ಹಾವೇರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ, ನಿಷೇಧಿತ 11 ಕೆ.ಜಿ 843 ಗ್ರಾಂ ಗಾಂಜಾ ವಶ, ಮೂವರ ಬಂಧನ
ಹಾವೇರಿ; ಇಲ್ಲಿನ ನಾಗೇಂದ್ರನಮಟ್ಟಿಯಿಂದ ಶಾಂತಿನಗರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮೂವರು ಆರೋಪಿತರು ನಿಷೇಧಿತ ಮಾದಕ ವಸ್ತು ಗಾಂಜಾವನ್ನು (11 ಕೆ.ಜಿ 843 ಗ್ರಾಂ ಅಂದಾಜು 2,96,075-00 ರೂ ಕಿಮ್ಮತ್ತಿನ ) ಇಟ್ಟುಕೊಂಡು ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಶುಕ್ರವಾರ
ಹಾವೇರಿ ಶಹರ ಪೊಲೀಸ್ ಠಾಣೆ ಯ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಸವಣೂರಿನ ಗುಲಾಮರಸೂಲಖಾನ ಹಸನಖಾನ ಖಾಂಜಾದ, ಮಲಿಕ ರೆಹಾನ ರಿಯಾಜ್ ಅಹ್ಮದ ಬಕ್ರಿಯಾವಾಲೆ, ಪುರಖಾನ ಬಾಬಾಜಾನ ಪಟವೆಗಾರ ಬಂಧಿತರಾಗಿದ್ದು, ಇವರಿಂದ
ನಿಷೇಧಿತ ಮಾದಕ ವಸ್ತುವಾದ ಗಾಂಜಾ 11 ಕೆ.ಜಿ 843 ಗ್ರಾಂ ಅಂದಾಜು 2,96,075-00 ರೂ ಕಿಮ್ಮತ್ತಿನ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಸದರಿ ಆರೋಪಿತರಿಂದ 11 ಕೆ.ಜಿ 843 ಗ್ರಾಂ ತೂಕದ ಹೂವು, ಮೊಗ್ಗು ಬೀಜ ಮಿಶ್ರಿತ ಗಂಟು ಗಂಟಾದ ಒಣಗಿದ ಘಾಟು ವಾಸನೆಯುಳ್ಳ, ಗಾಂಜಾ ಅ.ಕಿ 2,96,075-00 ರೂ ಹಾಗೂ 01 ಮೊಬೈಲ್ ಪೋನ್, 900/- ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ಉ ಪಾಧೀಕ್ಷಕರಾದ
ಸಿ.ಗೋಪಾಲ್,
ಮತ್ತು ಹಾವೇರಿ ಉಪ-ವಿಭಾಗದ ಪೊಲೀಸ್ ಎಮ್.ಎಸ್.ಪಾಟೀಲ ಅವರ ಮಾರ್ಗದರ್ಶನದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ಪಿ.ಐ. ಮೋತಿಲಾಲ್ ಪವಾರ ತಂಡದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ತನಿಖಾಧಿಕಾರಿ ಪಿ.ಎಸ್.ಐ, ಎಸ್.ಎಮ್.ವನಹಳ್ಳಿ, ಮತ್ತು ಸಿಬ್ಬಂದಿ ಎಂ.ಜಿ.ಏರೇಶಿಮಿ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕರಪ್ಪ ಲಮಾಣಿ, ಚನ್ನಬಸಪ್ಪ ಆರ್.ಬಿ, ನೀಲಕಂಠ ಲಿಂಗರಾಜು, ಚಂದ್ರಕಾಂತ ಎಲ್.ಆರ್, ಬಸವರಾಜ ಎನ್.ಸಿ, ಮಾಲತೇಶ ಕಬ್ಬರು, ತಾಂತ್ರಿಕ ವಿಭಾಗದ ಸಿಬ್ಬಂದಿ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟೆ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಸದರ ಪ್ರಕರಣವು ಅತೀ ಸೂಕ್ಷ್ಮ ಬಾರಿ ಸಂಚಲನ ಮೂಡಿಸಿದ ಪ್ರಕರಣವಾಗಿದ್ದು, ಸಮಾಜದ ಯುವ ಜನತೆಯ ಭವಿಷ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂಧಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರು ಶಾಘಿಸಿದ್ದಾರೆ.