ಆಧುನಿಕ ಸಾಹಿತ್ಯ ರಚನೆಗೆ ಜಾನಪದ ಸಾಹಿತ್ಯ ಪ್ರೇರಣೆಯಾಗಿದೆ: ಸತೀಶ ಕುಲಕರ್ಣಿ

Date:

ಆಧುನಿಕ ಸಾಹಿತ್ಯ ರಚನೆಗೆ ಜಾನಪದ ಸಾಹಿತ್ಯ ಪ್ರೇರಣೆಯಾಗಿದೆ: ಸತೀಶ ಕುಲಕರ್ಣಿ
ಹಾವೇರಿ: ಜಾನಪದರು ಜಾಣರಾಗಿದ್ದು ಜಾನಪದರು ಜೀವನದ ಅನುಭವಗಳನ್ನು ಅನುಭವಿಸಿ ಕಾವ್ಯ, ಕತೆ, ಗಾದೆಗಳು,ನಾಟಕ ರಚನೆ ಮಾಡಿದ್ದು, ಆಧುನಿಕ ಸಾಹಿತ್ಯ ರಚನೆಗೆ ಜಾನಪದ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಭಾನುವಾರ ಇಲ್ಲಿನ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾ ಕಲಿಕಾ ಸಂಸ್ಥೆ ಆಯೋಜಿಸಿದ್ದ “ಜಾನಪದ ಸಾಹಿತ್ಯ ಮತ್ತು ಆಧುನಿಕ ಸಂದರ್ಭ” ವಿಚಾರ ಸಂಕಿರಣ ಹಾಗೂ ಜಾನಪದ ಗೀತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಜಾನಪದ ಜನರ ಜೀವನಾಡಿ, ಜನರಾಡುವ ಭಾಷೆಯಲ್ಲಿ ರಚನೆಯಾದ ಜಾನಪದವು ಸಹಜವಾಗಿ ಜನರನ್ನು ಮುಟ್ಟುತ್ತದೆ ಎಂದರು.
ಜಾನಪದ ಸಂಗ್ರಹದ ನಿಟ್ಟಿನಲ್ಲಿ ದಿ.ಎ.ಕೆ.ರಾಮಾನುಜಂ ಅವರಂತವರು ಕನ್ನಡನಾಡಿನ ಕೆಲವು ಭಾಗಗಳಲ್ಲಿ ಸಂಚಾರ ಮಾಡಿ ಜಾನಪದವನ್ನು ಸಂಗ್ರಹಿಸಿ ಕೃತಿ ರಚನೆಯ ಮೂಲಕ ಜಾನಪದ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ರಾಮಾನುಜಂ ಅವರು ಅಮೇರಿಕಾದಲ್ಲಿದ್ದರೂ ಸಹ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಾನಪದ ಸಂಗ್ರಹದಲ್ಲಿ ಕನ್ನಡ ಜನಪದ ಕಥೆಗಳ ಕೆಲವು ಭಿನ್ನರೂಪಗಳನ್ನು ಕಂಡಿದ್ದಾರೆ.
ಜಾನಪದ ಸಾಹಿತ್ಯ ಜನಜೀವನದೊಡನೆ ಅತ್ಯಂತ ಹತ್ತಿರದ ಸಂಬಂಧವನ್ನು ಹೊಂದಿದ್ದು, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಜಾನಪದದ ಬಗ್ಗೆ ಬೋಧನೆಯಾಗಬೇಕು. ನಮ್ಮ ಜಾನಪದ ಕಲ್ಪನೆಯ ದಿಗಂತ ಹೇಗೆ ವಿಸ್ತಾರಗೊಳ್ಳಬೇಕು, ಯಾವ ವೈಜ್ಞಾನಿಕ ತಳಹದಿಯ ಮೇಲೆ ಮುಂದಿನ ಅಧ್ಯಯನ ರೂಪುಗೊಳ್ಳಬೇಕು ಎನ್ನುವುದರ ತಿಳುವಳಿಕೆ ನೀಡಿದಾಗ ಜಾನಪದದ ಉಳಿವು ಸಾಧ್ಯ ಎಂದು ಎಂದು ಸತೀಶ ಕುಲಕರ್ಣಿ ಹೇಳಿದರು.


