ಹಾವೇರ್ಯಾಗ ಎಲ್ಲಂದ್ರಲ್ಲಿ ನಿಮ್ಮ ಗಾಡಿ ನಿಲ್ಸಿರಿ ಜೋಕೆ…ನಿಮ್ಮ ಗಾಡಿಗಳಿಗೆ ನೀವೇ ಜವಾಬ್ದಾರರು ಯಾಕೆ?

Date:

 ಹಾವೇರ್ಯಾಗ ಎಲ್ಲಂದ್ರಲ್ಲಿ ನಿಮ್ಮ ಗಾಡಿ ನಿಲ್ಸಿರಿ ಜೋಕೆ…ನಿಮ್ಮ ಗಾಡಿಗಳಿಗೆ ನೀವೇ ಜವಾಬ್ದಾರರು ಯಾಕೆ?
ಹಾವೇರಿ:ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಮತ್ತೆ ಹೊಸದಾಗಿ ಸಂಚಾರ ನಿಯಮಗಳನ್ನು ಅನುಷ್ಠಾನ ಗೊಳಿಸಲು ಹಾವೇರಿ ಜಿಲ್ಲಾ ಪೊಲೀಸ್ ಹಾಗೂ ಹಾವೇರಿ- ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮುಂದಾಗಿದ್ದಾರೆ. ಸಮ-ಬೆಸ ದಿನಾಂಕಗಳ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಸಂಚಾರ ನಿಯಮ ರೂಪಿಸಿದ್ದಾರೆ.
ನಗರದ ಎಲ್ಲೆಂದರಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಜನರ ಸುಗಮ ಸಂಚಾರಕ್ಕೆ ಎದುರಾಗುತ್ತಿದ್ದ  ಅಡೆತಡೆಯನ್ನು ನಿಯಂತ್ರಿಸಲು ಸಮ ಸಂಖ್ಯೆ ಹಾಗೂ ಬೆಸ ಸಂಖ್ಯೆಯ ದಿನಾಂಕಗಳ ಮಾದರಿಯಲ್ಲಿ ಒಂದು ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕೈಗೊಂಡಿದ್ದಾರೆ.
ಹಳೆ ಪಿ.ಬಿ ರೋಡ್‌ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಿಂದ ಹಿರೇಗೌಡ್ರ ಪೆಟ್ರೋಲ್ ಬಂಕ್‌ವರೆಗೆ, ಹೊಸಮನಿ ಸಿದ್ದಪ್ಪ ವೃತ್ತದಿಂದ ಕಾಗಿನೆಲೆ ಕ್ರಾಸ್ ನವರೆಗೆ ಹಾಗೂ ಕಾಗಿನೆಲೆ ಕ್ರಾಸ್‌ನಿಂದ ಗುತ್ತಲ ಕ್ರಾಸ್‌ವರೆಗೆ ದಿನಾಂಕ 1, 3, 5 ಹೀಗೆ ಬೆಸ ಸಂಖ್ಯೆ ದಿನಾಂಕಗಳೆಂದು ಎಡ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದೆ. ಅದೇ ರೀತಿ ಸಮ ಸಂಖ್ಯೆಯ ದಿನಾಂಕಗಳಾದ 2, 4, 6 ರಂದು ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಹಾನಗಲ್ ರಸ್ತೆ ವಿವರ: ಹಾನಗಲ್ ರಸ್ತೆವ್ಯಾಪ್ತಿಯಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಿಂದ ಎಪಿಎಂಸಿ ದನದ ಮಾರುಕಟ್ಟೆಯವರೆಗೆ ಬೆಸ ಸಂಖ್ಯೆಗಳಾದ 1, 3, 5 ಹೀಗೆ ರಸ್ತೆಯ ಎಡ ಭಾಗ ದಲ್ಲಿ ಸಮ ಸಂಖ್ಯೆಯ ದಿನಗಳಾದ ದಿ.2,4,6 ಹೀಗೆ ರಸ್ತೆ ಬಲ ಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಮಾತ್ರ ನಿಲುಗಡೆ ಮಾಡಬೇಕೆಂದು ತಿಳಿಸಿದೆ.
ಎಂ.ಜಿ ರೋಡ್‌ನ ವ್ಯವಸ್ಥೆ: ನಗರದ ಮಹಾತ್ಮ ಗಾಂಧಿರಸ್ತೆ  ಮಾರ್ಗ ವ್ಯಾಪ್ತಿಯಲ್ಲಿ ಸೂರ್ಯ ಬೇಕರಿ ಕ್ರಾಸ್‌ನಿಂದ ಜೆ.ಪಿ ವೃತ್ತದವರೆಗೆ, ಜೆ.ಪಿ
ವೃತ್ತದಿಂದ ಕಿಡ್ಡಿಸ್ ಕಾರ್ನರ್ ಅಂಗಡಿವರೆಗೆ ಹಾಗೂ ಕಿಡ್ನಿಸ್ ಕಾರ್ನರ್ ಅಂಗಡಿಯಿಂದ ದ್ಯಾಮವ್ವನ ಪಾದಗಟ್ಟಿವರೆಗೆ ಬೆಸ ಸಂಖ್ಯೆಯ ದಿನಗಳಾದ ದಿನಾಂಕ 1,3,5 ಹೀಗೆ ರಸ್ತೆಯ ಎಡಭಾಗದಲ್ಲಿ ಹಾಗೂ ಸಮ ಸಂಖ್ಯೆಯ ದಿನಗಳಾದ ದಿ.2,4,6 ಹೀಗೆ ರಸ್ತೆ ಬಲ ಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಮಾಡಲು ಅನುಕೂಲ ಕಲ್ಪಿಸಲಾಗಿದೆ.
ಸಂಚಾರ ನಿಯಮ ಪಾಲನೆ ಕಡ್ಡಾಯ
ನಗರದ ರಸ್ತೆಗಳಲ್ಲಿ ವಾಹನಗಳನ್ನು ಚಲಿಸುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಈ ಸ್ಥಳದಲ್ಲಿ ಪಾರ್ಕಿಂಗ್ ಅವಕಾಶ ಇರುವುದೋ ಇಲ್ಲವೋ ಎನ್ನುವ ಬಗ್ಗೆ ತಿಳಿದುಕೊಂಡು ವಾಹನವನ್ನು ಪಾರ್ಕ್‌ ಮಾಡಬೇಕು. ರಸ್ತೆಯ ಎಡ, ಬಲ ಬದಿ ಸುಗಮ ಸಂಚಾರಕ್ಕೆ ಅಡೆ ತಡೆಯಾಗದಂತೆ, ಸಾಲಾಗಿ ವಾಹನಗಳ ಪಾರ್ಕಿಂಗ್
ಮಾಡುವುದು.
ನಿಶ್ಯಬ್ದವಲಯ
ನಗರದ ಹಳೆ ಪಿ.ಬಿ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಎದುರಿಗೆ ಹಾಗೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಎದುರಿಗೆ ನಿಶ್ಯಬ್ದ ವಲಯವೆಂದು ಗುರುತಿಸಲಾಗಿದೆ. ಈ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಅಲ್ಲದೇ ಶಹರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ, ಭಾರತೀಯ ಮೋಟರ್ ಕಾಯಿದೆ ಅಡಿ ಸ್ಥಳ ದಂಡದ : ಹಣವನ್ನು ಹಾಗೂ ವಾಹನವನ್ನು ಲಿಫ್ಟ್ ಮಾಡಿ ಠಾಣೆಗೆ ತಗೆದುಕೊಂಡು ಹೋದ ಲಿಫ್ಟಿಂಗ್ ಚಾರ್ಜ್‌ನ್ನು ಭರಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸ್ ಠಾಣೆ ಯ ಅಧಿಕಾರಿಗಳು
ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಿಮ್ಮ ಗಾಡಿಗಳಿಗೆ ನೀವೇ ಜವಾಬ್ದಾರಿ
ಹೌದು ಸಂಚಾಯ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ನಿಯಮಗಳು ಸ್ವಾಗತಾರ್ಹ. ಆದರೆ ನಗರದಲ್ಲಿ ದ್ವಿಚಕ್ರ ವಾಹನಗಳ ಕಳವಿನ ಪ್ರಕರಣಗಳು ದಿನ ನಿತ್ಯ ವರದಿಯಾಗತ್ತಲೇ ಇವೆ. ದ್ವಿಚಕ್ರ ವಾಹನ ನಲ್ಲಿಸಿ ಆಸ್ಪತ್ರೆಗೆ, ಬ್ಯಾಂಕ್, ಚಾಹಾ ಅಂಗಡಿ ಇನ್ನು ಕೆಲವೊಮ್ಮೆ ಯಾವುದೇ ಅಂಗಡಿಗಳಿಗೆ ಸವಾಋಉ ಹೋದ ಸಂದರ್ಭದಲ್ಲಿ ಹೊಂಚುಹಾಕಿ ಕಾದು ನಿಲ್ಲುವ ಕಳ್ಳ, ಖದೀಮ, ಹರಾಮಕೋರರು ಕ್ಷಣಾರ್ಧದಲ್ಲಿ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ನಗರದಲ್ಲಿ ಒಂದಿಲ್ಲೊಂದು ಕಡೆಗಳಲ್ಲಿ ದ್ವಿಚಕ್ರ ವಾಹನಗಳ ಕಳವು ನಿರಂತರವಾಗಿ ನಡೆಯಿತ್ತಲೇಇವೆ. ಇಂತ ದುಬಾರಿ ದುನಿಯಾ ದಲ್ಲಿ ಸಲಾ ಸೂಲಾಮಾಡಿ, ಬಡ್ಡಿ, ಚಕ್ರ ಬಡ್ಡಿ ಕಟ್ಟಿ ದ್ವಿಚಕ್ರ ಖರೀದಿಸಿ ಜೀವಮಾನದ ಸಾಧನೆ ಎಂದು ಹೆಮ್ಮೆಪಡುವ ಬಡ ವಾಹನ ಸವಾರರು ದ್ವಿಚಕ್ರ ವಾಹನ ಕಳೆದುಕೊಂಡ ಹ್ಯಾಪ ಮೋರಿ ಹಾಕಿಕೊಂಡು ಕಳ್ಳರನ್ನು ಶಪಿಸುತಗತಾ ದ್ವಿಚಕ್ರ ವಾಹನ ಹುಡುಕಿಕೊವಂತೆ ದೂರು ದಾಖಲಿಸಲು ಓಡಾಡುತ್ತಾರೆ.
ಸಿಸಿ ಕ್ಯಾಮರಾಗಳು ಇದ್ದರು ಸಹ ಕಳ್ಳತನ ‌ಪ್ರಕರಣಗಳು ನಡೆಯುತ್ತಿರುವದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿದೆ.ಎನಂತಿರಿ…

