ಅಂದು,ಇಂದು, ಮುಂದೆಯೂ ಜಗದ ಬೆಳಕು ವಿಶ್ವಗುರು ಬಸವಣ್ಣನವರು

Date:

ಅಂದು,ಇಂದು, ಮುಂದೆಯೂ ಜಗದ ಬೆಳಕು ವಿಶ್ವಗುರು ಬಸವಣ್ಣನವರು

ಮಹಾಮನೆಯ ಕಟ್ಟಿದೆ,
ಸತ್ಯಶರಣರಿಗೆ ತೊತ್ತು ಭೃತ್ಯನಾಗಿ
ಸವೆದು ಬದುಕಿದೆನು,
ಕರ್ತನ ಬೆಸೆನು ಮತ್ತೆ ಬರಲೆಂದಟ್ಟಿದರೆ
ಕೂಡಲ ಸಂಗಮ ದೇವನ ನಿರೂಪಕ್ಕೆ
ಮಹಾಪ್ರಸಾದವೆಂದೆನು.
ಭಾರತದ ಇತಿಹಾಸವನ್ನು ಅಧ್ಯಯನ ಮಾಡಿದ ವರಿಗೆ ಒಂದು ವಿಷಯ ಮನದಟ್ಟಾಗುತ್ತದೆ.  ಬಸವಣ್ಣನ ಅನುಯಾಯಿಗಳು ಎನಿಸಿಕೊಂಡ ಒಂದು ಬಹುದೊಡ್ಡ ಜನಾಂಗ ಅಂದು ೧೨ನೇ ಶತಮಾನದಲ್ಲಿ ಜನಿವಾರವನ್ನು ಧರಿಸಿದಂತಹ  ಬ್ರಾಹ್ಮಣರಲ್ಲ. ಖಡ್ಗವನ್ನು ಹಿಡಿದು ಹೋರಾಡಿದಂತ ಕ್ಷತ್ರಿಯರಲ್ಲ. ವ್ಯಾಪಾರವನ್ನು ವೃತ್ತಿಯನ್ನಾಗಿ ಮಾಡಿಕೊಂಡಾಗ ವೈಶ್ಯರಲ್ಲ. ಇವರೆಲ್ಲರ ಸೇವೆಗಾಗಿ ನಿಂತ ಶೂದ್ರ ವರ್ಗ. ಶ್ರಮಿಕವರ್ಗ. ಜನಸಮೂದಾಯದ ಶೇ. ೮೦ರಷ್ಟು ಇರುವ ಈ ವರ್ಗ ಅಂದು ಕಷ್ಟ ಕೋಟಲೆಯಲ್ಲಿ ಸಿಕ್ಕಿತ್ತು. ಅಂದು ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ. ಅವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡಲಾಗುತ್ತಿತ್ತು. ಒಳ್ಳೆಯ ಬಟ್ಟೆ, ಒಳ್ಳೆಯ ಆಹಾರ ಅವರಿಗೆ ಕನಸಿನ ಮಾತಾಗಿತ್ತು. ಸಮಾಜವು ಇಂತಹ ಹೀನ ದೆಸೆಯಲ್ಲಿದ್ದಾಗಲೇ ಬಸವಣ್ಣನವರ ಜನನವಾಯಿತು.
ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿಯ ಅಗ್ರಹಾರವೊಂದರಲ್ಲಿ ಮಧು ವರಸ ಮತ್ತು  ಮಾದಲಾಂಬಿಕೆಯರ ಪುತ್ರರಾಗಿ ಜನಿಸಿದ  ಬಸವಣ್ಣ ತಮ್ಮಿ ಇಡೀ ಬದುಕನ್ನು ಸಮಾಜದ ಅಂಧಕಾರವನ್ನು ಕಳೆಯುವುದರಲ್ಲೆ ಕಳೆದರು.  ಶೋಷಣೆ ಮುಕ್ತ, ಸರ್ವಸಮಾನತೆಯ ನಾಡನ್ನು ಕಟ್ಟುವ ಕನಸಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು.  ಅಂದು ಕೂಡ ಸ್ತ್ರೀಯನ್ನು ಸಮಾಜ ಕೀಳಾಗಿಯೇ ನೋಡುತ್ತಿತ್ತು. ಶೂದ್ರರಂತೆ ಅವರ ಬದುಕು ಕೂಡ ದಯನೀಯವಾಗಿತ್ತು. ಮಹಿಳೆಗೆ ಯಾವುದೇ ಧಾರ್ಮಿಕ ಆಚರಣೆಯ ಹಕ್ಕಿರಲಿಲ್ಲ.

