ಹಾವೇರ್ಯಾಗ ಹಾಯಬಾರದೇ………..ವ್ಯಾಪಾರಿಗಳಿಂದ ಪುಟ್ಪಾಥ್ ಅತಿಕ್ರಮಣ, ಸಂಚರಿಸಲು ಸಂಕಟಪಡುತ್ತಿರುವ ಸಾರ್ವಜನಿಕರು
ಹಾವೇರಿ: ಹಾವೇರಿಯಲ್ಲಿ ಹಾಯಬಾರದು ಎನ್ನುವ ಗಾದೆಮಾತನ್ನು ಇಲ್ಲಿನ ಕೆಲ ವ್ಯಾಪಾರಿಗಳು ನಿಜವಾಗಲು ಜಾರಿಗೆ ತಂದಿದ್ದಾರೆ. ಇಲ್ಲಿನ ಬಸ್ ನಿಲ್ದಾಣದ ಮುಭಾಗದಲ್ಲಿನ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಂತೆ ಹಲವಾರು ಅಂಗಡಿ-ಮುಂಗಟ್ಟುಗಳಿದ್ದು, ಇವುಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಕೆಲವು ವ್ಯಾಪಾರಿಗಳು ತಮಗೆ ನಿಗದಿ ಪಡಿಸಿದ ಸ್ಥಳವನ್ನು ಬಿಟ್ಟು ಸುಮಾರು ೧೫ರಿಂದ ೨೦ಅಡಿವರೆಗೆ ಸಾರ್ವಜನಿಕರಿಗೆ ಓಡಾಡಲು ಮೀಸಲಾಗಿರುವ ಪುಟ್ಪಾಥ್ನ್ನು ಅತಿಕ್ರಮನ ಮಾಡಿಕೊಂಡು ತಮ್ಮ ವ್ಯಾಪಾರ ವಹಿವಾಟನ್ನು ನಿರ್ವಹಿಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇಲ್ಲಿನ ಸಂಚಾರ ಅವ್ಯಸ್ಥೆಯನ್ನು ಕಂಡು ಸಾರ್ವಜನಿಕರು ಹಾವೇರಿಯಲ್ಲಿ ಹಾಯಬಾರದು ಎಂದುಕೊಳ್ಳುತ್ತಾರೆ.
ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸ್ವಾತಿ ಹೋಟೆಲ್ ಅಕ್ಕ-ಪಕ್ಕದಲ್ಲಿ ಹತ್ತಾರು ೮+೧೦ ಅಳತೆಯ ಸಣ್ಣ-ಪುಟ್ಟ ಅಂಗಡಿಗಳನ್ನು ನಿರ್ಮಿಸಲಾಗಿದ್ದು, ಈ ಅಂಗಡಿಗಳ ವ್ಯಾಪಾರಿಗಳು ತಮ್ಮ ಅಂಗಡಿಯ ಮುಂದಿರುವ ಸಾರ್ವಜನಿಕರ ಓಡಾಟಕ್ಕಿರುವ ಪುಟ್ಪಾಥ್ನ್ನು ಸಂಪೂರ್ಣವಾಗಿ ಅತೀಕ್ರಮಣಮಾಡಿಕೊಂಡು ಪುಟ್ಪಾಥ್ ಮಾಯಮಾಡಿ ಅಲ್ಲಿ ತಮ್ಮ ಅಂಗಡಿಗಳ ವಹಿವಾಟನ್ನು ನಡೆಸುತ್ತಾರೆ. ಹಾವೇರಿಗೆ ಜಿಲ್ಲೆಯ ಹಾಗೂ ಹೊರಜಿಲ್ಲೆಗಳಿಂದ ವಿವಿಧ ಕೆಲಸಕಾರ್ಯಗಳಿಗಾಗಿ, ವಿದ್ಯಾಭ್ಯಾಸಮಾಡಲು ನಿತ್ಯ ೧೫ಸಾವಿರಕ್ಕೂ ಅಧಿಕ ಜನರು, ವಿದ್ಯಾರ್ಥಿಗಳು ಹಾವೇರಿಯ ಬಸ್ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಹಾವೇರಿಗೆ ಬಂದವರು ಬಸ್ ನಿಲ್ದಾಣ ಬಿಟ್ಟು ಹೊರಗೆ ಬಂದು ತಮ್ಮ ಕೆಲಸಗಳಿಗೆ ತೆರಳಲು ಪರದಾಡುತ್ತಾರೆ.
