“ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತ ಕರೆ ಮಾಡ್ಯಾರ ಕಸಾಪದವ್ರು ಮತ್ತ ನಮ್ಮ ಪೊಲೀಸ್ರು.!”…..

Date:

ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತ ಕರೆ ಮಾಡ್ಯಾರ ಕಸಾಪದವ್ರು ಮತ್ತ ನಮ್ಮ ಪೊಲೀಸ್ರು.!”…..
ನಮ್ಮ ಭಾಗದಲ್ಲಿ ಅಲಿಖಿತ ಗಾದೆಮಾತೊಂದಿದೆ, ಅದು ಏನಂದ್ರ…. “ಹಾವೇರ್‍ಯಾಗ ಹಾಯ್ ಬಾರದು… ಹಾನಗಲ್ಲಾಗ ಸಾಯಬಾರ್‍ದು ಅಂತ್”. “ಹಾನಗಲ್ಲಾಗ ಸ್ಮಶಾನ ಊರಿಂದ ದೂರ ಇದ್ದ ಕಾರ್‍ಣಕ್ಕ, ಈ ಹಿಂದ ಸ್ಮಶಾನಕ್ಕ ಮೃತಪಟ್ಟೋರ್‍ನ ಅಂತ್ಯ ಸಂಸ್ಕಾರ ಮಾಡಾಕ್ ಹೊತಗಂಡ್ ಹೋಗಬೇಕಾಗಿತ್ತು. ಶವ ಹೊತಗಂಡ ಹೋದವರು ಸಾಕಾಗಿ (ಆದ್ರ ಈಗ ಶವ ಸಾಗಿಸೋ ವಾಹನಗಳು ಅದಾವು) ಹಾನಗಲ್ಲಾಗ ಸಾಯಬಾರ್‍ದು ಅನ್ನೋ ಮಾತು ಅಂದಿರಬೇಕು. ಅಂದಿನಿಂದ ಹಾನಗಲ್ಲಾಗ ಸಾಯಬಾರ್‍ದು ಅನ್ನೋ ಮಾತು ಚಾಲ್ತಿಗೆ ಬಂದಿರಬೇಕು”. “ಆದ್ರ ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತು ಯಾಕ ಚಾಲ್ತಿಗೆ ಬಂದೈತೋ ನನಗಂತು ಗೊತ್ತಿರಲಿಲ”!. ಆದ್ರ “ಹಾವೇರಿಯೂಳ್ಗ ನಡ್ದಿರೋ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೋಡಿದಮ್ಯಾಗ, ಇಲ್ಲಿನ ಅವಘಡ, ಅವಮಾನ ನೋಡಿದಮ್ಯಾಕ್, ಅನುಭವಿಸಿದಮ್ಯಾಕ್ “ಹಾವೇರಿಯಾಂವ್” ಆಗಿ ನನ್ಗ “ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತಿನ ಅರ್ಥ ಏನು ಅನ್ನೋದ ಈಗ ಕಾಡಾಕ ಹತ್ತೇತಿ.
ಮೊದಲೆದಾಗಿ “ಹಿರಿಯ ಸಾಹಿತಿ ನಾ.ಡಿಸೋಜಾ ಯಾರಿಗೆ ತಾನೆ ಗೊತ್ತಿಲ್ಲ ಹೇಳ್ರೀ…! ಸಾಹಿತ್ಯ ಬಲ್ಲೋರಿಗೆ, ಪತ್ರಿಕೆ ಓದೋರಿಗೆ, ಕತಿ-ಕವ್ನಾ ಓದೋರಿಗೆ ಡಿಸೋಜಾ ಯಾರು? ಅನ್ನೋ ವಿಷ್ಯಾ ಗೊತ್ತಿರತೈತಿ!. ಯಾವುದೇ ಪಂಥ, ಗುಂಪಿಗೆ ಸೇರ್‍ದ, ಲಾಬಿ ಮಾಡ್ದ, ಪ್ರಚಾರ ಹಿಂದ್ ಬಿಳ್ದ ತಮ್ಮ ಅನುಭವಕ್ಕೆ ಬಂದ ವಿಷಯಗಳನ್ನ ಬರ್‍ದು ಮೌಲಿಕ ಕೃತಿ ರಚಿಸಿದವರು ನಾ.ಡಿಸೋಜಾ ಅವ್ರು”.
“ನೇರ ಅನುಭವವೇ ಅವರ ಸಾಹಿತ್ಯದ ಜೀವಾಳ. ಹಿಂಬಾಲಕರ ತಂಡ ಇಟ್ಟುಕೊಳ್ಳದ ತಮ್ಮ ಸಾಹಿತ್ಯ ಕೃಷಿಯ ಮೂಲಕ ಕೊಡಗನ್ಯಾಗ ನಡ್ದ ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ರು, ಈಗ್ಲೂ ಸಹ ಅವ್ರು ಸಾಗರದಾಗ ವಾಸ ಅದಾರ. ಇಂತ ಮಹಾನ ಸಾಹಿತಿ ಮೊನ್ನೆ ನಮ್ಮೂರಾಗ ನಡ್ದ ೮೬ನೇ ಸಾಹಿತ್ಯ ಸಮ್ಮೇಳನಕ್ಕ ಭಾಗವಹಿಸಾಕ ಅಂತ ಬಂದಿದ್ರು. ಆದ್ರ ನಮ್ಮ ಕೆಲವು ಪೊಲೀಸ್ರು ಕಸಾಪ ಪದಾಧಿಕಾರಿಗಳ ಸೊಕ್ಕು, ಅಧಿಕಾರದ ಮದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಂತ ಪ್ರಕಾಂಡ ಸಾಹಿತಿ ನಾ.ಡಿಸೋಜಾ ಅವ್ರಿಗೆ ಅವಮಾನ ಮಾಡಿ, ಅವ್ರುನ್ನ ಸಮ್ಮೇಳನದ ಸಭಾಂಗಣದ ಒಳ್ಗ ಬಿಡ್ಲೇ ಇಲ”.”ಹಿಂಗಾಗಿ ನಾ. ಡಿಸೋಜಾ ಅವ್ರು ದೂರದಿಂದ ಹಾವೇರಿ ಸಹವಾಸ ಸಾಕು ಅಂತ ಕೈಮುಗ್ದ ಹೊಳ್ಳಿ ತಮ್ಮ ಊರು ಕಡಿಗೆ ನಡದ್ರು”!.