೮ನೇಯ ವಯಸ್ಸಿನ  ಬಾಲಕ ಬಸವಣ್ಣನವರು ಅಂದೇ ತನಗಿಂತ ಹಿರಿಯಳಾದ ಅಕ್ಕನಿಗಿಲ್ಲದ ಜನಿವಾರ ತನಗೇಕೆ ಎಂದು ಪ್ರಶ್ನಿಸಿದರು. ಪರಿಣಾಮ ಅಗ್ರಹಾರದ ಹಿರಿಯರಿಂದ  ಬಹಿಷ್ಕಾರದ ಸಜೆ. ಇದಕ್ಕೆಲ್ಲ ಅಂಜದ ಬಸವಣ್ಣ ಕೂಡಲ ಸಂಗಮಕ್ಕೆ ಬರುವಂತಾಯಿತು. ಶೈವ ನಾಥ ಪಂಥದ ಗುರುಗಳಾದ ಜಾತವೇದ ಮುನಿಗಳಲ್ಲಿ ಶಿಷ್ಯವೃತ್ತಿ ಆರಂಭಿಸಿದರು. ಗುರುಗಳ ಮಾರ್ಗದರ್ಶನದಲ್ಲಿ ವೇದೋಪನಿಷತ್ತುಗಳನ್ನೆಲ್ಲ ಅಭ್ಯಸಿಸಿದ ಬಸವಣ್ಣನವರು ನಮ್ಮ ತತ್ವ ಹಾಗೂ ಬದುಕಿನ ಮಧ್ಯೆ ದೊಡ್ಡ ಕಂದರ ಏರ್ಪಟ್ಟಿರುವುದನ್ನು  ತಕ್ಷಣಕ್ಕೆ ಗುರುತಿಸಿಕೊಂಡರು. ಈ ಕಂದರವನ್ನು ಮುಚ್ಚಿ ಸಮಾನತೆಯನ್ನು ತಾರದೇ ಈ ಎಲ್ಲ ತತ್ವ ಸಿದ್ಧಾಂತಗಳಿಗೆ ಅರ್ಥ ವಿಲ್ಲ ಎಂದು ಮನಗಂಡ ಅವರು ಸಮಾಜದ ಮೌಢ್ಯಗಳ ವಿರುಧ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತರು. ದೇವಸ್ಥಾನಗಳಲ್ಲಿ ಶೂದ್ರರಿಗೆ ಪ್ರವೇಶ ನೀಡದಿದ್ದುದನ್ನು ಪ್ರಶ್ನಿಸಿ ದೇವಸ್ಥಾನಗಳನ್ನೇ ಧಿಕ್ಕರಿಸಿದರು.
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ;
ಎನ್ನಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮದೇವಾ
ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ.
ಎಂದು ಸಾರಿದ ಬಸವಣ್ಣ ಸಮಾನತೆಯ ಕುರುಹಾಗಿ ಉಚ್ಚ ನೀಚ ಎಂದು ಭೇದ ಎಣಿಸದೇ ಎಲ್ಲರಿಗು ಇಷ್ಟಲಿಂಗ ದಯಪಾಲಿಸಿದರು. ಭಾರತೀಯ ಪರಂಪರೆಯಲ್ಲಿನ ವರ್ಣ, ವರ್ಗಭೇದ ನೀತಿಗಳನ್ನು ಧಿಕ್ಕರಿಸಿದ ಬಸವಧರ್ಮ ಕಾಯಕಧರ್ಮವಾಗಿ ಉದಯಿಸಿತು. ಈ ಧರ್ಮದ ವೈಚಾರಿಕ ನಿಲುವನ್ನು ಕಂಡ ನಾಡಿನ ಎಲ್ಲ ವರ್ಗದ ಜನರು ಬಸವಧರ್ಮಕ್ಕೆ ಸೇರಿಕೊಂಡರು. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ  ದೂಳಯ್ಯ, ಶ್ವಪಚಯ್ಯ, ಉರಿಲಿಂಗ ಪೆದ್ದಿ, ಮೇದಾರ ಕೇತಯ್ಯ,  ಕುಂಬಾರ ಗುಂಡಯ್ಯ, ಕುರುಬ ಗೊಲ್ಲಾಳ, ತಳವಾರ  ರಾಮಯ್ಯ, ಈಳಿಗೇರ ಮಾರಯ್ಯ,  ಒಕ್ಕಲಿಗರ ಮುದ್ದಣ್ಣ,  ನುಲಿಯ ಚೆಂದಯ್ಯ,  ಬಡಿಗೇರ ಬಸವಣ್ಣ, ಸೂಳೆ ಸಂಕವ್ವೆ,  ಅಮುಗೆ ರಾಯಮ್ಮ,  ಅಪಘಾನಿಸ್ತಾನದಿಂದ ಬಂದ ಸೂಫಿ ಸಂತ, ಮರುಳ ಶಂಕರದೇವ, ಮೋಳಿಗೆ ಮಾರಯ್ಯ, ಮುಕ್ತಾಯಕ್ಕ, ಅಜಗಣ್ಣ, ಮಡಿವಾಳ ಮಾಚಿದೇವ,  ಅಂಬಿಗರ ಚೌಡಯ್ಯ,  ವೈದ್ಯ ಸಂಗಣ್ಣ, ಚೋದರ ಮಾಯಣ್ಣ, ಶ್ರೀಶೈಲದ ಪಂಡಿತಾರಾಧ್ಯ ಮೊದಲಾದವರು  ಈ ನೂತನ ಧರ್ಮದಲ್ಲಿ ಸೇರಿಕೊಂಡರು.
