೧೦ತಿಂಗಳ ವೇತನ-೧೪ ತಿಂಗಳ ಪಿ.ಎಫ್-ಇಎಸ್ಐ ಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಹಾವೇರಿ; ಕಳೆದ ೧೦ ತಿಂಗಳಿಂದ ಬಾಕಿ ಇರುವ ವೇತನ ಪಾವತಿಸಬೇಕು, ಕಳೆದ ೧೪ ತಿಂಗಳ ಪಿ.ಎಫ್ ಮತ್ತು ಇಎಸ್ಐ ಪಾವತಿಸಬೇಕೆಂದು ಒತ್ತಾಯಿಸಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಪದಾಧಿಕಾರಿಗಳು, ಸಂಘದ ಜಿಲ್ಲಾಧ್ಯಕ್ಷ ರಾಜಪ್ಪ ಹೊಸಮನಿ, ಉಪಾಧ್ಯಕ್ಷ ಶಿವರಾಜ್ ಕಟ್ಟಿಮನಿ, ಕಾರ್ಯದರ್ಶಿ ಗುರುನಾಥ್ ಅಡಿವೆಣ್ಣನವರ, ಖಜಾಂಚಿ ರಮೇಶ್ ಭೋವಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲೆಯ ಬಂಕಾಪುರ ಪುರಸಭೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜಪ್ಪ ಹೊಸಮನಿ ಮಾತನಾಡಿ, ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ ಸಿಬ್ಬಂದಿಗಳ ವೇತನವನ್ನು ಪ್ರತಿತಿಂಗಳು ೫ನೇ ದಿನಾಂಕದೊಳಗೆ ಪಾವತಿಸಬೇಕೆಂದು ಸರ್ಕಾರದ ಆದೇಶವಿದ್ದರೂ ಸಹ ಸ್ಥಳೀಯ ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ ಸಿಬ್ಬಂದಿಗಳಿಗೆ ಕಳೆದ ೧೦ ತಿಂಗಳಿಂದ ವೇತನ ಪಾವತಿಸಿಲ್ಲ. ೧೪ ತಿಂಗಳ ಪಿ.ಎಫ್-ಇಎಸ್ಐ ಪಾವತಿಸಿಲ್ಲ.
ಈ ಬಗ್ಗೆ ಹಲವಾರು ಬಾರಿ ಮಾಖ್ಯಾಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತಂದಿದ್ದು, ಆದಾಗ್ಯೂ, ಈ ವರೆಗಳ ವೇತನ ಪಾವತಿಮಾಡಿರುವುದಿಲ್ಲ. ಹೊರಗುತ್ತಿಗೆ ಕಾರ್ಮಿಕರು ಬಡವರಿದ್ದು,ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು ಜೀವನ ನಡೆಸಲು ತೀರಾ ತೊಂದರೆ ಆಗಿದೆ. ತಕ್ಷಣ ಗುತ್ತಿಗೆ ವಾಹನ ಚಾಲಕರ ಹಾಗೂ ಲೋಡರ್ಸ್ಗಳ ವೇತನವನ್ನು ಪಾವತಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಡ್ಡಪ್ಪ ಕಟ್ಟಿಮನಿ, ಹೊನಕೆರಪ್ಪ ಹಾರೋಗೆರಿ, ರಾಜು ಕಟ್ಟಿಮನಿ, ನವೀನ್ ಕಟ್ಟಿಮನಿ, ಧರ್ಮೇಂದ್ರ ಅಸುಂಡಿ, ಪ್ರಶಾಂತ್ಗೌಡ, ,ಮಾಲ್ತೇಶ್ ಕಟಗಿ, ಮಾಲತೇಶ ಗುಡ್ಡಣ್ಣನವರ್, ಬಸವರಾಜ ತಳವಾರ್, ಸಿದ್ದಪ್ಪ ಕಟ್ಟಿಮನಿಮತ್ತಿತರು ಭಾಗವಹಿಸಿದ್ದರು.
