ಹಾವೇರಿ: ಮದುವೆಯಾಗದೇ ಮೋಸ ಮಾಡಿದ ಆರೋಪಿಗೆ ೧೦ ವರ್ಷಗಳ ಕಠಿಣ ಶಿಕ್ಷೆ

Date:

ಹಾವೇರಿ: ಮದುವೆಯಾಗದೇ ಮೋಸ ಮಾಡಿದ ಆರೋಪಿಗೆ ೧೦ ವರ್ಷಗಳ ಕಠಿಣ ಶಿಕ್ಷೆ
ಹಾವೇರಿ : ಭರಡಿ ಗ್ರಾಮದ ೨೦ ವರ್ಷದ ಮೃತ ಇಂದಿರಾ ಗುಡ್ಡಪ್ಪ ಶಿದ್ದಾಪುರ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ, ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಮೋಸಮಾಡಿ ಆತ್ಮಹತ್ಯೆಗೆ ಕಾರಣನಾದ ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಎಂಬಾತನಿಗೆ ೧೦ ವರ್ಷಗಳ ಕಠಿಣ ಸ್ವರೂಪದ ಕಾರಾಗೃಹ ಶಿಕ್ಷೆ ಹಾಗೂ ರೂ.೧೨ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
ಭರಡಿ ಗ್ರಾಮದ ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಹಾಗೂ ಮೃತ ಇಂದಿರಾ ಗುಡ್ಡಪ್ಪ ಶಿದ್ದಾಪುರ ಇವರು ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಜಾತ್ರೆ, ಪ್ರವಾಸ ಹೋಗುತ್ತಿದ್ದರು. ೧೭ ಮೇ ೨೦೨೦ ರಂದು ಬೆಳಗಿನ ಜಾವ ಮೃತ ಇಂದಿರಾ ವಾಂತಿ ಮಾಡಿಕೊಳ್ಳುತ್ತಿದ್ದಳು, ಮನೆಯವರು ಹತ್ತಿರಹೋಗಿ ನೋಡಲಾಗಿ ಬಾಯಿಯಿಂದ ವಿಷದ ವಾಸನೆ ಬರುತ್ತಿತ್ತು. ಈ ಕುರಿತು ವಿಚಾರಿಸಿದಾಗ ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಯುವತಿಗೆ ಫೋನ್ ಮಾಡಿ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದರಿಂದ ಮನಸ್ಸಿಗೆ ಬೇಜಾರಾಗಿ ಮನೆಯಲ್ಲಿದ್ದ ವಿಷಯಕಾರಿ ಎಣ್ಣೆಯನ್ನು ಕುಡಿದ್ದಾಗಿ ತಿಳಿಸಿದ್ದಳು. ಯುವತಿಯನ್ನು ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಯುವತಿ ೨೩ ಮೇ ೨೦೨೦ ರಂದು ಮೃತಪಟ್ಟಿದ್ದಳು. ಆರೋಪಿಯ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಪಿಎಸ್‌ಐ ಎಂ.ಇ.ಮಣ್ಣಣ್ಣವರ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಮೇಲೆ ಹೊರಿಸಲಾದ ಆಪಾದನೆಗಳಾದ ಕಲಂ:೩೦೬, ೪೧೭ ಭಾ.ದಂ.ಸಂ.ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನಲೆಯಲ್ಲಿ ನ್ಯಾಯಾಧೀಶರು ೧೦ ವರ್ಷಗಳ ಕಠಿಣ ಸ್ವರೂಪದ ಕಾರಾಗೃಹ ಶಿಕ್ಷೆ ಹಾಗೂ ರೂ.೧೨ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ: ಮದುವೆಯಾಗದೇ ಮೋಸ ಮಾಡಿದ ಆರೋಪಿಗೆ ೧೦ ವರ್ಷಗಳ ಕಠಿಣ ಶಿಕ್ಷೆ
ಹಾವೇರಿ : ಭರಡಿ ಗ್ರಾಮದ ೨೦ ವರ್ಷದ ಮೃತ ಇಂದಿರಾ ಗುಡ್ಡಪ್ಪ ಶಿದ್ದಾಪುರ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ, ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಮೋಸಮಾಡಿ ಆತ್ಮಹತ್ಯೆಗೆ ಕಾರಣನಾದ ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಎಂಬಾತನಿಗೆ ೧೦ ವರ್ಷಗಳ ಕಠಿಣ ಸ್ವರೂಪದ ಕಾರಾಗೃಹ ಶಿಕ್ಷೆ ಹಾಗೂ ರೂ.೧೨ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
ಭರಡಿ ಗ್ರಾಮದ ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಹಾಗೂ ಮೃತ ಇಂದಿರಾ ಗುಡ್ಡಪ್ಪ ಶಿದ್ದಾಪುರ ಇವರು ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಜಾತ್ರೆ, ಪ್ರವಾಸ ಹೋಗುತ್ತಿದ್ದರು. ೧೭ ಮೇ ೨೦೨೦ ರಂದು ಬೆಳಗಿನ ಜಾವ ಮೃತ ಇಂದಿರಾ ವಾಂತಿ ಮಾಡಿಕೊಳ್ಳುತ್ತಿದ್ದಳು, ಮನೆಯವರು ಹತ್ತಿರಹೋಗಿ ನೋಡಲಾಗಿ ಬಾಯಿಯಿಂದ ವಿಷದ ವಾಸನೆ ಬರುತ್ತಿತ್ತು. ಈ ಕುರಿತು ವಿಚಾರಿಸಿದಾಗ ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಯುವತಿಗೆ ಫೋನ್ ಮಾಡಿ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದರಿಂದ ಮನಸ್ಸಿಗೆ ಬೇಜಾರಾಗಿ ಮನೆಯಲ್ಲಿದ್ದ ವಿಷಯಕಾರಿ ಎಣ್ಣೆಯನ್ನು ಕುಡಿದ್ದಾಗಿ ತಿಳಿಸಿದ್ದಳು. ಯುವತಿಯನ್ನು ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಯುವತಿ ೨೩ ಮೇ ೨೦೨೦ ರಂದು ಮೃತಪಟ್ಟಿದ್ದಳು. ಆರೋಪಿಯ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಪಿಎಸ್‌ಐ ಎಂ.ಇ.ಮಣ್ಣಣ್ಣವರ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಮಂಜುನಾಥ ನಿಂಗಪ್ಪ ಲಿಂಗದಹಳ್ಳಿ ಮೇಲೆ ಹೊರಿಸಲಾದ ಆಪಾದನೆಗಳಾದ ಕಲಂ:೩೦೬, ೪೧೭ ಭಾ.ದಂ.ಸಂ.ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನಲೆಯಲ್ಲಿ ನ್ಯಾಯಾಧೀಶರು ೧೦ ವರ್ಷಗಳ ಕಠಿಣ ಸ್ವರೂಪದ ಕಾರಾಗೃಹ ಶಿಕ್ಷೆ ಹಾಗೂ ರೂ.೧೨ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...