ಪ್ರಾಣಿಬಲಿ ಮೊದಲಾದ ವೈದಿಕ ಆಚರಣೆಗಳನ್ನು ಖಂಡಿಸಿದ ಬಸವಣ್ಣ-
ಕಿಚ್ಚು ದೈವವೆಂದು ಹವಿಯನಿಕ್ಕುವ
ಬ್ರಾಹ್ಮಣನ ಮನೆಯೇ ಕಿಚ್ಚೆದ್ದು ಉರಿಯುವಾಗ
ಬಚ್ಚಲ ನೀರ, ಬೀದಿಯ ಹುಡಿ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯ, ಕೂಡಲ ಸಂಗಮದೇವಾ
ಒಮ್ಮನೆ ಮರೆದು ನಿಂದಿಸುತ್ತಿದ್ದರಯ್ಯ ಎಂದು ಛೇಡಿಸಿದರು.
ಆದರೆ, ಇಂದೇನಾಗಿದೆ? ಬಸವಣ್ಣನವರ ಅನು ಯಾಯಿಗಳೆಂದು ಹೇಳಿಕೊಳ್ಳುವ ಲಿಂಗಾಣತರು ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಮೂಢನಂಬಿಕೆಗಳ ದಾಸರಾಗುತ್ತಿದ್ದಾರೆ. ಬಸವಣ್ಣನವರು ಯಾವ ಮೌಢ್ಯಗಳನ್ನು ಧಿಕ್ಕರಿಸಿದರೋ.. ಅವೇ ಮೌಢ್ಯಗಳನ್ನು ಅಪ್ಪಿಕೊಂಡಿದ್ದಾರೆ. ಕೆಲವು ಮಠಾಧೀಶ್ವರರೇ ಗುಡಿಗುಂಡಾರಗಳನ್ನು ಕಟ್ಟಲು ಆರಂಭಿಸಿದ್ದಾರೆ. ವಾಸ್ತು, ಜ್ಯೋತಿಷ್ಯ ಮೊದಲಾದವುಗಳಿಗೆ ಜನರು ಮರುಳಾಗುತ್ತಿದ್ದಾರೆ. ಇದಕ್ಕೆಲ್ಲ ಜನರ ಅಜ್ಞಾನ ಮತ್ತು ಅಧೈರ್ಯವೇ ಕಾರಣ. ಹಾಗೆಂದೇ ಅಂದೇ ಬ¸ವಣ್ಣನವರು-
ನಾಳೆಗೆ ಬಪ್ಪುದು ನಮಗಿಂದೇ ಬರಲಿ;
ಇಂದು ಬಪ್ಪುದು ನಮಗಿಗಲೇ ಬರಲಿ;
ಇದಕಾರಂಜುವರು, ಇದಕಾರಳುಕುವರು;
`ಜಾತಸ್ಯ ಮರಣಂ ಧೃವಂ’ ಎಂಬುದಾಗಿ
ನಮ್ಮ ಕೂಡಲಸಂಗನ ಶರಣರ
ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿ ಗಳವಲ್ಲ. ಎಂದು ಗುಡುಗುತ್ತಾರೆ. ಹುಟ್ಟಿನಿಂದ ಎಲ್ಲರೂ ಮನುಷ್ಯರೆ, ವೃತ್ತಿಯಿಂದ ಜಾತಿ. ಆದ್ದರಿಂದ ಜಾತಿಗಿಂತ ರೀತಿ-ನೀತಿ ಮುಖ್ಯ ಎಂಬುದನ್ನು ಎತ್ತಿ ಹಿಡಿಯುತ್ತಾರೆ.
ಕಾಸಿ ಕಮ್ಮಾರನಾದ
ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ
ವೇದವನೋದಿ ಹಾರುವನಾದ;
ಕರ್ಣದಲ್ಲಿ ಜನಿಸಿದವರುಂಟೇ?
ಕೂಡಲಸAಗಮದೇವಾ
ಎಂದು ಬಸವಣ್ಣ ಜಾತಿ ತಾರತಮ್ಯಗಳನ್ನು ಖಂಡಿಸುತ್ತಾರೆ.