ಸಾರ್ವಜನಿಕರ ಓಡಾಟಕ್ಕಿರುವ ಪುಟ್ಪಾಥ್ನಲ್ಲಿ ಅಂಗಡಿಗಳು ತಲೆಎತ್ತಿರುವ ಕಾರಣಕ್ಕೆ ಸಾರ್ವಜನಿಕರು ದಾರಿಯಾವುದಯ್ಯ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ರಸ್ತೆಯ ಎರಡು ಬದಿ ಅಂದರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಸ್ವಾತಿ ಹಾಗೂ ರೇಣುಕಾ ಹೋಟೆಲ್ಗಳಿದ್ದು, ಈ ಹೋಟೆಲ್ಗಳ ಮುಂದೆ ನಿತ್ಯ ಗ್ರಾಹಕರ ದ್ವಿಚಕ್ರವಾಹನಗಳು, ಕೆಲವೊಮ್ಮೆ ನಾಲ್ಕು ಚಕ್ರದ ವಾಹನಗಳು ನಿಲುಗಡೆಯಾಗುತ್ತವೆ.
ಹೋಟೆಲ್ ಎಂದರೆ ಸಹಜವಾಗಿ ಸಾರ್ವಜನಿಕರ ದಟ್ಟಣೆ ಇರುತ್ತದೆ. ಹಗಲು ಹೊತ್ತಿನಲ್ಲಿ ಹಾಗೂ ಸಂಜೆ ವೇಳೆ ವಿಪರೀತ ಜನದಟ್ಟಣೆ ಹಾಗೂ ವಾಹನಗಳ ದಟ್ಟಣೆ ಇರುವ ಕಾರಣ ಈವೇಳೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಸಹಜವಾಗಿ ಓಡಾಡಲು ಪುಟ್ಪಾಥ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಪುಟ್ಪಾತ್ ಮಾಯವಾಗಿರುವ ಕಾರಣಕ್ಕೆ ಅವರು ಪಿ.ಬಿ. ರಸ್ತೆಯಲ್ಲಿ, ಹೋಟೆಲ್ ಮುಂದುಗಡೆ ನಿಲುಗಡೆಯಾಗಿರುವ ವಾಹನಗಳನ್ನು ದಾಟಿಕೊಂಡು, ಬಿದ್ದು-ಎದ್ದು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಾರೆ. ಯಾವ ಕ್ಷಣದಲ್ಲಿ ಯಾವ ವಾಹನ ಬರುತ್ತದೋ ಎನ್ನುವ ಭಯದಲ್ಲಿ ಸಂಚರಿಸುತ್ತಾರೆ.
ವಾಹನ ಸವಾರರಿಗೆ ವಾಹನ ಪಾರ್ಕಿಂಗ್ ಮಾಡಲು ನಿಗದಿ ಪಡಿಸಿದ ಸ್ಥಳ ಇರದ ಕಾರಣ ಎಲ್ಲಂದರಲ್ಲಿ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳ ನಿಲುಗಡೆಮಾಡುವುದರಿಂದ ಸಾಕಷ್ಟು ಸಂಚಾರದಟ್ಟಣೆ ಉಂಟಾಗುತ್ತದೆ.
ನಗರದಲ್ಲಿರುವ ಆಸ್ಪತ್ರೆ, ಶಾಲೆಗಳು, ಕಾಲೇಜು, ಸರ್ಕಾರಿ ಕಚೇರಿಗಳಿಗೆ ಬೇರೆ ಮಾರ್ಗವಿಲ್ಲದೇ ಇದೇ ಮಾರ್ಗದಲ್ಲಿ ಸಂಚರಿಸಬೇಕರುವ ಕಾರಣಕ್ಕೆ ಸಾರ್ವಜನಿಕರು ಪರದಾಡುತ್ತಾರೆ. ಹಲವಾರು ಅಪಘಾತಗಳು ಇಲ್ಲಿನ ಅವ್ಯಸ್ಥೆಯಿಂದ ಸಂಭವಿಸಿ ಸಾವು-ನೋವುಗಳು ಸಹ ಆಗಿವೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಗರಸಭೆಯ ಪೌರಾಯುಕ್ತರು ಈ ಪುಟ್ಪಾಥ್ ಅತೀಕ್ರಮಣವನ್ನು ತೆರವುಗೊಳಿಸಿದ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುಕೂಲಮಾಡಿಕೊಡುವಂತೆ ನಗರದ ಪ್ರಮುಖರಾದ ಜಗದೀಶ ಕನವಳ್ಳಿ, ಕುಮಾರಸ್ವಾಮಿ ಹಿರೇಮಠ, ಎಷ್.ಕೆ.ಕಲಾಲ, ರಾಜು ದೊಡ್ಡಮನಿ, ಪರಶುರಾಮ ಕರ್ಜಗಿ, ರಾಜು ಹುಬ್ಬಳ್ಳಿ, ಗಿರೀಶ ಶೆಟ್ಟರ್ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
