ಕನಸಾಗಿಯೇ ಉಳಿದಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮ ಸಮಾಜ ನಿರ್ಮಾಣ: ಡಿ.ಎಸ್.ಮಾಳಗಿ
ಹಾವೇರಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ಜೀವನಪೂರ್ತಿ ದೇಶದ ಏಳ್ಗೆ, ಸಮಾಜದ ಉನ್ನತಿಗಾಗಿ ಶ್ರಮಿಸಿದರು. ಅಸ್ಪೃಶ್ಯತೆಯ ನಿವಾರಣೆ, ಅಸಮಾನತೆಯನ್ನು ತೊಡೆದು ಹಾಕುವುದು, ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗದ ಸಮಾನ ಅವಕಾಶಗಳು ಸಿಗಬೇಕು ಎಂಬ ಮಹಾದಾಸೆಯನ್ನು ಬಾಬಾ ಸಾಹೇಬರು ಹೊಂದಿದ್ದರು. ಆದರೆ ಅವರ ಮಹದಾಸೆ ಸಮ ಸಮಾಜ ನಿರ್ಮಾಣ ಶೋಷಿತ ಸಮುದಾಯಗಳಿಗೆ ಇಂದಿಗೂ ಸಹ ಕನಸಾಗಿಯೇ ಉಳಿದಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.
ಶುಕ್ರವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅ<ಬೇಡ್ಕರ ವಿವಿಧೋದ್ದೇಶಗಳ ಸಂಘ ಅಖಿಲ ಕರ್ನಾಟಕ ಆದಿಜಾಂಬವ ಜಿಲ್ಲಾ ಘಟಕ ಹಾಗೂ ಮಾದಿಗ ದಂಡೋರ ಜಿಲ್ಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ ೬೮ ನೇ ಮಹಾ ಪರಿ ನಿರ್ವಾಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಬಾಬಾಸಾಹೇಬರ ಸಂವಿಧಾನದಿಂದಾಗಿ ನರೇಂದ್ರ ಮೋದಿ ಅಂತವರು ಪ್ರಧಾನಿಯಾಗಿದ್ದಾರೆ. ರಾಜ್ಯದಲ್ಲಿ ಸಣ್ಣ-ಪುಟ್ಟ ಸಮುದಾಯದಿಂದ ಬಂದಂತಹ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ರಾಜ್ಯದಲ್ಲಿ ದಲಿತ ವರ್ಗದವರು ಮುಖ್ಯಮಂತ್ರಿಯಾಗದಿರುವುದು ವಿಪರ್ಯಾಸವೇ ಸರಿ ಎಂದರು.
ಸ್ವಾತಂತ್ಯ ಬಂದು ಇಲ್ಲಿಯವರೆಗೆ ಏಳು ದಶಕಗಳು ಕಳೆದರೂ ಸಹ ಈ ದೇಶದ ಮೂಲ ನಿವಾಸಿಗಳಾಗಿರುವ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಕ್ಕೆ ಸಾಮಾಜಿಕ ನ್ಯಾಯಕ್ಕಾಗಿ, ನಮ್ಮ ಹಕ್ಕುಗಳನ್ನು ಪಡೆಯಲು ಈಗಲೂ ಸಹ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಇದೆ. ಬೇರೆ ನಾಯಕರನ್ನು ಹೊತ್ತು ಮೆರೆಸುವ ಈ ಸಮುದಾಯವನ್ನು ಅಧಿಕಾರ ಹಂಚಿಕೆ ವಿಷಯ ಬಂದಾಗ ಕಡೆಗಣೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ವರ್ಗಕ್ಕೆ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ತ್ಯಾಗಮಾಡಿ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಗಬೇಕಿದೆ. ಈ ನಿಟ್ಟಿನಲ್ಲಿ ಶೋಷಿತರು ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯ ಎಂದು ಅವರು
ಅಂಬೇಡ್ಕರ್ ಅವರ ಪರಿಶ್ರಮ, ಅಧ್ಯಯನಶೀಲತೆ ಹಾಗೂ ಸಾಧನೆಯ ಜೀವನವು ಯುವ ಜನತೆಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅಂಬೇಡ್ಕರ್ ಅವರ ಜೀವನ ಸಂದೇಶ ಹಾಗೂ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ಮಾಳಗಿ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಪ್ರಮುಖರಾದ ಹೊನ್ನಪ್ಪ ತಗಡಿನಮನಿ, ಸುಭಾಸ್ ಬೆಂಗಳೂರ, ಶೇಖಪ್ಪ ಮಾಳಗಿ, ಮಾರುತಿ ಅಸುಂಡಿ, ಅಶೋಕ ಮರಣ್ಣನವರ, ಸುಭಾಸ್ ಮಾಳಗಿ, ಮಾಲತೇಶ ಯಲ್ಲಾಪುರ, ರಾಜು ಗಾಳೆಪ್ಪನವರ, ಸಚೀನ ಉಪ್ಪಾರ, ವಿಜಯ ಬೆನಕನವಾಡಿ, ಮಲ್ಲೇಶ ಕಡಕೋಳ, ವಿಜಯಕಯಾರ ಹುಲಿಕಂತಿಮಠ ಮತ್ತಿತರರು ಇದ್ದರು.