ಜಾತಿಭೂತವನ್ನು ತೊಲಗಿಸಬೇಕೆಂದು ಆಗಲೇ ನಿರ್ಧರಿಸಿದ್ದ ಬಸವಣ್ಣನವರು ಸಮಗಾರ ಹರಳಯ್ಯನ ಮಗ ಶೀಲವಂತ ಹಾಗೂ ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯವತಿಯ ವಿವಾಹವನ್ನು ತಾವೇ ಮುಂದು ನಿಂತು ನೆರವೇರಿಸುತ್ತಾರೆ. ಈಗಿನಂತೆ ಆಗಲೂ ಇದ್ದ ಸಂಪ್ರದಾಯವಾದಿಗಳು ಇದನ್ನು ವರ್ಣ ಸಂಕರ ವೆಂದ ಬಿಜ್ಜಳನ ಬಳಿ ದೂರು ಒಯ್ಯುತ್ತಾರೆ. ಶರಣರು ಹಾಗೂ ಸಂಪ್ರದಾಯವಾದಿಗಳ ಮಧ್ಯೆ  ಆಗ ದೊಡ್ಡ ಸಂಘರ್ಷವೇ ನಡೆಯುತ್ತದೆ.ಶರಣರ ಮೇಲೆ ದೌರ್ಜನ್ಯ ನಡೆಯುತ್ತದೆ. ಅನೇಕ ಶರಣರ ಕೊಲೆ ಆಗುತ್ತದೆ. ಇದರಿಂದ ಬೇಸತ್ತ ಬಸವಣ್ಣ ಕೂಡಲಸಂಗಮಕ್ಕೆ ಬಂದು ಐಕ್ಯರಾದರೆಂದು ಹೇಳಲಾಗುತ್ತಿದೆ.  ಅಂದು ಬಸವಣ್ಣನವರು ಬೆಳಗಿಸಿದ ಜ್ಞಾನಜ್ಯೋತಿ ನಾಡಿನ ಹಲವು ಮಠಗಳಲ್ಲಲಿ ಬೆಳಗುತ್ತಿದೆ.
ವಿಷಾದದ ಸಂಗತಿ ಎಂದರೆ ಕೆಲವು ಮಠಗಳು ಬಸವಣ್ಣನವರ ವಚನಗಳನ್ನು ಉಪದೇಶಿಸುತ್ತ ಅದಕ್ಕೆ ತದ್ವಿರುಧ್ಧವಾದ ದಿಕ್ಕಿನಲ್ಲಿ ಸಾಗಿವೆ. ಬಸವಣ್ಣ ಸ್ಥಾವರಕ್ಕಳಿವುಂಟು ಎಂದು ಸಾರಿದರೆ ಇವರು ಮಠಗಳನ್ನು ಕಟ್ಟುತ್ತಸಾಗಿದ್ದಾರೆ. ಬಸವಣ್ಣನವರು ದೇವಭಾಷೆ ಸಂಸ್ಕೃತವನ್ನು ತೊಲಗಿಸಿ, ಜನಭಾಷೆ ಕನ್ನಡವನ್ನು ದೈವತ್ವಕ್ಕೆ ಏರಿಸಿದರೆ, ಇವರು ಜನಭಾಷೆ ಕನ್ನಡವನ್ನು ಧಿಕ್ಕರಿಸಿ ಸಂಸ್ಕೃತದ ಪೂಜೆಗೆ ಹೊರಟಿದ್ದಾರೆ. ಈ ನಿಟ್ಟಿನಲ್ಲಿ ನೋಡಿದಾಗ ಉತ್ತಂಗಿ ಚನ್ನಪ್ಪ ಅವರು ಕೆಲ ಮಠಾಧೀಶರು ಬಸವಣ್ಣನವರಿಗೆ ಬಹಿರಂಗ ವಿರೋಧಿಗಳು; ವಿರಕ್ತರು ಅಂತರAಗದ ಶತೃಗಳು’ ಎಂದು ಹೇಳಿದ್ದು ಎಷ್ಟೊಂದು ಅರ್ಥಪೂರ್ಣ ಎನ್ನಿಸುತ್ತದೆ. ಈ ಎಲ್ಲ ಕಾರಣಕ್ಕಾಗಿ ಬಸವಣ್ಣನವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ನಡೆ ನುಡಿಗಳನ್ನೇ ಆದರ್ಶವಾಗಿರಿಸಿಕೊಂಡು ಬದುಕುವುದು ಇಂದಿನ ಅಗತ್ಯವಾಗಿದೆ. ಇಂದಿಗೂ ಸಮಾಜದಲ್ಲಿ ಬಹುಸಂಖ್ಯಾತರಾಗಿರುವ ಶೋಷಿತವರ್ಗ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಅಲ್ಲದೇ, ವಚನಗಳ ಮೂಲಕ ನಮ್ಮಲ್ಲಿ ಅಂತಹ ಜಾಗೃತಿ ಮೂಡಿ ಬರಬೇಕಾಗಿದೆ.
ಲೇಖನ;  ಶಿವಯೋಗಿ ಬೆನ್ನೂರು, ಹಾವೇರಿ

LEAVE A REPLY

Please enter your comment!
