ಹಾವೇರಿ: ಸೂಚಕರ ಖೊಟ್ಟಿ ಸಹಿ, ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಮೇಲೆ ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ರಘನಂದನ್ ಮೂರ್ತಿ ದೂರು  

Date:

ಸಿದ್ದಪ್ಪ ಕಲ್ಲಪ್ಪ ಪೂಜಾರ್

 

ಹಾವೇರಿ: ಸೂಚಕರ ಖೊಟ್ಟಿ ಸಹಿ, ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಮೇಲೆ ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ರಘನಂದನ್ ಮೂರ್ತಿ ದೂರು 
ಹಾವೇರಿ: ಹಾವೇರಿ ಲೋಕಸಬಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಮ ಪತ್ರದಲ್ಲಿ ಸೂಚಕರ ಪೋರ್ಜರಿ (ಬೊಟ್ಟಿ) ಸಹಿ ಮಾಡಿಸಿ ನಾಮ ಪತ್ರ ಸಲ್ಲಿಸಿದ ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಮೇಲೆ ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ರಘನಂದನ್ ಮೂರ್ತಿ ದೂರು ದಾಖಲಿಸಿದ್ದಾರೆ.
ಚುನಾವನಾ ಅಯೋಗದ ಮಾರ್ಗಸೂಚಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ೧೦ ಜನ ಸೂಚಕರ ಬೇಕು, ಈ ಕ್ಷೇತ್ರದವರಾಗಿರಬೇಕು, ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ , ಕ್ರಮಸಂಖ್ಯೆ ಕ್ರಮಬದ್ದವಾಗಿ ನಮೂದಿಸಿ ಖದ್ದಾಗಿ ಸೂಚಕರೇ ಸಹಿ ಮಾಡಿರಬೇಕು. ಸಿದ್ದಪ್ಪ ಕಲ್ಲಪ್ಪ ಪೂಜಾರ್ ನಾಮಪತ್ರ ಸಲ್ಲಿಕೆ ವೇಳೆ ಸಂಶಯ ಬಂದ ಕಾರಣ ತಹಶೀಲ್ದಾರ್ ತನಿಖೆ ನಡೆಸಿ ಸಹಿ ನಕಲು ರುಜುವಾತಾದ ಕಾರಣ ದೂರು ದಾಖಲಿಸಿದ್ದಾರೆ.
೧೯-೦೪-೨೦೨೪ ರಂದು ಮಧ್ಯಾಹ್ನ ೧-೪೫ ಗಂಟೆಗೆ ಸಿದ್ದಪ್ಪ ಕಲ್ಲಪ್ಪ ಪೂಜಾರ, ಸೋಮಲಿಂಗೇಶ್ವರ ದೇವಸ್ಥಾನದ ಹತ್ತಿರ ಸಾ:ಬಮ್ಮನಹಳ್ಳಿ ತಾ:ಹಾನಗಲ್ಲ ಇವರು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಮೂನೆ ೨ಎ ದಲ್ಲಿ ನಾಮ ಪತ್ರ ಸಲ್ಲಿಸಿದ್ದು, ನಾಮ ಪತ್ರವನ್ನು ಪರಿಶೀಲನೆ ಮಾಡಿ ನೋಡಲಾಗಿ ಸೂಚಕರ ವಿವರಗಳು ಮತ್ತು ಅವರ ಸಹಿಯ ಬಗ್ಗೆ ಸಂಶಯ ಮೂಡಿ ಅಭ್ಯರ್ಥಿಯು ಹಾಜರು ಮಾಡಿದ ನಾಮಪತ್ರದಲ್ಲಿಯ ಸೂಚಕರು ನಿಜವಾಗಿ ಅವರೇ ಸಹಿ ಮಾಡಿದ್ದಾರೇ ಹೇಗೆ ? ಎನ್ನುವ ಬಗ್ಗೆ ನಿಖರತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಹಾನಗಲ್ಲ ತಾಲೂಕಿನ ತಹಶೀಲ್ದಾರ ಆರ್. ಎನ್. ಕೊರವರ ಹಾಗೂ ಹಾನಗಲ್ಲ ಪೊಲೀಸ್ ಠಾಣೆಯ ಸಿಪಿಐ ವಿರೇಶ ಅವರಿಗೆ ದೂರವಾಣಿಕರೆ ಮಾಡಿದ್ದಾರೆ.
