ಹಾವೇರಿ ವಿ ವಿ ಬಂದ್ ಆಗಲ್ಲ-ಆಂತಕ ಬೇಡ:ಶಾಸಕ ಬಸವರಾಜ ಶಿವಣ್ಣನವರ

Date:

ಹಾವೇರಿ ವಿ ವಿ ಬಂದ್ ಆಗಲ್ಲ-ಆಂತಕ ಬೇಡ:ಶಾಸಕ ಬಸವರಾಜ ಶಿವಣ್ಣನವರ
ಹಾವೇರಿ:ಹಾವೇರಿ ವಿಶ್ವ ವಿದ್ಯಾಲಯ ಬಂದ್ ಆಗಲ್ಲ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆತಂಕ ಪಡುವಂತಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಬಸವರಾಜ ಶಿವಣ್ಣನವರ ಹೇಳಿದರು.ಶನಿವಾರ  ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಹಾವೇರಿ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡದರು.
ಈ ವಿ ವಿ ಉಳಿವಿಗೆ  ಕುಲಪತಿಗಳು ಶ್ರಮಿಸುತ್ತಿದ್ದಾರೆ,  ಹಾಗಾಗಿ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಶಾಸಕರು    ಈ ವಿ ವಿ ಉಳಿಸಿ ಬೆಳೆಸಲು ಸದಾ ನಿಮ್ಮೊಂದಿಗೆ ಇದ್ದೇವೆ ಎಂದ ಅವರು  ಈ ವಿ ವಿಗೆ ವರ್ಷ ಕ್ಕೆ ಬೇಕಾಗುವ  ಅಗತ್ಯ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.  ರಾಜ್ಯದಲ್ಲೇ ಹಾವೇರಿ ವಿ ವಿ  ಉತ್ತಮ ವಿ ವಿ ಆಗಬೇಕು ಎನ್ನುವುದು ನನ್ನ ಸಂಕಲ್ಪ ಎಂದು ಹೇಳಿದರು.
ವಿ ವಿ, ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ಇಂಜನೀಯ ರಿಂಗ್ ಕಾಲೇಜ್ ಹಾಗೂ ಕೃಷಿ  ವಿಜ್ಞಾನ ಕೇಂದ್ರ ನನ್ನ ಕ್ಷೆತ್ರ ವ್ಯಾಪ್ತಿಗೆ  ಬರುವುದು ನನ್ನ ಸೌಭಾಗ್ಯ. ಈ ಶಿಕ್ಷಣ ಕೇಂದ್ರಗಳ  ಬೆಳವಣಿಗೆಗೆ ಸದಾ ಸಿದ್ದನ್ನಾಗಿರುವೆ.ದೇಶದ ಯಾವುದೇ ಭಾಗದಲ್ಲಿ ಇಲ್ಲದ  ತೋಟಗಾರಿಕೆ  ಅಭಿಯಾoತ್ರಿಕ ಆಹಾರ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯ ನಮ್ಮ ಜಿಲ್ಲೆಯಲ್ಲಿದೆ. ಕಳೆದ ಮೂರು ವರ್ಷ ಗಳಿಂದ ಕಾರ್ಯ ನಿರ್ವಹಿಸುತ್ತಿದೆ. ರಸ್ತೆ, ಚರಂಡಿ ಸೇರಿದಂತೆ  ಮೂಲಭೂತ ಸೌಕರ್ಯ ಕಾಮಗಾರಿ ಪ್ರಗತಿ ಯಲ್ಲಿದೆ.   ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕೆ  ಸಚಿವರಿಂದ ಶೀಘ್ರದಲ್ಲೆ ಉದ್ಘಾಟನೆ ಮಾಡಿಸಲಾಗುವುದು ಎಂದು ಶಿವಣ್ಣನವರ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಆಲೂರ ಮಾತನಾಡಿ, ಪ. ಜಾ., ಪ. ಪಂ., ಬುಡಕಟ್ಟು ಜನಾಂಗ, ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಳು ವಿ ವಿ ಗೆ ಬರುತ್ತಾರೆ. ಅವರಿಗೆ ಹೊರೆಯಗದಂತೆ ಶಿಕ್ಷಣ ನೀಡಲಾಗುತ್ತಿದೆ, ವಿ ವಿ ಗಳು ಸುಭಿಕ್ಷ ಸಮಾಜ ನಿರ್ಮಾಣದ ಟಂಕ ಸಾಲಿಗಳು ಇದ್ದಂತೆ. ಚಲಾವಣೆ ನಾಣ್ಯ ಗಳ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರಿಸಬೇಕು. ಈ ವಿ ವಿ ಯಿಂದ ೧೦ ವಿದ್ಯಾರ್ಥಿಗಳು  ವಿದೇಶದಲ್ಲಿ ವ್ಯಾಸಂಗ ಮಾಡುವಂತೆ ತಯಾರು ಮಾಡಬೇಕು. ಈ ವಿ ವಿ   ಅಂತ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಇಂದು ಭೋತ್ಪಾದನೆ, ದುಷ್ಟ ಶಕ್ತಿಗಳ ಅಟ್ಟಹಾಸ, ಸ್ವಾರ್ಥ ಜನರ ಬದುಕು ತಲ್ಲಣ ಗೊಳಿಸಿದೆ. ಯುವ ಜನಾಂಗ ಆಧುನಿಕರಣÀಕ್ಕೆ ಮಾರುಹೋಗಿ ಪಶ್ಚಮಾತ್ಯರ ಅನುಕರಣೆ ಮಾಡುತ್ತಿರುವುದು ವಿಷಾದಕಾರ ಸಂಗತಿಯಾಗಿದೆ.  ವಿದ್ಯಾರ್ಥಿಗಳು ಜೀವನದಲ್ಲಿ, ಶಿಸ್ತು, ಸಂಯಮ, ಮೌಲ್ಯಗಳನ್ನು ಅಳವಡಿಸಿ ಕೊಳ್ಳಬೇಕು.  ಮೂಲ ಸೌಕರ್ಯ ಇಲ್ಲವೆಂದು ಕಲಿಕೆಯಲ್ಲಿ ಹಿoದೆ ಉಳಿಯಬಾರದು. ಇರುವ ಅವಕಾಶಗಳನ್ನು ಬಳಸಿಕೊಂಡು ಕಲಿಕೆ ಯಲ್ಲಿ ಸಾಧನೆ ಮಾಡಬೇಕು ಎಂದ ಅವರು ಹಾವೇರಿ ವಿ ವಿ ಯಲ್ಲಿ  ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುತ್ತಿರುವದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರೀಕರಾಗಿ ಬಾಳಬೇಕು. ವಿ ವಿ ಗಳು ಉತ್ತಮ ಯುವ ಸಮೂಹ ತಯಾರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಹೆಚ್.ಜಂಗಮಶೆಟ್ಟಿ  ಹಾವೇರಿ ವಿಶ್ವವಿದ್ಯಾಲಯ ಬೆಳವಣಿಗೆ ಕುರಿತು ಮಾತನಾಡಿದರು.
ನಾವೀನ್ಯತೆ ಸಲಹೆಗಾರ ರಾಜಶೇಖರ ಹಿರೇಮಠ ಹಾಗೂ ಅಂತರಾಷ್ಟ್ರೀಯ ಶೈಕ್ಷಣಿಕ ಸಲಹೆಗಾರ ಡಾ.ಶಿವಾನಂದ ಉತ್ಲಾಸರ ಹಾಗೂ ಕುಲಸಚಿವರಾದ (ಮೌಲ್ಯಮಾಪನ)  ಪ್ರೊ. ರೇಣುಕಾ ಮೇಟಿ, ಇತರರು  ಉಪಸ್ಥಿತರಿದ್ದರು. ಕುಲಸಚಿವ ಪ್ರೊ. ಎಸ್. ಬಿ. ಬಾಗಲಕೋಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ವಿ ವಿ ಬಂದ್ ಆಗಲ್ಲ-ಆಂತಕ ಬೇಡ:ಶಾಸಕ ಬಸವರಾಜ ಶಿವಣ್ಣನವರ
ಹಾವೇರಿ:ಹಾವೇರಿ ವಿಶ್ವ ವಿದ್ಯಾಲಯ ಬಂದ್ ಆಗಲ್ಲ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆತಂಕ ಪಡುವಂತಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಬಸವರಾಜ ಶಿವಣ್ಣನವರ ಹೇಳಿದರು.ಶನಿವಾರ  ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಹಾವೇರಿ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡದರು.
ಈ ವಿ ವಿ ಉಳಿವಿಗೆ  ಕುಲಪತಿಗಳು ಶ್ರಮಿಸುತ್ತಿದ್ದಾರೆ,  ಹಾಗಾಗಿ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಶಾಸಕರು    ಈ ವಿ ವಿ ಉಳಿಸಿ ಬೆಳೆಸಲು ಸದಾ ನಿಮ್ಮೊಂದಿಗೆ ಇದ್ದೇವೆ ಎಂದ ಅವರು  ಈ ವಿ ವಿಗೆ ವರ್ಷ ಕ್ಕೆ ಬೇಕಾಗುವ  ಅಗತ್ಯ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.  ರಾಜ್ಯದಲ್ಲೇ ಹಾವೇರಿ ವಿ ವಿ  ಉತ್ತಮ ವಿ ವಿ ಆಗಬೇಕು ಎನ್ನುವುದು ನನ್ನ ಸಂಕಲ್ಪ ಎಂದು ಹೇಳಿದರು.
ವಿ ವಿ, ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ಇಂಜನೀಯ ರಿಂಗ್ ಕಾಲೇಜ್ ಹಾಗೂ ಕೃಷಿ  ವಿಜ್ಞಾನ ಕೇಂದ್ರ ನನ್ನ ಕ್ಷೆತ್ರ ವ್ಯಾಪ್ತಿಗೆ  ಬರುವುದು ನನ್ನ ಸೌಭಾಗ್ಯ. ಈ ಶಿಕ್ಷಣ ಕೇಂದ್ರಗಳ  ಬೆಳವಣಿಗೆಗೆ ಸದಾ ಸಿದ್ದನ್ನಾಗಿರುವೆ.ದೇಶದ ಯಾವುದೇ ಭಾಗದಲ್ಲಿ ಇಲ್ಲದ  ತೋಟಗಾರಿಕೆ  ಅಭಿಯಾoತ್ರಿಕ ಆಹಾರ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯ ನಮ್ಮ ಜಿಲ್ಲೆಯಲ್ಲಿದೆ. ಕಳೆದ ಮೂರು ವರ್ಷ ಗಳಿಂದ ಕಾರ್ಯ ನಿರ್ವಹಿಸುತ್ತಿದೆ. ರಸ್ತೆ, ಚರಂಡಿ ಸೇರಿದಂತೆ  ಮೂಲಭೂತ ಸೌಕರ್ಯ ಕಾಮಗಾರಿ ಪ್ರಗತಿ ಯಲ್ಲಿದೆ.   ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕೆ  ಸಚಿವರಿಂದ ಶೀಘ್ರದಲ್ಲೆ ಉದ್ಘಾಟನೆ ಮಾಡಿಸಲಾಗುವುದು ಎಂದು ಶಿವಣ್ಣನವರ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಆಲೂರ ಮಾತನಾಡಿ, ಪ. ಜಾ., ಪ. ಪಂ., ಬುಡಕಟ್ಟು ಜನಾಂಗ, ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಳು ವಿ ವಿ ಗೆ ಬರುತ್ತಾರೆ. ಅವರಿಗೆ ಹೊರೆಯಗದಂತೆ ಶಿಕ್ಷಣ ನೀಡಲಾಗುತ್ತಿದೆ, ವಿ ವಿ ಗಳು ಸುಭಿಕ್ಷ ಸಮಾಜ ನಿರ್ಮಾಣದ ಟಂಕ ಸಾಲಿಗಳು ಇದ್ದಂತೆ. ಚಲಾವಣೆ ನಾಣ್ಯ ಗಳ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರಿಸಬೇಕು. ಈ ವಿ ವಿ ಯಿಂದ ೧೦ ವಿದ್ಯಾರ್ಥಿಗಳು  ವಿದೇಶದಲ್ಲಿ ವ್ಯಾಸಂಗ ಮಾಡುವಂತೆ ತಯಾರು ಮಾಡಬೇಕು. ಈ ವಿ ವಿ   ಅಂತ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಇಂದು ಭೋತ್ಪಾದನೆ, ದುಷ್ಟ ಶಕ್ತಿಗಳ ಅಟ್ಟಹಾಸ, ಸ್ವಾರ್ಥ ಜನರ ಬದುಕು ತಲ್ಲಣ ಗೊಳಿಸಿದೆ. ಯುವ ಜನಾಂಗ ಆಧುನಿಕರಣÀಕ್ಕೆ ಮಾರುಹೋಗಿ ಪಶ್ಚಮಾತ್ಯರ ಅನುಕರಣೆ ಮಾಡುತ್ತಿರುವುದು ವಿಷಾದಕಾರ ಸಂಗತಿಯಾಗಿದೆ.  ವಿದ್ಯಾರ್ಥಿಗಳು ಜೀವನದಲ್ಲಿ, ಶಿಸ್ತು, ಸಂಯಮ, ಮೌಲ್ಯಗಳನ್ನು ಅಳವಡಿಸಿ ಕೊಳ್ಳಬೇಕು.  ಮೂಲ ಸೌಕರ್ಯ ಇಲ್ಲವೆಂದು ಕಲಿಕೆಯಲ್ಲಿ ಹಿoದೆ ಉಳಿಯಬಾರದು. ಇರುವ ಅವಕಾಶಗಳನ್ನು ಬಳಸಿಕೊಂಡು ಕಲಿಕೆ ಯಲ್ಲಿ ಸಾಧನೆ ಮಾಡಬೇಕು ಎಂದ ಅವರು ಹಾವೇರಿ ವಿ ವಿ ಯಲ್ಲಿ  ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುತ್ತಿರುವದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರೀಕರಾಗಿ ಬಾಳಬೇಕು. ವಿ ವಿ ಗಳು ಉತ್ತಮ ಯುವ ಸಮೂಹ ತಯಾರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಹೆಚ್.ಜಂಗಮಶೆಟ್ಟಿ  ಹಾವೇರಿ ವಿಶ್ವವಿದ್ಯಾಲಯ ಬೆಳವಣಿಗೆ ಕುರಿತು ಮಾತನಾಡಿದರು.
ನಾವೀನ್ಯತೆ ಸಲಹೆಗಾರ ರಾಜಶೇಖರ ಹಿರೇಮಠ ಹಾಗೂ ಅಂತರಾಷ್ಟ್ರೀಯ ಶೈಕ್ಷಣಿಕ ಸಲಹೆಗಾರ ಡಾ.ಶಿವಾನಂದ ಉತ್ಲಾಸರ ಹಾಗೂ ಕುಲಸಚಿವರಾದ (ಮೌಲ್ಯಮಾಪನ)  ಪ್ರೊ. ರೇಣುಕಾ ಮೇಟಿ, ಇತರರು  ಉಪಸ್ಥಿತರಿದ್ದರು. ಕುಲಸಚಿವ ಪ್ರೊ. ಎಸ್. ಬಿ. ಬಾಗಲಕೋಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...