಯ ಹಾವೇರಿಯಲ್ಲಿ ನಡೆದಿದೆ. ಮೃತಮಗವನ್ನು ೧೪ತಿಂಗಳ ದಕ್ಷಿತ ರವಿ ಯಳಂಬಲಿಮಠ ಎಂದು ಗುರುತಿಸಲಾಗಿದೆ.
ಹಾವೇರಿಯ ಶಿವಬಸವನಗರದ ಯಳಂಬಲಿಮಠ ಎನ್ನುವವರ ಮನೆಯ ಮುಂದೆ ದಕ್ಷಿತ ದಿನಾಂಕ: ೧೯-೧೦-೨೦೨೫ ರಂದು ಮುಂಜಾನೆ ಸುಮಾರು ೧೧-೩೦ ಗಂಟೆಗೆ ಆಟವಾಡುತ್ತಿದ್ದಾಗ ನೀರಿರುವ ಬಕೇಟನೊಳಗೆ ಆಕಸ್ಮಿಕವಾಗಿ ತಲೆ ಕಳಗಾಗಿ ನೀರಿನಲ್ಲಿ ಮುಳಗಿದ್ದು ಕಾಲು ಮೇಲಾಗಿ ಬಿದ್ದಿದ್ದು ಕಂಡು ಗಾಬರಿಯಾಗಿ ನೋಡಿದಾಗ ನೀರಿನಲ್ಲಿ ಪ್ರಜ್ಞೆ ತಪ್ಪಿದರಿಂದ ಕೊಡಲೆ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಲಾಗಿತ್ತು. ಉಪಚಾರ ಫಲಿಸದೇ ದಿನಾಂಕ:೨೩-೧೦-೨೦೨೫ ರಂದು ರಾತ್ರಿ ೦೯-೦೦ ಗಂಟೆಗೆ ಉ ಮಗು ಮರಣಹೊಂದಿದ್ದು, ಈ ಬಗ್ಗೆ ಶಹರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

