ಹಾವೇರಿ: ಬೋನೊಫೈಡ್ ಪ್ರಮಾಣ ಪತ್ರ ಮಂಜೂರಿಗೆ ಲಂಚ,ಉಪ ತಹಶೀಲ್ದಾರ ಬಂಧನ
ಹಾವೇರಿ:ಬೋನೋಫೈಡ್ ಪ್ರಮಾಣ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟು, ಲಂಚದ ಹಣ ಸ್ವೀಕರಿಸುತ್ತದ್ದ ವೇಳೆ ಬುಧವಾರ ಲೋಕಾಯುಕ್ತರು ದಾಳಿ ನಡೆಸಿ ಕರ್ಜಗಿ ಹೋಬಳಿ ಉಪತಹಶೀಲ್ದಾರ
ಸೋಮಪ್ಪ ಶಿವಪ್ಪ ನಾಯ್ಕರ್ ಅವರನ್ನು ಬಂಧಿಸಿದ್ದಾರೆ.
ಕಳ್ಳಿಹಾಳಗ್ರಾಮದ ಪಂಚಯ್ಯ ಹೊಳಬಸಯ್ಯ ಹಿರೇಮಠ ತಮ್ಮ ಸಹೋದರನ ಹೆಸರಿನಲ್ಲಿ ವ್ಯವಸಾಯ ಮಾಡಲು ಟ್ರ್ಯಾಕ್ಟರ ಖರೀದಿಸಿದ್ದು, ಸದರಿ ಟ್ರ್ಯಾಕ್ಟರಿಗೆ ಸಂಬಂಧಿಸಿದಂತೆ ಬೋನೋಫೈಡ್ ಪ್ರಮಾಣ ಪತ್ರ ಪಡೆಯುವ ಕುರಿತು ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಸದರಿ ಬೋನೊಫೈಡ್ ಪ್ರಮಾಣ ಪತ್ರ ನೀಡಲು ಕರ್ಜಗಿ ಹೋಬಳಿ ಉಪತಹಶೀಲ್ದಾರ ಸೋಮಪ್ಪ ನಾಯ್ಕರ ಬೋನೋಫೈಡ್ ಫೈಲನ್ನು
ವಿಲೇವಾರಿ ಮಾಡಲು ರೂ 5,000/- ಗಳಂತೆ ಬೇಡಿಕೆ ಇಟ್ಟು, ಜುಲೈ 24 ರಂದು ಬೋನೋಫೈಡ್ ಫೈಲನ್ನು ವಿಲೇವಾರಿ ಮಾಡಲು ಪ್ರಕರಣದ ಪಂಚಯ್ಯ ಹಿರೇಮಠ ರಿಂದ
ರೂ 2,000/- ಗಳನ್ನು ಪಡೆದುಕೊಳ್ಳುವಾಗ
ಯಶಸ್ವಿಯಾಗಿ ಕರ್ನಾಟಕ
ಲೋಕಾಯುಕ್ತ ಹಾವೇರಿಯ ಪೊಲೀಸ್ ರು ಟ್ರ್ಯಾಪ್ ಮಾಡಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತನನ್ನು ಕರ್ಜಗಿ ನಾಡಕಛೇರಿಯಲ್ಲಿ ದಸ್ತಗಿರಿ ಮಾಡಿದ್ದು, ಹಾವೇರಿ ನಗರದಲ್ಲಿನ ಆರೋಪಿತನ ಮನೆಯ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು ತನಿಖೆ ಮುಂದುವರೆದಿದೆ.