LEAVE A REPLY

Please enter your comment!
Please enter your name here

Subscribe

spot_imgspot_img

Popular

 ಹಾವೇರ್ಯಾಗ ಎಲ್ಲಂದ್ರಲ್ಲಿ ನಿಮ್ಮ ಗಾಡಿ ನಿಲ್ಸಿರಿ ಜೋಕೆ…ನಿಮ್ಮ ಗಾಡಿಗಳಿಗೆ ನೀವೇ ಜವಾಬ್ದಾರರು ಯಾಕೆ?
ಹಾವೇರಿ:ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಮತ್ತೆ ಹೊಸದಾಗಿ ಸಂಚಾರ ನಿಯಮಗಳನ್ನು ಅನುಷ್ಠಾನ ಗೊಳಿಸಲು ಹಾವೇರಿ ಜಿಲ್ಲಾ ಪೊಲೀಸ್ ಹಾಗೂ ಹಾವೇರಿ- ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮುಂದಾಗಿದ್ದಾರೆ. ಸಮ-ಬೆಸ ದಿನಾಂಕಗಳ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಸಂಚಾರ ನಿಯಮ ರೂಪಿಸಿದ್ದಾರೆ.
ನಗರದ ಎಲ್ಲೆಂದರಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಜನರ ಸುಗಮ ಸಂಚಾರಕ್ಕೆ ಎದುರಾಗುತ್ತಿದ್ದ  ಅಡೆತಡೆಯನ್ನು ನಿಯಂತ್ರಿಸಲು ಸಮ ಸಂಖ್ಯೆ ಹಾಗೂ ಬೆಸ ಸಂಖ್ಯೆಯ ದಿನಾಂಕಗಳ ಮಾದರಿಯಲ್ಲಿ ಒಂದು ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕೈಗೊಂಡಿದ್ದಾರೆ.
ಹಳೆ ಪಿ.ಬಿ ರೋಡ್‌ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಿಂದ ಹಿರೇಗೌಡ್ರ ಪೆಟ್ರೋಲ್ ಬಂಕ್‌ವರೆಗೆ, ಹೊಸಮನಿ ಸಿದ್ದಪ್ಪ ವೃತ್ತದಿಂದ ಕಾಗಿನೆಲೆ ಕ್ರಾಸ್ ನವರೆಗೆ ಹಾಗೂ ಕಾಗಿನೆಲೆ ಕ್ರಾಸ್‌ನಿಂದ ಗುತ್ತಲ ಕ್ರಾಸ್‌ವರೆಗೆ ದಿನಾಂಕ 1, 3, 5 ಹೀಗೆ ಬೆಸ ಸಂಖ್ಯೆ ದಿನಾಂಕಗಳೆಂದು ಎಡ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದೆ. ಅದೇ ರೀತಿ ಸಮ ಸಂಖ್ಯೆಯ ದಿನಾಂಕಗಳಾದ 2, 4, 6 ರಂದು ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಹಾನಗಲ್ ರಸ್ತೆ ವಿವರ: ಹಾನಗಲ್ ರಸ್ತೆವ್ಯಾಪ್ತಿಯಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಿಂದ ಎಪಿಎಂಸಿ ದನದ ಮಾರುಕಟ್ಟೆಯವರೆಗೆ ಬೆಸ ಸಂಖ್ಯೆಗಳಾದ 1, 3, 5 ಹೀಗೆ ರಸ್ತೆಯ ಎಡ ಭಾಗ ದಲ್ಲಿ ಸಮ ಸಂಖ್ಯೆಯ ದಿನಗಳಾದ ದಿ.2,4,6 ಹೀಗೆ ರಸ್ತೆ ಬಲ ಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಮಾತ್ರ ನಿಲುಗಡೆ ಮಾಡಬೇಕೆಂದು ತಿಳಿಸಿದೆ.
ಎಂ.ಜಿ ರೋಡ್‌ನ ವ್ಯವಸ್ಥೆ: ನಗರದ ಮಹಾತ್ಮ ಗಾಂಧಿರಸ್ತೆ  ಮಾರ್ಗ ವ್ಯಾಪ್ತಿಯಲ್ಲಿ ಸೂರ್ಯ ಬೇಕರಿ ಕ್ರಾಸ್‌ನಿಂದ ಜೆ.ಪಿ ವೃತ್ತದವರೆಗೆ, ಜೆ.ಪಿ
ವೃತ್ತದಿಂದ ಕಿಡ್ಡಿಸ್ ಕಾರ್ನರ್ ಅಂಗಡಿವರೆಗೆ ಹಾಗೂ ಕಿಡ್ನಿಸ್ ಕಾರ್ನರ್ ಅಂಗಡಿಯಿಂದ ದ್ಯಾಮವ್ವನ ಪಾದಗಟ್ಟಿವರೆಗೆ ಬೆಸ ಸಂಖ್ಯೆಯ ದಿನಗಳಾದ ದಿನಾಂಕ 1,3,5 ಹೀಗೆ ರಸ್ತೆಯ ಎಡಭಾಗದಲ್ಲಿ ಹಾಗೂ ಸಮ ಸಂಖ್ಯೆಯ ದಿನಗಳಾದ ದಿ.2,4,6 ಹೀಗೆ ರಸ್ತೆ ಬಲ ಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಮಾಡಲು ಅನುಕೂಲ ಕಲ್ಪಿಸಲಾಗಿದೆ.
