
ಉಡಚಪ್ಪ ಮಾಳಗಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ
ಹಾವೇರಿ:ಸಮಾಜ ಸೇವೆ, ಜನಸೇವೆ, ಮಾನವೀಯ ಮೌಲ್ಯಗಳ, ಸಮಾಜಮುಖಿ ಕಾರ್ಯಗಳ ಮೂಲಕ ಜನಸಾಮಾನ್ಯರ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಅವರಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ ದೊರಕಿದೆ.
ಹೂವಿನಹಡಗಲಿಯಲ್ಲಿ ಜರುಗಿದ ೨೦೨೬ನೇ ಸಾಲಿನ ಉದಯ ದಿಗಂತ ದಿನಪತ್ರಿಕೆಯ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಡಚಪ್ಪ ಮಾಳಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ನೀಡಿದ ಪ್ರಧಾನ ಸಂಪಾದಕರಾದ ಬಿಚ್ಚುಗತ್ತಿ ಖಾಜಾ ಹುಸೇನ, ಕರ್ನಾಟಕ ಪ್ರೆಸ್ ಕ್ಲಬ್ ನಿಕಟಪೂರ್ವ ರಾಜ್ಯಾಧ್ಯಕ್ಷ ದಯಾನಂದ ಎಂ,ಪ್ರಧಾನ ಕಾರ್ಯದರ್ಶಿ ರಮೇಶ ಹೆಚ್.ಜಿ, ಕನ್ನಡ ಜಾಗೃತಿ ಸಮಿತಿಯ ಸದಸ್ಯ ಸುರೇಶ ಅಂಗಡಿ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಪದಾಧಿಕಾರಿಗಳಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ ಪುರಸ್ತೃತ ಉಡಚಪ್ಪ ಮಾಳಗಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹೂವಿನಹಡಗಲಿ ಮಲ್ಲನಕೆರೆ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಎಸ್.ಎಸ್.ಎಫ್ ಸಂಘಟನೆಯ ರಾಜ್ಯಾಧ್ಯಕ್ಷ ಹಜರತ್ ಸುಫಿಯಾನ್ ಸಖಾಫಿ, ಬಾಲಯೇಸುವಿನ ದೇವಾಲಯದ ಮಠಾಧಿಪತಿಗಳಾದ ಫಾ. ಸಲ್ವಿಕುಮಾರ, ಚೌಕಿಮಠದ ಶ್ರೀಸದ್ಗುರು ಗಾಡಿ ತಾತನವರು, ಬಳ್ಳಾರಿ-ವಿಜಯನಗರ ಜಿಲ್ಲೆಯ ಸಂಸದ ಈ.ತುಕಾರಾಮ, ಹುಡಾ ಅಧ್ಯಕ್ಷ ಇಮಾಮ್ ನಿಯಾಜ್,ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಮುಖಂಡರಾದ ಹನುಮಂತಪ್ಪ ಸಿ.ಡಿ, ಮಹೇಶಪ್ಪ ಹರಿಜನ, ಬಸವಣ್ಣೆಪ್ಪ ಅಳ್ಳಳ್ಳಿ ಸೇರಿದಂತೆ ಗಣ್ಯರು ಹಾಗೂ ಸಮಾರಂಭದ ಆಯೋಜಕರು ಪಾಲ್ಗೊಂಡಿದ್ದರು.

