ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಜಿ.ಎಂ.ಶುಗರ್‍ಸ್‌ಗೆ ಬೀಗ ಜಡಿದು ರೈತರ ಪ್ರತಿಭಟನೆ ಸೋಮವಾರದೊಳಗೆ ಹಣ ಪಾವತಿಸದಿದ್ದರೇ ಹಾನಗಲ್ಲ-ಹಾವೇರಿ ರಾಜ್ಯಹೆದ್ದಾರಿ ಬಂದ್; ಎಚ್ಚರಿಕೆ

Date:

ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಜಿ.ಎಂ.ಶುಗರ್‍ಸ್‌ಗೆ ಬೀಗ ಜಡಿದು ರೈತರ ಪ್ರತಿಭಟನೆ
ಸೋಮವಾರದೊಳಗೆ ಹಣ ಪಾವತಿಸದಿದ್ದರೇ ಹಾನಗಲ್ಲ-ಹಾವೇರಿ ರಾಜ್ಯಹೆದ್ದಾರಿ ಬಂದ್; ಎಚ್ಚರಿಕೆ
ಹಾವೇರಿ; ಇಲ್ಲಿಗೆ ಸಮೀಪದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಪಡೆದಿರುವ ಜಿ.ಎಂ.ಶುಗರ್‍ಸ್‌ನವರು ರೈತರು ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣಪಾವತಿಸಸದೇ ವಿಳಂಬಮಾಡುತ್ತಿದ್ದಾರೆಂದು ಆರೋಪಿಸಿ, ಕಬ್ಬಿನ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಬುಧವಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಬ್ಯಾಂಕ್ ಮತ್ತಿತರ ಪ್ರದೇಶಗಳಿಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ
ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ನಡೆಸುತ್ತಿರುವ ಜಿ.ಎಂ. ಶುಗರ್‍ಸ್‌ನವರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳಿಸಿ ಎರಡು ತಿಂಗಳ ಗತಿಸಿದರು ಕಬ್ಬು ಸಾಗಾಣಿಕೆ ಮಾಡಿದ ರೈತರಿಗೆ ಹಣ ಕೊಟ್ಟಿರುವುದಿಲ್ಲ. ಕಬ್ಬು ಪೂರೈಕೆ ಮಾಡಿ ೧೪ ದಿನಗಳ ಒಳಗಾಗಿ ರೈತರಿಗೆ ಹಣ ಕೊಡಬೇಕು ಎಂದು ಸರ್ಕಾರದ ಆದೇಶಇದ್ದು, ಈ ಆದೇಶವನ್ನು ಕಾರ್ಖಾನೆಯವರು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಇಲ್ಲಿಯವರೆಗೆ ೧.೨೦ ಲಕ್ಷ ಟನ್ ಕಬ್ಬು ಸರಬರಾಜು ಮಾಡಿದ್ದು, ಇದರ ಅಂದಾಜು ಮೊತ್ತ ೩೮ ಕೋಟಿ ಗಿಂತಲೂ ಹೆಚ್ಚು ಆಗುತ್ತದೆ. ಇದಕ್ಕೆ ಬಡ್ಡಿ ಹಣ ಸೇರಿದರೇ ಈ ಮೊತ್ತು ಹೆಚ್ಚಾಗುತ್ತದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಕಬ್ಬು ಪೂರೈಕೆ ಮಾಡಿದ್ದಾರೆ, ಅವರಿಗೆ ಹಣ ಬಂದಿರುವುದಿಲ್ಲ. ಈ ಬಗ್ಗೆ ರೈತರು ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ, ಅವರು ಹೇಳಿದ್ದಾರೆ ಅವರ ಮಾತಿಗೆ ಸಹ ಬೆಲೆ ಕೊಡದೆ ಜಿ.ಎಂ.ಶುಗರ್‍ಸ್‌ನವರು ರೈತರಿಗೆ ಹಣ ಹಾಕಿಲ್ಲ. ರೈತರೆಲ್ಲರೂ ಕೂಡಿಕೊಂಡು ಕಾರ್ಖಾನೆ ಮೇನ್ ಗೇಟ್, ವೇಬ್ರಿಜ್ ಗೆಟ್, ಜಿಎಂ ಬ್ಯಾಂಕ್, ಅಡ್ಮಿನ್ ಆಫೀಸ್ ಇವೆಲ್ಲವೂ ಗಳಿಗೂ ಬೀಗ ಜಡೆದು ಪ್ರತಿಭಟನೆ ಮಾಡಿದ್ದೇವೆ. ಸೋಮವಾರದೊಳಗಾಗಿ ಕಬ್ಬು ಸರಬರಾಜಿನ ಬಿಲ್ಲನ್ನು ಹಾಕದಿದ್ದರೆ ಹಾನಗಲ್- ಹಾವೇರಿಯ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಲು ರೈತ ಸಮೂಹ ಮುಂದಾಗಿದೆ.
