ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಯಿಂದ “ಬಸವರಾಜಪ್ಪ  ಬರೇಗಾರ ಡಿಸ್‌ಮಿಸ್”!

Date:

ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಯಿಂದ “ಬಸವರಾಜಪ್ಪ  ಬರೇಗಾರ ಡಿಸ್‌ಮಿಸ್”!
ಹಾವೇರಿ: ಇಲ್ಲಿನ ತೋಟಗಾರಿಕಾ ಇಲಾಖೆಯಲ್ಲಿ ಬಹಳ ವರ್ಷಗಳವರಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಯಲ್ಲಿದ್ದ ಬಸವರಾಜಪ್ಪ  ಬರೇಗಾರ ಅವರನ್ನು ಸರ್ಕಾರಕ್ಕೆ ವಂಚನೆ ಮಾಡಿರುವ ಪ್ರಕರಣದ ಹಿನ್ನಲೆಯಲ್ಲಿ ಡಿಸ್‌ಮಿಸ್ ಮಾಡಿ ತೋಟಗಾರಿಕೆಯ ನಿರ್ದೇಶಕರು ನೇಮಕಾತಿ ಪ್ರಾಧಿಕಾರ ಇವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.
ಬಸವರಾಜಪ್ಪ ನಿಂಗಪ್ಪ ಬರೇಗಾರ ಸಹಾಯಕ ತೋಟಗಾರಿಕೆ ಅಧಿಕಾರಿ ಎಂದು  ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು (ಜಿ.ಪಂ) ಹಾವೇರಿ ಅಧೀನ ಕರ್ತವ್ಯ ನಿರ್ವಹಿಸುತ್ತಿದ್ದರು.  ಪ್ರಸ್ತುತ  ಇವರು ದಿನಗೂಲಿ ನೌಕರಾಗಿ ಸೇವೆಯಲ್ಲಿದ್ದುಕೊಂಡು  ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಎಂದು ಸೇರಿಕೊಂಡ ಬಗ್ಗೆ, ಮುಂಬಡ್ತಿಯ ಬಗ್ಗೆ ದೂರುಗಳು ದಾಖಲಾಗಿದ್ದವು.
ಬಸವರಾಜಪ್ಪ  ಬರೇಗಾರ ಅವರನ್ನು ತೋಟಗಾರ ಹುದ್ದೆಯಲ್ಲಿ ನಿಯಮಬಾಹಿರವಾಗಿ ಸಕ್ರಮಗೊಳಿಸಲಾಗಿದೆ ಎಂದು ಇವರನ್ನು ಸೇವೆಯಿಂದ ವಜಾಗೊಳಿಸಲು  ದೂರರ್ಜಿಗಳು ಸಲ್ಲಿಕೆಯಾಗಿದ್ದವು. ಈ ದೂರರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸಲು ಸರ್ಕಾರದಿಂದ ಸೂಚಿಸಿಲಾಗಿತ್ತು. ಆದರಂತೆ ದೊರರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿ ವರದಿ ನೀಡಲು ವಿಭಾಗೀಯ ಜಂಟಿ ನಿರ್ದೇಶಕರಿಗೆ ನಿರ್ದೇಶನಾಲಯದಿಂದ ಸೂಚಿಸಲಾಗಿತ್ತು.
ದೂರರ್ಜಿಯಲ್ಲಿನ ಇತರ ಅಂಶಗಳಿಗೆ ಸಂಬಂಧಿಸಿದಂತೆ ಬಸವರಾಜಪ್ಪ ನಿಂಗಪ್ಪ ಬರೇಗಾರ ಇವರನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಯಿಂದ ಬಿಡುಗಡೆಗೊಳಿಸಿ, ಆರ್ಥಿಕ ವ್ಯವಹಾರಗಳಿಲ್ಲದ ಜಿಲ್ಲೆಯ ಹೊರಗಿನ ಕಛೇರಿಯ ಹುದ್ದೆಗೆ ವರ್ಗಾವಣೆಗೊಳಿಸುವ ಶಿಫಾರಸಿ ನೊಂದಿಗೆ ಮತ್ತು ತೋಟಗಾರರಾಗಿ ಸೇವೆಯಲ್ಲಿ ಸಕ್ರಮಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ದಿನಗೂಲಿ ನೌಕರರಾಗಿ ಸೇವೆಯಿಂದ ಸಕ್ರಮಗೊಳ್ಳುವ ಪೂರ್ವದ ಮತ್ತು ನಂತರದ ಅವಧಿಯ ಪ್ರಕ್ರಿಯಗಳ ದಾಖಲೆಗಳನ್ನು ನಿರ್ದೇಶನಾಲಯದ ಹಂತದಲಿ ವಿವರವಾಗಿ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಭಿಪ್ರಾಯಿಸಿ ವಿಭಾಗೀಯ ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸಿರುತ್ತಾರೆ.