ಪಾಪಾ, ಆ ಹಿರಿಯ ಜೀವ ಪೊಲೀಸ್ರಿಗೆ ಪರಿ ಪರಿಯಾಗಿ ಕೇಳಿಕೊಂಡ್ರು, “ನಾನು ನಾ.ಡಿಸೋಜಾ, ಹಿರಿಯ ಸಾಹಿತಿ ಅದೇನಿ, ಕೊಡಗಿನ್ಯಾಗ ನಡ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಾಗಿದ್ದೆ. ಸಾಹಿತ್ಯ ಪರಿಷತ್ತಿನವ್ರು ನನ್ನ ಕರ್‍ದಾರ, ಒಳ್ಗ ಬಿಡ್ರೀ” ಅಂತ ಕೇಳೊಕೊಂಡ್ರು ಸಹ, ಮಾನವೀಯತೆ ಮರೆತ ಪೊಲೀಸರು (ಎಲ್ಲಾ ಪೊಲೀಸ್ರು, ಅಧಿಕಾರಿಗಳು ಹಿಂಗ್ ಇರೋದಿಲ್ಲ, ಅದ್ರ ಕೆಲವು ಪೊಲೀಸರು, ಕೆಲವು ಪೊಲೀಸ್ ಅಧಿಕಾರಿಗಳು ಮಾನವೀಯತೆ ಮರೆತು ಹಿಂಗ್ ಎಡವಟ್ಟ ಮಾಡ್ತಾರ) ನಾ.ಡಿಸೋಜಾ ಅವರನ್ನ “ನೀವು ಯಾರ ಅದೀರೋ ಗೊತ್ತಿಲ್ಲ, ಇಲ್ಲಂದ ಹೋಗ್ರಿ ಅಂತ ಪೊಲೀಸ್ ಭಾಷೆಯಿಂದ ಮಾತನಾಡಿದ್ದಕ್ , ಮೊದ್ಲ ಮಿದಕಲು ಸ್ವಭಾವದ ನಾ.ಡಿಸೋಜಾ ಅವರು ಬೇಸತ್ತು ಈ ವೇಳ್ಯಾದಾಗ ಅವ್ರು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ್ಗೆ ಪೋನ್ ಮಾಡಿದ್ರು , ಆದ್ರ ನೆಟ್ ವರ್ಕ ಸಮಸ್ಯೆದಿಂದಾಗಿ ನಾ.ಡಿಸೋಜಾ ಅವರ ಪೋನಿಗೆ ಯಾರು ಸಂಪರ್ಕಕ್ಕ ಸಿಗಲಿಲ್ಲ. ಡಿಸೋಜಾ ಅವ್ರು ಹೊಳ್ಳೆ ತಮ್ಮ ಊರಿಗೆ ವಾಪಾಸ್ ಹೋದ್ರು”.
ಈ ಅವಘಡಕ್ಕೆ ಯಾರನ್ನ ಹೊಣೆ ಮಾಡಬೇಕು ಹೇಳ್ರೀ? “ಇನ್ನ ಪೊಷಕನಟಿ ಸಿನೇಮಾದ ಸುಧಾ ನರಸಿಂಹರಾಜು ಅವರು ಕತಿನೂ ಇದ ಆಗಿತ್ತು”. ಆ ಯಮ್ಮ ಸಮ್ಮೇಳನದ ಗೋಷ್ಠಿ ಒಳ್ಗ ಮಾತನಾಡಬೇಕಿತ್ತು. “ಅವ್ರು ಸಮಯಕ್ಕ ಸರಿಯಾಗಿ ಸಮ್ಮೇಳನದ ಸಭಾಂಗಣಕ್ಕ ಬಂದ್ರು, ಆದ್ರ, ಅವ್ರನ್ನ ನಮ್ಮ ಕೆಲವು ಪೊಲೀಸ್ರು ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಗುರ್‍ತ ಹಿಡಿದ, ನಿಮ್ಮನ್ನ ಒಳ್ಗ ಬಿಡಂಗಿಲ್ಲ. ನಡ್ರಿ ಅಂತ ಪೊಲೀಸ್ ಭಾಷೆಯ ಪ್ರಯೋಗ ಮಾಡಿದ್ರು”.. “ಸುಧಾ ಅವ್ರು ಸಹ ನಾನು ಗೋಷ್ಠಿ ಒಳ್ಗ ಮಾತನಾಡೋಕಿ ಅದೇನಿ, ನಮ್ಮ ಕಾರ್ಯಕ್ರಮ ಆರಂಭ ಆಗೈತಿ, ವೇದಿಕೆಗೆ ಬಿಡ್ರಿ ಅಂತ ಎಷ್ಟ ಒತ್ತಾಯ ಮಾಡಿದ್ರು. ಈ ಖಾಕಿ ತೊಟ್ಟ ಮಂದಿಗೆ ಸುಧಾ ಅವ್ರ ಮಾತು ಕಿವಿಒಳ್ಗ ಹೋಗ್ಲೆ ಇಲ್ಲ. ಕಡಿಗೆ ಸುಧಾ ಅವ್ರು ಹೆಂಗೋ ವೇದಿಕೆಗೆ ಹೋದ್ರು, ಅಷ್ಟರೋಳ್ಗ ಇವ್ರ್ರ ಕಾರ್ಯಕ್ರಮನ ಮುಗ್ದ ಹೋಗಿತ್ತು. ಇದ್ಕ ಯಾರನ್ನ ಹೊಣೆ ಮಾಡೋದು? ನೀವ ಹೇಳ್ರಿ.?
ಇಂತ ಹಲವಾರು ಘಟ್ನಾಗಳು ಸಮ್ಮೇಳನ ಸಭಾಂಗಣದೊಳ್ಗ ನಡದ್ವು. “ಅನೇಕ ದೊಡ್ಡ ದೊಡ್ಡ ಸಾಹಿತಿಗಳು, ಬರಹಗಾರರು, ಕೆಲವು ಹಿರಿಯ ಪತ್ರಕರ್ತರು ಈ ಖಾಕಿ ಸಹವಾಸನ ಬ್ಯಾಡ ಅಂತ ಬಂದ್ ದಾರಿಗೆ ಸುಂಕ ಇಲ್ಲ ಅನ್ನೋಮಾತಿನಂಗ್ ಹಾವೇರ್‍ಯಾಗ ಹಾಯೋದ ಬ್ಯಾಡ, ಪೊಲೀಸ್ರು ಕೂಡ ಅನ್ನಸಿಕೊಳ್ಳೋದು ಬ್ಯಾಡ್ ಅಂತ ವಾಪಾಸ್ ತಮ್ಮ ತಮ್ಮ ಊರಿಗೆ ಹೋದ್ರು”.
“ಸಾಹಿತ್ಯ ಸಮ್ಮೇಳನಾ ಅಂದ್ರ ಸುಮ್ನ ಅಲ್ಲ, ಅದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಾಕ ಹಾವೇರಿಜಿಲ್ಲಾಡಳಿತದ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವ್ರು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹ್ಮದ್ ರೋಷನ್ ಅವ್ರು, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮತ್ತ ಅವರ ತಂಡ ಶಕ್ತಿ ಮೀರಿ ಕೆಲ್ಸಾಮಾಡ್ಯಾರ ಅದ್ರಾಗ ಎರ್‍ಡಮಾತಿಲ್ಲ. ಎಷ್ಟ ಮುಂಜಾಗೃತಿ ಕ್ರಮಗಳ್ನ ತಗೊಂಡ್ರು ಸಹ ಕೆಲ್ವು ಎಡವಟ್ಟಗಳು ಆಗಿ ಕೆಲವ್ರು ನೋವು ಅನುಭವಿಸಿಬೇಕಾತು”.
