ಹುಟ್ಟೂರಲ್ಲಿಯೇ ನಿರ್ಲಕ್ಷಕ್ಕೆ ಒಳಗಾಗಿರುವ ಡಾ. ವಿ.ಕೃ.ಗೋಕಾಕರು……………
ಹಾವೇರಿ : ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಂಟಿರುವ ಡಾ. ವಿನಾಯಕ ಕೃಷ್ಣ ಗೋಕಾಕ್ ಅವರು ಕನ್ನಡದ ಮೇಧಾವಿ ಸಾಹಿತಿಗಳಾಗಿದ್ದಾರೆ. ಕಸ್ತೂರಿ ಕನ್ನಡಕ್ಕೆ ೫ನೇಯ ಜ್ಞಾನಪೀಠ ತಂದುಕೊಟ್ಟ ಕೀರ್ತಿ ಪುರುಷ. ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಅವರಿಗಿತ್ತು. ಕನ್ನಡ ಮಾತ್ರವಲ್ಲದೇ ಭಾರತೀಯ ವಾಂಗ್ಮಯ ಪ್ರಪಂಚಕ್ಕೆ ಅಗಣಿತ ಕೊಡುಗೆ ನೀಡಿದ ಶ್ರೇಷ್ಠ ಸಾಹಿತಿಯ ಹುಟ್ಟೂರು ಸವಣೂರಲ್ಲಿ ನಿರ್ಲಕ್ಕೆಒಳಗಾಗಿದ್ದಾರೆ ಎನ್ನುವ ಆರೋಪ ಇಲ್ಲಿನ ಸಾರ್ವಜನಕರುಉ ಹಾಗೂ ಸಾಹಿತ್ಯಾಸಕ್ತರದ್ದಾಗಿದೆ.
ಸವಣೂರು ಪಟ್ಟಣದ ಹೊರ ವಲಯದ ದುರ್ಗಾದೇವಿ ದೇವಸ್ಥಾನದ ಪಕ್ಕದಲ್ಲಿರುವ ವೃತ್ತಕ್ಕೆ ಡಾ.ವಿ.ಕೃ ಗೋಕಾಕ ವೃತ್ತ ಎಂದು ನಾಮಕರಣಗೊಳಿಸಿ ೨೦೧೧ರ ಅ.೨೬ ಅನಾವರಣಗೊಳಿಸಿದ ಗೋಕಾಕ್ ಪ್ರತಿಮೆ ಇಂದು ಅನಾಥವಾಗಿ ಎಲ್ಲರ ನಿರ್ಲಕ್ಷಕ್ಕೊಳಗಾಗಿದೆ. ಜಿಲ್ಲೆಯ ಮಾಹಾನ್ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಪದಾಧಿಕಾರಿಗಳೆಲ್ಲರೂ ಗೋಕಾಕರ ಜನ್ಮದಿನದಂದು ಅಥವಾ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಅವರ ಬಗ್ಗೆ ಉದ್ದನೆಯ ಭಾಷಣ ಬಿಗಿಯುತ್ತಾರೆಯೇ ಹೊರತು ಉಳಿದ ದಿನಗಳಲ್ಲಿ ನೆನಪಿಸಿಕೊಳ್ಳುವುದೂ ಇಲ್ಲ, ಗೋಕಾಕ್ ಸ್ಮಾರಕದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲವೆಂದು ಹೇಳಲು ಶಿಗ್ಗಾಂವಿ ಗದಗ ರಸ್ತೆಗೆ ಹೊಂದಿಕೊಂಡಿರುವ ಡಾ. ವಿ.ಕೃ ಗೋಕಾಕ ವೃತ್ತದಲ್ಲಿ ಅನವಾರಣಗೊಳಿಸಿದ ಗೋಕಾಕರವರ ಪ್ರತಿಮೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು ೧೯೦೯ರ ಆಗಸ್ಟ್ ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ಜನ್ಮ ದಿನವನ್ನು ಕಾಟಾಚಾರವೆಂಬಂತೆ ಆಚರಿಸಲಾಗುತ್ತಿದೆ ಎಂಬುದಕ್ಕೆ ಗೋಕಾಕರ ವೃತ್ತವೆ ಸಾಕ್ಷಿಯಾಗಿದೆ. ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಕೇವಲ ಪೋಟೊ ಪೋಸ್ ನೀಡಿದರೆ ಹೊರತು. ವೃತ್ತಕ್ಕೆ ಬಳೆಯಬೇಕಾದ ಸುಣ್ಣ ಬಣ್ಣ, ಮಾಸಿ ಹೋಗಿ ಬಣ್ಣ ಹಾರಿದ ಪುತ್ಥಳಿಯನ್ನು ಗಮನಿಸದಿರುವುದು ವಿಪರ್ಯಸದ ಸಂಗತಿಯಾಗಿದೆ.