ಕನಸಾಗಿಯೇ ಉಳಿದಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮ ಸಮಾಜ ನಿರ್ಮಾಣ: ಡಿ.ಎಸ್.ಮಾಳಗಿ
Date:
ಕನಸಾಗಿಯೇ ಉಳಿದಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮ ಸಮಾಜ ನಿರ್ಮಾಣ: ಡಿ.ಎಸ್.ಮಾಳಗಿ
ಹಾವೇರಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ಜೀವನಪೂರ್ತಿ ದೇಶದ ಏಳ್ಗೆ, ಸಮಾಜದ ಉನ್ನತಿಗಾಗಿ ಶ್ರಮಿಸಿದರು. ಅಸ್ಪೃಶ್ಯತೆಯ ನಿವಾರಣೆ, ಅಸಮಾನತೆಯನ್ನು ತೊಡೆದು ಹಾಕುವುದು, ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗದ ಸಮಾನ ಅವಕಾಶಗಳು ಸಿಗಬೇಕು ಎಂಬ ಮಹಾದಾಸೆಯನ್ನು ಬಾಬಾ ಸಾಹೇಬರು ಹೊಂದಿದ್ದರು. ಆದರೆ ಅವರ ಮಹದಾಸೆ ಸಮ ಸಮಾಜ ನಿರ್ಮಾಣ ಶೋಷಿತ ಸಮುದಾಯಗಳಿಗೆ ಇಂದಿಗೂ ಸಹ ಕನಸಾಗಿಯೇ ಉಳಿದಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.
ಶುಕ್ರವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅ<ಬೇಡ್ಕರ ವಿವಿಧೋದ್ದೇಶಗಳ ಸಂಘ ಅಖಿಲ ಕರ್ನಾಟಕ ಆದಿಜಾಂಬವ ಜಿಲ್ಲಾ ಘಟಕ ಹಾಗೂ ಮಾದಿಗ ದಂಡೋರ ಜಿಲ್ಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ ೬೮ ನೇ ಮಹಾ ಪರಿ ನಿರ್ವಾಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಬಾಬಾಸಾಹೇಬರ ಸಂವಿಧಾನದಿಂದಾಗಿ ನರೇಂದ್ರ ಮೋದಿ ಅಂತವರು ಪ್ರಧಾನಿಯಾಗಿದ್ದಾರೆ. ರಾಜ್ಯದಲ್ಲಿ ಸಣ್ಣ-ಪುಟ್ಟ ಸಮುದಾಯದಿಂದ ಬಂದಂತಹ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ರಾಜ್ಯದಲ್ಲಿ ದಲಿತ ವರ್ಗದವರು ಮುಖ್ಯಮಂತ್ರಿಯಾಗದಿರುವುದು ವಿಪರ್ಯಾಸವೇ ಸರಿ ಎಂದರು.
ಸ್ವಾತಂತ್ಯ ಬಂದು ಇಲ್ಲಿಯವರೆಗೆ ಏಳು ದಶಕಗಳು ಕಳೆದರೂ ಸಹ ಈ ದೇಶದ ಮೂಲ ನಿವಾಸಿಗಳಾಗಿರುವ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಕ್ಕೆ ಸಾಮಾಜಿಕ ನ್ಯಾಯಕ್ಕಾಗಿ, ನಮ್ಮ ಹಕ್ಕುಗಳನ್ನು ಪಡೆಯಲು ಈಗಲೂ ಸಹ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಇದೆ. ಬೇರೆ ನಾಯಕರನ್ನು ಹೊತ್ತು ಮೆರೆಸುವ ಈ ಸಮುದಾಯವನ್ನು ಅಧಿಕಾರ ಹಂಚಿಕೆ ವಿಷಯ ಬಂದಾಗ ಕಡೆಗಣೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ವರ್ಗಕ್ಕೆ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ತ್ಯಾಗಮಾಡಿ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಗಬೇಕಿದೆ. ಈ ನಿಟ್ಟಿನಲ್ಲಿ ಶೋಷಿತರು ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯ ಎಂದು ಅವರು
ಅಂಬೇಡ್ಕರ್ ಅವರ ಪರಿಶ್ರಮ, ಅಧ್ಯಯನಶೀಲತೆ ಹಾಗೂ ಸಾಧನೆಯ ಜೀವನವು ಯುವ ಜನತೆಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅಂಬೇಡ್ಕರ್ ಅವರ ಜೀವನ ಸಂದೇಶ ಹಾಗೂ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ಮಾಳಗಿ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಪ್ರಮುಖರಾದ ಹೊನ್ನಪ್ಪ ತಗಡಿನಮನಿ, ಸುಭಾಸ್ ಬೆಂಗಳೂರ, ಶೇಖಪ್ಪ ಮಾಳಗಿ, ಮಾರುತಿ ಅಸುಂಡಿ, ಅಶೋಕ ಮರಣ್ಣನವರ, ಸುಭಾಸ್ ಮಾಳಗಿ, ಮಾಲತೇಶ ಯಲ್ಲಾಪುರ, ರಾಜು ಗಾಳೆಪ್ಪನವರ, ಸಚೀನ ಉಪ್ಪಾರ, ವಿಜಯ ಬೆನಕನವಾಡಿ, ಮಲ್ಲೇಶ ಕಡಕೋಳ, ವಿಜಯಕಯಾರ ಹುಲಿಕಂತಿಮಠ ಮತ್ತಿತರರು ಇದ್ದರು.