ವಿಚಾರ ಸಂಕಿರಣ ಉದ್ಘಾಟಿಸಿ ಎಸ್.ಎ.ಎ. ಫೌಂಡೇಶನ್ ಅಧ್ಯಕ್ಷ ಮೌಲಾಸಾಬ ಜೀಗರಿ ಮಾತನಾಡಿ ಜಾನಪದವು ನಮ್ಮ ಜನರ ಜೀವನಾಡಿಯಾಗಿದೆ. ನಮಗೆ ಅನೇಕ ಗೊತ್ತಿರಲಾದ ಇತಿಹಾಸದ ಕಾಲಗರ್ಭದಲ್ಲಿ ಅಡಗಿದ ಅನೇಕ ಸಂಗತಿಗಳನ್ನು ಜಾನಪದಸಾಹಿತ್ಯದಿಂದ ತಿಳಿಯಬಹುದಾಗಿದೆ. ಈ ರೀತಿ ವಿಚಾರಸಂಕಿರಣಗಳು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುವ ಮೂಲಕ ಇಂದಿನ ಯುವಜನಾಂಗಕ್ಕೆ ಜಾನಪದ ಸಾಹಿತ್ಯವನ್ನು ಮುಟ್ಟಿಸುವ ಕಾರ್ಯಗಳು ಜರುಗಬೇಕೆಂದರು.
ನಿವೃತ್ತ ಮುಖ್ಯ ಶಿಕ್ಷಕ ಚಂದ್ರಪ್ಪ ಸನದಿ ಮುಖ್ಯಅತಿಥಿಯಾಗಿ ಮಾತನಾಡಿ ಜಾನಪದರು ನಮಗೆ ಬಹು ಅಮೂಲ್ಯ ಜಾನಪದವನ್ನು ಬಳುವಳಿಯಾಗಿ ನೀಡಿದ್ದಾರೆ. ಈ ಸಾಹಿತ್ಯವನ್ನು ಜತನದಿಂದ ಕಾಪಾಡಿಕೊಂಡು ನಮ್ಮ ಮುಂದಿನ ಜನಾಂಗಕ್ಕೆ ಜಾನಪದ ಸೊಗಡನ್ನು ತಿಳಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ರಮೇಶ ಜಾಲಿಹಾಳ, ಡಾ.ಮಹದೇವಪ್ಪ ಅಭಿಮಾನಿ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನು?ಂತ ಯಂಟಮಾನ, ಹಿರಿಯ ಜಾನಪದ ಕಲಾವಿದೆ ಈರಮ್ಮ ಮುಶೆಪ್ಪನವರ ಮತ್ತಿತರು ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾ ಕಲಿಕಾ ಸಂಸ್ಥೆಯ ಅಧ್ಯಕ್ಷ ಎನ್.ಎನ್.ಗಾಳೆಮ್ಮನವರ ವಹಿಸಿದ್ದರು, ಮಾಲತೇಶ ಅಂಗೂರ ಪ್ರಸ್ಥಾವಿಕವಾಗಿ ಮಾತನಾಡಿದರು. ಅಕ್ಷತಾ ಬದ್ರಶೆಟ್ಟಿ ವಂದಿಸಿದರು.
