ಚಿತ್ರ ಕೃಪೆ ಅಂತರ್ ಜಾಲ
ಹಾವೇರಿ: ಗಣೇಶ ಚತುರ್ಥಿ ಹಬ್ಬ: ಮದ್ದು ಮಾರಾಟಕ್ಕೆ ಸ್ಥಳ ನಿಗದಿ
ಹಾವೇರಿ : ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ೧೬ ರಿಂದ ಸೆಪ್ಟೆಂಬರ್ ೩೦ರವರೆಗೆ ಮದ್ದು ಮಾರಾಟ ಮಾಡಲು ಜಿಲ್ಲೆಯಲ್ಲಿ ಈ ಕೆಳಕಂಡ ಸ್ಥಳ ನಿಗಧಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ್ ಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.
ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಕೇವಲ ಹಸಿರು ಪಟಾಕಿಗಳನಷ್ಟೇ ತಾತ್ಕಾಲಿಕ ಶೆಡ್ಡುಗಳನ್ನು ಅಗ್ನಿಶಾಮಕ ಇಲಾಖೆಯ ನಿರ್ದೇಶನದಂತೆ ನಿರ್ಮಿಸಿಕೊಂಡು , ಎಲ್ಲ ಸುರಕ್ಷರತಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಯವರಿಂದ ಪ್ರತ್ಯೇಕ ಅನುಮತಿ, ನಿರಾಕ್ಷೇಪಣಾ ಪತ್ರ ಪಡೆದುಕೊಂಡು ಮಾರಾಟ ಮಾಡಲು ಆದೇಶಿಸಲಾಗಿದೆ.
ಮದ್ದು ಮಾರಾಟ ಸ್ಥಳ: ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಹೊಸರಿತ್ತಿ ಗ್ರಾಮದ ಶಿರಡಿ ನಗರದ ಆಸ್ತಿ ನಂ.೧೦೬೬ ಪ್ಲಾಟ್, ಬ್ಯಾಡಗಿ ಹಾಗೂ ರಾಣೇಬೆನ್ನೂರು ತಾಲೂಕು ಕ್ರೀಡಾಂಗಣ, ಹಿರೇಕೆರೂರು ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರು ಗ್ರಾಮ ಪಂಚಾಯತಿ ಆಸ್ತಿ ನಂ.೧೦೮೬/೨೧ರ ಖುಲ್ಲಾ ಜಾಗೆ, ಹಂಸಭಾವಿ ಗ್ರಾಮ ಸರ್ವೇ ನಂ.೧೪೭/೪ ಆಸ್ತಿ ನಂ.೧೦೭೫/ಎ ಖುಲ್ಲಾ ಜಾಗೆ, ಶಿಗ್ಗಾಂವ ಪುರಸಭೆ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಯಲು ಜಾಗೆ, ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ಪ್ರದೇಶ, ಸವಣೂರ ಹಾಗೂ ಹಾನಗಲ್ ತಾಲೂಕು ಕ್ರೀಡಾಂಗಣ, ರಟ್ಟಿಹಳ್ಳಿ ಪಟ್ಟಣದ ರಿಸನಂ.೮೭,೮೮ ಖುಲ್ಲಾ ಜಾಗೆ, ಮಾಸೂರ ಗ್ರಾಮದ ರಿಸನಂ ೯೮೨/ಎ ಖುಲ್ಲಾ ಜಾಗೆ ಹಾಗೂ ಹಿರೇಮೊರಬ ಗ್ರಾಮದ ರಿ.ಸ.ನಂ.೧೪೭/೨ ಖುಲ್ಲಾ ಜಾಗೆ ನಿಗಧಿಪಡಿಸಲಾಗಿದೆ.