ಬಮ್ಮನಹಳ್ಳಿ, ಗ್ರಾಮಕ್ಕೆ ಖುದ್ದಾಗಿ ಹೋಗಿ ಸೂಚಕರ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿ, ತಹಶೀಲ್ದಾರ ಮತ್ತು ಸಿಪಿಐ ಹಾನಗಲ್ಲ ಇವರು ಬಮ್ಮನಹಳ್ಳಿ ವ್ಯಾಪ್ತಿಯ ಕಂದಾಯ ಸಿಬ್ಬಂದಿಗಳಾದ ಉಪ ತಹಶೀಲ್ದಾರ, ಎನ್. ಆರ್. ಸೂರ್ಯವಂಶಿ, ಕಂದಾಯ ನಿರೀಕ್ಷಕರಾದ, ಶಶಿಕಾಂತ ರಾಥೋಡ, ಗ್ರಾಮ ಆಡಳಿತಾಧಿಕಾರಿ ಎಮ್. ಎಸ್, ಜಮಾದಾರ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ತಂಡ ರಚಿಸಿ ಖುದ್ದಾಗಿ ಸೂಚಕರ ಮನೆಗೆ ಹೋಗಿ ವಿಚಾರಣೆ ಮಾಡಲಾಗಿ ಅಭ್ಯರ್ಥಿ ಸಹಿ ಮಾಡಿಸಿದ ನಮೂನೆಯ ಕ್ರಮ ಸಂಖ್ಯೆ ೨, ೩, ೪, ೫, ೬, ೮, ಇವರು ಗ್ರಾಮದಲ್ಲಿ ಲಭ್ಯವಿದ್ದು ೧೭. ೯. ೧೦ ನೇದವರು ಗ್ರಾಮದಲ್ಲಿ ವಿಚಾರಣೆ ಕಾಲಕ್ಕೆ ಲಭ್ಯ ಇರುವುದಿಲ್ಲಾ, ಕ್ರಮ ಸಂಖ್ಯೆ ೨. ೩. ೪. ೫. ೬, ೮. ನೇದವರನ್ನು ವಿಚಾರಿಸಲಾಗಿ ನಾಮ ಪತ್ರ ನಮೂನೆ ೨ಎ ನೇದ್ದರಲ್ಲಿ ನಾವು ಸಹಿ ಮಾಡಿರುವುದಿಲ್ಲಾ ಹಾಗೂ ಈ ಸಹಿಗಳು ನಮ್ಮ ನಿಜವಾದ ಸಹಿಗಳು ಆಗಿರುವುದಿಲ್ಲಾ ಎಂದು ವಿಚಾರಣಾ ತಂಡದ ಅಧಿಕಾರಿಗಳಿಗೆ ತಿಳಿಸಿರುತ್ತಾರೆ.
ತಮ್ಮ ನಿಜವಾದ ಸಹಿಗಳನ್ನು ತಂಡದ ಅಧಿಕಾರಿಗಳ ಮುಂದೆ ಮಾಡಿಕೊಟ್ಟಿರುತ್ತಾರೆ. ಅಧಿಕಾರಿಗಳ ತಂಡದ ಮುಂದೆ ಮಾಡಿರುವ ಸಹಿಗೂ ನಾಮ ಪತ್ರ ೨ಎ ದಲ್ಲಿ ಇರುವ ಸಹಿಗೆ ವ್ಯತ್ಯಾಸವನ್ನು ಖಚಿತಪಡಿಸಿಕೊಂಡು ಇದು ಕಾನೂನಿಗೂ ಹಾಗೂ ಚುನಾವಣಾ ನಿಯಮಕ್ಕೆ ಸ್ಪಷ್ಟವಾಗಿ ವ್ಯತಿರಿಕ್ತವಾಗಿರುವುದು ಕಂಡು ಬಂದಿದ್ದರಿಂದ ಸದರಿ ನಾಮ ಪತ್ರ ಸಲ್ಲಿಸಿದ ಅಭ್ಯರ್ಥಿಯಾದ ಸಿದ್ದಪ್ಪ ಕಲ್ಲಪ್ಪ ಪೂಜಾರ ಸಾ:ಬಮ್ಮನಹಳ್ಳಿ ತಾಜಹಾನಗಲ್ಲ ಜಿ:ಹಾವೇರಿ ಇವರು ಸೂಚಕರ ಸಹಿಗಳನ್ನ ಕೊಟ್ಟಿಯಾಗಿ ಸೃಜಿಸಿ ಮತ್ತು ಸುಳ್ಳು ಸೂಚಕರ ಪ್ರಮಾಣ ಪತ್ರವನ್ನ ಕೊಟ್ಟದ್ದು ಇವರ ವಿರುದ್ಧ ವಿಚಾರಣೆ ಮಾಡುವಂತೆ ಹಾಗೂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ರಘನಂದನ್ ಮೂರ್ತಿ ಅವರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಸಿದ್ದಪ್ಪ ಕಲ್ಲಪ್ಪ ಪೂಜಾರ್

 

ಹಾವೇರಿ: ಸೂಚಕರ ಖೊಟ್ಟಿ ಸಹಿ, ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಮೇಲೆ ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ರಘನಂದನ್ ಮೂರ್ತಿ ದೂರು 
ಹಾವೇರಿ: ಹಾವೇರಿ ಲೋಕಸಬಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಮ ಪತ್ರದಲ್ಲಿ ಸೂಚಕರ ಪೋರ್ಜರಿ (ಬೊಟ್ಟಿ) ಸಹಿ ಮಾಡಿಸಿ ನಾಮ ಪತ್ರ ಸಲ್ಲಿಸಿದ ಸಿದ್ದಪ್ಪ ಕಲ್ಲಪ್ಪ ಪೂಜಾರ್ ಬೊಮ್ಮನಹಳ್ಳಿ ಮೇಲೆ ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ರಘನಂದನ್ ಮೂರ್ತಿ ದೂರು ದಾಖಲಿಸಿದ್ದಾರೆ.
