ಹಿರಿಯ ಪರ್ತಕರ್ತ ಕೌರವದ ಎಂ.ಚಿರಂಜೀವಿಗೆ ಮೂಡಣ ದತ್ತಿನಿಧಿ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಹಿರಿಯ ಪರ್ತಕರ್ತ, ರಾಣೇಬೆನ್ನೂರಿನ “ಕೌರವ” ಖ್ಯಾತಿಯ ಎಂ.ಚಿರಂಜೀವಿ ಅವರು ಕೆಯುಡಬ್ಲೂಜೆ ಮೂಡಣ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶುಕ್ರವಾರ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ಎಂ.ಚಿರಂಜೀವಿ ಅವರ ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಲಾಗಿದೆ.
ಕೆಯುಡಬ್ಲೂಜೆಯಲ್ಲಿ ಹಾವೇರಿಯ ಮೂಡಣದಿನ ಪತ್ರಿಕೆಯ ಸಂಪಾದಕರಾದ ತೇಜಸ್ವಿನಿ ಕಾಶೆಟ್ಟಿ ಅವರು ತಮ್ಮ ಪತಿ ದಿ.ಅಶೋಕ ಕಾಶೆಟ್ಟಿ ಅವರ ಸ್ಮರಣಾರ್ಥ ಮೂಡಣ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಸದರಿ ಮೂಡಣ ಪ್ರಶಸ್ತಿಯೂ ಒಂದು ಕಾಲದಲ್ಲಿ ಮೂಡಣ ಪತ್ರಿಕೆಯ ವರದಿಗಾರಾದ ಎಂ.ಚಿರಂಜೀವಿಯವರಿಗೆ ಸಂದಿದೆ.
ಎಂ.ಚಿರಂಜೀವಿ ಅವರು ೫೪ ವರ್ಷದ ಪ್ರಾಯದವರಾಗಿದ್ದು, ಬಿಎ ಪದವೀಧರರಾಗಿದ್ದು, ವೀಕ್ಷಕ, ಸಂಯುಕ್ತ ಕರ್ನಾಟಕ, ಮೂಡಣ, ವಿಶ್ವವಾಣಿ, ಉಷಾಕಿರಣ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕಳೆದ ೧೭ ವರ್ಷಗಳಿಂದ ಕೌರವದಿನ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
.ಕೊಪ್ಪಳದಲ್ಲಿ ಮಾ.೯ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಹಿರಿಯ ಪರ್ತಕರ್ತ ಕೌರವದ ಎಂ.ಚಿರಂಜೀವಿಗೆ ಮೂಡಣ ದತ್ತಿನಿಧಿ ಪ್ರಶಸ್ತಿ
Date:
ಹಿರಿಯ ಪರ್ತಕರ್ತ ಕೌರವದ ಎಂ.ಚಿರಂಜೀವಿಗೆ ಮೂಡಣ ದತ್ತಿನಿಧಿ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಹಿರಿಯ ಪರ್ತಕರ್ತ, ರಾಣೇಬೆನ್ನೂರಿನ “ಕೌರವ” ಖ್ಯಾತಿಯ ಎಂ.ಚಿರಂಜೀವಿ ಅವರು ಕೆಯುಡಬ್ಲೂಜೆ ಮೂಡಣ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶುಕ್ರವಾರ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ಎಂ.ಚಿರಂಜೀವಿ ಅವರ ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಲಾಗಿದೆ.
ಕೆಯುಡಬ್ಲೂಜೆಯಲ್ಲಿ ಹಾವೇರಿಯ ಮೂಡಣದಿನ ಪತ್ರಿಕೆಯ ಸಂಪಾದಕರಾದ ತೇಜಸ್ವಿನಿ ಕಾಶೆಟ್ಟಿ ಅವರು ತಮ್ಮ ಪತಿ ದಿ.ಅಶೋಕ ಕಾಶೆಟ್ಟಿ ಅವರ ಸ್ಮರಣಾರ್ಥ ಮೂಡಣ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಸದರಿ ಮೂಡಣ ಪ್ರಶಸ್ತಿಯೂ ಒಂದು ಕಾಲದಲ್ಲಿ ಮೂಡಣ ಪತ್ರಿಕೆಯ ವರದಿಗಾರಾದ ಎಂ.ಚಿರಂಜೀವಿಯವರಿಗೆ ಸಂದಿದೆ.
ಎಂ.ಚಿರಂಜೀವಿ ಅವರು ೫೪ ವರ್ಷದ ಪ್ರಾಯದವರಾಗಿದ್ದು, ಬಿಎ ಪದವೀಧರರಾಗಿದ್ದು, ವೀಕ್ಷಕ, ಸಂಯುಕ್ತ ಕರ್ನಾಟಕ, ಮೂಡಣ, ವಿಶ್ವವಾಣಿ, ಉಷಾಕಿರಣ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕಳೆದ ೧೭ ವರ್ಷಗಳಿಂದ ಕೌರವದಿನ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
.ಕೊಪ್ಪಳದಲ್ಲಿ ಮಾ.೯ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿದು ಬಂದಿದೆ.