ಅಲೆಮಾರಿ ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು, ತನಿಖೆಗೆ ಆಗ್ರಹ
ಹಾವೇರಿ: ಚಿಂದಿ ಆಯಲುಹೋದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಇಂದಿರಾನಗರದ ಅಲೆಮಾರಿ
ಬುಡ್ಗ ಜಂಗಮ ಜಾತಿ ಇಬ್ಬರು ಬಾಲಕಿಯರ ಶವ ಗುರುಮಠಕಲ್ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಫೆ.೧೨ರಂದು ಪತ್ತೆಯಾಗಿದ್ದು, ಈ ಇಬ್ಬರೂ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆಮಾಡಿರುವ ಶಂಖ್ಯೆ ಇದ್ದು,ಈ ಬಗ್ಗೆ ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳು ಶುಕ್ರವಾರ ಜಿಲ್ಲಾಧಿಕಾರಿ ಗಳ ಮೂಲಕ ಸಿಎಂಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.
ಶ್ಯಾಮಮ್ಮ ಗಂ/ಹುಸೇನಪ್ಪ ಸಿರಿಗಿರಿ, ೧೯ ವರ್ಷ ಸಾಯಮ್ಮ ತಂ/ ಭೀಮಪ್ಪ ಸಿರಿಗಿರಿ ವಯಸ್ಸು ೧೫ ವರ್ಷ ಇಬ್ಬರ ಶವವು ಫೆ: ೧೨ ಗುರುಮಠಕಲ್ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೊಟ್ಟೆ ಪಾಡಿಗಾಗಿ ಚಿಂದಿ ಆಯಲು ಹೋಗಿದ್ದ ಇವರ ಮೇಲೆ ಅತ್ಯಾಚಾರ ಎಸಗಿ ಕೆರೆಗೆ ಎಸೆದು ಕೊಲೆ ಮಾಡಿರುವುದಾಗಿ ಸ್ಥಳೀಯ ಅಲೆಮಾರಿ ಬಂಧುಗಳು ಆರೋಪಿಸಿದ್ದಾರೆ.
ಈ ಇಬ್ಸರು ಮಹಿಳೆಯರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಸತ್ಯ ಬಯಲಿಗೆ ತರಬೇಕು.ಈಗಾಗಲೇ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿದ್ದು, ಪೊಲೀಸರು ತನಿಖೆಯ ಮೇಲೆ ಅನುಮಾನ ಇದ್ದು, ಆದ ಕಾರಣ ಇಬ್ಬರು ಬಾಲಕಿಯರ ಸಾವಿನ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ಇವರ ಸಾವಿಗೆ ಕಾರಣ ಏನೆಂಬುದನ್ನು ಪತಿ ಹಚ್ಚಿ, ಇವರ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ರಾಷ್ಟ್ರೀಯ ಅಹಿಂದ ಸಂಘಟನೆ ಹಾವೇರಿ ಜಿಲ್ಲಾಧ್ಯಕ್ಷ ಉಡಚಪ್ಪ ಮಾಳಗಿ , ಹಾವೇರಿ ಜಿಲ್ಲಾ ಅಲೆಮಾರಿ ಸಮುದಾಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಮುಖಂಡ ಮಾರೇಪ್ಪ ಮೊತಿ ಲಕ್ಷ್ಮಣ ಸಿರಿಶಾಲ ಮತ್ತಿತರರು ಇದ್ದರು.