ಇನ್ನ ನನ್ನ ಅನುಭವ ಹೇಳ್ತನಿ ಕೇಳ್ರೀ. “ನಾನು ಕಪ್ಪು ಮಿಶ್ರಿತ ಮಡಿಕಟ್ಟು ಮಣ್ಣಿನ ನನ್ನ ಪ್ರೀತಿಯ ಹಾವೇರಿನೆಲ್ದಾಗ ಜನ್ಮತಾಳಿದಾಂವ ಅದೇನಿ, ನನ್ನ ಒಂದ ಪುಸ್ತಕದ ಹೆಸ್ರೂ ಸಹ “ಹಾವೇರಿಯಾಂವ್” ಅಂತನ ಐತಿ”. ಕಳ್ದ ೩೦ವರ್ಷಗಳಿಗಿಮತಾ ಹೆಚ್ಗಿ ಹಾವೇರಿ ನೆಲ್ದಾಗ ಬದ್ಕು ಕಟ್ಟಿಕೊಂಡು ಜೀವ್ನಾ ನಡಿಸೇನಿ”. “ಹಾವೇರಿಜನ ಪ್ರೀತಿ ತೋರ್‍ಸಾರ, ಬದಕಾಕ ದಾರಿಸೋರ್‍ಸಾರ, ಮೇಲಾಗಿ ನನ್ನನ್ನ ಕೆಲವ್ರು ತಮ್ಮ ಅಂತ, ಇನ್ನ ಕೆಲವ್ರು ತಮ್ಮ ಅಣ್ಣ ಅಂತ, ಕೆಲವ್ರು ತಮ್ಮ ಮನಿಮಗ ಅಂತ ತಿಳ್ಕಂಡಾರ.
ಇವಾಂ ನಮ್ಮಂವಾ ಅಂತ ತಿಳ್ಕೊಂಡು ನನ್ನ ಹೊಟ್ಟಿ-ನೆತ್ತಿ ನೋಡಕೊಂಡು ಬಂದಾರ. ಇಂತ ನೆಲ್ದಾಗ ನಾನು ವರದಿಗಾರನಾಗಿ, ಲೇಖಕನಾಗಿ, ವನ್ಯಜೀವಿ ಛಾಯಾಗ್ರಾಹಕನಾಗಿ ಗುರುತಿಸಿಕೊಂಡು ಬಂದಾವ ಅದೇನಿ. ನನ್ನ ಪಾಡಿಗೆ ನಾನು ಅಂಕಣಾ ಬರಕೊಂಡು . ಚಿತ್ರ ತಕ್ಕೊಂಡು ಹೊಂಟನಿ”. ನನ್ನ ಕಿಂಚಿತ್ ಕೆಲ್ಸಾ ನೋಡಿ, ಕಸಾಪ ಪದಾಧಿಕಾರಿಗಳು ನನ್ನನ್ನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡ್ರ ಜೊತಿಗೆ ಮಾತು-ಮಂಥನಕ್ಕ ಆಹ್ವಾನಿಸಿದ್ರು. ಆಮಂತ್ರಣ ಪತ್ರಿಕೆಯನ್ನು ಸಹ ನೀಡಿದ್ದರು.
ವರದಿಗಾಗಿ ನಾನು ವೇದಿಕೆಯ ಮುಂಭಾಗದಲ್ಲಿದ್ದೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ಬೇವಿಮರದ ಅವರು ವೇದಿಕಿಗೆ ಕರ್‍ದು. “ಮಾತು-ಮಂಥನ ಕಾರ್ಯಕ್ರಮದ ಸ್ವಾಗತಕಾರರು ನನ್ನ ಹೆಸ್ರು ಕರ್‍ದಮ್ಯಾಕ, ನಾನು ವೇದಿಕೆಕಡೆಗೆ ಹೋದೆ. ಅಲ್ಲಿದ್ದ ಈ ಖಾಕಿ ಮಂದಿ ತಮ್ಮ ವರ್‍ಸೆ ತಗದು “ನಿಮ್ಮನ್ನ ಒಳಗಬಿಡಂಗಿಲ್ಲ ಹೋಗ್ರಿ, ಅಂತ ವೇದಿಕೆ ಕಡಿಗೆ ಹೋಗಾಕ ಬಿಡಲಿಲ್ಲ. ನಾನು, ನೋಡ್ರೀ “ನಾನು ಹಾವೇರಿಯ ಸಾಹಿತಿ ಅದೇನಿ, ವೇದಿಕೆಗೆ ಬರ್ರಿ ಅಂತ್ ಸಂಘಟಕರು ಆಹ್ವಾನ ಮಾಡ್ಯಾರ” ಅಂತ ಹೇಳಿದ್ರು, ಅಲ್ಲಿದ್ದ ಪೊಲೀಸ್ ಅಧಿಕಾರಿ ಕಿರಿಕ್ ಮಾಡಿದ್ರು, ಇದ್ರಿಂದ ಬೇಸತ್ತ ನಾನು ಕಾರ್ಯಕ್ರಮದಾಗ ಭಾಗವಹಿಸೋದ ಬ್ಯಾಡ ಅಂತ್ ಹೊರಕ್ ನಡ್ದೆ, ಅಷ್ಟರಾಗ ಹಾವೇರಿಜಿಲ್ಲಾ ವಾರ್ತಾಧಿಕಾಡಿ.ಡಾ.ರಂಗನಾಥ ಅವ್ರು ಕೂಡಿದ್ರು, ವಿಷ್ಯಾ ಅವ್ರ ಗಮನಕ್ಕ ಬಂದ ನಂತರ ಅವ್ರು ನನ್ನ ಕರಕೊಂಡ ಬಂದ್ ಪೊಲೀಸರಿಗೆ ತಿಳ್ಸಿ ಹೇಳಿ ವೇದ್ಕಿಗೆ ಹೋಗಾಕ ಅನುವು ಮಾಡಿಕೊಟ್ರು.