ಚುನಾವನಾ ಅಯೋಗದ ಮಾರ್ಗಸೂಚಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ೧೦ ಜನ ಸೂಚಕರ ಬೇಕು, ಈ ಕ್ಷೇತ್ರದವರಾಗಿರಬೇಕು, ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ , ಕ್ರಮಸಂಖ್ಯೆ ಕ್ರಮಬದ್ದವಾಗಿ ನಮೂದಿಸಿ ಖದ್ದಾಗಿ ಸೂಚಕರೇ ಸಹಿ ಮಾಡಿರಬೇಕು. ಸಿದ್ದಪ್ಪ ಕಲ್ಲಪ್ಪ ಪೂಜಾರ್ ನಾಮಪತ್ರ ಸಲ್ಲಿಕೆ ವೇಳೆ ಸಂಶಯ ಬಂದ ಕಾರಣ ತಹಶೀಲ್ದಾರ್ ತನಿಖೆ ನಡೆಸಿ ಸಹಿ ನಕಲು ರುಜುವಾತಾದ ಕಾರಣ ದೂರು ದಾಖಲಿಸಿದ್ದಾರೆ.
೧೯-೦೪-೨೦೨೪ ರಂದು ಮಧ್ಯಾಹ್ನ ೧-೪೫ ಗಂಟೆಗೆ ಸಿದ್ದಪ್ಪ ಕಲ್ಲಪ್ಪ ಪೂಜಾರ, ಸೋಮಲಿಂಗೇಶ್ವರ ದೇವಸ್ಥಾನದ ಹತ್ತಿರ ಸಾ:ಬಮ್ಮನಹಳ್ಳಿ ತಾ:ಹಾನಗಲ್ಲ ಇವರು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಮೂನೆ ೨ಎ ದಲ್ಲಿ ನಾಮ ಪತ್ರ ಸಲ್ಲಿಸಿದ್ದು, ನಾಮ ಪತ್ರವನ್ನು ಪರಿಶೀಲನೆ ಮಾಡಿ ನೋಡಲಾಗಿ ಸೂಚಕರ ವಿವರಗಳು ಮತ್ತು ಅವರ ಸಹಿಯ ಬಗ್ಗೆ ಸಂಶಯ ಮೂಡಿ ಅಭ್ಯರ್ಥಿಯು ಹಾಜರು ಮಾಡಿದ ನಾಮಪತ್ರದಲ್ಲಿಯ ಸೂಚಕರು ನಿಜವಾಗಿ ಅವರೇ ಸಹಿ ಮಾಡಿದ್ದಾರೇ ಹೇಗೆ ? ಎನ್ನುವ ಬಗ್ಗೆ ನಿಖರತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಹಾನಗಲ್ಲ ತಾಲೂಕಿನ ತಹಶೀಲ್ದಾರ ಆರ್. ಎನ್. ಕೊರವರ ಹಾಗೂ ಹಾನಗಲ್ಲ ಪೊಲೀಸ್ ಠಾಣೆಯ ಸಿಪಿಐ ವಿರೇಶ ಅವರಿಗೆ ದೂರವಾಣಿಕರೆ ಮಾಡಿದ್ದಾರೆ.