ಬರೇಗಾರ ಅವರು ೧೦ ವರ್ಷ ಪೂರೈಸಿದ ದಿನಗೂಲಿ ನೌಕರರೆಂದು ತೋಟಗಾರ ಹುದ್ದೆಯಲ್ಲಿ ಸಕ್ರಮಗೊಳಿಸಿರುವುದು ನಿಯಮಬಾಹಿರವೆಂದು, ಸತ್ಯಾಂಶವನ್ನು ಮರೆಮಾಚಿ ಅಕ್ರಮವಾಗಿ ನೇಮಕಗೊಂಡಿರುವ ಇವರನ್ನು ಸೇವೆಯಿಂದ ವಜಾಗೊಳಿಸಲು ಮೊರರ್ಜಿಗಳು ಸಲ್ಲಿಕೆಯಾಗಿರುತ್ತವೆ. ಈ ಸಂಬಂಧ ಸದರಿಯವರನ್ನು ತೋಟಗಾರರ ಹುದ್ದೆಯಲಿ ಸಕ್ರಮಗೊಳಿಸಿದ ವಾಖಲೆಗಳನ್ನು ಪರಿಶೀಲಿಸಲಾಗಿ ದೂರರ್ಜಿಯಲ್ಲಿನ ಅಂಶಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಿರುತ್ತವೆ. ಆದ್ದರಿಂದ ಇವರನ್ನು ತೋಟಿಗಾರ ಹುದ್ದೆಯಲ್ಲಿ ಸಕ್ರಮಗೊಳಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲು ನಿರ್ದೇಶನಾಲಯದಲ್ಲಿ ಅಂತರಿಕ ಸಮಿತಿಯನ್ನು ರಚಿಸಲಾಗಿತ್ತು.ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ಬಸವರಾಜಪ್ಪ  ಬರೆಗಾರ ಇವರನ್ನು ಸಕ್ರಮಗೊಳಿಸಿರುವುದು ಧೃಢಪಟ್ಟಿರುತ್ತದೆ.
ಈ ಬಗ್ಗೆ ಲಿಖಿತ ವಿವರಣೆ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಲು  ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ  ಬರೇಗಾರ ಇವರಿಗೆ  ಸೂಚಿಸಲಾಗಿತ್ತು. ಆದರೆ  ಇವರು  ನೀಡಿರುವ  ಹೇಳಿಕೆ ಮತ್ತು ವಿವರಗಳನ್ನು ಪರಿಶೀಲಿಸಲಾಗಿ ಇವರ ವಿವರಣೆಗಳಿಗೆ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಇಲಾಖೆಯ ದಾಖಲೆಗಳ  ಅದೇಶವನ್ವಯ ಸಕ್ರಮಾತಿಗೆ ಆರ್ಹತೆ ಪಡೆಯಲು ಪೂರೈಸಬೇಕಾದ ೧೦ ವರ್ಷಗಳ ದಿನಗೂಲಿ ಸೇವೆ ಸಲ್ಲಿಸದಿರುವುದು ಮತ್ತು ದಿನಗೂಲಿ ಸೇವೆ ಸಲ್ಲಿಸಿದೆ ಎಂದು ಪರಿಗಣಿಸಲಾದ ೧೯೮೧ ರಿಂದ ೧೯೯೧ ರ ಅವಧಿಯಲ್ಲಿ. ಇವರು ಇದೇ ಅವಧಿಯಲ್ಲಿ ರೆಗ್ಯೂಲರ್ ವಿದ್ಯಾರ್ಥಿಯಾಗಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮಾಡಿದ್ದು, ಇವರು ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿರುವುದಿಲ್ಲ. ಸೇವೆಯಲ್ಲಿ ಸಕ್ರಮಗೊಂಡಿರುವುದು  ಮತ್ತು ನಿಬಂಧನಗಳ ಉಲ್ಲಂಘನೆಯಿಂದಾಗಿದ್ದು, ತಪ್ಪು ಮಾಹಿತಿ ನೀಡಿ ಮತ್ತು ಸತ್ಯಾಂಶವನ್ನು ಮರೆಮಾಡಿರುವುದು ದೃಢಪಟ್ಟಿತ್ತು.