೧೦ತಿಂಗಳ ವೇತನ-೧೪ ತಿಂಗಳ ಪಿ.ಎಫ್-ಇಎಸ್ಐ ಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ
Date:
೧೦ತಿಂಗಳ ವೇತನ-೧೪ ತಿಂಗಳ ಪಿ.ಎಫ್-ಇಎಸ್ಐ ಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಹಾವೇರಿ; ಕಳೆದ ೧೦ ತಿಂಗಳಿಂದ ಬಾಕಿ ಇರುವ ವೇತನ ಪಾವತಿಸಬೇಕು, ಕಳೆದ ೧೪ ತಿಂಗಳ ಪಿ.ಎಫ್ ಮತ್ತು ಇಎಸ್ಐ ಪಾವತಿಸಬೇಕೆಂದು ಒತ್ತಾಯಿಸಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಪದಾಧಿಕಾರಿಗಳು, ಸಂಘದ ಜಿಲ್ಲಾಧ್ಯಕ್ಷ ರಾಜಪ್ಪ ಹೊಸಮನಿ, ಉಪಾಧ್ಯಕ್ಷ ಶಿವರಾಜ್ ಕಟ್ಟಿಮನಿ, ಕಾರ್ಯದರ್ಶಿ ಗುರುನಾಥ್ ಅಡಿವೆಣ್ಣನವರ, ಖಜಾಂಚಿ ರಮೇಶ್ ಭೋವಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲೆಯ ಬಂಕಾಪುರ ಪುರಸಭೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜಪ್ಪ ಹೊಸಮನಿ ಮಾತನಾಡಿ, ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ ಸಿಬ್ಬಂದಿಗಳ ವೇತನವನ್ನು ಪ್ರತಿತಿಂಗಳು ೫ನೇ ದಿನಾಂಕದೊಳಗೆ ಪಾವತಿಸಬೇಕೆಂದು ಸರ್ಕಾರದ ಆದೇಶವಿದ್ದರೂ ಸಹ ಸ್ಥಳೀಯ ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ ಸಿಬ್ಬಂದಿಗಳಿಗೆ ಕಳೆದ ೧೦ ತಿಂಗಳಿಂದ ವೇತನ ಪಾವತಿಸಿಲ್ಲ. ೧೪ ತಿಂಗಳ ಪಿ.ಎಫ್-ಇಎಸ್ಐ ಪಾವತಿಸಿಲ್ಲ.
ಈ ಬಗ್ಗೆ ಹಲವಾರು ಬಾರಿ ಮಾಖ್ಯಾಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತಂದಿದ್ದು, ಆದಾಗ್ಯೂ, ಈ ವರೆಗಳ ವೇತನ ಪಾವತಿಮಾಡಿರುವುದಿಲ್ಲ. ಹೊರಗುತ್ತಿಗೆ ಕಾರ್ಮಿಕರು ಬಡವರಿದ್ದು,ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು ಜೀವನ ನಡೆಸಲು ತೀರಾ ತೊಂದರೆ ಆಗಿದೆ. ತಕ್ಷಣ ಗುತ್ತಿಗೆ ವಾಹನ ಚಾಲಕರ ಹಾಗೂ ಲೋಡರ್ಸ್ಗಳ ವೇತನವನ್ನು ಪಾವತಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಡ್ಡಪ್ಪ ಕಟ್ಟಿಮನಿ, ಹೊನಕೆರಪ್ಪ ಹಾರೋಗೆರಿ, ರಾಜು ಕಟ್ಟಿಮನಿ, ನವೀನ್ ಕಟ್ಟಿಮನಿ, ಧರ್ಮೇಂದ್ರ ಅಸುಂಡಿ, ಪ್ರಶಾಂತ್ಗೌಡ, ,ಮಾಲ್ತೇಶ್ ಕಟಗಿ, ಮಾಲತೇಶ ಗುಡ್ಡಣ್ಣನವರ್, ಬಸವರಾಜ ತಳವಾರ್, ಸಿದ್ದಪ್ಪ ಕಟ್ಟಿಮನಿಮತ್ತಿತರು ಭಾಗವಹಿಸಿದ್ದರು.