ಸಂಚಾರ ನಿಯಮ ಪಾಲನೆ ಕಡ್ಡಾಯ
ನಗರದ ರಸ್ತೆಗಳಲ್ಲಿ ವಾಹನಗಳನ್ನು ಚಲಿಸುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಈ ಸ್ಥಳದಲ್ಲಿ ಪಾರ್ಕಿಂಗ್ ಅವಕಾಶ ಇರುವುದೋ ಇಲ್ಲವೋ ಎನ್ನುವ ಬಗ್ಗೆ ತಿಳಿದುಕೊಂಡು ವಾಹನವನ್ನು ಪಾರ್ಕ್‌ ಮಾಡಬೇಕು. ರಸ್ತೆಯ ಎಡ, ಬಲ ಬದಿ ಸುಗಮ ಸಂಚಾರಕ್ಕೆ ಅಡೆ ತಡೆಯಾಗದಂತೆ, ಸಾಲಾಗಿ ವಾಹನಗಳ ಪಾರ್ಕಿಂಗ್
ಮಾಡುವುದು.
ನಿಶ್ಯಬ್ದವಲಯ
ನಗರದ ಹಳೆ ಪಿ.ಬಿ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಎದುರಿಗೆ ಹಾಗೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಎದುರಿಗೆ ನಿಶ್ಯಬ್ದ ವಲಯವೆಂದು ಗುರುತಿಸಲಾಗಿದೆ. ಈ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಅಲ್ಲದೇ ಶಹರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ, ಭಾರತೀಯ ಮೋಟರ್ ಕಾಯಿದೆ ಅಡಿ ಸ್ಥಳ ದಂಡದ : ಹಣವನ್ನು ಹಾಗೂ ವಾಹನವನ್ನು ಲಿಫ್ಟ್ ಮಾಡಿ ಠಾಣೆಗೆ ತಗೆದುಕೊಂಡು ಹೋದ ಲಿಫ್ಟಿಂಗ್ ಚಾರ್ಜ್‌ನ್ನು ಭರಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸ್ ಠಾಣೆ ಯ ಅಧಿಕಾರಿಗಳು
ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಿಮ್ಮ ಗಾಡಿಗಳಿಗೆ ನೀವೇ ಜವಾಬ್ದಾರಿ
ಹೌದು ಸಂಚಾಯ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ನಿಯಮಗಳು ಸ್ವಾಗತಾರ್ಹ. ಆದರೆ ನಗರದಲ್ಲಿ ದ್ವಿಚಕ್ರ ವಾಹನಗಳ ಕಳವಿನ ಪ್ರಕರಣಗಳು ದಿನ ನಿತ್ಯ ವರದಿಯಾಗತ್ತಲೇ ಇವೆ. ದ್ವಿಚಕ್ರ ವಾಹನ ನಲ್ಲಿಸಿ ಆಸ್ಪತ್ರೆಗೆ, ಬ್ಯಾಂಕ್, ಚಾಹಾ ಅಂಗಡಿ ಇನ್ನು ಕೆಲವೊಮ್ಮೆ ಯಾವುದೇ ಅಂಗಡಿಗಳಿಗೆ ಸವಾಋಉ ಹೋದ ಸಂದರ್ಭದಲ್ಲಿ ಹೊಂಚುಹಾಕಿ ಕಾದು ನಿಲ್ಲುವ ಕಳ್ಳ, ಖದೀಮ, ಹರಾಮಕೋರರು ಕ್ಷಣಾರ್ಧದಲ್ಲಿ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ನಗರದಲ್ಲಿ ಒಂದಿಲ್ಲೊಂದು ಕಡೆಗಳಲ್ಲಿ ದ್ವಿಚಕ್ರ ವಾಹನಗಳ ಕಳವು ನಿರಂತರವಾಗಿ ನಡೆಯಿತ್ತಲೇಇವೆ. ಇಂತ ದುಬಾರಿ ದುನಿಯಾ ದಲ್ಲಿ ಸಲಾ ಸೂಲಾಮಾಡಿ, ಬಡ್ಡಿ, ಚಕ್ರ ಬಡ್ಡಿ ಕಟ್ಟಿ ದ್ವಿಚಕ್ರ ಖರೀದಿಸಿ ಜೀವಮಾನದ ಸಾಧನೆ ಎಂದು ಹೆಮ್ಮೆಪಡುವ ಬಡ ವಾಹನ ಸವಾರರು ದ್ವಿಚಕ್ರ ವಾಹನ ಕಳೆದುಕೊಂಡ ಹ್ಯಾಪ ಮೋರಿ ಹಾಕಿಕೊಂಡು ಕಳ್ಳರನ್ನು ಶಪಿಸುತಗತಾ ದ್ವಿಚಕ್ರ ವಾಹನ ಹುಡುಕಿಕೊವಂತೆ ದೂರು ದಾಖಲಿಸಲು ಓಡಾಡುತ್ತಾರೆ.
ಸಿಸಿ ಕ್ಯಾಮರಾಗಳು ಇದ್ದರು ಸಹ ಕಳ್ಳತನ ‌ಪ್ರಕರಣಗಳು ನಡೆಯುತ್ತಿರುವದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿದೆ.ಎನಂತಿರಿ…

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...