ಹಾವೇರಿ ಬಸ್ ನಿಲ್ದಾಣದಲ್ಲಿ - ಬ್ಯಾಡಗಿ ಎಪಿಎಂಸಿಯಲ್ಲಿ
ಹಗಲು ದರೋಡೆ, ಬೆಚ್ಚಿಬಿದ್ದಿರುವ
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ –
ಅನಿರೀಕ್ಷಿತ ಭೇಟಿ ವೇಳೆ ಅನಾವರಣ
ಹಾವೇರಿ:ಹಾವೇರಿ ಬಸ್ ನಿಲ್ದಾಣದಲ್ಲಿ - ಬ್ಯಾಡಗಿ ಎಪಿಎಂಸಿಗೆ ಬುಧವಾರ ಬೆಳಿಗ್ಗೆ ಅನಿರೀಕ್ಷಿತ ಭೇಟಿ ನೀಡಿದ ವೇಳೆ
ಹಗಲು ದರೋಡೆ ನಡೆಯುತ್ತಿರುವುದನ್ನು ಕಂಡು
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಬೆಚ್ಚಿಬಿದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ನಾನು ಬರುವ ಸಮಾಚಾರ ೧೫ ದಿನಗಳ ಮೊದಲೆ ತಿಳಿಸಲಾಗಿದೆ. ಆದರೆ ಇಲ್ಲಿನ ವ್ಯವಸ್ಥೆ ನೋಡಿದರೆ ಎಂದು ಬೇಸರ ವ್ಯಕ್ತಪಡಿಸಿದರು.
ಅನಿರೀಕ್ಷಿತ ಭೇಟಿ ವೇಳೆ ಅನಾವರಣ
ಹಾವೇರಿ ಯ ಬಸ್ ನಿಲ್ದಾಣದಲ್ಲಿಅವ್ಯಸ್ಥೆ, ಪ್ರಯಾಣಿಕರ ಹಗಲು ದರೋಡೆ, ವಾಹನ ನಿಲುಗಡೆ ಗೆ ಬೇಕಾಬಿಟ್ಟಿ ಶುಲ್ಕ ವಸೂಲಿ, ಪರವಾನಗಿಯ ಪಡೆಯದೇ ಶುಲ್ಕ ಸಂಗ್ರಹ, ಶೌಚಾಲಯ ದ ಶುಲ್ಕ ೫ ರೂ ಬದಲಿಗೆ ೨೦ರೂ ವಸೂಲಿ, ಗಲೀಜ್ ಬಸ್ ಗಳು ಹೀಗೆ ಒಂದೇ ಎರಡೆ ಹತ್ತಾರು ಹಗರಣಗಳ ಆಗರ ಗೋಚರಿಸಿದವು. ಇನ್ನೂ ಬ್ಯಾಡಗಿ ಎಪಿಎಂಸಿಯಲ್ಲಿ ತೂಕದಲ್ಳಿ ವಂಚನೆ,ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯ ಗಳಕೊರತೆಯ ಬಗ್ಗೆ ಲೋಕಾಯುಕ್ತರು ಬೇಸರ ವ್ಯಕ್ತ ಪಡಿಸಿ ಅವ್ಯವಸ್ಥೆ ಸರಿ ಪಡಿಸುವಂತೆ ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ವಿಜಯಮಾಹಾಂತೇಶ ದಾನಮ್ಮನವರ ಸೇರಿದಂತೆ ಅನೇಕರು ಹಾಜರಿದ್ದ ರು.