ಹಾವೇರಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಹಾವೇರಿ: ಈಗಾಗಲೇ ರೈತ ಆತ್ಮಹತ್ಯೆಯಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ಹಾವೇರಿಜಿಲ್ಲೆಯಲ್ಲಿ ಮತ್ತೆ ರೈತನೋರ್ವ ಸಾಲಬಾಧೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡಗಿ ತಾಲೂಕಿನ ಅಳಲಗೇರಿಗ್ರಾಮದಲ್ಲಿ ಜೂ.೧೭ರಂದು ನಡೆದಿದೆ. ಆತ್ಯಹತ್ಯೆಮಾಡಿಕೊಂಡಿರುವ ರೈತನನ್ನು ಜಯಕುಮಾರ ಫಕ್ಕೀರಪ್ಪ ಮೋಟೆಬೆನ್ನೂರ(೪೧) ಎಂದು ಗುರುತಿಸಲಾಗಿದೆ.
ಮೃತ ವಿಜಯಕುಮಾರ ಮೋಟೆಬೆನ್ನೂರ ಅಳಲಗೇರಿ ಗ್ರಾಮದಲ್ಲಿ ಪಿತ್ರಾರ್ಜಿತ ೪ಎಕರೆಯ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ೨೦೨೪ ನೇ ಸಾಲಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮೋಟೆಬೆನ್ನೂರಿನಲ್ಲಿ ೨.೫೦ಲಕ್ಷರೂ ಬೆಳೆಸಾಲ ಮಾಡಿದ್ದು, ಕಳೆದ ವರ್ಷ ಅತಿಯಾದ ಮಹಿಳೆಯಿಂದ ಜಮೀನಿನಲ್ಲಿ ಹಾಕಿದ ಪೀಕು ಕೈಗೆ ಸಿಗದೇ ಇರುವದರಿಂದ ಬ್ಯಾಂಕ್ನಲ್ಲಿ ಮಾಡಿದ ಸಾಲವನ್ನು ತೀರಿಸುವದು ಹೇಗೆ ಎನ್ನುವ ಚಿಂತೆ ಮಾಡುತ್ತಾ ಅದೇ ಚಿಂತೆಯಲ್ಲಿ ಜೂ.೧೭ ರಂದು ರಾತ್ರಿ ೦೯-೩೦ ಗಂಟೆಯಿಂದ ಜೂ.೧೮ ರಂದು ಮುಂಜಾನೆ ೦೭-೩೦ ಗಂಟೆಯ ನಡುವಿನ ಅವಧಿಯಲ್ಲಿ ಅಳಲಗೇರಿ ಗ್ರಾಮದ ತನ್ನ ಮಾವನ ಮನೆಯ ರೂಮಿನಲ್ಲಿ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆಂದು, ಈ ಬಗ್ಗೆ ಮೃತನ ಪತ್ನಿ ಬ್ಯಾಡಗಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಹಾವೇರಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ
Date:
ಹಾವೇರಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಹಾವೇರಿ: ಈಗಾಗಲೇ ರೈತ ಆತ್ಮಹತ್ಯೆಯಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ಹಾವೇರಿಜಿಲ್ಲೆಯಲ್ಲಿ ಮತ್ತೆ ರೈತನೋರ್ವ ಸಾಲಬಾಧೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡಗಿ ತಾಲೂಕಿನ ಅಳಲಗೇರಿಗ್ರಾಮದಲ್ಲಿ ಜೂ.೧೭ರಂದು ನಡೆದಿದೆ. ಆತ್ಯಹತ್ಯೆಮಾಡಿಕೊಂಡಿರುವ ರೈತನನ್ನು ಜಯಕುಮಾರ ಫಕ್ಕೀರಪ್ಪ ಮೋಟೆಬೆನ್ನೂರ(೪೧) ಎಂದು ಗುರುತಿಸಲಾಗಿದೆ.
ಮೃತ ವಿಜಯಕುಮಾರ ಮೋಟೆಬೆನ್ನೂರ ಅಳಲಗೇರಿ ಗ್ರಾಮದಲ್ಲಿ ಪಿತ್ರಾರ್ಜಿತ ೪ಎಕರೆಯ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ೨೦೨೪ ನೇ ಸಾಲಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮೋಟೆಬೆನ್ನೂರಿನಲ್ಲಿ ೨.೫೦ಲಕ್ಷರೂ ಬೆಳೆಸಾಲ ಮಾಡಿದ್ದು, ಕಳೆದ ವರ್ಷ ಅತಿಯಾದ ಮಹಿಳೆಯಿಂದ ಜಮೀನಿನಲ್ಲಿ ಹಾಕಿದ ಪೀಕು ಕೈಗೆ ಸಿಗದೇ ಇರುವದರಿಂದ ಬ್ಯಾಂಕ್ನಲ್ಲಿ ಮಾಡಿದ ಸಾಲವನ್ನು ತೀರಿಸುವದು ಹೇಗೆ ಎನ್ನುವ ಚಿಂತೆ ಮಾಡುತ್ತಾ ಅದೇ ಚಿಂತೆಯಲ್ಲಿ ಜೂ.೧೭ ರಂದು ರಾತ್ರಿ ೦೯-೩೦ ಗಂಟೆಯಿಂದ ಜೂ.೧೮ ರಂದು ಮುಂಜಾನೆ ೦೭-೩೦ ಗಂಟೆಯ ನಡುವಿನ ಅವಧಿಯಲ್ಲಿ ಅಳಲಗೇರಿ ಗ್ರಾಮದ ತನ್ನ ಮಾವನ ಮನೆಯ ರೂಮಿನಲ್ಲಿ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆಂದು, ಈ ಬಗ್ಗೆ ಮೃತನ ಪತ್ನಿ ಬ್ಯಾಡಗಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.