ಜನಮನ ರಂಚಿಸಿದ ಜಾನಪದ ಗೀತೋತ್ಸವ : “ಜಾನಪದ ಸಾಹಿತ್ಯ ಮತ್ತು ಆಧುನಿಕ ಸಂದರ್ಭ” ವಿಚಾರ ಸಂಕಿರಣ ಹಾಗೂ ಜಾನಪದ ಗೀತೋತ್ಸವ ಕಾರ್ಯಕ್ರಮದಲ್ಲಿ ಕಲಾವಿದರುಗಳಾದ ಧರ್ಮಣ್ಣ ಕಿವಡನವರ ಸಂಗಡಿಗರು ಗೊರವರ ತ್ವಪದಗಳನ್ನು, ಗೌರಮ್ಮ ಕುರುಬರ ಸಂಗಡಿಗರು ಜಾನಪದಸುಗ್ಗಿಪದಗಳನ್ನು , ಗುರುನಾಥ ಹುಬ್ಬಳ್ಳಿ ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ಜಾನಪದಗೀತೆಗಳು ಜನಮನ ರಂಚಿಸಿದವು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಆಧುನಿಕ ಸಾಹಿತ್ಯ ರಚನೆಗೆ ಜಾನಪದ ಸಾಹಿತ್ಯ ಪ್ರೇರಣೆಯಾಗಿದೆ: ಸತೀಶ ಕುಲಕರ್ಣಿ
ಹಾವೇರಿ: ಜಾನಪದರು ಜಾಣರಾಗಿದ್ದು ಜಾನಪದರು ಜೀವನದ ಅನುಭವಗಳನ್ನು ಅನುಭವಿಸಿ ಕಾವ್ಯ, ಕತೆ, ಗಾದೆಗಳು,ನಾಟಕ ರಚನೆ ಮಾಡಿದ್ದು, ಆಧುನಿಕ ಸಾಹಿತ್ಯ ರಚನೆಗೆ ಜಾನಪದ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಭಾನುವಾರ ಇಲ್ಲಿನ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾ ಕಲಿಕಾ ಸಂಸ್ಥೆ ಆಯೋಜಿಸಿದ್ದ “ಜಾನಪದ ಸಾಹಿತ್ಯ ಮತ್ತು ಆಧುನಿಕ ಸಂದರ್ಭ” ವಿಚಾರ ಸಂಕಿರಣ ಹಾಗೂ ಜಾನಪದ ಗೀತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಜಾನಪದ ಜನರ ಜೀವನಾಡಿ, ಜನರಾಡುವ ಭಾಷೆಯಲ್ಲಿ ರಚನೆಯಾದ ಜಾನಪದವು ಸಹಜವಾಗಿ ಜನರನ್ನು ಮುಟ್ಟುತ್ತದೆ ಎಂದರು.
ಜಾನಪದ ಸಂಗ್ರಹದ ನಿಟ್ಟಿನಲ್ಲಿ ದಿ.ಎ.ಕೆ.ರಾಮಾನುಜಂ ಅವರಂತವರು ಕನ್ನಡನಾಡಿನ ಕೆಲವು ಭಾಗಗಳಲ್ಲಿ ಸಂಚಾರ ಮಾಡಿ ಜಾನಪದವನ್ನು ಸಂಗ್ರಹಿಸಿ ಕೃತಿ ರಚನೆಯ ಮೂಲಕ ಜಾನಪದ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ರಾಮಾನುಜಂ ಅವರು ಅಮೇರಿಕಾದಲ್ಲಿದ್ದರೂ ಸಹ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಾನಪದ ಸಂಗ್ರಹದಲ್ಲಿ ಕನ್ನಡ ಜನಪದ ಕಥೆಗಳ ಕೆಲವು ಭಿನ್ನರೂಪಗಳನ್ನು ಕಂಡಿದ್ದಾರೆ.
ಜಾನಪದ ಸಾಹಿತ್ಯ ಜನಜೀವನದೊಡನೆ ಅತ್ಯಂತ ಹತ್ತಿರದ ಸಂಬಂಧವನ್ನು ಹೊಂದಿದ್ದು, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಜಾನಪದದ ಬಗ್ಗೆ ಬೋಧನೆಯಾಗಬೇಕು. ನಮ್ಮ ಜಾನಪದ ಕಲ್ಪನೆಯ ದಿಗಂತ ಹೇಗೆ ವಿಸ್ತಾರಗೊಳ್ಳಬೇಕು, ಯಾವ ವೈಜ್ಞಾನಿಕ ತಳಹದಿಯ ಮೇಲೆ ಮುಂದಿನ ಅಧ್ಯಯನ ರೂಪುಗೊಳ್ಳಬೇಕು ಎನ್ನುವುದರ ತಿಳುವಳಿಕೆ ನೀಡಿದಾಗ ಜಾನಪದದ ಉಳಿವು ಸಾಧ್ಯ ಎಂದು ಎಂದು ಸತೀಶ ಕುಲಕರ್ಣಿ ಹೇಳಿದರು.