ಬರೇಗಾರ ೧೯೮೧ ರಿಂದ ೧೯೯೧ ನಡುವಿನ ೧೦ ವರ್ಷಗಳ ಅವಧಿಯಲ್ಲಿ ನಿರಂತರವಲ್ಲದ ೧೭ ತಿಂಗಳು ಮಾತ್ರ (ಒಟ್ಟಾರೆ ಕೇವಲ ೪೧೬ ದಿನಗಳು ಮಾತ್ರ) ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿರುವ ಈ ಪ್ರಕರಣದಲ್ಲಿ ಷರತ್ತುಗಳು ಪೂರೈಸದಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ಸಕ್ರಮಾತಿಗೊಳಿಸಿರುವು ಕಂಡು ಬಂದಿರುತ್ತದೆ.  ನಿಯಮಗಳನ್ನು ಉಲ್ಲಂಘಿಸಿ ಸಕ್ರಮಾತಿಗೊಂಡಿರುವ ಪ್ರಕರಣವಾಗಿರುವುದರಿಂದ ನೇಮಕಾತಿಯನ್ನು ಅಕ್ರಮವೆಂದು ಪರಿಗಣಿಸಿ  ಬಸವರಾಜಪ್ಪ  ಬರೇಗಾರ ಅವರನ್ನು  ಸಹಾಯಕ ತೋಟಗಾರಿಕೆ ಅಧಿಕಾರಿಹುದ್ದೆಯಿಂದ ತೆಗೆದು ಹಾಕಿರುತ್ತೇನೆಂದು  ತೋಟಗಾರಿಕೆಯ ನಿರ್ದೇಶಕರು ಹಾಗೂ ನೇಮಕಾತಿ ಪ್ರಾಧಿಕಾರ ಇವರು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಯಿಂದ “ಬಸವರಾಜಪ್ಪ  ಬರೇಗಾರ ಡಿಸ್‌ಮಿಸ್”!
ಹಾವೇರಿ: ಇಲ್ಲಿನ ತೋಟಗಾರಿಕಾ ಇಲಾಖೆಯಲ್ಲಿ ಬಹಳ ವರ್ಷಗಳವರಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಯಲ್ಲಿದ್ದ ಬಸವರಾಜಪ್ಪ  ಬರೇಗಾರ ಅವರನ್ನು ಸರ್ಕಾರಕ್ಕೆ ವಂಚನೆ ಮಾಡಿರುವ ಪ್ರಕರಣದ ಹಿನ್ನಲೆಯಲ್ಲಿ ಡಿಸ್‌ಮಿಸ್ ಮಾಡಿ ತೋಟಗಾರಿಕೆಯ ನಿರ್ದೇಶಕರು ನೇಮಕಾತಿ ಪ್ರಾಧಿಕಾರ ಇವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.
ಬಸವರಾಜಪ್ಪ ನಿಂಗಪ್ಪ ಬರೇಗಾರ ಸಹಾಯಕ ತೋಟಗಾರಿಕೆ ಅಧಿಕಾರಿ ಎಂದು  ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು (ಜಿ.ಪಂ) ಹಾವೇರಿ ಅಧೀನ ಕರ್ತವ್ಯ ನಿರ್ವಹಿಸುತ್ತಿದ್ದರು.  ಪ್ರಸ್ತುತ  ಇವರು ದಿನಗೂಲಿ ನೌಕರಾಗಿ ಸೇವೆಯಲ್ಲಿದ್ದುಕೊಂಡು  ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಎಂದು ಸೇರಿಕೊಂಡ ಬಗ್ಗೆ, ಮುಂಬಡ್ತಿಯ ಬಗ್ಗೆ ದೂರುಗಳು ದಾಖಲಾಗಿದ್ದವು.
