
ಹೊಸಕಿತ್ತೂರಿನಲ್ಲಿ ಅಪ್ಪು ಡ್ಯಾನ್ಸ ಅಕಾಡೆಮಿಯಿಂದ ಕಿತ್ತೂರು ಉತ್ಸವ
ಹಾವೇರಿ: ತಾಲೂಕಿನ ಹೊಸಕಿತ್ತೂರಿನಲ್ಲಿ ಭಾನುವಾರ ರಾತ್ರಿ ಶ್ರೀಸಂಗಮೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಅಪ್ಪು ಡ್ಯಾನ್ಸ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ಉತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ವಹಿಸಿ ಮಾತನಾಡಿ ಜಿಲ್ಲಾಧಿಕಾರಿಗಳು ಪುನೀತ್ ರಾಜಕುಮಾರ್ ಅವರ ಜೀವನ, ಸಾಧನೆ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು.
ಸಾನಿಧ್ಯವನ್ನು ಹೊಸರಿತ್ತಿಯ ಗುದ್ದಲಿಸ್ವಾಮಿಮಠದ ಗುದ್ದಲಿ ಶಿವಯೋಗಿಶ್ವರ ಮಹಾಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮದ ಕೇಂದ್ರಬಿಂದು ಹಾಗೂ ಮುಖ್ಯ ಆಯೋಜಕರು ಹಾಗೂ ಪುನೀತ್ ರಾಜಕುಮಾರ ಅವರ ಅಪ್ಪಟ ಅಭಿಮಾನಿ, ನೃತ್ಯ ನಿರ್ದೇಶಕ, ಕಲಾವಿದ, ಸಮಾಜಸೇವಕ ಡ್ಯಾನ್ಸ ಮಾಸ್ಟರ್ ಪ್ರಕಾಶ್ ಮರಬದ ಕಾರ್ಯಕ್ರಮ ಆಯೋಜಕರಾಗಿದ್ದರು, ಪ್ರಸ್ತಾವಿಕವಾಗಿ ಮಾತನಾಡಿದ ಸಂಜಯಗಾಂಧಿ ಸಂಜೀವಣ್ಣನವರ, ಮಾತನಾಡಿದರು.
ಗ್ರಾಮದ ವೇದಮೂರ್ತಿ ಶಿವಯ್ಯ ಹಿರೇಮಠ, ಸಿದ್ದರಾಜ ಕಲಕೋಟಿ, ಐ.ಜಿ ಕೋರಿ, ಗುಡದಯ್ಯ ಬರಡಿ, ನಾಗರಾಜ ಮಡಿವಾಳರ, ಆನಂದ ಮುರುಡಪ್ಪನವರ, ಮಂಜರೆಡ್ಡಿ ಮಾಗಡಿ ,ಸಂಗನಗೌಡ ಧೋಳಿಕೊಪ್ಪ, ರಂಗಪ್ಪ ತಳವಾರ, ಎಂ.ಎಫ್ ಭಗವಂತ ಗೌಡ್ರ, ಎಚ್.ಆರ್ ಮಡಿವಾಳರ, ಗೀತಾಬಾಯಿ ಲಮಾಣಿ ,ಮಂಜು ದಡ್ಡೂರು, ಸಿದ್ದಯ್ಯ ಹಿರೇಮಠ, ಫಕೀರೇಶ ಮತ್ತೂರು, ರಾಜಶೇಖರ ದಂಡಣ್ಣನವರ, ಸಿದ್ದಲಿಂಗಪ್ಪ ಗುಳ್ಳೆದ, ಪಿ.ಬಿ ದುಂಡಪ್ಪನವರ, ಮಂಜುನಾಥ ಕುರಿ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಕಿತ್ತೂರು ಕಲಾ ಪ್ರೇಮಿಗಳು ಸುತ್ತಮುತ್ತಲಿನ ಅಭಿಮಾನಿಗಳು , ಜೂನಿಯರ್ ಪುನೀತ್ ರಾಜಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