“ಈ ಅನುಭವ ನನ್ನವು ಮಾತ್ರವಲ್ಲ ಅನೇಕರಿಗೂ ಆಗಿವೆ. ಈ ಖಾಕಿ ತೊಟ್ಟ ಮಾನವೀಯತೆ ಮರ್‍ತ ನಡಕೊಳ್ಳೋ ಕೆಲವು ಪೊಲೀಸರು ಅಧಿಕಾರಿಗಳ ಒಂದ ಕಡೆ ಆದ್ರ, ಈ ಕಸಾಪ ಪದಾಧಿಕಾರಿಗಳು ವೇದಕಿ ಮುಂಭಾಗಕ್ಕ ಬಂದು ಕಾರ್ಯಕ್ರಮದ ಕಾರ್ಡಿನ್ಯಾಗ ಹೆಸರಿದ್ದೋರ್‍ನ ಗುರುತಿಸಿ ಪೊಲೀಸ್‌ರಿಗೆ ಹೇಳಿ ವೇದ್ಕಿಗೆ ಕರಕೊಂಡ ಹೋಗ ಬಹುದಿತ್ತು”. “ಆದ್ರ, ಅವರು ವೇದಿಕೆಮ್ಯಾಲ್ ಗಣ್ಯರನ್ನ ಸನ್ಮಾನ ಮಾಡೋದು, ಅವ್ರ ಜೊತಿಗೆ ಪೋಟೋ ತಗೆಸಿಕೊಳ್ಳದ್ರಾಗ ತೊಡಗಿದ್ರ ಹೋರ್‍ತು ಒಬ್ರು ಸಹ ಅತಿಥಿಗಳ ಕಡಿಗೆ ಗಮ್ನಾ ಕೊಡಲಿಲ್ಲ”.
ಆದ್ರ ಒಂದ್ ಮಾತಂತು ಸತ್ಯ, “ಈ ಖಾಕಿ ಮಂದಿಗೆ, ಕಸಾಪ ಪದಾಧಿಕಾರಿಗಳಿಗೆ ಖಾದಿ ತೊಟ್ಟೋರು ಮಾತ್ರ ಕಣ್ಣಿಗೆ ಕಾಣತಿದ್ರು”, ” ಅನ್ ಸೈಜ್ ಖಾದಿ ತೊಟ್ಟೋರು ಯಾರರ ಬರ್‍ಲಿ ಅವ್ರಿಗೆ ಈ ಕೆಲವು ಖಾಕಿ ಮಂದಿ ಸೆಲ್ಯೂಟ್ ಹೊಡ್ದ ಅವ್ರನ್ ವೇದಿಕಿ ಮ್ಯಾಲ ಕಳ್ಸತಿದ್ರು. “ಕಸಾಪದವ್ರು-ಜಿಲ್ಲಾಡಳಿತ ನೀಡಿದ ಪಾಸುಗಳು ಪೊಲೀಸರ ಮುಂದೆ ನಪಾಸ್ ಆಗಿದ್ದವು”.
ಇದ್ನ ನೋಡಿದಮ್ಯಾಲ ನನ್ಗ ಅನಿಸಿದ್ದು…. “ಈ ಖಾದಿ ತೊಟ್ಟೋರಿಗೆ ಸಿಗೋ ರಾಜ ಮರ್ಯಾದೆಯ ಮುಂದೆ ಮಾಸಿದ ಅಂಗಿ, ಕುರಚಲು ಗಡ್ಡ, ಸೌಮ್ಯ ಸ್ವಭಾವ ಯಾತಕ್ಕೋ ಮಂಗಾ ಅಂತ್”!. “ಹಂಗಂತ್ ಖಾದಿ ತೊಟ್ಟೋರೆಲ್ಲ ಹಾದಿ ಬಿಟ್ಟಿಲ್ಲ, ಖಾಕಿ ತೊಟ್ಟೋರೆಲ್ಲಾರೂ ಮಾನವೀಯತೆ ಮರ್‍ತಿಲ್ಲ. ಯಾರೋ ಒಬ್ಬಿಬ್ರು ಮಾಡೋ ತಪ್ಪಿಗೆ ಇಂತಾವೆಲ್ಲ ಅವಘಡಗಳು ನಡಿತಾವು, ಈ ರೀತಿಯ ಘಟನೆಗಳಿಗೂ ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತಿಗೂ ಒಂದಕ್ಕ ಒಂದ ಸಂಬಂಧನ ಇಲ್ಲ”. “ಒಂದ್ ವೇಳ್ಯಾ ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತಿನ ಅರ್ಥ ಯಾರಿಗಾದ್ರು ಗೊತ್ತಿದ್ದ ಹೇಳ್ರೀ. ಇರ್‍ಲಿ ಮುಂದಿನ ಸಮ್ಮೇಳದಾಗ ಇಂತಾ ಅವಘಡಗಳ ನಡೆದಂಗ್ ಇರ್‍ಲಿ. ಏನಂತಿರಿ….
 ಮಾಲತೇಶ ಅಂಗೂರ, ಹಾವೇರಿ.
“ವೇದ್ಕಿ ಒಳ್ಗ ೮೩ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರೊಂದಿಗೆ ಮಾತು ಮಂಥನದಲ್ಲಿ ನಾನು ಕೇಳಿದ ಪ್ರಶ್ನೆ ಹಿಂಗಿದ್ವು, ಇವುಕ್ಕ ಏನು ಉತ್ರಾ ಕೊಟ್ರು ಅನ್ನೋದನ್ನು ತಾವೇಲ್ಲ ನೋಡಿರಬಹುದು, ಅಥಾವ ಪೇಪರ್‍ಯಾನ ಓದೀರಿ ಅಂತ ಅನಕಂಡಿರುವೆ”.
ಕನ್ನಡ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕ ನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ ಯಾಕೆ?.
ಗೋಕಾಕ ಚಳವಳಿಯ ನಂತರದ ಕನ್ನಡ ಭಾಷೆ ಬಲಾಡ್ಯವಾಗಿ ಬೆಳೆಯುವ ಯಾವ ಅವಕಾಶಗಳಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಘಳಗೆ ಕನ್ನಡ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಪರಭಾಷೆಗಳ ಪ್ರಾಬಲ್ಯದೆದುರು ಗಡಿನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸಾಹಸವಾಗಿದೆ.
ಇಂಥ ಸಂಕ್ರಮಣ ಕಾಲದಲ್ಲಿ ಒಂದಾಗಿ ಪ್ರತಿಭಟಿಸಬೇಕಾದ ಮತ್ತು ಚಳವಳಿಗಳನ್ನು ರೂಪಿಸಬೇಕಾದ ನಮ್ಮ ಸಾಹಿತ್ಯವಲಯ ತನ್ನ ಗುಂಪುಗಾರಿಕೆಯಿಂದ ಹೋರಾಟಗಳಿಗೆ ವಿಮುಖವಾಗುತ್ತಿದೆ. ಈ ಬಗ್ಗೆ ತಮ್ಮ ನಿಲುವು ಏನು? ಕನ್ನಡ ಭಾಷೆಯನ್ನು ಜನಸಮೂಹಕ್ಕೆ ಇನ್ನಷ್ಟು ಹತ್ತಿರಗೊಳಿಸುವ ಗಟ್ಟಿ ಪ್ರಯತ್ನಗಳಾಗಬೇಕು. ಈ ನಿಟ್ಟಿನಲ್ಲಿ ನಾವು ಸೋತಿದ್ದೇವೆಯೇ?.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತ ಕರೆ ಮಾಡ್ಯಾರ ಕಸಾಪದವ್ರು ಮತ್ತ ನಮ್ಮ ಪೊಲೀಸ್ರು.!”…..