Please enter your name here

Subscribe

spot_imgspot_img

Popular

ಅಂದು,ಇಂದು, ಮುಂದೆಯೂ ಜಗದ ಬೆಳಕು ವಿಶ್ವಗುರು ಬಸವಣ್ಣನವರು

ಮಹಾಮನೆಯ ಕಟ್ಟಿದೆ,
ಸತ್ಯಶರಣರಿಗೆ ತೊತ್ತು ಭೃತ್ಯನಾಗಿ
ಸವೆದು ಬದುಕಿದೆನು,
ಕರ್ತನ ಬೆಸೆನು ಮತ್ತೆ ಬರಲೆಂದಟ್ಟಿದರೆ
ಕೂಡಲ ಸಂಗಮ ದೇವನ ನಿರೂಪಕ್ಕೆ
ಮಹಾಪ್ರಸಾದವೆಂದೆನು.
ಭಾರತದ ಇತಿಹಾಸವನ್ನು ಅಧ್ಯಯನ ಮಾಡಿದ ವರಿಗೆ ಒಂದು ವಿಷಯ ಮನದಟ್ಟಾಗುತ್ತದೆ.  ಬಸವಣ್ಣನ ಅನುಯಾಯಿಗಳು ಎನಿಸಿಕೊಂಡ ಒಂದು ಬಹುದೊಡ್ಡ ಜನಾಂಗ ಅಂದು ೧೨ನೇ ಶತಮಾನದಲ್ಲಿ ಜನಿವಾರವನ್ನು ಧರಿಸಿದಂತಹ  ಬ್ರಾಹ್ಮಣರಲ್ಲ. ಖಡ್ಗವನ್ನು ಹಿಡಿದು ಹೋರಾಡಿದಂತ ಕ್ಷತ್ರಿಯರಲ್ಲ. ವ್ಯಾಪಾರವನ್ನು ವೃತ್ತಿಯನ್ನಾಗಿ ಮಾಡಿಕೊಂಡಾಗ ವೈಶ್ಯರಲ್ಲ. ಇವರೆಲ್ಲರ ಸೇವೆಗಾಗಿ ನಿಂತ ಶೂದ್ರ ವರ್ಗ. ಶ್ರಮಿಕವರ್ಗ. ಜನಸಮೂದಾಯದ ಶೇ. ೮೦ರಷ್ಟು ಇರುವ ಈ ವರ್ಗ ಅಂದು ಕಷ್ಟ ಕೋಟಲೆಯಲ್ಲಿ ಸಿಕ್ಕಿತ್ತು. ಅಂದು ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ. ಅವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡಲಾಗುತ್ತಿತ್ತು. ಒಳ್ಳೆಯ ಬಟ್ಟೆ, ಒಳ್ಳೆಯ ಆಹಾರ ಅವರಿಗೆ ಕನಸಿನ ಮಾತಾಗಿತ್ತು. ಸಮಾಜವು ಇಂತಹ ಹೀನ ದೆಸೆಯಲ್ಲಿದ್ದಾಗಲೇ ಬಸವಣ್ಣನವರ ಜನನವಾಯಿತು.
ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿಯ ಅಗ್ರಹಾರವೊಂದರಲ್ಲಿ ಮಧು ವರಸ ಮತ್ತು  ಮಾದಲಾಂಬಿಕೆಯರ ಪುತ್ರರಾಗಿ ಜನಿಸಿದ  ಬಸವಣ್ಣ ತಮ್ಮಿ ಇಡೀ ಬದುಕನ್ನು ಸಮಾಜದ ಅಂಧಕಾರವನ್ನು ಕಳೆಯುವುದರಲ್ಲೆ ಕಳೆದರು.  ಶೋಷಣೆ ಮುಕ್ತ, ಸರ್ವಸಮಾನತೆಯ ನಾಡನ್ನು ಕಟ್ಟುವ ಕನಸಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು.  ಅಂದು ಕೂಡ ಸ್ತ್ರೀಯನ್ನು ಸಮಾಜ ಕೀಳಾಗಿಯೇ ನೋಡುತ್ತಿತ್ತು. ಶೂದ್ರರಂತೆ ಅವರ ಬದುಕು ಕೂಡ ದಯನೀಯವಾಗಿತ್ತು. ಮಹಿಳೆಗೆ ಯಾವುದೇ ಧಾರ್ಮಿಕ ಆಚರಣೆಯ ಹಕ್ಕಿರಲಿಲ್ಲ.