ವಿಚಾರ ಸಂಕಿರಣ ಉದ್ಘಾಟಿಸಿ ಎಸ್.ಎ.ಎ. ಫೌಂಡೇಶನ್ ಅಧ್ಯಕ್ಷ ಮೌಲಾಸಾಬ ಜೀಗರಿ ಮಾತನಾಡಿ ಜಾನಪದವು ನಮ್ಮ ಜನರ ಜೀವನಾಡಿಯಾಗಿದೆ. ನಮಗೆ ಅನೇಕ ಗೊತ್ತಿರಲಾದ ಇತಿಹಾಸದ ಕಾಲಗರ್ಭದಲ್ಲಿ ಅಡಗಿದ ಅನೇಕ ಸಂಗತಿಗಳನ್ನು ಜಾನಪದಸಾಹಿತ್ಯದಿಂದ ತಿಳಿಯಬಹುದಾಗಿದೆ. ಈ ರೀತಿ ವಿಚಾರಸಂಕಿರಣಗಳು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುವ ಮೂಲಕ ಇಂದಿನ ಯುವಜನಾಂಗಕ್ಕೆ ಜಾನಪದ ಸಾಹಿತ್ಯವನ್ನು ಮುಟ್ಟಿಸುವ ಕಾರ್ಯಗಳು ಜರುಗಬೇಕೆಂದರು.
ನಿವೃತ್ತ ಮುಖ್ಯ ಶಿಕ್ಷಕ ಚಂದ್ರಪ್ಪ ಸನದಿ ಮುಖ್ಯಅತಿಥಿಯಾಗಿ ಮಾತನಾಡಿ ಜಾನಪದರು ನಮಗೆ ಬಹು ಅಮೂಲ್ಯ ಜಾನಪದವನ್ನು ಬಳುವಳಿಯಾಗಿ ನೀಡಿದ್ದಾರೆ. ಈ ಸಾಹಿತ್ಯವನ್ನು ಜತನದಿಂದ ಕಾಪಾಡಿಕೊಂಡು ನಮ್ಮ ಮುಂದಿನ ಜನಾಂಗಕ್ಕೆ ಜಾನಪದ ಸೊಗಡನ್ನು ತಿಳಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ರಮೇಶ ಜಾಲಿಹಾಳ, ಡಾ.ಮಹದೇವಪ್ಪ ಅಭಿಮಾನಿ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನು?ಂತ ಯಂಟಮಾನ, ಹಿರಿಯ ಜಾನಪದ ಕಲಾವಿದೆ ಈರಮ್ಮ ಮುಶೆಪ್ಪನವರ ಮತ್ತಿತರು ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾ ಕಲಿಕಾ ಸಂಸ್ಥೆಯ ಅಧ್ಯಕ್ಷ ಎನ್.ಎನ್.ಗಾಳೆಮ್ಮನವರ ವಹಿಸಿದ್ದರು, ಮಾಲತೇಶ ಅಂಗೂರ ಪ್ರಸ್ಥಾವಿಕವಾಗಿ ಮಾತನಾಡಿದರು. ಅಕ್ಷತಾ ಬದ್ರಶೆಟ್ಟಿ ವಂದಿಸಿದರು.
ಜನಮನ ರಂಚಿಸಿದ ಜಾನಪದ ಗೀತೋತ್ಸವ : “ಜಾನಪದ ಸಾಹಿತ್ಯ ಮತ್ತು ಆಧುನಿಕ ಸಂದರ್ಭ” ವಿಚಾರ ಸಂಕಿರಣ ಹಾಗೂ ಜಾನಪದ ಗೀತೋತ್ಸವ ಕಾರ್ಯಕ್ರಮದಲ್ಲಿ ಕಲಾವಿದರುಗಳಾದ ಧರ್ಮಣ್ಣ ಕಿವಡನವರ ಸಂಗಡಿಗರು ಗೊರವರ ತ್ವಪದಗಳನ್ನು, ಗೌರಮ್ಮ ಕುರುಬರ ಸಂಗಡಿಗರು ಜಾನಪದಸುಗ್ಗಿಪದಗಳನ್ನು , ಗುರುನಾಥ ಹುಬ್ಬಳ್ಳಿ ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ಜಾನಪದಗೀತೆಗಳು ಜನಮನ ರಂಚಿಸಿದವು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...