ಈ ಬಗ್ಗೆ ಸಕ್ಕರೆ ಸಚಿವರೂ ಆಗಿರುವ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸೋಮವಾರದ ಒಳಗಾಗಿಯೇ ರೈತರಿಗೆ ಹಣ ಕೊಡಿಸಿದರೆ ಹೋರಾಟ ಮಾಡುವುದಿಲ್ಲ. ಸೋಮವಾರ ತನಕ ರೈತರಿಗೆ ಹಣ ಬಾರದೆ ಇದ್ದಲ್ಲಿ ಹಾನಗಲ್- ಹಾವೇರಿ ರಸ್ತೆಯನ್ನು ಬದ್ ಮಾಡಿ ಪ್ರತಿಭಟನೆ ಮಾಡಲು ರೈತರು ತಿರ್ಮಾನಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ನಿಂಗಪ್ಪ ನರೇಗಲ್, ಶಿವಯೋಗಿ ಹೂಗಾರ್, ಶಿವಲಿಂಗಪ್ಪ ಕಾಳಂಗಿ, ಗುರಪ್ಪ ಕರೆಗೊಂಡರ, ಬಸವರಾಜ್ ಮುಂದಿನಮನಿ, ಗುರನಂಜಪ್ಪ ವರ್ದಿ, ಮಲ್ಲೇಶಪ್ಪ ಭೀಮನಾಯಕರ, ಗುಡ್ಡನಗೌಡ ಮಲಾಗೌಡ್ರ್, ಸುರೇಶ್ ಹೊಸಕೆರಿ, ಬಸಪ್ಪ ಕಳಸದ, ಹನುಮಂತ ಪಾಟೊಳಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಜಿ.ಎಂ.ಶುಗರ್‍ಸ್‌ಗೆ ಬೀಗ ಜಡಿದು ರೈತರ ಪ್ರತಿಭಟನೆ
ಸೋಮವಾರದೊಳಗೆ ಹಣ ಪಾವತಿಸದಿದ್ದರೇ ಹಾನಗಲ್ಲ-ಹಾವೇರಿ ರಾಜ್ಯಹೆದ್ದಾರಿ ಬಂದ್; ಎಚ್ಚರಿಕೆ
ಹಾವೇರಿ; ಇಲ್ಲಿಗೆ ಸಮೀಪದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಪಡೆದಿರುವ ಜಿ.ಎಂ.ಶುಗರ್‍ಸ್‌ನವರು ರೈತರು ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣಪಾವತಿಸಸದೇ ವಿಳಂಬಮಾಡುತ್ತಿದ್ದಾರೆಂದು ಆರೋಪಿಸಿ, ಕಬ್ಬಿನ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಬುಧವಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಬ್ಯಾಂಕ್ ಮತ್ತಿತರ ಪ್ರದೇಶಗಳಿಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ
ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ನಡೆಸುತ್ತಿರುವ ಜಿ.ಎಂ. ಶುಗರ್‍ಸ್‌ನವರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳಿಸಿ ಎರಡು ತಿಂಗಳ ಗತಿಸಿದರು ಕಬ್ಬು ಸಾಗಾಣಿಕೆ ಮಾಡಿದ ರೈತರಿಗೆ ಹಣ ಕೊಟ್ಟಿರುವುದಿಲ್ಲ. ಕಬ್ಬು ಪೂರೈಕೆ ಮಾಡಿ ೧೪ ದಿನಗಳ ಒಳಗಾಗಿ ರೈತರಿಗೆ ಹಣ ಕೊಡಬೇಕು ಎಂದು ಸರ್ಕಾರದ ಆದೇಶಇದ್ದು, ಈ ಆದೇಶವನ್ನು ಕಾರ್ಖಾನೆಯವರು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಇಲ್ಲಿಯವರೆಗೆ ೧.