ಎಫ್.ಎಸ್.ಎಲ್ ವರದಿ ತಿರುಚಲ ಹಾವೇರಿ ಹಿಮ್ಸ್ ವೈದ್ಯ ಗುರುರಾಜ್ ನಿಂದ ೩ಲಕ್ಷ ರೂ ಲಂಚಕ್ಕೆ ಬೇಡಿಕೆ , ವೈದ್ಯ ಸೇರಿ ಇಬ್ಬರ ಬಂಧನ
ಹಾವೇರಿ: ಹಾವೇರಿಯ
ಚಿರಾಯು ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕಿಯ ಎಫ್.ಎಸ್.ಎಲ್ ವರದಿಯನ್ನು ತಿರಚಲು ೩ಲಕ್ಷರೂಗಳಿಗೆ ಬೇಡಿಕೆ ಇಟ್ಟು
,ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಗುರುರಾಜ್ ಬಿರಾದಾರ
ಲಂಚ ಸ್ವೀಕರಿಸುವ ವೇಳೆ ಇತನನ್ನು ಹಾಗೂ ಖಾಸಗಿ ವ್ಯಕ್ತಿಯನ್ನು ಶುಕ್ತವಾರ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ.
29-04-2025 ರಂದು ಚಿರಾಯು
ಆಸ್ಪತ್ರೆಯಲ್ಲಿ ಬಾಲಕಿ ವಂದನಾ ತುಪ್ಪದ ಅವರು ಸಾವನ್ನಪ್ಪಿದ್ದರು. ಸದರಿ ಅವರ ಎಫ್.ಎಸ್.ಎಲ್ ವರದಿಯನ್ನು ಪಿರ್ಯಾದುದಾರರ
ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ, ವ್ಯವಸ್ಥಾಪಕರು. ಚಿರಾಯು ಆಸ್ಪತ್ರೆ, ಹಾವೇರಿ ಅವರ ಪರವಾಗಿ ಮಾಡಿಸಿಕೊಡುವುದಾಗಿ
ತಿಳಿಸಿ ರೂ 5,00,000/- ಗಳಿಗೆ ಬೇಡಿಕೆ ಇಟ್ಟು. ನಂತರ ರೂ 3,00,000/- ಗಳಿಗೆ ಒಪ್ಪಿಕೊಂಡುವಜೂ. 27-06-2025 ರಂದು ರೂ 3,00,000/- ಗಳ ಲಂಚದ ಹಣವನ್ನು ಹಾವೇರಿ ನಗರದ ಚಿರಾಯು ಆಸ್ಪತ್ರೆಯಲ್ಲಿ ಪಡೆದುಕೊಳ್ಳುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ.
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ
ನ್ಯಾಯ ವೈದ್ಯ ಶಾಸ್ತ್ರ ವಿಭಾಗದ
ಸಹಾಯಕ ಪ್ರಾಧ್ಯಾಪಕ ಗುರುರಾಜ ಭೀಮರಾಯ ಬಿರಾದಾರ, ಹಾಗೂ
ಇಜಾರಿಲಕಮಾಪುರದ ಖಾಸಗಿ ವ್ಯಕ್ತಿ ಚನ್ನಬಸಯ್ಯ ಶಂಕ್ರಯ್ಯ ಕುಲಕರ್ಣಿ, ಇಬ್ಬರ ನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಎಮ್ ಎಸ್ ಕೌಲಾಪುರೆ, ಎಸ್.ಪಿ. ಕಲೋ, ದಾವಣಗೆರೆ ಅವರ ಮಾರ್ಗದರ್ಶನದಲ್ಲಿ ಕೈಗೊಂಡು, ಸಿ ಮಧುಸೂದನ, ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತ ಅವರ ನೇತೃತ್ವದಲ್ಲ, ತನಿಖಾಧಿಕಾರಿಗಳಾದ
ದಾದಾವಲಿ, ಕೆ ಎಚ್, ಪೊಲೀಸ್ ನಿರೀಕ್ಷಕರು, ಮಂಜುನಾಥ ಪಂಡಿತ್ ಪಿಎನ್, ಪೊಲೀಸ್ ನಿರೀಕ್ಷಕರು, ಬಸವರಾಜ ಹಳಬಣ್ಣನವರ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿಯಾಗಿದ್ದರು.
ಸದರಿ ಆರೋಪಿತರನ್ನು ಬಂಧಿಸಿ ತನಿಖೆ ಮುಂದುವರೆದಿದೆ.
ಡಾ.ಗುರುರಾಜ್.
ಚನ್ನಬಸಯ್ಯ ಕುಲಕರ್ಣಿ