೮ನೇಯ ವಯಸ್ಸಿನ  ಬಾಲಕ ಬಸವಣ್ಣನವರು ಅಂದೇ ತನಗಿಂತ ಹಿರಿಯಳಾದ ಅಕ್ಕನಿಗಿಲ್ಲದ ಜನಿವಾರ ತನಗೇಕೆ ಎಂದು ಪ್ರಶ್ನಿಸಿದರು. ಪರಿಣಾಮ ಅಗ್ರಹಾರದ ಹಿರಿಯರಿಂದ  ಬಹಿಷ್ಕಾರದ ಸಜೆ. ಇದಕ್ಕೆಲ್ಲ ಅಂಜದ ಬಸವಣ್ಣ ಕೂಡಲ ಸಂಗಮಕ್ಕೆ ಬರುವಂತಾಯಿತು. ಶೈವ ನಾಥ ಪಂಥದ ಗುರುಗಳಾದ ಜಾತವೇದ ಮುನಿಗಳಲ್ಲಿ ಶಿಷ್ಯವೃತ್ತಿ ಆರಂಭಿಸಿದರು. ಗುರುಗಳ ಮಾರ್ಗದರ್ಶನದಲ್ಲಿ ವೇದೋಪನಿಷತ್ತುಗಳನ್ನೆಲ್ಲ ಅಭ್ಯಸಿಸಿದ ಬಸವಣ್ಣನವರು ನಮ್ಮ ತತ್ವ ಹಾಗೂ ಬದುಕಿನ ಮಧ್ಯೆ ದೊಡ್ಡ ಕಂದರ ಏರ್ಪಟ್ಟಿರುವುದನ್ನು  ತಕ್ಷಣಕ್ಕೆ ಗುರುತಿಸಿಕೊಂಡರು. ಈ ಕಂದರವನ್ನು ಮುಚ್ಚಿ ಸಮಾನತೆಯನ್ನು ತಾರದೇ ಈ ಎಲ್ಲ ತತ್ವ ಸಿದ್ಧಾಂತಗಳಿಗೆ ಅರ್ಥ ವಿಲ್ಲ ಎಂದು ಮನಗಂಡ ಅವರು ಸಮಾಜದ ಮೌಢ್ಯಗಳ ವಿರುಧ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತರು. ದೇವಸ್ಥಾನಗಳಲ್ಲಿ ಶೂದ್ರರಿಗೆ ಪ್ರವೇಶ ನೀಡದಿದ್ದುದನ್ನು ಪ್ರಶ್ನಿಸಿ ದೇವಸ್ಥಾನಗಳನ್ನೇ ಧಿಕ್ಕರಿಸಿದರು.
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ;
ಎನ್ನಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮದೇವಾ
ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ.
ಎಂದು ಸಾರಿದ ಬಸವಣ್ಣ ಸಮಾನತೆಯ ಕುರುಹಾಗಿ ಉಚ್ಚ ನೀಚ ಎಂದು ಭೇದ ಎಣಿಸದೇ ಎಲ್ಲರಿಗು ಇಷ್ಟಲಿಂಗ ದಯಪಾಲಿಸಿದರು. ಭಾರತೀಯ ಪರಂಪರೆಯಲ್ಲಿನ ವರ್ಣ, ವರ್ಗಭೇದ ನೀತಿಗಳನ್ನು ಧಿಕ್ಕರಿಸಿದ ಬಸವಧರ್ಮ ಕಾಯಕಧರ್ಮವಾಗಿ ಉದಯಿಸಿತು. ಈ ಧರ್ಮದ ವೈಚಾರಿಕ ನಿಲುವನ್ನು ಕಂಡ ನಾಡಿನ ಎಲ್ಲ ವರ್ಗದ ಜನರು ಬಸವಧರ್ಮಕ್ಕೆ ಸೇರಿಕೊಂಡರು. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ  ದೂಳಯ್ಯ, ಶ್ವಪಚಯ್ಯ, ಉರಿಲಿಂಗ ಪೆದ್ದಿ, ಮೇದಾರ ಕೇತಯ್ಯ,  ಕುಂಬಾರ ಗುಂಡಯ್ಯ, ಕುರುಬ ಗೊಲ್ಲಾಳ, ತಳವಾರ  ರಾಮಯ್ಯ, ಈಳಿಗೇರ ಮಾರಯ್ಯ,  ಒಕ್ಕಲಿಗರ ಮುದ್ದಣ್ಣ,  ನುಲಿಯ ಚೆಂದಯ್ಯ,  ಬಡಿಗೇರ ಬಸವಣ್ಣ, ಸೂಳೆ ಸಂಕವ್ವೆ,  ಅಮುಗೆ ರಾಯಮ್ಮ,  ಅಪಘಾನಿಸ್ತಾನದಿಂದ ಬಂದ ಸೂಫಿ ಸಂತ, ಮರುಳ ಶಂಕರದೇವ, ಮೋಳಿಗೆ ಮಾರಯ್ಯ, ಮುಕ್ತಾಯಕ್ಕ, ಅಜಗಣ್ಣ, ಮಡಿವಾಳ ಮಾಚಿದೇವ,  ಅಂಬಿಗರ ಚೌಡಯ್ಯ,  ವೈದ್ಯ ಸಂಗಣ್ಣ, ಚೋದರ ಮಾಯಣ್ಣ, ಶ್ರೀಶೈಲದ ಪಂಡಿತಾರಾಧ್ಯ ಮೊದಲಾದವರು  ಈ ನೂತನ ಧರ್ಮದಲ್ಲಿ ಸೇರಿಕೊಂಡರು.