ಕವಿ ಕುಲ ಶ್ರೇಷ್ಠರಾದ ಗೋಕಾಕರ ವೃತ್ತಕ್ಕಾಗಲಿ, ಪುತ್ಥ್ತಳಿಗಾಗಲಿ ಸೌಜನ್ಯಕ್ಕಾದರೂ ಬಣ್ಣ ಹಚ್ಚದೆ ಇರುವುದು ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಮೆ ಅನಾವರಣಗೊಳ್ಳುವ ಮುನ್ನ ಅನೇಕ ಕನ್ನಡಪರ ಸಂಘಟನೆಗಳ ಹಾಗೂ ಸಾಹಿತ್ಯಾಸಕ್ತರಲ್ಲಿ ಇದ್ದ ಕಾಳಜಿ, ಪ್ರತಿಮೆ ಅನಾವರಣಗೊಂಡು ೧೩ ವರ್ಷ ಕಳೆದ ನಂತರ ಇಲ್ಲದಾಗಿದೆ.
ಅಷ್ಟೇ ಅಲ್ಲದೇ ಗೋಕಾಕರ ಪುತ್ಥಳಿಯ ಎಡ ಕಾಲಿಗೆ ವಿದ್ಯುತ್ ಅಲಂಕರಿಸಲು ಕಂಬವೊಂದನ್ನು ಕಟ್ಟಿ, ಕಸ್ತೂರಿ ಕನ್ನಡಕ್ಕೆ ೫ನೇಯ ಜ್ಞಾನಪೀಠ ತಂದುಕೊಟ್ಟ ಕೀರ್ತಿ ಪುರುಷನಿಗೆ ಮಾಡಿದ ಅಪಮಾನವೆಂದರೆ ತಪ್ಪಾಗಲಾರದು. ಈ ವಿಷಯ ಟ್ರಸ್ಟಿನ ಸದಸ್ಯರಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ, ಕನ್ನಡಪರ ಸಂಘಟನೆಗಳಿಗೆ ಗೊತ್ತಿರುವ ವಿಷಯವಾದರೂ ಜಾಣ ಕುರುಡರಂತೆ, ಮೂಕ ಜಾಣರಂತೆ ವರ್ತಿಸುತ್ತಿರುವುದು ಎಲ್ಲರಿದ್ದರೇನಂತೆ ಕನ್ನಡದ ಮೇಧಾವಿ, ಪ್ರತಿಭಾವಂತ ಕವಿಯ ಸ್ಮಾರಕ ಅನಾಥವಾಗಿರುವುದು ದುರ್ದೈವದ ಸಂಗತಿಯಾಗಿದೆ.
ಡಾ. ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಕಾರ್ಯಕಾರಿಣಿ ಸದಸ್ಯರು ಕೂಡಾ ತಾಲೂಕಿನವರೇ ಇದ್ದಾರೆ. ಉಪ ವಿಭಾಗಾಧಿಕಾರಿಗಳು, ಇಲ್ಲಿನ ಸ್ಮಾರಕ ಭವನದ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿ, ಕಸಾಪ ಅಧ್ಯಕ್ಷರು, ಸ್ಥಳೀಯ ಸಂಘಟನೆಯವರು ಸಮಿತಿಯ ಸದಸ್ಯರಾಗಿದ್ದಾರೆ. ಇವರಲ್ಲಿ ಒಬ್ಬರಾದರೂ ಕಿಂಚಿತ್ತಾದರೂ ಕಾಳಜಿ ತೋರಿದ್ದರೆ ಗೋಕಾರ ಹುಟ್ಟೂರಲ್ಲೇ ಅವರ ಪ್ರತಿಮೆಗೆ ಈ ದುಃಸ್ಥಿತಿ ಒದಗುತ್ತಿರಲಿಲ್ಲ. ಕನ್ನಡಪರ ಸಂಘಟನೆಗಳು, ಕನ್ನಡ ಮನಸ್ಸುಗಳು ಒಂದೊಮ್ಮೆ ಆತ್ಮಾವಲೋಕನಕ್ಕೆ ತೊಡಗಲು ಇದು ಸಕಾಲ.
