ಹಾವೇರಿ: ಯೂನಿಯನ್ ಬ್ಯಾಂಕ್ನಲ್ಲಿ ಕೋಟ್ಯಾಂತರ ಹಣ, ಚಿನ್ನಾಭರಣ ನಾಪತ್ತೆ,
ಇಂಚಾರ್ಜ್ ಮ್ಯಾನೇಜರ್ ಅರ್ಚನಾ ಬೆಟಗೇರಿ ಶಾಮೀಲು ಆರೋಪ
ಹಾವೇರಿ: ಯೂನಿಯನ್ ಬ್ಯಾಂಕ್ನಲ್ಲಿದ್ದ ಖಾತೆದಾರರ ಕೋಟಿ ಕೋಟಿ ಹಣ, ಚಿನ್ನಾಭರಣಗಳುನಾಪತ್ತೆಯಾಗಿರುವ ಘಟನೆ ಹಾವೆರಿ ತಾಲೂಕಿನ ಕುರುಬಗೊಂಡಗ್ರಾಮದ ಯೂನಿಯನ್ ಬ್ಯಾಂಕ್ನಲ್ಲಿ ನಡೆದಿದೆ. ಈಬಗ್ಗೆ ನಗದು ಹಾಗೂ , ಚಿನ್ನಾಭರಣ ಕಳೆದುಕೊಂಡಿರುವ ಗ್ರಾಹಕರು ಯುನಿಯನ್ ಬ್ಯಾಂಕಿನ ಇಂಚಾರ್ಜ್ ಮ್ಯಾನೇಜರ್ ಅರ್ಚನಾ ಬೆಟಗೇರಿ ಅವರು ಶಾಮೀಲಾಗಿದ್ದಾರೆಂದು ಆರೋಪಮಾಡಿದ್ದಾರೆ.
ಬ್ಯಾಂಕಿನಲ್ಲಿ ಯಾರದೊ ಅಕೌಂಟ್ ಹಣ, ಚಿನ್ನಾಭರಣ ಇನ್ನ್ಯಾರದ್ದೊ ಅಕೌಂಟ್ಗೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕಿನಲ್ಲಿನ ಗ್ರಾಹಕರ ಅಕೌಂಟ್ನಲ್ಲಿದ್ದ ಲಕ್ಷ ಲಕ್ಷ ಹಣ, ಚಿನ್ನಾಭರಣಗಳನ್ನು ಕಾನೂನು ಬಾಹಿರವಾಗಿ ಟ್ರಾನ್ಸಪರ್ಮಾಡಲಾಗಿದ್ದು, ಯೂನಿಯನ್ ಬ್ಯಾಂಕ್ನ ಅವ್ಯವಹಾರದ ಬೃಹತ್ ಜಾಲ ಪತ್ತೆ ಇರುವ ಶಂಕೆ ವ್ಯಕ್ತವಾಗಿದ್ದು. ಇದರಹಿಂದ ಯೂನಿಯನ್ ಬ್ಯಾಂಕ್ ಪ್ರಭಾರಿ ಮ್ಯಾನೇಜರ್ ಅರ್ಚನಾ ಬೆಟಗೇರಿ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.
ಮಂಗಳವಾರ ಈಘಟನೆ ಬೆಳಕಿಗೆ ಬಂದಿದ್ದು, ಈಘಟನೆ ಹೊರಬರುವ ಮುನ್ನವೇ ಕಳೆದ ಒಂದು ವಾರದ ಹಿಂದೆ ಅರ್ಚನಾ ಬೆಟಗೇರಿ ಅವರನ್ನು ಏಕಾಏಕಿ ಕುರುಬಗೊಂಡಗ್ರಾಮದಿಂದ ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿರುವುದು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ.