ಪ್ರಾಣಿಬಲಿ ಮೊದಲಾದ ವೈದಿಕ ಆಚರಣೆಗಳನ್ನು ಖಂಡಿಸಿದ ಬಸವಣ್ಣ-
ಕಿಚ್ಚು ದೈವವೆಂದು ಹವಿಯನಿಕ್ಕುವ
ಬ್ರಾಹ್ಮಣನ ಮನೆಯೇ ಕಿಚ್ಚೆದ್ದು ಉರಿಯುವಾಗ
ಬಚ್ಚಲ ನೀರ, ಬೀದಿಯ ಹುಡಿ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯ, ಕೂಡಲ ಸಂಗಮದೇವಾ
ಒಮ್ಮನೆ ಮರೆದು ನಿಂದಿಸುತ್ತಿದ್ದರಯ್ಯ ಎಂದು ಛೇಡಿಸಿದರು.
ಆದರೆ, ಇಂದೇನಾಗಿದೆ? ಬಸವಣ್ಣನವರ ಅನು ಯಾಯಿಗಳೆಂದು ಹೇಳಿಕೊಳ್ಳುವ ಲಿಂಗಾಣತರು ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಮೂಢನಂಬಿಕೆಗಳ ದಾಸರಾಗುತ್ತಿದ್ದಾರೆ. ಬಸವಣ್ಣನವರು ಯಾವ ಮೌಢ್ಯಗಳನ್ನು ಧಿಕ್ಕರಿಸಿದರೋ.. ಅವೇ ಮೌಢ್ಯಗಳನ್ನು ಅಪ್ಪಿಕೊಂಡಿದ್ದಾರೆ. ಕೆಲವು ಮಠಾಧೀಶ್ವರರೇ ಗುಡಿಗುಂಡಾರಗಳನ್ನು ಕಟ್ಟಲು ಆರಂಭಿಸಿದ್ದಾರೆ. ವಾಸ್ತು, ಜ್ಯೋತಿಷ್ಯ ಮೊದಲಾದವುಗಳಿಗೆ ಜನರು ಮರುಳಾಗುತ್ತಿದ್ದಾರೆ. ಇದಕ್ಕೆಲ್ಲ ಜನರ ಅಜ್ಞಾನ ಮತ್ತು ಅಧೈರ್ಯವೇ ಕಾರಣ. ಹಾಗೆಂದೇ ಅಂದೇ ಬ¸ವಣ್ಣನವರು-
ನಾಳೆಗೆ ಬಪ್ಪುದು ನಮಗಿಂದೇ ಬರಲಿ;
ಇಂದು ಬಪ್ಪುದು ನಮಗಿಗಲೇ ಬರಲಿ;
ಇದಕಾರಂಜುವರು, ಇದಕಾರಳುಕುವರು;
`ಜಾತಸ್ಯ ಮರಣಂ ಧೃವಂ’ ಎಂಬುದಾಗಿ
ನಮ್ಮ ಕೂಡಲಸಂಗನ ಶರಣರ
ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿ ಗಳವಲ್ಲ. ಎಂದು ಗುಡುಗುತ್ತಾರೆ. ಹುಟ್ಟಿನಿಂದ ಎಲ್ಲರೂ ಮನುಷ್ಯರೆ, ವೃತ್ತಿಯಿಂದ ಜಾತಿ. ಆದ್ದರಿಂದ ಜಾತಿಗಿಂತ ರೀತಿ-ನೀತಿ ಮುಖ್ಯ ಎಂಬುದನ್ನು ಎತ್ತಿ ಹಿಡಿಯುತ್ತಾರೆ.
ಕಾಸಿ ಕಮ್ಮಾರನಾದ
ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ
ವೇದವನೋದಿ ಹಾರುವನಾದ;
ಕರ್ಣದಲ್ಲಿ ಜನಿಸಿದವರುಂಟೇ?
ಕೂಡಲಸAಗಮದೇವಾ
ಎಂದು ಬಸವಣ್ಣ ಜಾತಿ ತಾರತಮ್ಯಗಳನ್ನು ಖಂಡಿಸುತ್ತಾರೆ.