ಹುಟ್ಟೂರಲ್ಲಿಯೇ ನಿರ್ಲಕ್ಷಕ್ಕೆ ಒಳಗಾಗಿರುವ ಡಾ. ವಿ.ಕೃ.ಗೋಕಾಕರು……………
Date:
ಹುಟ್ಟೂರಲ್ಲಿಯೇ ನಿರ್ಲಕ್ಷಕ್ಕೆ ಒಳಗಾಗಿರುವ ಡಾ. ವಿ.ಕೃ.ಗೋಕಾಕರು……………
ಹಾವೇರಿ : ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಂಟಿರುವ ಡಾ. ವಿನಾಯಕ ಕೃಷ್ಣ ಗೋಕಾಕ್ ಅವರು ಕನ್ನಡದ ಮೇಧಾವಿ ಸಾಹಿತಿಗಳಾಗಿದ್ದಾರೆ. ಕಸ್ತೂರಿ ಕನ್ನಡಕ್ಕೆ ೫ನೇಯ ಜ್ಞಾನಪೀಠ ತಂದುಕೊಟ್ಟ ಕೀರ್ತಿ ಪುರುಷ. ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಅವರಿಗಿತ್ತು. ಕನ್ನಡ ಮಾತ್ರವಲ್ಲದೇ ಭಾರತೀಯ ವಾಂಗ್ಮಯ ಪ್ರಪಂಚಕ್ಕೆ ಅಗಣಿತ ಕೊಡುಗೆ ನೀಡಿದ ಶ್ರೇಷ್ಠ ಸಾಹಿತಿಯ ಹುಟ್ಟೂರು ಸವಣೂರಲ್ಲಿ ನಿರ್ಲಕ್ಕೆಒಳಗಾಗಿದ್ದಾರೆ ಎನ್ನುವ ಆರೋಪ ಇಲ್ಲಿನ ಸಾರ್ವಜನಕರುಉ ಹಾಗೂ ಸಾಹಿತ್ಯಾಸಕ್ತರದ್ದಾಗಿದೆ.
ಸವಣೂರು ಪಟ್ಟಣದ ಹೊರ ವಲಯದ ದುರ್ಗಾದೇವಿ ದೇವಸ್ಥಾನದ ಪಕ್ಕದಲ್ಲಿರುವ ವೃತ್ತಕ್ಕೆ ಡಾ.ವಿ.ಕೃ ಗೋಕಾಕ ವೃತ್ತ ಎಂದು ನಾಮಕರಣಗೊಳಿಸಿ ೨೦೧೧ರ ಅ.೨೬ ಅನಾವರಣಗೊಳಿಸಿದ ಗೋಕಾಕ್ ಪ್ರತಿಮೆ ಇಂದು ಅನಾಥವಾಗಿ ಎಲ್ಲರ ನಿರ್ಲಕ್ಷಕ್ಕೊಳಗಾಗಿದೆ. ಜಿಲ್ಲೆಯ ಮಾಹಾನ್ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಪದಾಧಿಕಾರಿಗಳೆಲ್ಲರೂ ಗೋಕಾಕರ ಜನ್ಮದಿನದಂದು ಅಥವಾ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಅವರ ಬಗ್ಗೆ ಉದ್ದನೆಯ ಭಾಷಣ ಬಿಗಿಯುತ್ತಾರೆಯೇ ಹೊರತು ಉಳಿದ ದಿನಗಳಲ್ಲಿ ನೆನಪಿಸಿಕೊಳ್ಳುವುದೂ ಇಲ್ಲ, ಗೋಕಾಕ್ ಸ್ಮಾರಕದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲವೆಂದು ಹೇಳಲು ಶಿಗ್ಗಾಂವಿ ಗದಗ ರಸ್ತೆಗೆ ಹೊಂದಿಕೊಂಡಿರುವ ಡಾ. ವಿ.ಕೃ ಗೋಕಾಕ ವೃತ್ತದಲ್ಲಿ ಅನವಾರಣಗೊಳಿಸಿದ ಗೋಕಾಕರವರ ಪ್ರತಿಮೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು ೧೯೦೯ರ ಆಗಸ್ಟ್ ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ಜನ್ಮ ದಿನವನ್ನು ಕಾಟಾಚಾರವೆಂಬಂತೆ ಆಚರಿಸಲಾಗುತ್ತಿದೆ ಎಂಬುದಕ್ಕೆ ಗೋಕಾಕರ ವೃತ್ತವೆ ಸಾಕ್ಷಿಯಾಗಿದೆ. ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಕೇವಲ ಪೋಟೊ ಪೋಸ್ ನೀಡಿದರೆ ಹೊರತು. ವೃತ್ತಕ್ಕೆ ಬಳೆಯಬೇಕಾದ ಸುಣ್ಣ ಬಣ್ಣ, ಮಾಸಿ ಹೋಗಿ ಬಣ್ಣ ಹಾರಿದ ಪುತ್ಥಳಿಯನ್ನು ಗಮನಿಸದಿರುವುದು ವಿಪರ್ಯಸದ ಸಂಗತಿಯಾಗಿದೆ.