ನಮ್ಮ ಭಾಗದಲ್ಲಿ ಅಲಿಖಿತ ಗಾದೆಮಾತೊಂದಿದೆ, ಅದು ಏನಂದ್ರ…. “ಹಾವೇರ್‍ಯಾಗ ಹಾಯ್ ಬಾರದು… ಹಾನಗಲ್ಲಾಗ ಸಾಯಬಾರ್‍ದು ಅಂತ್”. “ಹಾನಗಲ್ಲಾಗ ಸ್ಮಶಾನ ಊರಿಂದ ದೂರ ಇದ್ದ ಕಾರ್‍ಣಕ್ಕ, ಈ ಹಿಂದ ಸ್ಮಶಾನಕ್ಕ ಮೃತಪಟ್ಟೋರ್‍ನ ಅಂತ್ಯ ಸಂಸ್ಕಾರ ಮಾಡಾಕ್ ಹೊತಗಂಡ್ ಹೋಗಬೇಕಾಗಿತ್ತು. ಶವ ಹೊತಗಂಡ ಹೋದವರು ಸಾಕಾಗಿ (ಆದ್ರ ಈಗ ಶವ ಸಾಗಿಸೋ ವಾಹನಗಳು ಅದಾವು) ಹಾನಗಲ್ಲಾಗ ಸಾಯಬಾರ್‍ದು ಅನ್ನೋ ಮಾತು ಅಂದಿರಬೇಕು. ಅಂದಿನಿಂದ ಹಾನಗಲ್ಲಾಗ ಸಾಯಬಾರ್‍ದು ಅನ್ನೋ ಮಾತು ಚಾಲ್ತಿಗೆ ಬಂದಿರಬೇಕು”. “ಆದ್ರ ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತು ಯಾಕ ಚಾಲ್ತಿಗೆ ಬಂದೈತೋ ನನಗಂತು ಗೊತ್ತಿರಲಿಲ”!. ಆದ್ರ “ಹಾವೇರಿಯೂಳ್ಗ ನಡ್ದಿರೋ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೋಡಿದಮ್ಯಾಗ, ಇಲ್ಲಿನ ಅವಘಡ, ಅವಮಾನ ನೋಡಿದಮ್ಯಾಕ್, ಅನುಭವಿಸಿದಮ್ಯಾಕ್ “ಹಾವೇರಿಯಾಂವ್” ಆಗಿ ನನ್ಗ “ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತಿನ ಅರ್ಥ ಏನು ಅನ್ನೋದ ಈಗ ಕಾಡಾಕ ಹತ್ತೇತಿ.
ಮೊದಲೆದಾಗಿ “ಹಿರಿಯ ಸಾಹಿತಿ ನಾ.ಡಿಸೋಜಾ ಯಾರಿಗೆ ತಾನೆ ಗೊತ್ತಿಲ್ಲ ಹೇಳ್ರೀ…! ಸಾಹಿತ್ಯ ಬಲ್ಲೋರಿಗೆ, ಪತ್ರಿಕೆ ಓದೋರಿಗೆ, ಕತಿ-ಕವ್ನಾ ಓದೋರಿಗೆ ಡಿಸೋಜಾ ಯಾರು? ಅನ್ನೋ ವಿಷ್ಯಾ ಗೊತ್ತಿರತೈತಿ!. ಯಾವುದೇ ಪಂಥ, ಗುಂಪಿಗೆ ಸೇರ್‍ದ, ಲಾಬಿ ಮಾಡ್ದ, ಪ್ರಚಾರ ಹಿಂದ್ ಬಿಳ್ದ ತಮ್ಮ ಅನುಭವಕ್ಕೆ ಬಂದ ವಿಷಯಗಳನ್ನ ಬರ್‍ದು ಮೌಲಿಕ ಕೃತಿ ರಚಿಸಿದವರು ನಾ.ಡಿಸೋಜಾ ಅವ್ರು”.
“ನೇರ ಅನುಭವವೇ ಅವರ ಸಾಹಿತ್ಯದ ಜೀವಾಳ. ಹಿಂಬಾಲಕರ ತಂಡ ಇಟ್ಟುಕೊಳ್ಳದ ತಮ್ಮ ಸಾಹಿತ್ಯ ಕೃಷಿಯ ಮೂಲಕ ಕೊಡಗನ್ಯಾಗ ನಡ್ದ ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ರು, ಈಗ್ಲೂ ಸಹ ಅವ್ರು ಸಾಗರದಾಗ ವಾಸ ಅದಾರ. ಇಂತ ಮಹಾನ ಸಾಹಿತಿ ಮೊನ್ನೆ ನಮ್ಮೂರಾಗ ನಡ್ದ ೮೬ನೇ ಸಾಹಿತ್ಯ ಸಮ್ಮೇಳನಕ್ಕ ಭಾಗವಹಿಸಾಕ ಅಂತ ಬಂದಿದ್ರು. ಆದ್ರ ನಮ್ಮ ಕೆಲವು ಪೊಲೀಸ್ರು ಕಸಾಪ ಪದಾಧಿಕಾರಿಗಳ ಸೊಕ್ಕು, ಅಧಿಕಾರದ ಮದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಂತ ಪ್ರಕಾಂಡ ಸಾಹಿತಿ ನಾ.ಡಿಸೋಜಾ ಅವ್ರಿಗೆ ಅವಮಾನ ಮಾಡಿ, ಅವ್ರುನ್ನ ಸಮ್ಮೇಳನದ ಸಭಾಂಗಣದ ಒಳ್ಗ ಬಿಡ್ಲೇ ಇಲ”.”ಹಿಂಗಾಗಿ ನಾ. ಡಿಸೋಜಾ ಅವ್ರು ದೂರದಿಂದ ಹಾವೇರಿ ಸಹವಾಸ ಸಾಕು ಅಂತ ಕೈಮುಗ್ದ ಹೊಳ್ಳಿ ತಮ್ಮ ಊರು ಕಡಿಗೆ ನಡದ್ರು”!.