೨೦ ಲಕ್ಷ ಟನ್ ಕಬ್ಬು ಸರಬರಾಜು ಮಾಡಿದ್ದು, ಇದರ ಅಂದಾಜು ಮೊತ್ತ ೩೮ ಕೋಟಿ ಗಿಂತಲೂ ಹೆಚ್ಚು ಆಗುತ್ತದೆ. ಇದಕ್ಕೆ ಬಡ್ಡಿ ಹಣ ಸೇರಿದರೇ ಈ ಮೊತ್ತು ಹೆಚ್ಚಾಗುತ್ತದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಕಬ್ಬು ಪೂರೈಕೆ ಮಾಡಿದ್ದಾರೆ, ಅವರಿಗೆ ಹಣ ಬಂದಿರುವುದಿಲ್ಲ. ಈ ಬಗ್ಗೆ ರೈತರು ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ, ಅವರು ಹೇಳಿದ್ದಾರೆ ಅವರ ಮಾತಿಗೆ ಸಹ ಬೆಲೆ ಕೊಡದೆ ಜಿ.ಎಂ.ಶುಗರ್‍ಸ್‌ನವರು ರೈತರಿಗೆ ಹಣ ಹಾಕಿಲ್ಲ. ರೈತರೆಲ್ಲರೂ ಕೂಡಿಕೊಂಡು ಕಾರ್ಖಾನೆ ಮೇನ್ ಗೇಟ್, ವೇಬ್ರಿಜ್ ಗೆಟ್, ಜಿಎಂ ಬ್ಯಾಂಕ್, ಅಡ್ಮಿನ್ ಆಫೀಸ್ ಇವೆಲ್ಲವೂ ಗಳಿಗೂ ಬೀಗ ಜಡೆದು ಪ್ರತಿಭಟನೆ ಮಾಡಿದ್ದೇವೆ. ಸೋಮವಾರದೊಳಗಾಗಿ ಕಬ್ಬು ಸರಬರಾಜಿನ ಬಿಲ್ಲನ್ನು ಹಾಕದಿದ್ದರೆ ಹಾನಗಲ್- ಹಾವೇರಿಯ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಲು ರೈತ ಸಮೂಹ ಮುಂದಾಗಿದೆ.
ಈ ಬಗ್ಗೆ ಸಕ್ಕರೆ ಸಚಿವರೂ ಆಗಿರುವ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸೋಮವಾರದ ಒಳಗಾಗಿಯೇ ರೈತರಿಗೆ ಹಣ ಕೊಡಿಸಿದರೆ ಹೋರಾಟ ಮಾಡುವುದಿಲ್ಲ. ಸೋಮವಾರ ತನಕ ರೈತರಿಗೆ ಹಣ ಬಾರದೆ ಇದ್ದಲ್ಲಿ ಹಾನಗಲ್- ಹಾವೇರಿ ರಸ್ತೆಯನ್ನು ಬದ್ ಮಾಡಿ ಪ್ರತಿಭಟನೆ ಮಾಡಲು ರೈತರು ತಿರ್ಮಾನಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ನಿಂಗಪ್ಪ ನರೇಗಲ್, ಶಿವಯೋಗಿ ಹೂಗಾರ್, ಶಿವಲಿಂಗಪ್ಪ ಕಾಳಂಗಿ, ಗುರಪ್ಪ ಕರೆಗೊಂಡರ, ಬಸವರಾಜ್ ಮುಂದಿನಮನಿ, ಗುರನಂಜಪ್ಪ ವರ್ದಿ, ಮಲ್ಲೇಶಪ್ಪ ಭೀಮನಾಯಕರ, ಗುಡ್ಡನಗೌಡ ಮಲಾಗೌಡ್ರ್, ಸುರೇಶ್ ಹೊಸಕೆರಿ, ಬಸಪ್ಪ ಕಳಸದ, ಹನುಮಂತ ಪಾಟೊಳಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...