ಕವಿ ಕುಲ ಶ್ರೇಷ್ಠರಾದ ಗೋಕಾಕರ ವೃತ್ತಕ್ಕಾಗಲಿ, ಪುತ್ಥ್ತಳಿಗಾಗಲಿ ಸೌಜನ್ಯಕ್ಕಾದರೂ ಬಣ್ಣ ಹಚ್ಚದೆ ಇರುವುದು ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಮೆ ಅನಾವರಣಗೊಳ್ಳುವ ಮುನ್ನ ಅನೇಕ ಕನ್ನಡಪರ ಸಂಘಟನೆಗಳ ಹಾಗೂ ಸಾಹಿತ್ಯಾಸಕ್ತರಲ್ಲಿ ಇದ್ದ ಕಾಳಜಿ, ಪ್ರತಿಮೆ ಅನಾವರಣಗೊಂಡು ೧೩ ವರ್ಷ ಕಳೆದ ನಂತರ ಇಲ್ಲದಾಗಿದೆ.
ಅಷ್ಟೇ ಅಲ್ಲದೇ ಗೋಕಾಕರ ಪುತ್ಥಳಿಯ ಎಡ ಕಾಲಿಗೆ ವಿದ್ಯುತ್ ಅಲಂಕರಿಸಲು ಕಂಬವೊಂದನ್ನು ಕಟ್ಟಿ, ಕಸ್ತೂರಿ ಕನ್ನಡಕ್ಕೆ ೫ನೇಯ ಜ್ಞಾನಪೀಠ ತಂದುಕೊಟ್ಟ ಕೀರ್ತಿ ಪುರುಷನಿಗೆ ಮಾಡಿದ ಅಪಮಾನವೆಂದರೆ ತಪ್ಪಾಗಲಾರದು. ಈ ವಿಷಯ ಟ್ರಸ್ಟಿನ ಸದಸ್ಯರಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ, ಕನ್ನಡಪರ ಸಂಘಟನೆಗಳಿಗೆ ಗೊತ್ತಿರುವ ವಿಷಯವಾದರೂ ಜಾಣ ಕುರುಡರಂತೆ, ಮೂಕ ಜಾಣರಂತೆ ವರ್ತಿಸುತ್ತಿರುವುದು ಎಲ್ಲರಿದ್ದರೇನಂತೆ ಕನ್ನಡದ ಮೇಧಾವಿ, ಪ್ರತಿಭಾವಂತ ಕವಿಯ ಸ್ಮಾರಕ ಅನಾಥವಾಗಿರುವುದು ದುರ್ದೈವದ ಸಂಗತಿಯಾಗಿದೆ.
ಡಾ. ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಕಾರ್ಯಕಾರಿಣಿ ಸದಸ್ಯರು ಕೂಡಾ ತಾಲೂಕಿನವರೇ ಇದ್ದಾರೆ. ಉಪ ವಿಭಾಗಾಧಿಕಾರಿಗಳು, ಇಲ್ಲಿನ ಸ್ಮಾರಕ ಭವನದ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿ, ಕಸಾಪ ಅಧ್ಯಕ್ಷರು, ಸ್ಥಳೀಯ ಸಂಘಟನೆಯವರು ಸಮಿತಿಯ ಸದಸ್ಯರಾಗಿದ್ದಾರೆ. ಇವರಲ್ಲಿ ಒಬ್ಬರಾದರೂ ಕಿಂಚಿತ್ತಾದರೂ ಕಾಳಜಿ ತೋರಿದ್ದರೆ ಗೋಕಾರ ಹುಟ್ಟೂರಲ್ಲೇ ಅವರ ಪ್ರತಿಮೆಗೆ ಈ ದುಃಸ್ಥಿತಿ ಒದಗುತ್ತಿರಲಿಲ್ಲ. ಕನ್ನಡಪರ ಸಂಘಟನೆಗಳು, ಕನ್ನಡ ಮನಸ್ಸುಗಳು ಒಂದೊಮ್ಮೆ ಆತ್ಮಾವಲೋಕನಕ್ಕೆ ತೊಡಗಲು ಇದು ಸಕಾಲ.