ಪಾಪಾ, ಆ ಹಿರಿಯ ಜೀವ ಪೊಲೀಸ್ರಿಗೆ ಪರಿ ಪರಿಯಾಗಿ ಕೇಳಿಕೊಂಡ್ರು, “ನಾನು ನಾ.ಡಿಸೋಜಾ, ಹಿರಿಯ ಸಾಹಿತಿ ಅದೇನಿ, ಕೊಡಗಿನ್ಯಾಗ ನಡ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಾಗಿದ್ದೆ. ಸಾಹಿತ್ಯ ಪರಿಷತ್ತಿನವ್ರು ನನ್ನ ಕರ್‍ದಾರ, ಒಳ್ಗ ಬಿಡ್ರೀ” ಅಂತ ಕೇಳೊಕೊಂಡ್ರು ಸಹ, ಮಾನವೀಯತೆ ಮರೆತ ಪೊಲೀಸರು (ಎಲ್ಲಾ ಪೊಲೀಸ್ರು, ಅಧಿಕಾರಿಗಳು ಹಿಂಗ್ ಇರೋದಿಲ್ಲ, ಅದ್ರ ಕೆಲವು ಪೊಲೀಸರು, ಕೆಲವು ಪೊಲೀಸ್ ಅಧಿಕಾರಿಗಳು ಮಾನವೀಯತೆ ಮರೆತು ಹಿಂಗ್ ಎಡವಟ್ಟ ಮಾಡ್ತಾರ) ನಾ.ಡಿಸೋಜಾ ಅವರನ್ನ “ನೀವು ಯಾರ ಅದೀರೋ ಗೊತ್ತಿಲ್ಲ, ಇಲ್ಲಂದ ಹೋಗ್ರಿ ಅಂತ ಪೊಲೀಸ್ ಭಾಷೆಯಿಂದ ಮಾತನಾಡಿದ್ದಕ್ , ಮೊದ್ಲ ಮಿದಕಲು ಸ್ವಭಾವದ ನಾ.ಡಿಸೋಜಾ ಅವರು ಬೇಸತ್ತು ಈ ವೇಳ್ಯಾದಾಗ ಅವ್ರು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ್ಗೆ ಪೋನ್ ಮಾಡಿದ್ರು , ಆದ್ರ ನೆಟ್ ವರ್ಕ ಸಮಸ್ಯೆದಿಂದಾಗಿ ನಾ.ಡಿಸೋಜಾ ಅವರ ಪೋನಿಗೆ ಯಾರು ಸಂಪರ್ಕಕ್ಕ ಸಿಗಲಿಲ್ಲ. ಡಿಸೋಜಾ ಅವ್ರು ಹೊಳ್ಳೆ ತಮ್ಮ ಊರಿಗೆ ವಾಪಾಸ್ ಹೋದ್ರು”.
ಈ ಅವಘಡಕ್ಕೆ ಯಾರನ್ನ ಹೊಣೆ ಮಾಡಬೇಕು ಹೇಳ್ರೀ? “ಇನ್ನ ಪೊಷಕನಟಿ ಸಿನೇಮಾದ ಸುಧಾ ನರಸಿಂಹರಾಜು ಅವರು ಕತಿನೂ ಇದ ಆಗಿತ್ತು”. ಆ ಯಮ್ಮ ಸಮ್ಮೇಳನದ ಗೋಷ್ಠಿ ಒಳ್ಗ ಮಾತನಾಡಬೇಕಿತ್ತು. “ಅವ್ರು ಸಮಯಕ್ಕ ಸರಿಯಾಗಿ ಸಮ್ಮೇಳನದ ಸಭಾಂಗಣಕ್ಕ ಬಂದ್ರು, ಆದ್ರ, ಅವ್ರನ್ನ ನಮ್ಮ ಕೆಲವು ಪೊಲೀಸ್ರು ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಗುರ್‍ತ ಹಿಡಿದ, ನಿಮ್ಮನ್ನ ಒಳ್ಗ ಬಿಡಂಗಿಲ್ಲ. ನಡ್ರಿ ಅಂತ ಪೊಲೀಸ್ ಭಾಷೆಯ ಪ್ರಯೋಗ ಮಾಡಿದ್ರು”.. “ಸುಧಾ ಅವ್ರು ಸಹ ನಾನು ಗೋಷ್ಠಿ ಒಳ್ಗ ಮಾತನಾಡೋಕಿ ಅದೇನಿ, ನಮ್ಮ ಕಾರ್ಯಕ್ರಮ ಆರಂಭ ಆಗೈತಿ, ವೇದಿಕೆಗೆ ಬಿಡ್ರಿ ಅಂತ ಎಷ್ಟ ಒತ್ತಾಯ ಮಾಡಿದ್ರು. ಈ ಖಾಕಿ ತೊಟ್ಟ ಮಂದಿಗೆ ಸುಧಾ ಅವ್ರ ಮಾತು ಕಿವಿಒಳ್ಗ ಹೋಗ್ಲೆ ಇಲ್ಲ. ಕಡಿಗೆ ಸುಧಾ ಅವ್ರು ಹೆಂಗೋ ವೇದಿಕೆಗೆ ಹೋದ್ರು, ಅಷ್ಟರೋಳ್ಗ ಇವ್ರ್ರ ಕಾರ್ಯಕ್ರಮನ ಮುಗ್ದ ಹೋಗಿತ್ತು. ಇದ್ಕ ಯಾರನ್ನ ಹೊಣೆ ಮಾಡೋದು? ನೀವ ಹೇಳ್ರಿ.?
ಇಂತ ಹಲವಾರು ಘಟ್ನಾಗಳು ಸಮ್ಮೇಳನ ಸಭಾಂಗಣದೊಳ್ಗ ನಡದ್ವು. “ಅನೇಕ ದೊಡ್ಡ ದೊಡ್ಡ ಸಾಹಿತಿಗಳು, ಬರಹಗಾರರು, ಕೆಲವು ಹಿರಿಯ ಪತ್ರಕರ್ತರು ಈ ಖಾಕಿ ಸಹವಾಸನ ಬ್ಯಾಡ ಅಂತ ಬಂದ್ ದಾರಿಗೆ ಸುಂಕ ಇಲ್ಲ ಅನ್ನೋಮಾತಿನಂಗ್ ಹಾವೇರ್‍ಯಾಗ ಹಾಯೋದ ಬ್ಯಾಡ, ಪೊಲೀಸ್ರು ಕೂಡ ಅನ್ನಸಿಕೊಳ್ಳೋದು ಬ್ಯಾಡ್ ಅಂತ ವಾಪಾಸ್ ತಮ್ಮ ತಮ್ಮ ಊರಿಗೆ ಹೋದ್ರು”.
“ಸಾಹಿತ್ಯ ಸಮ್ಮೇಳನಾ ಅಂದ್ರ ಸುಮ್ನ ಅಲ್ಲ, ಅದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಾಕ ಹಾವೇರಿಜಿಲ್ಲಾಡಳಿತದ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವ್ರು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹ್ಮದ್ ರೋಷನ್ ಅವ್ರು, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮತ್ತ ಅವರ ತಂಡ ಶಕ್ತಿ ಮೀರಿ ಕೆಲ್ಸಾಮಾಡ್ಯಾರ ಅದ್ರಾಗ ಎರ್‍ಡಮಾತಿಲ್ಲ. ಎಷ್ಟ ಮುಂಜಾಗೃತಿ ಕ್ರಮಗಳ್ನ ತಗೊಂಡ್ರು ಸಹ ಕೆಲ್ವು ಎಡವಟ್ಟಗಳು ಆಗಿ ಕೆಲವ್ರು ನೋವು ಅನುಭವಿಸಿಬೇಕಾತು”.