ಕೃಷಿ ಸಾಲ,ಬೆಳೆ ಸಾಲ,ಹಣ ಹಾಗೂ ಗೋಲ್ಡ್ ಲೋನ್ ದುಡ್ಡು ಎಸ್ಕೇಪ್ ಆರೋಪ
ಕಾನೂನು ಬಾಹಿರವಾಗಿ ಹಣ ವರ್ಗಾವಣೆಮಾಡಲಾಗಿದ್ದು, ನಗದು, ಚಿನ್ನಾಭರಣ ಕಳೆದುಕೊಂಡು ಮೋಸಕ್ಕೊಳಗಾದವರು ಮಂಗಳವಾರ ಬ್ಯಾಂಕಿನ ಮುಂದೆ ಗಲಾಟೆಮಾಡಿದ್ದಾರೆ. ನಮಗೆ ನ್ಯಾಯ ಬೇಕು, ಬ್ಯಾಂಕ್ ನಂಬಿ ನಮ್ಮ ದುಡಿಮೆಯ ಹಣ, ಚಿನ್ನಾಭರಣಗಳನ್ನು ನಮಗೆ ಕೊಡಬೇಕೆಂದು ಪಟ್ಟು ಹಿಡಿದು ಬ್ಯಾಂಕ್ ಇಂಚಾರ್ಜ್ ಮ್ಯಾನೇಜರ್ ಅರ್ಚನಾ ಬೆಟಗೇರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ನ ಹೊಸ ಮ್ಯಾನೇಜರ್ಗೆ ಹಣ, ಚಿನ್ನಾಭರಣಗಳ ಆಕ್ರಮ ವರ್ಗಾವಣೆಮಾಡಿರುವ ಬಗ್ಗೆ ಪ್ರಶ್ನೆ ಮಾಡಿದ ಸ್ತ್ರೀಸಂಘದವರು, ವೃದ್ಧರು, ರೈತರು ಹಾಗೂ ಮಹಿಳೆಯರು ತಮ್ಮ ಮೂಲ ಖಾತೆಯಿಂದ ೨ ಲಕ್ಷ,೩ ಲಕ್ಷ, ೬ ಲಕ್ಷ, ೧೦ ಲಕ್ಷ ಎಂಬಂತೆ ನಕಲಿ ಅಕೌಂಟ್ಗೆ ಹಣ ವರ್ಗಾವಣೆಮಾಡಲಾಗಿದೆ. ನಮ್ಮ ಯಾರಿಗೂ ಯಾವ ಮಾಹಿತಿ ಹಾಗೂ ಸುಳಿವು ನೀಡದೆ ದುರುಳರುಹಣ ದೋಚಿದ್ದಾರೆ ಎಂದು, ಇದಕ್ಕೆ ಬೆಟಗೇರಿ ಮೆಡಮ್ ಕಾರಣ ಎಂದು ಹಣ, ಚಿನ್ನಾಭರಣ ಕಳೆದುಕೊಂಡು ಖಾತೆದಾರರ ದೂರಿದರು
ಮುತ್ತಣ್ಣ ಎನ್ನುವವರು ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ಶಿವಕುಮಾರ್ ಎನ್ನುವವರು ೧೦ ಲಕ್ಷ ಹಣ ಕಳಕೊಂಡಿದ್ದಾರೆ. ಚಂದ್ರು ಎನ್ನುವವರು ೬ ಲಕ್ಷ ಹಣ ಕಳಕೊಂಡಿದ್ದಾರೆ. ಭೂಮಿಕಾ ಸ್ತ್ರೀ ಶಕ್ತಿ ಸಂಘದ ಲತಾ, ಸ್ಥಳೀಯ ಮೊಹಮ್ಮಗೌಸ್ ಹಣಕಳೆದುಕೊಂಡಿದ್ದ, ಯುನಿಯನ್ ಬ್ಯಾಂಕಿನಲ್ಲಿ ಖಾತೆದಾರರ ಕೋಟ್ಯಾಂತರ ಹಣ, ಚಿನ್ನಾಭರಣ ನಾಪತ್ತೆಯಾಗಿರುವ ಆರೋಪಗಳು ಕೇಳಿಬಂದಿದ್ದು, ಈ ಹಗರಣದ ಬಗ್ಗೆ ಬ್ಯಾಂಕಿನ ಮೇಲಾಧಿಕಾರಿಗಳವರೆಗೆ ದೂರು ಹೋಗಿದ್ದು, ಈಬಗ್ಗೆ ಸಮಗ್ರ ತನಿಖೆ ನಡೆದರೆ ಬ್ಯಾಂಕಿನಲ್ಲಿ ನಡೆದಿರುವ ಚಿನ್ನಾಭರಣ ಹಾಗೂ ಹಣದ ಆಕ್ರಮ ವರ್ಗಾವಣೆಯ ಹಗರಣ ಬಯಲಿಗೆ ಬರುತ್ತದೆ.