ಹಾವೇರಿ -ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿ ಪ್ರಭುಸ್ವಾಮಿ ಬಾಳಿಹಳ್ಳಿಮಠಗೆ ೨೦ ವರ್ಷ ಜೈಲು

Date:

 

ಹಾವೇರಿ -ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿ ಪ್ರಭುಸ್ವಾಮಿ ಬಾಳಿಹಳ್ಳಿಮಠಗೆ ೨೦ ವರ್ಷ ಜೈಲು

ಹಾವೇರಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಎಂಬಾತನಿಗೆ ೨೦ ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ರೂ.೬೭ ಸಾವಿರ ದಂಡ ವಿಧಿಸಿ ಹಾವೇರಿ ವಿಶೇ? ಸತ್ರ ನ್ಯಾಯಾಲಯ(ಎಫ್.ಟಿ.ಎಸ್.ಸಿ-೧)ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಎಂಬಾತ ಅಪ್ರಾಪ್ತ ಬಾಲಕಿ ಎಂದು ಗೊತ್ತಿದ್ದರೂ ಸಹ ಮದುವೆಯಾಗುವುದಾಗಿ ಮತ್ತು ಪ್ರೀತಿಸುವುದಾಗಿ ಹೇಳಿ ಪುಸಲಾಯಿಸಿ ದಿನಾಂಕ ೨೯-೦೪-೨೦೨೧ ರಂದು ರಾತ್ರಿ ೧೦-೩೦ಕ್ಕೆ ಕಡಕೋಳ ಬಸ್‌ನಿಲ್ದಾಣದಿಂದ ಅಪಹರಣಮಾಡಿಕೊಂಡು ಹೋಗಿ, ಮಂಗಳೂರು ಜಿಲ್ಲೆ ಸೂರತ್ಕಲ್ ತಾಲೂಕು ಕುಳೈ ಗ್ರಾಮದ ವ್ಯಾಪ್ತಿಯ ಒಂದು ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ, ಬಾಲಕಿಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾದ ಕುರಿತು ಸವಣೂರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ದೇವಾನಂದ ಎಸ್ ಅವರು ಪ್ರಕರಣದ ತನಿಖೆ ನಡೆಸಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಮೇಲೆ ಹೊರಿಸಲಾದ ಆಪಾದನೆಗಳನ್ನು ಅಭಿಯೋಜನೆಯು ರುಜುವಾತುಪಡಿಸಿದ್ದರಿಂದ ನ್ಯಾಯಾಧೀಶರು ಮೇಲಿನಂತೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದು, ಸದರಿ ದಂಡದ ಹಣದಲ್ಲಿ ನೊಂದ ಬಾಲಕಿಗೆ ರೂ.೫೦ಸಾವಿರ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ರೂ. ೪,೦೦,೦೦೦/- ಗಳ ಪರಿಹಾರ ನೀಡಬೇಕೆಂದು ಎಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇ? ಸರ್ಕಾರಿ ಅಭಿಯೋಜಕ(ಪೋಕ್ಸೋ) ವಿಜಯಕುಮಾರ ಶಂಕರಗೌಡ ಪಾಟೀಲ್ ಪ್ರಕರಣ ನಡೆಸಿ ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿ -ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿ ಪ್ರಭುಸ್ವಾಮಿ ಬಾಳಿಹಳ್ಳಿಮಠಗೆ ೨೦ ವರ್ಷ ಜೈಲು

ಹಾವೇರಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಎಂಬಾತನಿಗೆ ೨೦ ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ರೂ.೬೭ ಸಾವಿರ ದಂಡ ವಿಧಿಸಿ ಹಾವೇರಿ ವಿಶೇ? ಸತ್ರ ನ್ಯಾಯಾಲಯ(ಎಫ್.ಟಿ.ಎಸ್.ಸಿ-೧)ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಎಂಬಾತ ಅಪ್ರಾಪ್ತ ಬಾಲಕಿ ಎಂದು ಗೊತ್ತಿದ್ದರೂ ಸಹ ಮದುವೆಯಾಗುವುದಾಗಿ ಮತ್ತು ಪ್ರೀತಿಸುವುದಾಗಿ ಹೇಳಿ ಪುಸಲಾಯಿಸಿ ದಿನಾಂಕ ೨೯-೦೪-೨೦೨೧ ರಂದು ರಾತ್ರಿ ೧೦-೩೦ಕ್ಕೆ ಕಡಕೋಳ ಬಸ್‌ನಿಲ್ದಾಣದಿಂದ ಅಪಹರಣಮಾಡಿಕೊಂಡು ಹೋಗಿ, ಮಂಗಳೂರು ಜಿಲ್ಲೆ ಸೂರತ್ಕಲ್ ತಾಲೂಕು ಕುಳೈ ಗ್ರಾಮದ ವ್ಯಾಪ್ತಿಯ ಒಂದು ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ, ಬಾಲಕಿಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾದ ಕುರಿತು ಸವಣೂರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ದೇವಾನಂದ ಎಸ್ ಅವರು ಪ್ರಕರಣದ ತನಿಖೆ ನಡೆಸಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಮೇಲೆ ಹೊರಿಸಲಾದ ಆಪಾದನೆಗಳನ್ನು ಅಭಿಯೋಜನೆಯು ರುಜುವಾತುಪಡಿಸಿದ್ದರಿಂದ ನ್ಯಾಯಾಧೀಶರು ಮೇಲಿನಂತೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದು, ಸದರಿ ದಂಡದ ಹಣದಲ್ಲಿ ನೊಂದ ಬಾಲಕಿಗೆ ರೂ.೫೦ಸಾವಿರ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ರೂ. ೪,೦೦,೦೦೦/- ಗಳ ಪರಿಹಾರ ನೀಡಬೇಕೆಂದು ಎಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇ? ಸರ್ಕಾರಿ ಅಭಿಯೋಜಕ(ಪೋಕ್ಸೋ) ವಿಜಯಕುಮಾರ ಶಂಕರಗೌಡ ಪಾಟೀಲ್ ಪ್ರಕರಣ ನಡೆಸಿ ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...