ಇನ್ನ ನನ್ನ ಅನುಭವ ಹೇಳ್ತನಿ ಕೇಳ್ರೀ. “ನಾನು ಕಪ್ಪು ಮಿಶ್ರಿತ ಮಡಿಕಟ್ಟು ಮಣ್ಣಿನ ನನ್ನ ಪ್ರೀತಿಯ ಹಾವೇರಿನೆಲ್ದಾಗ ಜನ್ಮತಾಳಿದಾಂವ ಅದೇನಿ, ನನ್ನ ಒಂದ ಪುಸ್ತಕದ ಹೆಸ್ರೂ ಸಹ “ಹಾವೇರಿಯಾಂವ್” ಅಂತನ ಐತಿ”. ಕಳ್ದ ೩೦ವರ್ಷಗಳಿಗಿಮತಾ ಹೆಚ್ಗಿ ಹಾವೇರಿ ನೆಲ್ದಾಗ ಬದ್ಕು ಕಟ್ಟಿಕೊಂಡು ಜೀವ್ನಾ ನಡಿಸೇನಿ”. “ಹಾವೇರಿಜನ ಪ್ರೀತಿ ತೋರ್‍ಸಾರ, ಬದಕಾಕ ದಾರಿಸೋರ್‍ಸಾರ, ಮೇಲಾಗಿ ನನ್ನನ್ನ ಕೆಲವ್ರು ತಮ್ಮ ಅಂತ, ಇನ್ನ ಕೆಲವ್ರು ತಮ್ಮ ಅಣ್ಣ ಅಂತ, ಕೆಲವ್ರು ತಮ್ಮ ಮನಿಮಗ ಅಂತ ತಿಳ್ಕಂಡಾರ.
ಇವಾಂ ನಮ್ಮಂವಾ ಅಂತ ತಿಳ್ಕೊಂಡು ನನ್ನ ಹೊಟ್ಟಿ-ನೆತ್ತಿ ನೋಡಕೊಂಡು ಬಂದಾರ. ಇಂತ ನೆಲ್ದಾಗ ನಾನು ವರದಿಗಾರನಾಗಿ, ಲೇಖಕನಾಗಿ, ವನ್ಯಜೀವಿ ಛಾಯಾಗ್ರಾಹಕನಾಗಿ ಗುರುತಿಸಿಕೊಂಡು ಬಂದಾವ ಅದೇನಿ. ನನ್ನ ಪಾಡಿಗೆ ನಾನು ಅಂಕಣಾ ಬರಕೊಂಡು . ಚಿತ್ರ ತಕ್ಕೊಂಡು ಹೊಂಟನಿ”. ನನ್ನ ಕಿಂಚಿತ್ ಕೆಲ್ಸಾ ನೋಡಿ, ಕಸಾಪ ಪದಾಧಿಕಾರಿಗಳು ನನ್ನನ್ನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡ್ರ ಜೊತಿಗೆ ಮಾತು-ಮಂಥನಕ್ಕ ಆಹ್ವಾನಿಸಿದ್ರು. ಆಮಂತ್ರಣ ಪತ್ರಿಕೆಯನ್ನು ಸಹ ನೀಡಿದ್ದರು.
ವರದಿಗಾಗಿ ನಾನು ವೇದಿಕೆಯ ಮುಂಭಾಗದಲ್ಲಿದ್ದೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ಬೇವಿಮರದ ಅವರು ವೇದಿಕಿಗೆ ಕರ್‍ದು. “ಮಾತು-ಮಂಥನ ಕಾರ್ಯಕ್ರಮದ ಸ್ವಾಗತಕಾರರು ನನ್ನ ಹೆಸ್ರು ಕರ್‍ದಮ್ಯಾಕ, ನಾನು ವೇದಿಕೆಕಡೆಗೆ ಹೋದೆ. ಅಲ್ಲಿದ್ದ ಈ ಖಾಕಿ ಮಂದಿ ತಮ್ಮ ವರ್‍ಸೆ ತಗದು “ನಿಮ್ಮನ್ನ ಒಳಗಬಿಡಂಗಿಲ್ಲ ಹೋಗ್ರಿ, ಅಂತ ವೇದಿಕೆ ಕಡಿಗೆ ಹೋಗಾಕ ಬಿಡಲಿಲ್ಲ. ನಾನು, ನೋಡ್ರೀ “ನಾನು ಹಾವೇರಿಯ ಸಾಹಿತಿ ಅದೇನಿ, ವೇದಿಕೆಗೆ ಬರ್ರಿ ಅಂತ್ ಸಂಘಟಕರು ಆಹ್ವಾನ ಮಾಡ್ಯಾರ” ಅಂತ ಹೇಳಿದ್ರು, ಅಲ್ಲಿದ್ದ ಪೊಲೀಸ್ ಅಧಿಕಾರಿ ಕಿರಿಕ್ ಮಾಡಿದ್ರು, ಇದ್ರಿಂದ ಬೇಸತ್ತ ನಾನು ಕಾರ್ಯಕ್ರಮದಾಗ ಭಾಗವಹಿಸೋದ ಬ್ಯಾಡ ಅಂತ್ ಹೊರಕ್ ನಡ್ದೆ, ಅಷ್ಟರಾಗ ಹಾವೇರಿಜಿಲ್ಲಾ ವಾರ್ತಾಧಿಕಾಡಿ.ಡಾ.ರಂಗನಾಥ ಅವ್ರು ಕೂಡಿದ್ರು, ವಿಷ್ಯಾ ಅವ್ರ ಗಮನಕ್ಕ ಬಂದ ನಂತರ ಅವ್ರು ನನ್ನ ಕರಕೊಂಡ ಬಂದ್ ಪೊಲೀಸರಿಗೆ ತಿಳ್ಸಿ ಹೇಳಿ ವೇದ್ಕಿಗೆ ಹೋಗಾಕ ಅನುವು ಮಾಡಿಕೊಟ್ರು.