ಬಮ್ಮನಹಳ್ಳಿ, ಗ್ರಾಮಕ್ಕೆ ಖುದ್ದಾಗಿ ಹೋಗಿ ಸೂಚಕರ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿ, ತಹಶೀಲ್ದಾರ ಮತ್ತು ಸಿಪಿಐ ಹಾನಗಲ್ಲ ಇವರು ಬಮ್ಮನಹಳ್ಳಿ ವ್ಯಾಪ್ತಿಯ ಕಂದಾಯ ಸಿಬ್ಬಂದಿಗಳಾದ ಉಪ ತಹಶೀಲ್ದಾರ, ಎನ್. ಆರ್. ಸೂರ್ಯವಂಶಿ, ಕಂದಾಯ ನಿರೀಕ್ಷಕರಾದ, ಶಶಿಕಾಂತ ರಾಥೋಡ, ಗ್ರಾಮ ಆಡಳಿತಾಧಿಕಾರಿ ಎಮ್. ಎಸ್, ಜಮಾದಾರ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ತಂಡ ರಚಿಸಿ ಖುದ್ದಾಗಿ ಸೂಚಕರ ಮನೆಗೆ ಹೋಗಿ ವಿಚಾರಣೆ ಮಾಡಲಾಗಿ ಅಭ್ಯರ್ಥಿ ಸಹಿ ಮಾಡಿಸಿದ ನಮೂನೆಯ ಕ್ರಮ ಸಂಖ್ಯೆ ೨, ೩, ೪, ೫, ೬, ೮, ಇವರು ಗ್ರಾಮದಲ್ಲಿ ಲಭ್ಯವಿದ್ದು ೧೭. ೯. ೧೦ ನೇದವರು ಗ್ರಾಮದಲ್ಲಿ ವಿಚಾರಣೆ ಕಾಲಕ್ಕೆ ಲಭ್ಯ ಇರುವುದಿಲ್ಲಾ, ಕ್ರಮ ಸಂಖ್ಯೆ ೨. ೩. ೪. ೫. ೬, ೮. ನೇದವರನ್ನು ವಿಚಾರಿಸಲಾಗಿ ನಾಮ ಪತ್ರ ನಮೂನೆ ೨ಎ ನೇದ್ದರಲ್ಲಿ ನಾವು ಸಹಿ ಮಾಡಿರುವುದಿಲ್ಲಾ ಹಾಗೂ ಈ ಸಹಿಗಳು ನಮ್ಮ ನಿಜವಾದ ಸಹಿಗಳು ಆಗಿರುವುದಿಲ್ಲಾ ಎಂದು ವಿಚಾರಣಾ ತಂಡದ ಅಧಿಕಾರಿಗಳಿಗೆ ತಿಳಿಸಿರುತ್ತಾರೆ.
ತಮ್ಮ ನಿಜವಾದ ಸಹಿಗಳನ್ನು ತಂಡದ ಅಧಿಕಾರಿಗಳ ಮುಂದೆ ಮಾಡಿಕೊಟ್ಟಿರುತ್ತಾರೆ. ಅಧಿಕಾರಿಗಳ ತಂಡದ ಮುಂದೆ ಮಾಡಿರುವ ಸಹಿಗೂ ನಾಮ ಪತ್ರ ೨ಎ ದಲ್ಲಿ ಇರುವ ಸಹಿಗೆ ವ್ಯತ್ಯಾಸವನ್ನು ಖಚಿತಪಡಿಸಿಕೊಂಡು ಇದು ಕಾನೂನಿಗೂ ಹಾಗೂ ಚುನಾವಣಾ ನಿಯಮಕ್ಕೆ ಸ್ಪಷ್ಟವಾಗಿ ವ್ಯತಿರಿಕ್ತವಾಗಿರುವುದು ಕಂಡು ಬಂದಿದ್ದರಿಂದ ಸದರಿ ನಾಮ ಪತ್ರ ಸಲ್ಲಿಸಿದ ಅಭ್ಯರ್ಥಿಯಾದ ಸಿದ್ದಪ್ಪ ಕಲ್ಲಪ್ಪ ಪೂಜಾರ ಸಾ:ಬಮ್ಮನಹಳ್ಳಿ ತಾಜಹಾನಗಲ್ಲ ಜಿ:ಹಾವೇರಿ ಇವರು ಸೂಚಕರ ಸಹಿಗಳನ್ನ ಕೊಟ್ಟಿಯಾಗಿ ಸೃಜಿಸಿ ಮತ್ತು ಸುಳ್ಳು ಸೂಚಕರ ಪ್ರಮಾಣ ಪತ್ರವನ್ನ ಕೊಟ್ಟದ್ದು ಇವರ ವಿರುದ್ಧ ವಿಚಾರಣೆ ಮಾಡುವಂತೆ ಹಾಗೂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಚುನಾವನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ರಘನಂದನ್ ಮೂರ್ತಿ ಅವರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...