ಹಾವೇರ್ಯಾಗ ಹಾಯಬಾರದೇ………..ವ್ಯಾಪಾರಿಗಳಿಂದ ಪುಟ್ಪಾಥ್ ಅತಿಕ್ರಮಣ, ಸಂಚರಿಸಲು ಸಂಕಟಪಡುತ್ತಿರುವ ಸಾರ್ವಜನಿಕರು
Date:
ಹಾವೇರ್ಯಾಗ ಹಾಯಬಾರದೇ………..ವ್ಯಾಪಾರಿಗಳಿಂದ ಪುಟ್ಪಾಥ್ ಅತಿಕ್ರಮಣ, ಸಂಚರಿಸಲು ಸಂಕಟಪಡುತ್ತಿರುವ ಸಾರ್ವಜನಿಕರು
ಹಾವೇರಿ: ಹಾವೇರಿಯಲ್ಲಿ ಹಾಯಬಾರದು ಎನ್ನುವ ಗಾದೆಮಾತನ್ನು ಇಲ್ಲಿನ ಕೆಲ ವ್ಯಾಪಾರಿಗಳು ನಿಜವಾಗಲು ಜಾರಿಗೆ ತಂದಿದ್ದಾರೆ. ಇಲ್ಲಿನ ಬಸ್ ನಿಲ್ದಾಣದ ಮುಭಾಗದಲ್ಲಿನ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಂತೆ ಹಲವಾರು ಅಂಗಡಿ-ಮುಂಗಟ್ಟುಗಳಿದ್ದು, ಇವುಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಕೆಲವು ವ್ಯಾಪಾರಿಗಳು ತಮಗೆ ನಿಗದಿ ಪಡಿಸಿದ ಸ್ಥಳವನ್ನು ಬಿಟ್ಟು ಸುಮಾರು ೧೫ರಿಂದ ೨೦ಅಡಿವರೆಗೆ ಸಾರ್ವಜನಿಕರಿಗೆ ಓಡಾಡಲು ಮೀಸಲಾಗಿರುವ ಪುಟ್ಪಾಥ್ನ್ನು ಅತಿಕ್ರಮನ ಮಾಡಿಕೊಂಡು ತಮ್ಮ ವ್ಯಾಪಾರ ವಹಿವಾಟನ್ನು ನಿರ್ವಹಿಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇಲ್ಲಿನ ಸಂಚಾರ ಅವ್ಯಸ್ಥೆಯನ್ನು ಕಂಡು ಸಾರ್ವಜನಿಕರು ಹಾವೇರಿಯಲ್ಲಿ ಹಾಯಬಾರದು ಎಂದುಕೊಳ್ಳುತ್ತಾರೆ.
ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸ್ವಾತಿ ಹೋಟೆಲ್ ಅಕ್ಕ-ಪಕ್ಕದಲ್ಲಿ ಹತ್ತಾರು ೮+೧೦ ಅಳತೆಯ ಸಣ್ಣ-ಪುಟ್ಟ ಅಂಗಡಿಗಳನ್ನು ನಿರ್ಮಿಸಲಾಗಿದ್ದು, ಈ ಅಂಗಡಿಗಳ ವ್ಯಾಪಾರಿಗಳು ತಮ್ಮ ಅಂಗಡಿಯ ಮುಂದಿರುವ ಸಾರ್ವಜನಿಕರ ಓಡಾಟಕ್ಕಿರುವ ಪುಟ್ಪಾಥ್ನ್ನು ಸಂಪೂರ್ಣವಾಗಿ ಅತೀಕ್ರಮಣಮಾಡಿಕೊಂಡು ಪುಟ್ಪಾಥ್ ಮಾಯಮಾಡಿ ಅಲ್ಲಿ ತಮ್ಮ ಅಂಗಡಿಗಳ ವಹಿವಾಟನ್ನು ನಡೆಸುತ್ತಾರೆ. ಹಾವೇರಿಗೆ ಜಿಲ್ಲೆಯ ಹಾಗೂ ಹೊರಜಿಲ್ಲೆಗಳಿಂದ ವಿವಿಧ ಕೆಲಸಕಾರ್ಯಗಳಿಗಾಗಿ, ವಿದ್ಯಾಭ್ಯಾಸಮಾಡಲು ನಿತ್ಯ ೧೫ಸಾವಿರಕ್ಕೂ ಅಧಿಕ ಜನರು, ವಿದ್ಯಾರ್ಥಿಗಳು ಹಾವೇರಿಯ ಬಸ್ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಹಾವೇರಿಗೆ ಬಂದವರು ಬಸ್ ನಿಲ್ದಾಣ ಬಿಟ್ಟು ಹೊರಗೆ ಬಂದು ತಮ್ಮ ಕೆಲಸಗಳಿಗೆ ತೆರಳಲು ಪರದಾಡುತ್ತಾರೆ.