ಬಸವರಾಜಪ್ಪ  ಬರೇಗಾರ ಅವರನ್ನು ತೋಟಗಾರ ಹುದ್ದೆಯಲ್ಲಿ ನಿಯಮಬಾಹಿರವಾಗಿ ಸಕ್ರಮಗೊಳಿಸಲಾಗಿದೆ ಎಂದು ಇವರನ್ನು ಸೇವೆಯಿಂದ ವಜಾಗೊಳಿಸಲು  ದೂರರ್ಜಿಗಳು ಸಲ್ಲಿಕೆಯಾಗಿದ್ದವು. ಈ ದೂರರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸಲು ಸರ್ಕಾರದಿಂದ ಸೂಚಿಸಿಲಾಗಿತ್ತು. ಆದರಂತೆ ದೊರರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿ ವರದಿ ನೀಡಲು ವಿಭಾಗೀಯ ಜಂಟಿ ನಿರ್ದೇಶಕರಿಗೆ ನಿರ್ದೇಶನಾಲಯದಿಂದ ಸೂಚಿಸಲಾಗಿತ್ತು.
ದೂರರ್ಜಿಯಲ್ಲಿನ ಇತರ ಅಂಶಗಳಿಗೆ ಸಂಬಂಧಿಸಿದಂತೆ ಬಸವರಾಜಪ್ಪ ನಿಂಗಪ್ಪ ಬರೇಗಾರ ಇವರನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಯಿಂದ ಬಿಡುಗಡೆಗೊಳಿಸಿ, ಆರ್ಥಿಕ ವ್ಯವಹಾರಗಳಿಲ್ಲದ ಜಿಲ್ಲೆಯ ಹೊರಗಿನ ಕಛೇರಿಯ ಹುದ್ದೆಗೆ ವರ್ಗಾವಣೆಗೊಳಿಸುವ ಶಿಫಾರಸಿ ನೊಂದಿಗೆ ಮತ್ತು ತೋಟಗಾರರಾಗಿ ಸೇವೆಯಲ್ಲಿ ಸಕ್ರಮಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ದಿನಗೂಲಿ ನೌಕರರಾಗಿ ಸೇವೆಯಿಂದ ಸಕ್ರಮಗೊಳ್ಳುವ ಪೂರ್ವದ ಮತ್ತು ನಂತರದ ಅವಧಿಯ ಪ್ರಕ್ರಿಯಗಳ ದಾಖಲೆಗಳನ್ನು ನಿರ್ದೇಶನಾಲಯದ ಹಂತದಲಿ ವಿವರವಾಗಿ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಭಿಪ್ರಾಯಿಸಿ ವಿಭಾಗೀಯ ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸಿರುತ್ತಾರೆ.
ಬರೇಗಾರ ಅವರು ೧೦ ವರ್ಷ ಪೂರೈಸಿದ ದಿನಗೂಲಿ ನೌಕರರೆಂದು ತೋಟಗಾರ ಹುದ್ದೆಯಲ್ಲಿ ಸಕ್ರಮಗೊಳಿಸಿರುವುದು ನಿಯಮಬಾಹಿರವೆಂದು, ಸತ್ಯಾಂಶವನ್ನು ಮರೆಮಾಚಿ ಅಕ್ರಮವಾಗಿ ನೇಮಕಗೊಂಡಿರುವ ಇವರನ್ನು ಸೇವೆಯಿಂದ ವಜಾಗೊಳಿಸಲು ಮೊರರ್ಜಿಗಳು ಸಲ್ಲಿಕೆಯಾಗಿರುತ್ತವೆ. ಈ ಸಂಬಂಧ ಸದರಿಯವರನ್ನು ತೋಟಗಾರರ ಹುದ್ದೆಯಲಿ ಸಕ್ರಮಗೊಳಿಸಿದ ವಾಖಲೆಗಳನ್ನು ಪರಿಶೀಲಿಸಲಾಗಿ ದೂರರ್ಜಿಯಲ್ಲಿನ ಅಂಶಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಿರುತ್ತವೆ. ಆದ್ದರಿಂದ ಇವರನ್ನು ತೋಟಿಗಾರ ಹುದ್ದೆಯಲ್ಲಿ ಸಕ್ರಮಗೊಳಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲು ನಿರ್ದೇಶನಾಲಯದಲ್ಲಿ ಅಂತರಿಕ ಸಮಿತಿಯನ್ನು ರಚಿಸಲಾಗಿತ್ತು.ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ಬಸವರಾಜಪ್ಪ  ಬರೆಗಾರ ಇವರನ್ನು ಸಕ್ರಮಗೊಳಿಸಿರುವುದು ಧೃಢಪಟ್ಟಿರುತ್ತದೆ.