“ಈ ಅನುಭವ ನನ್ನವು ಮಾತ್ರವಲ್ಲ ಅನೇಕರಿಗೂ ಆಗಿವೆ. ಈ ಖಾಕಿ ತೊಟ್ಟ ಮಾನವೀಯತೆ ಮರ್‍ತ ನಡಕೊಳ್ಳೋ ಕೆಲವು ಪೊಲೀಸರು ಅಧಿಕಾರಿಗಳ ಒಂದ ಕಡೆ ಆದ್ರ, ಈ ಕಸಾಪ ಪದಾಧಿಕಾರಿಗಳು ವೇದಕಿ ಮುಂಭಾಗಕ್ಕ ಬಂದು ಕಾರ್ಯಕ್ರಮದ ಕಾರ್ಡಿನ್ಯಾಗ ಹೆಸರಿದ್ದೋರ್‍ನ ಗುರುತಿಸಿ ಪೊಲೀಸ್‌ರಿಗೆ ಹೇಳಿ ವೇದ್ಕಿಗೆ ಕರಕೊಂಡ ಹೋಗ ಬಹುದಿತ್ತು”. “ಆದ್ರ, ಅವರು ವೇದಿಕೆಮ್ಯಾಲ್ ಗಣ್ಯರನ್ನ ಸನ್ಮಾನ ಮಾಡೋದು, ಅವ್ರ ಜೊತಿಗೆ ಪೋಟೋ ತಗೆಸಿಕೊಳ್ಳದ್ರಾಗ ತೊಡಗಿದ್ರ ಹೋರ್‍ತು ಒಬ್ರು ಸಹ ಅತಿಥಿಗಳ ಕಡಿಗೆ ಗಮ್ನಾ ಕೊಡಲಿಲ್ಲ”.
ಆದ್ರ ಒಂದ್ ಮಾತಂತು ಸತ್ಯ, “ಈ ಖಾಕಿ ಮಂದಿಗೆ, ಕಸಾಪ ಪದಾಧಿಕಾರಿಗಳಿಗೆ ಖಾದಿ ತೊಟ್ಟೋರು ಮಾತ್ರ ಕಣ್ಣಿಗೆ ಕಾಣತಿದ್ರು”, ” ಅನ್ ಸೈಜ್ ಖಾದಿ ತೊಟ್ಟೋರು ಯಾರರ ಬರ್‍ಲಿ ಅವ್ರಿಗೆ ಈ ಕೆಲವು ಖಾಕಿ ಮಂದಿ ಸೆಲ್ಯೂಟ್ ಹೊಡ್ದ ಅವ್ರನ್ ವೇದಿಕಿ ಮ್ಯಾಲ ಕಳ್ಸತಿದ್ರು. “ಕಸಾಪದವ್ರು-ಜಿಲ್ಲಾಡಳಿತ ನೀಡಿದ ಪಾಸುಗಳು ಪೊಲೀಸರ ಮುಂದೆ ನಪಾಸ್ ಆಗಿದ್ದವು”.
ಇದ್ನ ನೋಡಿದಮ್ಯಾಲ ನನ್ಗ ಅನಿಸಿದ್ದು…. “ಈ ಖಾದಿ ತೊಟ್ಟೋರಿಗೆ ಸಿಗೋ ರಾಜ ಮರ್ಯಾದೆಯ ಮುಂದೆ ಮಾಸಿದ ಅಂಗಿ, ಕುರಚಲು ಗಡ್ಡ, ಸೌಮ್ಯ ಸ್ವಭಾವ ಯಾತಕ್ಕೋ ಮಂಗಾ ಅಂತ್”!. “ಹಂಗಂತ್ ಖಾದಿ ತೊಟ್ಟೋರೆಲ್ಲ ಹಾದಿ ಬಿಟ್ಟಿಲ್ಲ, ಖಾಕಿ ತೊಟ್ಟೋರೆಲ್ಲಾರೂ ಮಾನವೀಯತೆ ಮರ್‍ತಿಲ್ಲ. ಯಾರೋ ಒಬ್ಬಿಬ್ರು ಮಾಡೋ ತಪ್ಪಿಗೆ ಇಂತಾವೆಲ್ಲ ಅವಘಡಗಳು ನಡಿತಾವು, ಈ ರೀತಿಯ ಘಟನೆಗಳಿಗೂ ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತಿಗೂ ಒಂದಕ್ಕ ಒಂದ ಸಂಬಂಧನ ಇಲ್ಲ”. “ಒಂದ್ ವೇಳ್ಯಾ ಹಾವೇರ್‍ಯಾಗ ಹಾಯಬಾರ್‍ದು ಅನ್ನೋ ಮಾತಿನ ಅರ್ಥ ಯಾರಿಗಾದ್ರು ಗೊತ್ತಿದ್ದ ಹೇಳ್ರೀ. ಇರ್‍ಲಿ ಮುಂದಿನ ಸಮ್ಮೇಳದಾಗ ಇಂತಾ ಅವಘಡಗಳ ನಡೆದಂಗ್ ಇರ್‍ಲಿ. ಏನಂತಿರಿ….
 ಮಾಲತೇಶ ಅಂಗೂರ, ಹಾವೇರಿ.
“ವೇದ್ಕಿ ಒಳ್ಗ ೮೩ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರೊಂದಿಗೆ ಮಾತು ಮಂಥನದಲ್ಲಿ ನಾನು ಕೇಳಿದ ಪ್ರಶ್ನೆ ಹಿಂಗಿದ್ವು, ಇವುಕ್ಕ ಏನು ಉತ್ರಾ ಕೊಟ್ರು ಅನ್ನೋದನ್ನು ತಾವೇಲ್ಲ ನೋಡಿರಬಹುದು, ಅಥಾವ ಪೇಪರ್‍ಯಾನ ಓದೀರಿ ಅಂತ ಅನಕಂಡಿರುವೆ”.
ಕನ್ನಡ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕ ನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ ಯಾಕೆ?.
ಗೋಕಾಕ ಚಳವಳಿಯ ನಂತರದ ಕನ್ನಡ ಭಾಷೆ ಬಲಾಡ್ಯವಾಗಿ ಬೆಳೆಯುವ ಯಾವ ಅವಕಾಶಗಳಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಘಳಗೆ ಕನ್ನಡ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಪರಭಾಷೆಗಳ ಪ್ರಾಬಲ್ಯದೆದುರು ಗಡಿನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸಾಹಸವಾಗಿದೆ.
ಇಂಥ ಸಂಕ್ರಮಣ ಕಾಲದಲ್ಲಿ ಒಂದಾಗಿ ಪ್ರತಿಭಟಿಸಬೇಕಾದ ಮತ್ತು ಚಳವಳಿಗಳನ್ನು ರೂಪಿಸಬೇಕಾದ ನಮ್ಮ ಸಾಹಿತ್ಯವಲಯ ತನ್ನ ಗುಂಪುಗಾರಿಕೆಯಿಂದ ಹೋರಾಟಗಳಿಗೆ ವಿಮುಖವಾಗುತ್ತಿದೆ. ಈ ಬಗ್ಗೆ ತಮ್ಮ ನಿಲುವು ಏನು? ಕನ್ನಡ ಭಾಷೆಯನ್ನು ಜನಸಮೂಹಕ್ಕೆ ಇನ್ನಷ್ಟು ಹತ್ತಿರಗೊಳಿಸುವ ಗಟ್ಟಿ ಪ್ರಯತ್ನಗಳಾಗಬೇಕು. ಈ ನಿಟ್ಟಿನಲ್ಲಿ ನಾವು ಸೋತಿದ್ದೇವೆಯೇ?.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...