ಸಾರ್ವಜನಿಕರ ಓಡಾಟಕ್ಕಿರುವ ಪುಟ್ಪಾಥ್ನಲ್ಲಿ ಅಂಗಡಿಗಳು ತಲೆಎತ್ತಿರುವ ಕಾರಣಕ್ಕೆ ಸಾರ್ವಜನಿಕರು ದಾರಿಯಾವುದಯ್ಯ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ರಸ್ತೆಯ ಎರಡು ಬದಿ ಅಂದರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಸ್ವಾತಿ ಹಾಗೂ ರೇಣುಕಾ ಹೋಟೆಲ್ಗಳಿದ್ದು, ಈ ಹೋಟೆಲ್ಗಳ ಮುಂದೆ ನಿತ್ಯ ಗ್ರಾಹಕರ ದ್ವಿಚಕ್ರವಾಹನಗಳು, ಕೆಲವೊಮ್ಮೆ ನಾಲ್ಕು ಚಕ್ರದ ವಾಹನಗಳು ನಿಲುಗಡೆಯಾಗುತ್ತವೆ.
ಹೋಟೆಲ್ ಎಂದರೆ ಸಹಜವಾಗಿ ಸಾರ್ವಜನಿಕರ ದಟ್ಟಣೆ ಇರುತ್ತದೆ. ಹಗಲು ಹೊತ್ತಿನಲ್ಲಿ ಹಾಗೂ ಸಂಜೆ ವೇಳೆ ವಿಪರೀತ ಜನದಟ್ಟಣೆ ಹಾಗೂ ವಾಹನಗಳ ದಟ್ಟಣೆ ಇರುವ ಕಾರಣ ಈವೇಳೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಸಹಜವಾಗಿ ಓಡಾಡಲು ಪುಟ್ಪಾಥ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಪುಟ್ಪಾತ್ ಮಾಯವಾಗಿರುವ ಕಾರಣಕ್ಕೆ ಅವರು ಪಿ.ಬಿ. ರಸ್ತೆಯಲ್ಲಿ, ಹೋಟೆಲ್ ಮುಂದುಗಡೆ ನಿಲುಗಡೆಯಾಗಿರುವ ವಾಹನಗಳನ್ನು ದಾಟಿಕೊಂಡು, ಬಿದ್ದು-ಎದ್ದು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಾರೆ. ಯಾವ ಕ್ಷಣದಲ್ಲಿ ಯಾವ ವಾಹನ ಬರುತ್ತದೋ ಎನ್ನುವ ಭಯದಲ್ಲಿ ಸಂಚರಿಸುತ್ತಾರೆ.
ವಾಹನ ಸವಾರರಿಗೆ ವಾಹನ ಪಾರ್ಕಿಂಗ್ ಮಾಡಲು ನಿಗದಿ ಪಡಿಸಿದ ಸ್ಥಳ ಇರದ ಕಾರಣ ಎಲ್ಲಂದರಲ್ಲಿ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳ ನಿಲುಗಡೆಮಾಡುವುದರಿಂದ ಸಾಕಷ್ಟು ಸಂಚಾರದಟ್ಟಣೆ ಉಂಟಾಗುತ್ತದೆ.
ನಗರದಲ್ಲಿರುವ ಆಸ್ಪತ್ರೆ, ಶಾಲೆಗಳು, ಕಾಲೇಜು, ಸರ್ಕಾರಿ ಕಚೇರಿಗಳಿಗೆ ಬೇರೆ ಮಾರ್ಗವಿಲ್ಲದೇ ಇದೇ ಮಾರ್ಗದಲ್ಲಿ ಸಂಚರಿಸಬೇಕರುವ ಕಾರಣಕ್ಕೆ ಸಾರ್ವಜನಿಕರು ಪರದಾಡುತ್ತಾರೆ. ಹಲವಾರು ಅಪಘಾತಗಳು ಇಲ್ಲಿನ ಅವ್ಯಸ್ಥೆಯಿಂದ ಸಂಭವಿಸಿ ಸಾವು-ನೋವುಗಳು ಸಹ ಆಗಿವೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಗರಸಭೆಯ ಪೌರಾಯುಕ್ತರು ಈ ಪುಟ್ಪಾಥ್ ಅತೀಕ್ರಮಣವನ್ನು ತೆರವುಗೊಳಿಸಿದ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುಕೂಲಮಾಡಿಕೊಡುವಂತೆ ನಗರದ ಪ್ರಮುಖರಾದ ಜಗದೀಶ ಕನವಳ್ಳಿ, ಕುಮಾರಸ್ವಾಮಿ ಹಿರೇಮಠ, ಎಷ್.ಕೆ.ಕಲಾಲ, ರಾಜು ದೊಡ್ಡಮನಿ, ಪರಶುರಾಮ ಕರ್ಜಗಿ, ರಾಜು ಹುಬ್ಬಳ್ಳಿ, ಗಿರೀಶ ಶೆಟ್ಟರ್ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.