ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗಿ ನಡೆದ ಭೀಕರ ಅಪಘಾತ, ವಯೋವೃದ್ಧೆ ಕಾಲು ತುಂಡು

Date:

ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗಿ ನಡೆದ ಭೀಕರ ಅಪಘಾತ, ವಯೋವೃದ್ಧೆ ಕಾಲು ತುಂಡು
ಹಾವೇರಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ವಯೋವೃದ್ಧೆಯ ಮೇಲೆ ಸಾರಿಗೆ ಬಸ್ ಹರಿದು ವಯೋವೃದ್ಧೆಯ ಕಾಲು ತುಂಡಾಗಿರುವ ಘಟನೆ ಮಂಗಳವಾರ ಸಂಜೆ ೬ರ ಸುಮಾರಿಗೆ ನಡೆದಿದೆ. ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಹೊರಟ್ಟಿದ್ದ ತವರುಮರಳಿಹಳ್ಳಿ ಗ್ರಾಮದ ೭೦ ವರ್ಷದ ಗಿರಿಜವ್ವ ಶಿವನಾಗಪ್ಪ ಕಬ್ಬೂರು ಎನ್ನುವ ವೃದ್ಧೆಯ ಕಾಲು ಮೇಲೆ ಬಸ್‌ನ ಗಾಲಿಗಳು ಚಲಿಸಿ ಅಜ್ಜಿಯ ಕಾಲು ಸಂಪೂu ಜಜ್ಜಿಹೋಗಿವೆ.
ಹಾವೇರಿಯಿಂದ ಸವಣೂರಿಗೆ ಹೊಗುತ್ತಿದ್ದ ಬಸ್ ಹತ್ತುವ ವೇಳೆ ಬಸ್ ನಲ್ಲಿ ನೂಕ ನುಗ್ಗಲು ಇದ್ದ ವೇಳೆ ಬಸ್ ಹಿಂದಿನಬಾಗಲಿನಲ್ಲಿ ಹತ್ತುವ ವೇಲೆ ಆಯತಪ್ಪಿ ಬಸ್ಸಿನಿಂದ ಬಿದ್ದು ಬಸ್ ನ ಹಿಂದಿನ ಗಾಲಿಗೆ ಸಿಲುಕಿ ಕಾಲು ತುಂಡಾಗಿ ರಕ್ತಸಿಕ್ತವಾಗಿ ನರಳಾಡುತ್ತಿರುವ ವೃದ್ದೆಯನ್ನು ಅಂಬಲನ್ಸ್‌ನಲ್ಲಿ ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಲಾಗಿದ್ದು, ಅಜ್ಜಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತ ನಡೆದ ಗ್ರಾಮೀಣ ಬಸ್ ನಿಲ್ದಾಣ ರಕ್ತಮಯವಾಗಿದೆ.
ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಡ್ರೈವರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವಾರ ಇದೇ ಬಸ್ ನಿಲ್ದಾಣದಲ್ಲಿ ಕನಕಾಪುರದ ವಯೋವೃದ್ಧನ ಕಾಲುಮೇಲೆ ಬಸ್ ಹರಿದು ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ, ಈ ಘಟನೆ ಮಾಸುವ ಮುನ್ನವೇ ಮೊತ್ತೊಂದು ಅನಾಹುತ ನಡೆದಿರುವುದು ಪ್ರಯಾಣಿಕರನ್ನು ಬೆಚ್ಚಿ ಬಿಳಿಸಿದೆ. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬರಲು ಹೆದರುವಂತಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗಿ ನಡೆದ ಭೀಕರ ಅಪಘಾತ, ವಯೋವೃದ್ಧೆ ಕಾಲು ತುಂಡು
ಹಾವೇರಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ವಯೋವೃದ್ಧೆಯ ಮೇಲೆ ಸಾರಿಗೆ ಬಸ್ ಹರಿದು ವಯೋವೃದ್ಧೆಯ ಕಾಲು ತುಂಡಾಗಿರುವ ಘಟನೆ ಮಂಗಳವಾರ ಸಂಜೆ ೬ರ ಸುಮಾರಿಗೆ ನಡೆದಿದೆ. ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಹೊರಟ್ಟಿದ್ದ ತವರುಮರಳಿಹಳ್ಳಿ ಗ್ರಾಮದ ೭೦ ವರ್ಷದ ಗಿರಿಜವ್ವ ಶಿವನಾಗಪ್ಪ ಕಬ್ಬೂರು ಎನ್ನುವ ವೃದ್ಧೆಯ ಕಾಲು ಮೇಲೆ ಬಸ್‌ನ ಗಾಲಿಗಳು ಚಲಿಸಿ ಅಜ್ಜಿಯ ಕಾಲು ಸಂಪೂu ಜಜ್ಜಿಹೋಗಿವೆ.
ಹಾವೇರಿಯಿಂದ ಸವಣೂರಿಗೆ ಹೊಗುತ್ತಿದ್ದ ಬಸ್ ಹತ್ತುವ ವೇಳೆ ಬಸ್ ನಲ್ಲಿ ನೂಕ ನುಗ್ಗಲು ಇದ್ದ ವೇಳೆ ಬಸ್ ಹಿಂದಿನಬಾಗಲಿನಲ್ಲಿ ಹತ್ತುವ ವೇಲೆ ಆಯತಪ್ಪಿ ಬಸ್ಸಿನಿಂದ ಬಿದ್ದು ಬಸ್ ನ ಹಿಂದಿನ ಗಾಲಿಗೆ ಸಿಲುಕಿ ಕಾಲು ತುಂಡಾಗಿ ರಕ್ತಸಿಕ್ತವಾಗಿ ನರಳಾಡುತ್ತಿರುವ ವೃದ್ದೆಯನ್ನು ಅಂಬಲನ್ಸ್‌ನಲ್ಲಿ ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಲಾಗಿದ್ದು, ಅಜ್ಜಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತ ನಡೆದ ಗ್ರಾಮೀಣ ಬಸ್ ನಿಲ್ದಾಣ ರಕ್ತಮಯವಾಗಿದೆ.
ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಡ್ರೈವರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವಾರ ಇದೇ ಬಸ್ ನಿಲ್ದಾಣದಲ್ಲಿ ಕನಕಾಪುರದ ವಯೋವೃದ್ಧನ ಕಾಲುಮೇಲೆ ಬಸ್ ಹರಿದು ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ, ಈ ಘಟನೆ ಮಾಸುವ ಮುನ್ನವೇ ಮೊತ್ತೊಂದು ಅನಾಹುತ ನಡೆದಿರುವುದು ಪ್ರಯಾಣಿಕರನ್ನು ಬೆಚ್ಚಿ ಬಿಳಿಸಿದೆ. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬರಲು ಹೆದರುವಂತಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...