ಈ ಬಗ್ಗೆ ಲಿಖಿತ ವಿವರಣೆ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಲು  ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ  ಬರೇಗಾರ ಇವರಿಗೆ  ಸೂಚಿಸಲಾಗಿತ್ತು. ಆದರೆ  ಇವರು  ನೀಡಿರುವ  ಹೇಳಿಕೆ ಮತ್ತು ವಿವರಗಳನ್ನು ಪರಿಶೀಲಿಸಲಾಗಿ ಇವರ ವಿವರಣೆಗಳಿಗೆ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಇಲಾಖೆಯ ದಾಖಲೆಗಳ  ಅದೇಶವನ್ವಯ ಸಕ್ರಮಾತಿಗೆ ಆರ್ಹತೆ ಪಡೆಯಲು ಪೂರೈಸಬೇಕಾದ ೧೦ ವರ್ಷಗಳ ದಿನಗೂಲಿ ಸೇವೆ ಸಲ್ಲಿಸದಿರುವುದು ಮತ್ತು ದಿನಗೂಲಿ ಸೇವೆ ಸಲ್ಲಿಸಿದೆ ಎಂದು ಪರಿಗಣಿಸಲಾದ ೧೯೮೧ ರಿಂದ ೧೯೯೧ ರ ಅವಧಿಯಲ್ಲಿ. ಇವರು ಇದೇ ಅವಧಿಯಲ್ಲಿ ರೆಗ್ಯೂಲರ್ ವಿದ್ಯಾರ್ಥಿಯಾಗಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮಾಡಿದ್ದು, ಇವರು ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿರುವುದಿಲ್ಲ. ಸೇವೆಯಲ್ಲಿ ಸಕ್ರಮಗೊಂಡಿರುವುದು  ಮತ್ತು ನಿಬಂಧನಗಳ ಉಲ್ಲಂಘನೆಯಿಂದಾಗಿದ್ದು, ತಪ್ಪು ಮಾಹಿತಿ ನೀಡಿ ಮತ್ತು ಸತ್ಯಾಂಶವನ್ನು ಮರೆಮಾಡಿರುವುದು ದೃಢಪಟ್ಟಿತ್ತು.
ಬರೇಗಾರ ೧೯೮೧ ರಿಂದ ೧೯೯೧ ನಡುವಿನ ೧೦ ವರ್ಷಗಳ ಅವಧಿಯಲ್ಲಿ ನಿರಂತರವಲ್ಲದ ೧೭ ತಿಂಗಳು ಮಾತ್ರ (ಒಟ್ಟಾರೆ ಕೇವಲ ೪೧೬ ದಿನಗಳು ಮಾತ್ರ) ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿರುವ ಈ ಪ್ರಕರಣದಲ್ಲಿ ಷರತ್ತುಗಳು ಪೂರೈಸದಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ಸಕ್ರಮಾತಿಗೊಳಿಸಿರುವು ಕಂಡು ಬಂದಿರುತ್ತದೆ.  ನಿಯಮಗಳನ್ನು ಉಲ್ಲಂಘಿಸಿ ಸಕ್ರಮಾತಿಗೊಂಡಿರುವ ಪ್ರಕರಣವಾಗಿರುವುದರಿಂದ ನೇಮಕಾತಿಯನ್ನು ಅಕ್ರಮವೆಂದು ಪರಿಗಣಿಸಿ  ಬಸವರಾಜಪ್ಪ  ಬರೇಗಾರ ಅವರನ್ನು  ಸಹಾಯಕ ತೋಟಗಾರಿಕೆ ಅಧಿಕಾರಿಹುದ್ದೆಯಿಂದ ತೆಗೆದು ಹಾಕಿರುತ್ತೇನೆಂದು  ತೋಟಗಾರಿಕೆಯ ನಿರ್ದೇಶಕರು ಹಾಗೂ ನೇಮಕಾತಿ ಪ್ರಾಧಿಕಾರ ಇವರು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...