ಜಾತಿಭೂತವನ್ನು ತೊಲಗಿಸಬೇಕೆಂದು ಆಗಲೇ ನಿರ್ಧರಿಸಿದ್ದ ಬಸವಣ್ಣನವರು ಸಮಗಾರ ಹರಳಯ್ಯನ ಮಗ ಶೀಲವಂತ ಹಾಗೂ ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯವತಿಯ ವಿವಾಹವನ್ನು ತಾವೇ ಮುಂದು ನಿಂತು ನೆರವೇರಿಸುತ್ತಾರೆ. ಈಗಿನಂತೆ ಆಗಲೂ ಇದ್ದ ಸಂಪ್ರದಾಯವಾದಿಗಳು ಇದನ್ನು ವರ್ಣ ಸಂಕರ ವೆಂದ ಬಿಜ್ಜಳನ ಬಳಿ ದೂರು ಒಯ್ಯುತ್ತಾರೆ. ಶರಣರು ಹಾಗೂ ಸಂಪ್ರದಾಯವಾದಿಗಳ ಮಧ್ಯೆ  ಆಗ ದೊಡ್ಡ ಸಂಘರ್ಷವೇ ನಡೆಯುತ್ತದೆ.ಶರಣರ ಮೇಲೆ ದೌರ್ಜನ್ಯ ನಡೆಯುತ್ತದೆ. ಅನೇಕ ಶರಣರ ಕೊಲೆ ಆಗುತ್ತದೆ. ಇದರಿಂದ ಬೇಸತ್ತ ಬಸವಣ್ಣ ಕೂಡಲಸಂಗಮಕ್ಕೆ ಬಂದು ಐಕ್ಯರಾದರೆಂದು ಹೇಳಲಾಗುತ್ತಿದೆ.  ಅಂದು ಬಸವಣ್ಣನವರು ಬೆಳಗಿಸಿದ ಜ್ಞಾನಜ್ಯೋತಿ ನಾಡಿನ ಹಲವು ಮಠಗಳಲ್ಲಲಿ ಬೆಳಗುತ್ತಿದೆ.
ವಿಷಾದದ ಸಂಗತಿ ಎಂದರೆ ಕೆಲವು ಮಠಗಳು ಬಸವಣ್ಣನವರ ವಚನಗಳನ್ನು ಉಪದೇಶಿಸುತ್ತ ಅದಕ್ಕೆ ತದ್ವಿರುಧ್ಧವಾದ ದಿಕ್ಕಿನಲ್ಲಿ ಸಾಗಿವೆ. ಬಸವಣ್ಣ ಸ್ಥಾವರಕ್ಕಳಿವುಂಟು ಎಂದು ಸಾರಿದರೆ ಇವರು ಮಠಗಳನ್ನು ಕಟ್ಟುತ್ತಸಾಗಿದ್ದಾರೆ. ಬಸವಣ್ಣನವರು ದೇವಭಾಷೆ ಸಂಸ್ಕೃತವನ್ನು ತೊಲಗಿಸಿ, ಜನಭಾಷೆ ಕನ್ನಡವನ್ನು ದೈವತ್ವಕ್ಕೆ ಏರಿಸಿದರೆ, ಇವರು ಜನಭಾಷೆ ಕನ್ನಡವನ್ನು ಧಿಕ್ಕರಿಸಿ ಸಂಸ್ಕೃತದ ಪೂಜೆಗೆ ಹೊರಟಿದ್ದಾರೆ. ಈ ನಿಟ್ಟಿನಲ್ಲಿ ನೋಡಿದಾಗ ಉತ್ತಂಗಿ ಚನ್ನಪ್ಪ ಅವರು ಕೆಲ ಮಠಾಧೀಶರು ಬಸವಣ್ಣನವರಿಗೆ ಬಹಿರಂಗ ವಿರೋಧಿಗಳು; ವಿರಕ್ತರು ಅಂತರAಗದ ಶತೃಗಳು’ ಎಂದು ಹೇಳಿದ್ದು ಎಷ್ಟೊಂದು ಅರ್ಥಪೂರ್ಣ ಎನ್ನಿಸುತ್ತದೆ. ಈ ಎಲ್ಲ ಕಾರಣಕ್ಕಾಗಿ ಬಸವಣ್ಣನವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ನಡೆ ನುಡಿಗಳನ್ನೇ ಆದರ್ಶವಾಗಿರಿಸಿಕೊಂಡು ಬದುಕುವುದು ಇಂದಿನ ಅಗತ್ಯವಾಗಿದೆ. ಇಂದಿಗೂ ಸಮಾಜದಲ್ಲಿ ಬಹುಸಂಖ್ಯಾತರಾಗಿರುವ ಶೋಷಿತವರ್ಗ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಅಲ್ಲದೇ, ವಚನಗಳ ಮೂಲಕ ನಮ್ಮಲ್ಲಿ ಅಂತಹ ಜಾಗೃತಿ ಮೂಡಿ ಬರಬೇಕಾಗಿದೆ.
ಲೇಖನ;  ಶಿವಯೋಗಿ ಬೆನ್ನೂರು, ಹಾವೇರಿ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...