10 ಕೋಟಿ ರೂ. ಗಳ ವೆಚ್ಚದಲ್ಲಿ ಕನವಳ್ಳಿ ಗ್ರಾಮದ ಅಭಿವೃದ್ಧಿ. ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ.

ಹಾವೇರಿ: ಕನವಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ. ಗ್ರಾಮಕ್ಕೆ ಸರ್ಕಾರದಿಂದ ಅನುದಾನ ತಂದು ತಮ್ಮ ಸಹಕಾರದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಿಸುವೆ ಎಂದು ಶಾಸಕ, ವಿಧಾನಸಭೆ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಚಾಲನೆ ನೀಡಿ ಅವರು ಮಾತನಾಡಿದರು.
ಮುಸ್ಲಿಂ ಸಮಾಜದಲ್ಲಿರುವ ಬಡವರಿಗೆ ಸಹಾಯವಾಗಲೆಂದು ಈಗಾಗಲೇ ರೂ. 1 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರದಿಂದ ಶಾದಿ ಮಹಲ್ ನ್ನು ಮಂಜೂರು ಮಾಡಿಸಿದ್ದೇನೆ. ಅಲ್ಲದೇ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಗ್ರಾಮಕ್ಕೆ ರೂ. 5.00 ಕೋಟಿ ವೆಚ್ಚದಲ್ಲಿ ಹೊಸದಾಗಿ ಅಬ್ದುಲ್ ಕಲಾಂ ಆಜಾದ ಶಾಲೆಯನ್ನು ಮಂಜೂರು ಮಾಡಿಸಿದ್ದೇನೆ. ಸ್ವಲ್ಪ ದಿನಗಳಲ್ಲಿ ಪುನಃ ನಿಮ್ಮೂರಿಗೆ ಬಂದು ಶಾಲೆಯ ಅಡಿಗಲ್ಲು ಸಮಾರಂಭವನ್ನು ನೇರವೇರಿಸುತ್ತೇನೆ ಎಂದರು.
ಕನವಳ್ಳಿ ಗ್ರಾಮಕ್ಕೆ ಶಾಸಕನಾದ ನಂತರ ರೂ. 10.00 ಕೋಟಿ ಅಧಿಕ ಮೊತ್ತದ ಹಣವನ್ನು ಮಂಜೂರು ಮಾಡಿ ಗ್ರಾಮದಲ್ಲಿ ದೇವಸ್ಥಾನ ಹಾಗೂ ದರ್ಗಾಗಳ ಅಭಿವೃದ್ಧಿ, ಸಿಸಿ ರಸ್ತೆ, ಸಿಸಿ ಗಟಾರ, ಹೈಮಾಸ್ಕ ದೀಪಗಳನ್ನು ಈಗಾಗಲೇ ಮಂಜೂರು ಮಾಡಿಸಿದ್ದೇನೆ. ಇನ್ನೂ ಗ್ರಾಮದಲ್ಲಿ ಹಲವು ಸಮಸ್ಯೆಗಳಿರುವುದು ನನ್ನ ಗಮನದಲ್ಲಿದ್ದು, ಅವುಗಳನ್ನು ಸಹ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಮಹಿಳಾ ಸಂಘಟನೆಗಳಿಂದ ಉಪಸಭಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಪರಶುರಾಮ ಎರಿಮನಿ, ನೀಲಪ್ಪ ಸೊಟ್ಟಪ್ಪನವರ, ಶಿವಪ್ಪ ಹುಣಸಿಮರದ, ಅಬ್ದುಲ್ ಖಾದರ ಗಡ್ಡದ, ಪರಮೇಶಪ್ಪ ಮಠಪತಿ, ನೂರಜಾ ಬೂಸಿ, ನೀಲಪ್ಪ ಕೊಡಬಾಳ, ಮರಿಯಪ್ಪ ಮುದಕಣ್ಣನವರ, ಮಹಾದೇವಪ್ಪ ಸೊಟ್ಟಪ್ಪನವರ, ಪರಮೇಶಪ್ಪ ಪೂಜಾರ, ಮೌಲಾಸಾಬ್ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
.

